ಸರಳವಾಗಿ ಸಾಮಾನ್ಯರಂತೆ ಕಲ್ಪವೃಕ್ಷ ಕುಡಿಕೆ ಲೆಮನ್ ಟೀ ಕುಡಿದ ಕುಮಾರಸ್ವಾಮಿ
ಚನ್ನಪಟ್ಟಣ: ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ಯವರು ಸುಣ್ಣಘಟ್ಟ ಗ್ರಾಮದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅನ್ಯ ಪಕ್ಷ ತೊರೆದು ಹಾಗೂ ಈ ಹಿಂದೆ ಪಕ್ಷ ತೊರೆದು ಹೋಗಿದ್ದವರ ಜೆಡಿಎಸ್ ಪಕ್ಷ ಮರು ಸೇರ್ಪಡೆ ಕಾರ್ಯಕ್ರಮಕ್ಕೆ ಬಂದು ವಾಪಸ್ ತೆರಳುವ ವೇಳೆ ಸಾತನೂರು ರಸ್ತೆಯಲ್ಲಿರುವ ಕಲ್ಪವೃಕ್ಷ ಕುಡಿಕೆ ಟೀ ಹೋಟೆಲ್ ಗೆ ಬಂದು ಸರಳವಾಗಿ, ಸಾಮಾನ್ಯರಂತೆ ಲೆಮನ್ ಟೀ ಸವಿದರು.
ಹೋಟೆಲ್ ಮಾಲಿಕ ಮರಿಸ್ವಾಮಿ ಹಾಗೂ ಸ್ನೇಹಿತರಾದ ರವಿ ಸಂದೀಪ್ ಸೇರಿದಂತೆ ಅನೇಕರು ಕುಮಾರಸ್ವಾಮಿ ರವರು ತೆರಳುವ ಕಾರನ್ನು ನಿಲ್ಲಿಸಿ ಅವರಿಗೆ ಕುಡಿಕೆ ಲೆಮನ್ ಟೀ ನೀಡಿದರು ಟೀ ಕುಡಿದ ಅವರು ಮೆಚ್ಚುಗೆ ವ್ಯಕ್ತ ಪಡಿಸಿ ಮತ್ತೊಮ್ಮೆ ಬಂದು ಟೀ ಕುಡಿಯುವುದಾಗಿ ತಮ್ಮ ಸರಳತೆಯನ್ನು ತೋರಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು