ಚನ್ನಪಟ್ಟಣ: ನಗರದ ಡೂಂ ಲೈಟ್ ವೃತ್ತದಲ್ಲಿರುವ ಏಳು ದಶಕದಷ್ಟು ಹಳೆಯಾದಾದ ಪೆಟ್ಟಾ ಹೆಸರಿನ ಸರ್ಕಾರಿ ಶಾಲಾ ಆವರಣದಲ್ಲಿ ಹತ್ತಾರು ಟನ್ ಕಸದ ರಾಶಿಯನ್ನು ರಾತ್ರೋರಾತ್ರಿ ನಗರಸಭೆಯ ಸಿಬ್ಬಂದಿಗಳು ಸುರಿದು ಹೋಗಿದ್ಧು, ಮಕ್ಕಳಿಗೆ ಪಾಠ ಮಾಡಲಾಗದಷ್ಟು ದುರ್ವಾಸನೆ ಹರಡಿದೆ ಎಂದು ಶಾಲೆಯ ಶಿಕ್ಷಕರು, ವಿದ್ಯಾರ್ಥಿಗಳು ಹಾಗೂ ಎಸ್ ಡಿ ಎಂ ಸಿ ಅಧ್ಯಕ್ಷೆ ಮತ್ತು ಸದಸ್ಯರು ದೂರಿದ್ದಾರೆ.
ಸರ್ಕಾರಿ ಶಾಲೆಯ ಆವರಣವು ಮೂಲ ಪತ್ರದ ಉಲ್ಲೇಖದಂತೆ ನಾಲ್ಕು ಎಕರೆ ಇದೆ, ಶಾಲೆಯ ಕಟ್ಟಡಕ್ಕೆ ಎಪ್ಪತ್ತು ವರ್ಷಗಳು ತುಂಬಿದ್ದು, ಕಟ್ಟಡ ಬಹುತೇಕ ಶಿಥಿಲವಾಗಿದೆ. ಮೆಲ್ಛಾವಣಿ ಕುಸಿದು ಬೀಳುತ್ತಿದೆ, ಕಟ್ಟಡಕ್ಕೆ ಬಳಸಿರುವ ಕಬ್ಬಿಣಗಳು ಯಾವಾಗ ಬೇಕಾದರೂ ಮಕ್ಕಳ ಮೇಲೆ ಬೀಳಬಹುದು. ಕಿಟಕಿ, ಬಾಗಿಲುಗಳು ಮುರಿದಿವೆ. ಮಳೆ ಬಂದಾಗ ಪ್ರಾಣ ಭಯದಿಂದ ಇರಬೇಕಾದ ಪರಿಸ್ಥಿತಿ ಇದೆ. ಇನ್ನೂ ಮೂಲಭೂತ ಸೌಕರ್ಯಗಳನ್ನು ಕೇಳುವ ಹಾಗಿಲ್ಲ. ತಡೆಗೋಡೆಯಂತು ಇಲ್ಲವೇ ಇಲ್ಲಾ, ಎಲ್ಲಾ ಇಲ್ಲವುಗಳ ನಡುವೆ ಹೊಸದಾಗಿ ಮೂರು ಕೊಠಡಿಗಳನ್ನು ನಿರ್ಮಿಸಲಾಗಿದೆ.
ಹೊಸ ಶಾಲೆಗೆ ಬಂದ ಮಕ್ಕಳು ದುರ್ವಾಸನೆ ತಾಳದೆ ಹಳೆಯ ಕಟ್ಟಡಕ್ಕೆ ಬಂದಿದ್ದರಿಂದ ನಾವು ಅಲ್ಲಿಯೇ ಪಾಠ ಮಾಡುತ್ತಿದ್ದೇವೆ. ಇಲ್ಲಿಯೂ ಸಹ ಮೂಗು ಮುಚ್ಚಿಕೊಂಡೇ ಪಾಠ ಹೇಳಿಕೊಡಬೇಕಾಗಿದೆ. ಉತ್ತಮ ಶಾಲೆ ಹಾಗೂ ವಾತಾವರಣ ನಿರ್ಮಿಸಬೇಕಾದರೆ ಈ ಜಾಗ ಮೊದಲು ಖಾತೆ ಆಗಬೇಕಾಗಿದೆ, ಯಾವ ಅಧಿಕಾರಿಗಳು ಸಹ ಇದರ ಕಡೆ ಗಮನ ಹರಿಸುತ್ತಿಲ್ಲ. ತಡೆಗೋಡೆ ಇಲ್ಲದ ಕಾರಣ ರಾತ್ರೋರಾತ್ರಿ ಇಲ್ಲಿ ಕಸ ಹಾಕಲಾಗಿದೆ ಎಂದು ಶಿಕ್ಷಕಿ ಲಕ್ಷ್ಮಿ ಹಾಗೂ ಮತ್ತಿತರ ಶಿಕ್ಷಕರು ದೂರಿದ್ದಾರೆ.
ಶಾಲೆಯ ಎಸ್ ಡಿ ಎಂ ಸಿ ಅಧ್ಯಕ್ಷೆ ಸಲ್ಮಾಬಾನು ಮಾತನಾಡಿ, ಈ ಕಸದ ರಾಶಿ ಹಾಗೂ ದುರ್ವಾಸನೆ ಯಿಂದ ಮಕ್ಕಳ ಆರೋಗ್ಯ ತಪ್ಪಿದೆ. ಸಾಂಕ್ರಾಮಿಕ ರೋಗಗಳು ಹರಡುತ್ತಿವೆ. ಪೋಷಕರು ಮಕ್ಕಳನ್ನು ಶಾಲೆಗೆ ಕಳುಹಿಸಲು ಹಿಂದೇಟು ಹಾಕುತ್ತಿದ್ದಾರೆ. ಇದಕ್ಕೆಲ್ಲಾ ನಗರಸಭೆಯವರೇ ನೇರ ಕಾರಣವಾಗಿದ್ದು, ಶೀಘ್ರವಾಗಿ ಕಸವನ್ನು ಇಲ್ಲಿಂದ ವಿಲೇವಾರಿ ಮಾಡಬೇಕು. ಕಸ ತಂದು ಸುರಿದಿರುವವರ ಮೇಲೆ ಕಠಿಣ ಕ್ರಮ ಕೈಗೊಳ್ಳಬೇಕೆಂದು ಒತ್ತಾಯಿಸಿದರು. ವಿದ್ಯಾರ್ಥಿಯೋರ್ವ ಮಾತನಾಡಿ, ಒಂದು ಶಾಲೆ ಶಿಥಿಲವಾಗಿದೆ, ಹೊಸ ಶಾಲೆಯ ಮುಂದೆ ಕಸದ ರಾಶಿ ಬಿದ್ದಿದೆ. ಇದರಿಂದ ನಮಗೆ ರೋಗ ಬರುತ್ತಿದೆ. ಅಧಿಕಾರಿಗಳು ಸೂಕ್ತ ಕ್ರಮ ವಹಿಸುವಂತೆ ಮನವಿ ಮಾಡಿದ್ದಾನೆ.
ಸರ್ಕಾರಿ ಶಾಲೆಯ ಬಗ್ಗೆ ನಮಗೆ ಗೌರವವಿದೆ, ವಿಶೇಷವಾಗಿ ಮಕ್ಜಳ ಭವಿಷ್ಯದ ಬಗೆಯೂ ಕಾಳಜಿ ಇದೆ. ಶಾಲಾ ಆವರಣದಲ್ಲಿ ಹಾಕಿರುವ ಕಸ ನಗರಸಭೆಯದ್ದಲ್ಲಾ, ಅಲ್ಲಿ ದೊಡ್ಡ ಮಸೀದಿ ಇದ್ದು, ಪ್ರತಿವರ್ಷವೂ ದೊಡ್ಡಮಟ್ಟದ ಜಾತ್ರೆ (ಗಂಧ) ನಡೆಯುತ್ತದೆ. ಈಗ ಜಾತ್ರೆ ಆರಂಭವಾಗುವ ಸಮಯವಾದ್ದರಿಂದ, ಕಳೆದ ವರ್ಷದ ಕಸವನ್ನು ಟೆಂಡರ್ ಪಡೆದುಕೊಂಡಿರುವವರು ಹಾಕಿರಬಹುದು ಎಂಬ ಗುಮಾನಿ ಇದೆ. ಸರ್ಕಾರಿ ಶಾಲಾ ಆವರಣದಲ್ಲಿ ಕಸ ಹಾಕಿರುವುದು ಖಂಡನೀಯ, ಕಸವನ್ನು ಯಾರೂ ಹಾಕಿದ್ದಾರೆ ಎಂಬುದನ್ನು ಪತ್ತೆಹಚ್ಚಲು ಅಧಿಕಾರಿಗಳಿಗೆ ಸೂಚಿಸಿದ್ದು, ತಪ್ಪಿತಸ್ಥರ ಮೇಲೆ ಸೂಕ್ತ ಕ್ರಮ ಕೈಗೊಳ್ಳುತ್ತೇನೆ.
*ಸಿ ಪುಟ್ಟಸ್ವಾಮಿ ಪೌರಾಯುಕ್ತರು, ನಗರಸಭೆ ಚನ್ನಪಟ್ಟಣ*
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು