ಕುಮಾರಸ್ವಾಮಿ ಯವರಿಗೆ ಅಧಿಕಾರ ಬೇಕೆ ವಿನಹ ನಿಷ್ಠಾವಂತ ಮತದಾರರಲ್ಲ್ಲಾ, ಜೆಡಿಎಸ್ ಮುಸ್ಲಿಂ ಮುಖಂಡರ ಅಸಮಧಾನ
ಚನ್ನಪಟ್ಟಣ: ಇತ್ತೀಚಿಗೆ ಮಾಜಿ ಮುಖ್ಯ ಮಂತ್ರಿ ಹೆಚ್.ಡಿ ಕುಮಾರಸ್ವಾಮಿ ರವರು ಮಾಧ್ಯಮದವರ ಜೊತೆ ಮಾತನಾಡುವ ವೇಳೆ ನಮ್ಮ ಜೆಡಿಎಸ್ ಪಕ್ಷಕ್ಕೆ ಅಲ್ಪಸಂಖ್ಯಾತ ಮತದಾರರ ಅವಶ್ಯಕತೆ ಇಲ್ಲ ಅಲ್ಪಸಂಖ್ಯಾತರಿಗೆ ನನ್ನ ಹಾಗೂ ನಮ್ಮ ಪಕ್ಷದ ಅವಶ್ಯಕತೆ ಇದೆ. ನಾನು ಮುಖ್ಯ ಮಂತ್ರಿ ಆಗಿದ್ದ ವೇಳೆ ನನ್ನ ಸರ್ಕಾರ ತೆಗೆದವರ ವಿರುದ್ಧ ಸೇಡು ತೀರಿಸಿಕೊಳ್ಳಲು ನಾನು ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ಮುಂಬರುವ ಲೋಕಸಭಾ ಚುನಾವಣೆಯಲ್ಲಿ ಬಿಜೆಪಿ ಪಕ್ಷಕ್ಕೆ ನಾವು ಬೆಂಬಲ ನೀಡುತ್ತಿದ್ದೇನೆ ಎಂದಿದ್ದರು.
ಅಲ್ಪಸಂಖ್ಯಾತ ಮತದಾರರು ಅವರ ಇಷ್ಟದಂತೆ ಮಾಡಿಕೊಳ್ಳಲಿ ಎಂದು ಮಾತನಾಡಿದ್ದ ಕಾರಣ ಇಂದು ಚನ್ನಪಟ್ಟಣ ನಗರದಲ್ಲಿನ ಪ್ರವಾಸಿ ಮಂದಿರದಲ್ಲಿ ಜೆಡಿಎಸ್ ಅಲ್ಪಸಂಖ್ಯಾತ ಮುಖಂಡರು ಸುದ್ದಿ ಗೋಷ್ಠಿ ನಡೆಸಿ ಮಾತನಾಡಿದರು, ಅಲ್ಪಸಂಖ್ಯಾತ ಮುಖಂಡರು ಇಲ್ಲಿಯ ತನಕ ಜೆಡಿಎಸ್ ಪಕ್ಷದಲ್ಲಿ ಇದ್ದಿದ್ದು ಮಾಜಿ ಪ್ರಧಾನಿ ಹೆಚ್.ಡಿ ದೇವೇಗೌಡ ರವರ ಸಲುವಾಗಿ ವಿನಹ ಕುಮಾರಸ್ವಾಮಿ ಸಲುವಾಗಿ ಅಲ್ಲ.
ಕುಮಾರಸ್ವಾಮಿ ಜೆಡಿಎಸ್ ಪಕ್ಷಕ್ಕೆ ಶತ್ರು ಇದ್ದ ಹಾಗೆ ಅವರಿಗೆ ಅಧಿಕಾರ ಬೇಕು ಅಷ್ಟೇ ಪಕ್ಷ ಸಂಘಟನೆ ಮಾಡುವ ನಿಷ್ಠಾವಂತ ಕಾರ್ಯಕರ್ತರಾಗಲಿ ಮತದಾರರಾಗಲಿ ಅಲ್ಲಾ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ಅಲ್ಪಸಂಖ್ಯಾತರಿಗೆ ಧರ್ಮ ಅಥವಾ ಜಾತಿ ಮುಖ್ಯವಾಗಿದ್ದರೆ ಸಾದತ್ ಅಲಿಖಾನ್ ರವರನ್ನು ಸೋಲಿಸಿ, ವರದೇಗೌಡ ರನ್ನು ಗೆಲ್ಲಿಸುತ್ತಿರಲಿಲ್ಲ. ಅಂದು ಮೂವತ್ತು ಸಾವಿರ ಮತದಾರರಿದ್ದು ಅಲ್ಪಸಂಖ್ಯಾತ ಮತದಾರರು, ಸಾದತ್ ರವರಿಗೆ ಕೇವಲ ಎಂಟು ಸಾವಿರ ಮತಗಳನ್ನಷ್ಟೇ ನೀಡಿದ್ದ ಕಾರಣ ಅಂದು ಎಂ. ವರದೇಗೌಡ ರವರು ಗೆದ್ದದ್ದು ಎಂದರು.
ನಾವು ರಾಜಕೀಯಕ್ಕೆ ಬಂದ ಮೇಲೆ ಕುಮಾರಸ್ವಾಮಿ ರಾಜಕೀಯಕ್ಕೆ ಬಂದಿದ್ದು, ಅವರಿಂದ ಕಲಿಯಬೇಕಾದ್ದು ಏನಿಲ್ಲಾ ಎಂದರು.
ಕುಮಾರಸ್ವಾಮಿ ಬಿಜೆಪಿ ಪಕ್ಷಕ್ಕೆ ಬೆಂಬಲ ನೀಡಿ ದೊಡ್ಡ ತಪ್ಪು ಮಾಡಿದ್ದಾರೆ. ಕುಮಾರಸ್ವಾಮಿ ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತರ ಮತ ಪಡೆದು ಗೆದ್ದು ಶಾಸಕರಾಗಿ ಈಗ ನಮ್ಮ ಅವಶ್ಯಕತೆ ಇಲ್ಲ ಎಂದು ಹೇಳುವ ಅವರಿಗೆ ನೈತಿಕತೆ ಇದ್ದರೆ ಕೂಡಲೆ ರಾಜೀನಾಮೆ ನೀಡಿ ಮತ್ತೊಮ್ಮೆ ಚನ್ನಪಟ್ಟಣ ವಿಧಾನ ಸಭಾ ಕ್ಷೇತ್ರದಿಂದ ಸ್ಪರ್ಧಿಸಿ ಗೆದ್ದು ತೋರಿಸಲಿ ಚನ್ನಪಟ್ಟಣದಲ್ಲಿ ಅಲ್ಪಸಂಖ್ಯಾತ ಮತದಾರರ ಶಕ್ತಿ ಎಷ್ಟಿದೆ ಎಂದು ತೋರಿಸುವ ಕೆಲಸ ನಾವು ಮಾಡುತ್ತೆವೆ ಎಂದು ಕುಮಾರಸ್ವಾಮಿ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಸುದ್ದಿ ಗೋಷ್ಠಿಯಲ್ಲಿ ಮಾಜಿ ನಗರಸಭಾ ಸದಸ್ಯ ಜಭಿ ಉಲ್ಲಾ ಖಾನ್ ಘೋರಿ, ಅಮಾನುಲ್ಲಾ ಷರೀಫ್ ಸೇರಿದಂತೆ ಹಲವಾರು ಮುಸ್ಲಿಂ ಸಮುದಾಯದ ಜೆಡಿಎಸ್ ಪಕ್ಷದ ಮುಖಂಡರು ಉಪಸ್ಥಿತರಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು