Tel: 7676775624 | Mail: info@yellowandred.in

Language: EN KAN

    Follow us :


ಬೇಡಿಕೆ ಈಡೇರಿಸಲು ಒತ್ತಾಯುಸಿ,ಬಿಸಿಯೂಟ ತಯಾರಕರಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

Posted date: 28 Jan, 2024

Powered by:     Yellow and Red

ಬೇಡಿಕೆ ಈಡೇರಿಸಲು ಒತ್ತಾಯುಸಿ,ಬಿಸಿಯೂಟ ತಯಾರಕರಿಂದ ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ

ಚನ್ನಪಟ್ಟಣ: ಬಿಸಿಯೂಟ ತಯಾರಿ ಶಾಲೆಯಲ್ಲಿ ಕಾರ್ಯನಿರ್ವಹಿಸುವ ತಯಾರಕರಾದ ನಾವು ಬೇಡಿಕೆಗಳು ಹಾಗೂ ಸಮಸ್ಯೆಗಳ ಬಗ್ಗೆ ಕೇಂದ್ರ ಮತ್ತು ಸರ್ಕಾರದ ಗಮನಹರಿಸುವ ಸಲುವಾಗಿ ಫೆಬ್ರವರಿ ೧ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ನಲ್ಲಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಅಕ್ಷರ ದಾಸೋಹ ಬಿಸಿಯೂಟ ತಯಾರಕದ ಫೆಡರೇಶನ್ ಜಿಲ್ಲಾಧ್ಯಕ್ಷ ನಿರ್ಮಲ ಎಚ್ ತಿಳಿಸಿದರು.

      ನಗರದ ಸಾರ್ವಜನಿಕ ವಿದ್ಯಾ ಸಂಸ್ಥೆಯಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ೧ಲಕ್ಷದ ೭೭,೦೦೦ ಬಿಸಿಯೂಟ ತಯಾರಿಕೆಯಲ್ಲಿ ಮಕ್ಕಳ ಭವಿಷ್ಯ ಅವರ ಹಿತ ರಕ್ಷಣೆಯಿಂದ ಹಗಲು ಎನ್ನದೆ ಸೇವೆ ಸಲ್ಲಿಸುತ್ತಿರುವ ಮಹಿಳೆಯರಿಗೆ ಕೇಂದ್ರ ಸರ್ಕಾರ ರಾಜ್ಯ ಸರ್ಕಾರ ಕೇವಲ ಭರವಸೆಯನ್ನು ನೀಡಿದೆ ಆದರೆ ಇಲ್ಲಿಯವರೆಗೂ ಯಾವುದನ್ನು ಜಾರಿಗೊಳಿಸಿಲ್ಲ ಅದರಲ್ಲೂ ಅಕಾಲಿಕ ಮರಣಕ್ಕೆ ತುತ್ತಾಗುತ್ತಿರುವ ಮಹಿಳೆಯರಿಗೆ ಯಾವ ಪರಿಹಾರವನ್ನು ಒದಗಿಸಿಲ್ಲ ಮತ್ತು ೨೨ ವರ್ಷ ಸೇವೆ ಸಲ್ಲಿಸುವ ಬಿಸಿಯೂಟ ತಯಾರಿಕೆಯರು ಬರಿಗೈಯಲ್ಲಿ ಹೋಗುವಂತಹ ಪರಿಸ್ಥಿತಿ ಎದುರಾಗಿದ್ದು ಇದನ್ನು ಬಗೆಹರಿಸಿಕೊಳ್ಳಲು  ಉಗ್ರ ಪ್ರತಿಭಟನೆಯನ್ನು ಹಮ್ಮಿಕೊಂಡಿದ್ದು ಈ ಪ್ರತಿಭಟನೆ ಮೂಲಕ ಸರ್ಕಾರವನ್ನು ಎಚ್ಚರಿಸಲು ಮುಂದಾಗಿದ್ದೇವೆ ಎಂದು ತಿಳಿಸಿದರು.


ಬಹು ಮುಖ್ಯವಾದ ಬೇಡಿಕೆಗಳು ಎಂದರೆ ೨೦೨೩ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದರೆ ಬಿಸಿ ಊಟ ತಯಾರಿಕರಿಗೆ ತಿಂಗಳಿಗೆ ೬೦೦೦ ಗಳಿಗೆ ಅವರ ವೇತನವನ್ನು ಹೆಚ್ಚಿಸಲಾಗುವುದು ಎಂದು ಮತ್ತು ಇದನ್ನು ಆರನೇ ಗ್ಯಾರಂಟಿಯಾಗಿ ಘೋಷಣೆ ಮಾಡಿದ್ದೇವೆ ಎಂದು ಬೆಳಗಾವಿ ಜಿಲ್ಲೆಯ ಖಾನಾಪುರದಲ್ಲಿ ಕಾಂಗ್ರೆಸ್ ನಾಯಕಿ ಪ್ರಿಯಾಂಕ ಗಾಂಧಿ ಹೇಳಿದ್ದರು ಅವರು ನೀಡಿದ ಭರವಸೆ ರಾಜ್ಯದ ಬರುವ ಬಜೆಟ್ ನಲ್ಲಿ ಬಿಸಿಊಟ ತಯಾರಿಕರಿಗೆ ೬೦೦೦ ವೇತನವನ್ನು ಹೆಚ್ಚಿಸಬೇಕು. ಬಿಸಿಯೂಟ ತಯಾರಕರ ಕೆಲಸವನ್ನು ಕಾಯಂಗೊಳಿಸಬೇಕು. ಬಿಸಿಯೂಟ ತಯಾರಿಕೆ ರಾಜ್ಯದಲ್ಲಿ ಕಳೆದ  ೨೨ವರ್ಷಗಳಿಂದ ಬಹಳ ಕಡಿಮೆ ವೇತನಕ್ಕೆ ದುಡಿದು ನಿವೃತ್ತಿಹೊಂದಿದ್ದಾರೆ. ಅದರಲ್ಲಿ ಈಗಾಗಲೇ ಸುಮಾರು ೧೦,೦೦೦ ಬಿಸಿಯೂಟ ತಯಾರಿಕ ಮಹಿಳೆಯರು ರಾಜ್ಯಾದ್ಯಂತ ನಿವೃತ್ತಿ ಹೊಂದಿದ್ದಾರೆ ಕಳೆದ ಮೂರು ವರ್ಷದಿಂದ ನಿವೃತ್ತಿ ಹೊಂದಿದವರು ಸೇರಿದಂತೆ ಮುಂದೆ ನಿವೃತ್ತಿಯಾಗುವ ಎಲ್ಲ ಬಿಸಿಯೂಟ ತಯಾರಿಕರಿಗೆ ೬೦ ವರ್ಷ ವಯಸ್ಸಾಗಿ ನಿವೃತ್ತಿ ಯಾದವರಿಗೆ ಎರಡು ಲಕ್ಷ ರೂಪಾಯಿ ಇಡುಗುಂಟು ಹಣ ಕೊಡಬೇಕು. ಸೇರಿದಂತೆ ಇನ್ನು ಹಲವಾರು ಬೇಡಿಕೆಗಳು ಇದು ಅವುಗಳನ್ನು ಕೂಡಲೇ

ಕಲ್ಪಿಸಬೇಕೆಂದು ಒತ್ತಾಯ ಮಾಡಿದ್ದೇವೆ ಎಂದು ತಿಳಿಸಿದರು.


ಎಸ್ ಡಿ ಎಂ ಸಿ ರಾಜ್ಯ ಉಪಾಧ್ಯಕ್ಷ ಎನ್ ಎಂ ಶಂಭುಗೌಡ. ಜಿಲ್ಲೆಯ ಕಾರ್ಯದರ್ಶಿ ಅನುಸೂಯಮ್ಮ. ತಾಲೂಕು ಅಧ್ಯಕ್ಷ ಸಾಕಮ್ಮ. ತಾಲೂಕು ಕಾರ್ಯದರ್ಶಿ ಮಂಗಳ. ಉಪಾಧ್ಯಕ್ಷ ಶಾಂತಮ್ಮ. ಖಜಾಂಚಿ ಶಶಿಕಲಾ. ಕಾರ್ಯದರ್ಶಿ ಸುನೀತ. ಸೇರಿದಂತೆ ಪೂರ್ಣಿಮಾ. ಪುಷ್ಪಲತಾ .ಶಾರದಮ್ಮ. ಸರಸ್ವತ್ತಮ್ಮ .ಲಲಿತ. ಲಕ್ಷ್ಮಿದೇವಮ್ಮ ಹಾಗೂ ಎಲ್ಲಾ ಪದಾಧಿಕಾರಿಗಳು ಪತ್ರಿಕಾಗೋಷ್ಠಿಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑