Tel: 7676775624 | Mail: info@yellowandred.in

Language: EN KAN

    Follow us :


ಅಂಚೆ ಮತದಾನ ಮಾಡಲು ಬಂದ ಅಧಿಕಾರಿಗೆ ಕುಮಾರಸ್ವಾಮಿ ಆಪ್ತ ಸಹಾಯಕನಿಂದ ಗಾಳ

Posted date: 05 May, 2023

Powered by:     Yellow and Red

ಅಂಚೆ ಮತದಾನ ಮಾಡಲು ಬಂದ ಅಧಿಕಾರಿಗೆ ಕುಮಾರಸ್ವಾಮಿ ಆಪ್ತ ಸಹಾಯಕನಿಂದ ಗಾಳ

ಚನ್ನಪಟ್ಟಣ: ನಗರದ ತಾಲ್ಲೂಕು ಕಛೇರಿಯಲ್ಲಿರುವ ಚುನಾವಣಾಧಿಕಾರಿ ಕಛೇರಿಗೆ ಅಂಚೆಮತದಾನ ಮಾಡಲು ತಾಲೂಕು ಕಚೇರಿಗೆ ಆಗಮಿಸಿದ ಸರ್ಕಾರಿ ಅಧಿಕಾರಿಯೊಬ್ಬರ ಮತಪತ್ರಕ್ಕೆ ಮಾಜಿ ಮುಖ್ಯಮಂತ್ರಿ ಹೆಚ್.ಡಿ.ಕುಮಾರಸ್ವಾಮಿಯವರ ಆಪ್ತ ಸಹಾಯಕ ಕೆಂಚೇಗೌಡ ಎಂಬುವವರು ಗುರುತು ಹಾಕಿ ನೀಡಿದ್ದಾರೆ ಎನ್ನಲಾದ ವಿಡಿಯೋವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದ್ದು, ಈ ಸಂಬಂಧ ಬಿಜೆಪಿ ಪಕ್ಷದ ಅಭ್ಯರ್ಥಿ ಯ ಚುನಾವಣಾ ಏಜೆಂಟ್ ದಿಲೀಪ್ ರವರು ಚುನಾವಣಾಧಿಕಾರಿಗೆ ದೂರು ನೀಡಿದ್ದಾರೆ.


ತಾಲ್ಲೂಕಿನಾದ್ಯಂತ ಚುನಾವಣಾ ಕರ್ತವ್ಯಕ್ಕೆ ನಿಯೋಜನೆಗೊಂಡಿರುವ ಶಿಕ್ಷಕರು ಮತ್ತು ಇನ್ನಿತರ ಸಿಬ್ಬಂದಿಗಳಿಗೆ ಮತದಾನಕ್ಕೆ ಅವಕಾಶ ಕಲ್ಪಿಸುವ ನಿಟ್ಟಿನಲ್ಲಿ ಅಂಚೆ ಮತದಾನಕ್ಕೆ ಅವಕಾಶ ನೀಡಲಾಗಿದೆ. ಅದರಂತೆ ಬುಧವಾರ ಅಂಚೆಮತದಾನ ಮಾಡಲು ಬಂದ ಅಧಿಕಾರಿಯೊಬ್ಬರ ಮತಪತ್ರವನ್ನು ಕುಮಾರಸ್ವಾಮಿ ಅವರ ಆಪ್ತ ಸಹಾಯಕ ಕೆಂಚೇಗೌಡ ಎಂಬುವರು ಪಡೆದುಕೊಂಡು ಅದಕ್ಕೆ ಗುರುತುಹಾಕಿ ನೀಡುತ್ತಿರುವ ವಿಡಿಯೋ ಒಂದು ವೈರಲ್ ಆಗಿದೆ. ಸರಿಸುಮಾರು ಎರಡು ನಿಮಿಷಗಳಿಗೂ ಹೆಚ್ಚು ಕಾಲ ಅವರಿಬ್ಬರು ಚರ್ಚಿಸಿ, ಲೇಖನಿ ಮತ್ತು ಮತಪತ್ರ ಪಡೆದು ಗುರುತು ಹಾಕುತ್ತಿರುವುದು ವೀಡಿಯೋ ದಲ್ಲಿ ಕಂಡುಬರುತ್ತಿದೆ.


ತಾಲೂಕು ಕಚೇರಿ ಮಹಡಿಯ ಮುಂಭಾಗದ ಪೋರ್ಟಿಕೋ ಮೇಲೆ ನಿಂತುಕೊಂಡೇ ಕೆಂಚೇಗೌಡ ಎಂಬುವವರು ಅಧಿಕಾರಿಯ ಮತಪತ್ರವನ್ನು ಪಡೆದುಕೊಂಡು ಅದರಲ್ಲಿ ಗುರುತುಮಾಡಿ ನೀಡಿದ್ದಾರೆ. ಇವರಿಬ್ಬರು ತಾಲೂಕು ಕಚೇರಿಯ ಮೇಲೆ ನಿಂತುಕೊಂಡಿರುವ ವಿಡಿಯೋದ ತುಣುಕನ್ನು ದೂರದಿಂದ ಸೆರೆಹಿಡಿಯಲಾಗಿದೆ. ತದನಂತರ ಹೊರಬಂದ ಅಧಿಕಾರಿಯನ್ನು ತಾವು ಯಾವ ಇಲಾಖೆ ಎಂದು ಬಿಜೆಪಿ ಕಾರ್ಯಕರ್ತರು ಪ್ರಶ್ನಿಸಿದ್ದಾರೆ. ಅವರ ಗುರುತಿನ ಚೀಟಿಯನ್ನು ಸಹ ಸೆರೆಹಿಡಿದಿರುವ ಮುಖಂಡರು ಅವರು ತೂಕ ಮತ್ತು ಅಳತೆಯ ಜಿಲ್ಲಾ ಜಿಲ್ಲಾ ಮಟ್ಟದ ಅಧಿಕಾರಿ ರಾಮಚಂದ್ರ ಟಿ ಎನ್ ಎಂಬುದಾಗಿ ಗುರುತಾಗಿದೆ.


ಈ ಸಂಬಂಧ ಚುನಾವಣಾಧಿಕಾರಿಗೆ ಬಿಜೆಪಿ ಅಭ್ಯರ್ಥಿ ಸಿ.ಪಿ.ಯೋಗೇಶ್ವರ್ ಅವರ ಚುನಾವಣಾ ಏಜೆಂಟ್ ದಿಲೀಪ್ ಎಂಬುವವರು ದೂರು ನೀಡಿದ್ದು, ಕೆಂಚೇಗೌಡರಿಗೆ ನೋಟೀಸ್ ಜಾರಿ ಮಾಡಿದ್ದಾರೆ ಎಂದು ಖಚಿತ ಮಾಹಿತಿಗಳು ಮಾಹಿತಿ ನೀಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑