Tel: 7676775624 | Mail: info@yellowandred.in

Language: EN KAN

    Follow us :


ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ

Posted date: 02 Dec, 2023

Powered by:     Yellow and Red

ಆರೋಪಿ ಸುಹೇಲ್ ಪರವಾಗಿ ಕರ್ತವ್ಯ ನಿರತ ಪೋಲಿಸರ ಮೇಲೆ ಹಲ್ಲೆ ನಡೆಸಿದ ಗೆಳತಿ ಭಾನುಪ್ರಿಯಾ

ಚನ್ನಪಟ್ಟಣ: ನಗರಸಭೆಯ ಸಾಮಾನ್ಯ ಸಭೆಯಲ್ಲಿ ಸದಸ್ಯ ವಾಸೀಲ್ ಅಲಿಖಾನ್ ಮತ್ತು ಅಬಿದಾಬಾನು ರವರ ನಡುವೆ ವಾಗ್ವಾದ ನಡೆದಿತ್ತು. ಅದೇ ದಿನ ನಗರಸಭೆ ಆವರಣದಲ್ಲಿ ವಾಸೀಲ್ ಅಲಿಖಾನ್ ಮತ್ತು ಅಬಿದಾಬಾನು ರವರ ಪುತ್ರ ಸುಹೇಲ್ ಮತ್ತು ಸ್ನೇಹಿತರು ಹೊಡೆದಾಡಿಕೊಂಡಿದ್ದರು. ನಂತರ ವಾಸೀಲ್ ಅಲಿಖಾನ್ ರವರ ಪುತ್ರ ಮತ್ತು ಸುಹೇಲ್ ಹಾಗೂ ಸ್ನೇಹಿತರು ನಗರಸಭೆಯ ಹೊರಗೆ ಕಿತ್ತಾಡಿಕೊಂಡಿದ್ದರು. ಪುರ ಪೋಲಿಸ್ ಠಾಣೆಯಲ್ಲಿ ಪರಸ್ಪರರ ವಿರುದ್ಧ ದೂರು ದಾಖಲಿಸಲಾಗಿತ್ತು.

ವಾಸೀಲ್ ಅಲಿಖಾನ್ ಗೆ ಸುಹೇಲ್ ಚಪ್ಪಲಿಯಿಂದ ಹೊಡೆದ ದೂರಿನ ಮೇರೆಗೆ ಆರಕ್ಷಕ ಉಪನಿರೀಕ್ಷಕ ಹರೀಶ್ ಸಿ ಎಂ ರವರು ಆರೋಪಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆಗೆ ಕರೆದೊಯ್ಯಲು ಖಚಿತ ಮಾಹಿತಿ ಮೇರೆಗೆ ನಗರದ ಮದಿನಾಚೌಕ ಕ್ಕೆ ಬಂದಿದ್ದಾರೆ. ಕಾರಿನಲ್ಲಿ ತನ್ನ ಗೆಳತಿ ಮಾಯಗಾರ್ ಬಿಗ್ ಪ್ರಿಂಟರ್ ಮತ್ತು ಸ್ಟಿಕರ್ ನ ಮಾಲೀಕಳಾದ ಭಾನುಪ್ರಿಯಾ ಅಲಿಯಾಸ್ ಭಾನುಪ್ರಿಯಾಶೆಟ್ಟಿ ಬಿನ್ ಸಿದ್ದರಾಜು ಎಂಬ ಮಹಿಳೆ ಆರೋಪಿ ಸುಹೇಲ್ ಪರ ಪೋಲಿಸರ ಜೊತೆ ವಾಗ್ವಾದಕ್ಕಿಳಿದಿದ್ದಾಳೆ.

ಆಕೆಯನ್ನು ಪೋಲೀಸರು ತಡೆದು ಕಾರಿನಿಂದ ಹೊರಗೆ ಕಳುಹಿಸಲು ಮುಂದಾದಾಗ ಮಹಿಳಾ ಕಾನ್ಸ್‌ಟೇಬಲ್ ಅನಾರ್ಕಲಿ ಎಂಬುವವರಿಗೆ ಕಪಾಳಕ್ಕೆ ಹೊಡೆದು, ಕೈಯ್ಯನ್ನು ಹಲ್ಲಿನಿಂದ ಕಚ್ಚಿದ್ದಾಳೆ. ನಂತರ ಓಡಿಹೋಗಿ ಕಾರು ಸ್ಟಾರ್ಟ್ ಮಾಡಿ ಪಿಎಸ್ಐ ಹರೀಶ್, ಸಿಬ್ಬಂದಿಗಳಾದ ಸುನೀಲ್, ಪವನ್ ಕುಮಾರ್, ಅನಾರ್ಕಲಿ ಹಾಗೂ ಲತಾಮಣಿ ರವರ ಮೇಲೆ ಕಾರು ಹತ್ತಿಸಲು ಪ್ರಯತ್ನಿಸಿದ್ದಾಳೆ. ಎಚ್ಚೆತ್ತ ಪೋಲಿಸರು ಪಕ್ಕಕ್ಕೆ ಸರಿದಿದ್ದರಿಂದ ಬಚಾವಾಗಿದ್ದು, ಆಕೆಯನ್ನು ವಶಕ್ಕೆ ಪಡೆದು ಜೀಪಿನಲ್ಲಿ ಕೂರಿಸಿದಾಗ ಲತಾಮಣಿ ರವರ ಕೈಯ್ಯನ್ನು ಪರಚಿ, ಬೆರಳನ್ನು ನುಲುಚಿದ್ದಾಳೆ. ಪೋಲಿಸರಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿ,ನಿಮ್ಮನ್ನು ಸುಮ್ಮನೆ ಬಿಡುವುದಿಲ್ಲಾ ಎಂದು ಕೊಲೆ ಬೆದರಿಕೆ ಹಾಕಿದ್ದಾಳೆ ಎಂದು ಪುರ ಪೋಲಿಸ್ ಠಾಣೆಯ ಪಿಎಸ್ಐ ಹತೀಶ್ ಸಿಎಂ ರವರು ಪೂರ್ವ ಪೋಲಿಸ್ ಠಾಣೆಗೆ ದೂರು ನೀಡಿ ಪ್ರಕರಣ ದಾಖಲಿಸಿದ್ದಾರೆ.

ಆಕೆಯನ್ನು ವಶಕ್ಕೆ ಪಡೆದ ನಂತರ ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಮಹಿಳಾ ಪೋಲಿಸರಿಗೆ ಚಿಕಿತ್ಸೆ ಕೊಡಿಸಿ, ಆರೋಪಿ ಭಾನುಪ್ರಿಯಾ ರವರನ್ನು ಆರೋಗ್ಯ ತಪಾಸಣೆಗೊಳಪಡಿಸಿ, ನ್ಯಾಯಾಧೀಶರ ಮುಂದೆ ಹಾಜರುಪಡಿಸಿ, ಆದೇಶದ ಮೇರೆಗೆ ಮಂಡ್ಯ ನಗರದಲ್ಲಿರುವ ಮಹಿಳಾ ಕಾರಾಗೃಹಕ್ಕೆ ಬಿಡಲಾಗಿದೆ.

ಗೋ ರಾ ಶ್ರೀನಿವಾಸ...
ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑