Tel: 7676775624 | Mail: info@yellowandred.in

Language: EN KAN

    Follow us :


ಕಾಡಂಕನಹಳ್ಳಿ ಗ್ರಾಮದಲ್ಲಿ ವೃದ್ದನಿಗೆ ಢಿಕ್ಕಿ ಹೊಡೆದ ಬೈಕ್, ಪಾದಚಾರಿ ಸಾವು

Posted date: 28 Oct, 2023

Powered by:     Yellow and Red

ಕಾಡಂಕನಹಳ್ಳಿ ಗ್ರಾಮದಲ್ಲಿ ವೃದ್ದನಿಗೆ ಢಿಕ್ಕಿ ಹೊಡೆದ ಬೈಕ್, ಪಾದಚಾರಿ ಸಾವು

ಚನ್ನಪಟ್ಟಣ: ತಾಲ್ಲೂಕಿನ ಕಾಡಂಕನಹಳ್ಳಿ ಗ್ರಾಮದ ೬೫ ವರ್ಷದ ಶಿವಮಾದೇಗೌಡ ಎಂಬ ವ್ಯಕ್ತಿಯು ವ್ಯವಸಾಯಗಾರನಾಗಿದ್ದು, ಹೈನುಗಾರಿಕೆ ಮಾಡಿಕೊಂಡಿದ್ದರು. ಪ್ರತಿದಿನದಂತೆ ಹಾಲನ್ನು ತೆಗೆದುಕೊಂಡು ಡೈರಿಗೆ ಹಾಕಿ ಮನೆಗೆ ರಸ್ತೆಯ ಎಡಭಾಗದಲ್ಲಿ ನಡೆದುಕೊಂಡು ಬರುತ್ತಿದ್ದ ಸಂದರ್ಭದಲ್ಲಿ ಅತಿವೇಗ ಮತ್ತು ಅಜಾಗರೂಕತೆಯಿಂದ ಕೆ ಎ ೧೧ ಇಪಿ ೨೩೪೦ ನೋಂದಣಿ ಸಂಖ್ಯೆಯ ಬಜಾಜ್ ಪಲ್ಸರ್ ಬೈಕ್ ಸವಾರ ಢಿಕ್ಕಿ ಹೊಡೆದಿದ್ದಾನೆ. 


ಢಿಕ್ಕಿ ಹೊಡೆದ ರಭಸಕ್ಕೆ ಶಿವಮಾದೇಗೌಡ ಕೆಳಕ್ಕೆ ಬಿದ್ದು, ಎಡಗಾಲಿನ ಮೂಳೆ ಮುರಿದು, ತಲೆ ಹಾಗೂ ದೇಹದ ಇತರೆಡೆ ರಕ್ತ ಗಾಯಗಳಾಗಿದ್ದು, ತಕ್ಷಣ ಅವರನ್ನು ಆಂಬುಲೆನ್ಸ್ ಮೂಲಕ ಚನ್ನಪಟ್ಟಣ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಪ್ರಥಮ ಚಿಕಿತ್ಸೆ ಕೊಡಿಸಿ, ವೈದ್ಯರ ಸಲಹೆ ಮೇರೆಗೆ ಬೆಂಗಳೂರಿನ ಸಂಜಯಗಾಂಧಿ ಆಸ್ಪತ್ರೆಗೆ ಸೇರಿಸಿ ಚಿಕಿತ್ಸೆ ಕೊಡಿಸಲಾಗಿತ್ತಾದರೂ, ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದಾರೆ.


ಈ ಸಂಬಂಧ ಶಿವಮಾದೇಗೌಡರ ಪತ್ನಿ ಸುಂದರಮ್ಮ ಎಂಬುವವರು ಬೈಕ್ ಸವಾರನ ಮೇಲೆ ಅಕ್ಕೂರು ಪೋಲಿಸ್ ಠಾಣೆಗೆ ದೂರು ನೀಡಿದ್ದು, ಅಕ್ಕೂರು ಪೋಲಿಸರು ಠಾಣಾ ಮೊಕದ್ದಮೆ ೨೦೮/೨೩, ೨೭೯, ೩೦೪ ಎ ಅಡಿಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑