Tel: 7676775624 | Mail: info@yellowandred.in

Language: EN KAN

    Follow us :


ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುವ ವ್ಯಕ್ತಿ ಕುಮಾರಸ್ವಾಮಿ ಮಾತ್ರ. ಅನಿತಾ ಕುಮಾರಸ್ವಾಮಿ

Posted date: 30 Apr, 2023

Powered by:     Yellow and Red

ಪ್ರತಿಯೊಂದು ಸಮುದಾಯಕ್ಕೂ ನ್ಯಾಯ ಒದಗಿಸುವ ವ್ಯಕ್ತಿ ಕುಮಾರಸ್ವಾಮಿ ಮಾತ್ರ. ಅನಿತಾ ಕುಮಾರಸ್ವಾಮಿ

ಚನ್ನಪಟ್ಟಣ,ಏ:30-ಯಾವ ಸಮುದಾಯದ, ಓರ್ವ ವ್ಯಕ್ತಿಗೂ ತೊಂದರೆ ಆಗಬಾರದೆಂಬ ಹಿನ್ನೆಲೆಯಲ್ಲಿ ರಾಜ್ಯದಲ್ಲಿರುವ ಪ್ರತಿಯೊಂದು ಸಮುದಾಯಕ್ಕೂ ತಮ್ಮ ಚಿಂತನೆಯಿಂದ ಒಂದಲ್ಲಾ ಒಂದು ಯೋಜನೆಗಳನ್ನು ರೂಪಿಸಿ ಜಾರಿಗೆ ತರುವ ಮುಖ್ಯಮಂತ್ರಿ ಇದ್ದರೇ ಅದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರಿಂದ ಮಾತ್ರ ಸಾಧ್ಯ ಎಂದು ರಾಮನಗರ ಕ್ಷೇತ್ರದ ಶಾಸಕಿ ಅನಿತಾಕುಮಾರಸ್ವಾಮಿ ತಮ್ಮ ಅಭಿಪ್ರಾಯ ವ್ಯಕ್ತಪಡಿಸಿದರು.

    ಅವರು ತಾಲ್ಲೂಕಿನ ಬಿ.ವಿ.ಪಾಳ್ಯದಲ್ಲಿ ಆಯೋಜನೆ ಮಾಡಲಾಗಿದ್ದ, ಚನ್ನಪಟ್ಟಣ ವಿಧಾನಸಭಾ ಚುನಾವಣೆಯ ಜೆಡಿಎಸ್ ಅಭ್ಯರ್ಥಿ ತಮ್ಮ ಪತಿ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರ ಮತ ಪ್ರಚಾರದ ಸಂದರ್ಭದಲ್ಲಿ, ಮತದಾರರನ್ನು ಉದ್ದೇಶಿಸಿ ಮಾತನಾಡಿದರು.


ಬಡವರ ಬಗ್ಗೆ ಕಾಳಜಿ ಹೊಂದಿರುವ, ನುಡಿದಂತೆ ನಡೆಯುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ರವರು ಕಳೆದ ಚುನಾವಣೆಯಲ್ಲಿ ರೈತಾಪಿ ವರ್ಗಕ್ಕೆ ಭರವಸೆ ನೀಡಿದಂತೆ 26 ಸಾವಿರ ಕೋಟಿ ರೈತರ ಸಾಲಮನ್ನಾ ಮಾಡಿ ದೇಶದ ಇತಿಹಾಸದಲ್ಲಿ ಇಷ್ಟು ಬೃಹತ್‍ ಮೊತ್ತದ ಸಾಲವನ್ನು ಮನ್ನಾ ಮಾಡಿದ ಕೀರ್ತಿ ಕುಮಾರಸ್ವಾಮಿ ರವರದಾಗಿದೆ ಎಂದರು.


    ಈ ಭಾರಿ ರಾಜ್ಯದಲ್ಲಿ ಸ್ವಂತ ಬಲದ ಮೇಲೆ ಪ್ರಾದೇಶಿಕ ಪಕ್ಷವಾದ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬರಲಿದೆ ಎಂದು ಸಮಿಕ್ಷೆಯಲ್ಲಿ ತಿಳಿದು ಬಂದಿದ್ದು, ಕುಮಾರಸ್ವಾಮಿ ರವರ ಎರಡು ಕಣ್ಣುಗಳಲ್ಲಿ ಒಂದು ಕಣ್ಣಾಗಿರುವ ಈ ಕ್ಷೇತ್ರದಿಂದಲೇ ಎರಡನೇ ಭಾರಿ ಮುಖ್ಯಮಂತ್ರಿಯಾಗುವ ಕನಸನ್ನು ನನಸು ಮಾಡಲು ಕುಮಾರಸ್ವಾಮಿ ರವನ್ನು ಆಶೀರ್ವಾದ ಮಾಡಬೇಕೆಂದು ಮನವಿ ಮಾಡಿದರು.


 ಈ ಭಾರಿ ಜೆಡಿಎಸ್ ಪಕ್ಷ ಅಧಿಕಾರಕ್ಕೆ ಬಂದರೆ ಸರ್ಕಾರ ಬಂದ ತಕ್ಷಣ ರಾಜ್ಯದ ಸ್ತ್ರೀಶಕ್ತಿ ಸಾಲಮನ್ನ ಮಾಡುವುದು ಅವರ ಮೊದಲನೇ ಗುರಿಯಾಗಿದೆ, ಪಂಚರತ್ನಗಳ ಯೋಜನೆಯನ್ನು ಫಲಪ್ರದ ಮಾಡುವುದರ ಮುಖಾಂತರ ರಾಜ್ಯದ ಜನರ ಹಿತ ಕಾಪಾಡುವುದೇ ಅವರ ಜೀವನದ ಕೊನೆಯ ಆಸೆಯಾಗಿದೆ ಎಂದರು.

      ಈ ಸಂದರ್ಭದಲ್ಲಿ ಜೆಡಿಎಸ್ ಮುಖಂಡ ಬಿ.ವಿ.ಪಾಳ್ಯ ಗಿರೀಶ ಬಾಬು ಮಾತನಾಡಿ, ಸರ್ವಜನರ ಕಲ್ಯಾಣಕ್ಕೆ ದುಡಿಯುವ ಏಕ್ಯೆಕ ಮುಖ್ಯಮಂತ್ರಿಗಳಿದ್ದರೆ ಅದು ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿರವರು ಎಂದರೇ ತಪ್ಪಾಗಲಾರದು, ತಾನು ಮಾಜಿ ಮುಖ್ಯಮಂತ್ರಿಯಾಗಿದ್ದರೂ ತನ್ನ ಮನೆಯ ಮುಂದೆ ಇಂದಿಗೂ ಅಂದರೆ 24 ತಾಸುಗಳು ಕೂಡ ನೂರಾರು ಜನರು ತಮ್ಮ ಕಷ್ಟ-ಸುಖಗಳನ್ನು ಹೇಳಿಕೊಳ್ಳುವ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿ ಎಂದು ಅಭಿಮಾನದಿಂದ ಹೇಳಿಕೊಳ್ಳಲು ಸಂತಷವಾಗುತ್ತದೆ ಎಂದು ತಿಳಿಸಿದರು.


      ಈ ಸಂದರ್ಭಲ್ಲಿ ತಾಲ್ಲೂಕು ಜೆಡಿಎಸ್ ಅಧ್ಯಕ್ಷ ಜಯಮುತ್ತು, ಹಿರಿಯ ಜೆಡಿಎಸ್ ಮುಖಂಡ ಅಮ್ಮಳ್ಳಿದೊಡ್ಡಿ ಮಹೇಶ್‍ಗೌಡ ಹಾಗೂ ಹಲವಾರು ಮುಖಂಡರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑