Tel: 7676775624 | Mail: info@yellowandred.in

Language: EN KAN

    Follow us :


ಅರಸತನ ಮೇಲಲ್ಲಾ, ಅಗಸತನ ಕೀಳಲ್ಲಾ ಎಂದ ಮಹಾಮಾನವತವಾದಿ ಮಾಚಿದೇವರು, ತಹಶಿಲ್ದಾರ್ ಬಣ್ಣನೆ

Posted date: 02 Feb, 2024

Powered by:     Yellow and Red

ಅರಸತನ ಮೇಲಲ್ಲಾ, ಅಗಸತನ ಕೀಳಲ್ಲಾ ಎಂದ ಮಹಾಮಾನವತವಾದಿ ಮಾಚಿದೇವರು, ತಹಶಿಲ್ದಾರ್ ಬಣ್ಣನೆ

ಚನ್ನಪಟ್ಟಣ,ಫೆ:೧೧ ೨ನೇ ಶತಮಾನದಲ್ಲೇ ಅರಸತನ ಮೇಲಲ್ಲಾ, ಅಗಸತನ ಕೀಳಲ್ಲಾ ಎಂಬ ವಚನವನ್ನು ಕಟ್ಟುವ ಮೂಲಕ ಇಡೀ ಸಮಾಜದಲ್ಲಿ ಯಾವ ವ್ಯಕ್ತಿಯು ದೊಡ್ಡವನಲ್ಲಾ, ಪ್ರತಿಯೊಬ್ಬರೂ ಸಮಾನರು ಎಂದು ಹನ್ನೆರಡನೇ ಶತಮಾನದಲ್ಲಿ ತನ್ನದೇ ಆದ ವಚನಗಳ ಮುಖಾಂತರ ಸಮಾಜದಲ್ಲಿ ಬೇರೂರಿದ್ದ ಅಸಮಾನತೆ ಹಾಗೂ ಲಿಂಗತಾರತಮ್ಯವನ್ನು ಹೋಗಲಾಡಿಸಲು ಶ್ರಮಿಸಿದ ಬಸವಣ್ಣರವರ ಸಮಾಕಾಲಿನರಾದ ಮಡಿವಾಳ ಮಾಚೀದೇವರ ಸಮಾಜಿಕ ಕ್ರಾಂತಿಯು ಕೂಡ ಒಂದಾಗಿದೆ ಎಂದು ತಾಲ್ಲೂಕು ದಂಡಾಧಿಕಾರಿ ಹಾಗೂ ರಾಷ್ಟ್ರೀಯ ಹಬ್ಬಗಳ ಆಚರಣಾ ಸಮಿತಿಯ ಅಧ್ಯಕ್ಷ ಮಹೇಂದ್ರ ತಿಳಿಸಿದರು.


ಅವರು ನಗರದ ತಾಲ್ಲೂಕು ಕಚೇರಿಯಲ್ಲಿನ ಸಭಾಂಗಣದಲ್ಲಿ ತಾಲ್ಲೂಕು ಆಡಳಿತ ಆಯೋಜನೆ ಮಾಡಿದ್ದ, ಸರ್ಕಾರದ ಆದೇಶದನ್ವಯ ಮೊದಲನೇ ವರ್ಷದ ಶ್ರೀ ಮಡಿವಾಳ ಮಾಚೀದೇವರ ಜಯಂತಿಯ ಸಮಾರಂಭದಲ್ಲಿ, ಕ್ರಾಂತಿಕಾರರ ಭಾವಚಿತ್ರಕ್ಕೆ ಪೂಜೆ ಸಲ್ಲಿಸಿ, ಪುಷ್ವಾರ್ಚನೆ ಮಾಡಿ ಮಾತನಾಡಿದರು.


ಸಮಾಜದಲ್ಲಿ ಜಾತಿ-ಜಾತಿ ನಡುವೆ ವೈಷಮ್ಯವನ್ನು ಸೃಷ್ಟಿ ಮಾಡಿದ ಮೇಲ್ವರ್ಗದವರ ದೌರ್ಜನ್ಯವನ್ನು ತೊಡೆದು ಹಾಕಲು ತಾನು ತನ್ನ ಕುಲವನ್ನೇ ಧಿಕ್ಕರಿಸಿ, ವೈರಾಗಿಯಾಗಿ ಕುಲಕುಲವೆಂದು ಹೊಡೆದಾಡದಿರಿ ನೀವು ಕುಲದ ನೆಲಯನ್ನಾದರೂ ಬಲ್ಲಿರಾ ಎಂದು ೧೨ ನೇ ಶತಮಾನದಲ್ಲಿಯೇ ಅನುಭವ ಮಂಟಪವನ್ನು ಸ್ಥಾಪನೆ ಮಾಡಿ ಆ ಮಂಟಪದಲ್ಲಿ ಸ್ಥಾನ ಪಡೆದು, ಬಸವಣ್ಣರವರ ಜೊತೆ ಜಾತಿಯತೆಯನ್ನು ಹೋಗಲಾಡಿಸಲು ಹೆಗಲು ಕೊಟ್ಟವರು ಶ್ರೀ ಮಡಿವಾಳ ಮಾಚಿದೇವರು ಎಂದು ತಿಳಿಸಿದರು.


ಕ್ರಿ.ಪೂ.೧೧೨೦-೧೧೩೦ರ ಮಧ್ಯಭಾಗದಲ್ಲಿ ಬೀಜಾಪುರ ಜಿಲ್ಲೆಯ ದೇವರ ಹಿಪ್ಪರಗಿ ಗ್ರಾಮದ ಬಡಕುಟುಂಬದ ಅಗಸ ಸಮುದಾಯದಲ್ಲಿ ಜನಿಸಿದ ಮಾಚಿದೇವರು, ತಮ್ಮ ಸಮುದಾಯವಲ್ಲದೆ ಪ್ರತಿಯೊಂದು ಕೆಳ ಸಮುದಾಯದ ಶೋಷಣೆಯ ವಿರುದ್ದ ಬಸವಣ್ಣರವರ ಮಾರ್ಗದರ್ಶನದಲ್ಲಿ ತಮ್ಮ ಸಮಾಕಾಲಿನವರಾದ ಅಲ್ಲಮಪ್ರಭು, ಅಕ್ಕಮಹಾದೇವಿ, ಅಕ್ಕನಾಗಮ್ಮ, ಅಯ್ಯಕ್ಕಲಕ್ಕಮ್ಮ ಹಾಗೂ ಹಲವಾರು ಮಂದಿ ಶರಣರ ಸಂಪರ್ಕದಲ್ಲಿ ಸಮಾಜಕ್ಕೆ ಆರೋಗ್ಯಕರ ಸಂದೇಶ ನೀಡಿದರು ಎಂದರು.


ಅರಸತನ ಮೇಲಲ್ಲ, ಅಗಸತನ ಕೀಳಲ್ಲಾ ಎಂಬ ಸಂದೇಶವನ್ನು ನೀಡಿದ, ಮಾಚಿದೇವರು, ತಮ್ಮ ವೃತ್ತಿಯನ್ನು ಗೌರವ ವೃತ್ತಿ ಎಂದು ಭಾವಿಸುವುದರ ಜೊತೆಗೆ ತಮ್ಮ ಸಮುದಾಯವು ಕೂಡ ಜ್ಞಾನಾರ್ಜನೆಗೆ ಹೆಚ್ಚು ಒತ್ತು ನೀಡಬೇಕು, ತಮ್ಮ ಮಕ್ಕಳನ್ನು ಸಂಸ್ಕಾರವಂತರನ್ನಾಗಿ ಮಾಡಬೇಕು ಎಂದು ಕನಸು ಕಂಡಿದ್ದರು ಎಂದರು.


  ಈ ಸಂದರ್ಭದಲ್ಲಿ ಮಾತನಾಡಿದ ಶ್ರೀ ಮಡಿವಾಳ ಮಾಚಿದೇವರ ಕ್ಷೇಮಾಭಿವೃದ್ದಿ ಸಂಘದ ತಾಲ್ಲೂಕು ಅಧ್ಯಕ್ಷ ರಾಘವೇಂದ್ರ, ಸಮುದಾಯಕ್ಕೆ ತನ್ನದೇ ಆದ ತತ್ವಸಿದ್ದಾಂತಗಳ ಮುಖಾಂತರ, ಉತ್ತಮವಾದ ಸಂದೇಶ ನೀಡಿದ ಶ್ರೀ ಮಡಿವಾಳ ಮಾಚಿದೇವರ ಕನಸನ್ನು ನನಸು ಮಾಡಲು ಸಮುದಾಯ ಸಂಘಟಿತರಾಗವುದರ ಮುಖಾಂತರ, ಸರ್ಕಾರದಿಂದ ಪ್ರತಿಯೊಂದು ಸೌಲಭ್ಯಗಳನ್ನು ಪಡೆಯವುದರ ಜೊತೆಯಲ್ಲಿ, ರಾಜಕೀಯ ಸ್ಥಾನಮಾನಗಳು ನೀಡುವಂತೆ ಮನವಿ  ಮಾಡಬೇಕು ಎಂದರು.


ಈ ಕಾರ್ಯಕ್ರಮದಲ್ಲಿ ಸಂಘದ ಗೌರವಾಧ್ಯಕ್ಷ ರಂಗಸ್ವಾಮಿ,  ಪ್ರಧಾನಕಾರ್ಯಧರ್ಶಿ ಶಿವಕುಮಾರ್ ಖಜಾಂಚಿ ಪ್ರದೀಪ್, ಮುಖಂಡರುಗಳಾದ ಸುನಿತಾ, ವಸಂತ, ನಾಗಮಣಿ ಹಾಗೂ ಹಲವಾರು ಮುಖಂಡರು ಹಾಜರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑