ಎ ವಿ ಹಳ್ಳಿ ಗ್ರಾಮದ ವಿಜಯ್ ಕುಮಾರ್ ಗೆ ಪಿ ಹೆಚ್ ಡಿ ಪ್ರದಾನ
ಚನ್ನಪಟ್ಟಣ: ತಾಲೂಕಿನ ಎ.ವಿ.ಹಳ್ಳಿ ಗ್ರಾಮದ ವಿಜಯ್ ಕುಮಾರ್ ಎ.ಎನ್ ಅವರು ನವ್ಯೋತ್ತರ ಕಾದಂಬರಿಗಳಲ್ಲಿ ದೇಸೀಯತೆಯ ಪರಿಕಲ್ಪನೆ ಎಂಬ ವಿಷಯದ ಕುರಿತು ಮಂಡಿಸಿದ್ದ ಮಹಾಪ್ರಬಂಧಕ್ಕೆ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿ ಎಚ್ ಡಿ ಪದವಿಯನ್ನು ನೀಡಿ ಗೌರವಿಸಿದೆ.
ತಾಲೂಕಿನ ಎ.ವಿ.ಹಳ್ಳಿ ಗ್ರಾಮದ ಸುಜಯ ಮತ್ತು ನರಸಿಂಹೇಗೌಡ ಅವರ ಪುತ್ರ ವಿಜಯ್ ಕುಮಾರ್ ಎ.ಎನ್. ನವ್ಯೋತ್ತರ ಕಾದಂಬರಿಗಳಲ್ಲಿ ದೇಸೀಯತೆಯ ಪರಿಕಲ್ಪನೆ ಎಂಬ ವಿಷಯದ ಕುರಿತು ಡಾ.ಮುತ್ತೇಗೌಡ ಟಿ.ಎನ್. ಅವರ ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು. ಇದಕ್ಕೆ ಹಂಪಿ ಹಂಪಿಯ ಕನ್ನಡ ವಿಶ್ವವಿದ್ಯಾಲಯವು ಪಿಎಚ್.ಡಿ ಪದವಿಯನ್ನು ನೀಡಿದೆ.
ಪ್ರಸ್ತುತ ವಿಜಯ್ ಕುಮಾರ್, ಬೆಂಗಳೂರಿನ ಜಯನಗರದ ಬಿ.ಇ.ಎಸ್ ಪದವಿ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಪಿಎಚ್.ಡಿ ಪದವಿ ಪಡೆದ ಅವರನ್ನು ಹಿತೈಷಿಗಳು ಅಭಿನಂದಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು