ಚುನಾವಣಾ ಹಿನ್ನೆಲೆ, ನಗರದಲ್ಲಿ ಪೋಲೀಸರು ಮತ್ತು ಯೋಧರ ಪಥಸಂಚಲನ
ಚನ್ನಪಟ್ಟಣ: 2023ರ ವಿಧಾನಸಭಾ ಚುಣಾವಣೆಯ ಹಿನ್ನಲೆಯಲ್ಲಿ, ಪೂರ್ವ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಪೊಲೀಸರು ಹಾಗೂ ಅರೆ ಸೇನಾಪಡೆ ಪಥಸಂಚಲನ ನಡೆಸಿದರು.
ಪೂರ್ವ ಪೊಲೀಸ್ ಠಾಣೆಯ ನಿರೀಕ್ಷಕ ಆಕಾಶ್ ಬಿ ಪತ್ತಾರ್ ಹಾಗೂ ಸಚಾರಿ ನಿರೀಕ್ಷಕಿ ಮಂಗಳಗೌರಮ್ಮ ರವರ ನೇತೃತ್ವದಲ್ಲಿ ನಗರವ್ಯಾಪ್ತಿಯ ಎಲೇಕೇರಿ ಬಡಾವಣೆಯ ಪ್ರಮುಖ ಬೀದಿಗಳಲ್ಲಿ ಪಥಸಂಚಲನ ನಡೆಸಿದರು.
*ಮತದಾನದ ಅರಿವು*
ಮತದಾನದ ಸಂದರ್ಭದಲ್ಲಿ ಯಾವುದೇ ರೀತಿಯಲ್ಲಿ ಅಪರಾಧ ಚಟುವಟಿಕೆಗಳು ನಡೆಯಬಾರದು, ಚುನಾವಣೆ ನೀತಿ ಸಂಹಿತೆ ಉಲ್ಲಂಘನೆಯಾಗಬಾರದು, ಪ್ರಜಾಪ್ರಭುತ್ವದ ಮತಾದಾನವನ್ನು ಪ್ರತಿಯೊಬ್ಬ ಅರ್ಹ ಮತದಾರರು ನಿರ್ಭೀತಿಯಿಂದ ಮತ ಚಲಾಯಿಸಬೇಕು ಎಂಬ ಸದುದ್ದೇಶದಿಂದ ಪೊಲೀಸ್ ಇಲಾಖೆ ಹಾಗೂ ಅರೆ ಸೇನಾಪಡೆಯು ಜಂಟಿಯಾಗಿ ಪಥಸಂಚಲನ ನಡೆಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು