Tel: 7676775624 | Mail: info@yellowandred.in

Language: EN KAN

    Follow us :


ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

Posted date: 07 Sep, 2018

Powered by:     Yellow and Red

ಸರಳತೆಯ ಮೂಲಕವೆ ವಿದ್ಯಾರ್ಥಿಗಳ ಮನಗೆದ್ದ ಕೃಷ್ಣಮೂರ್ತಿ ಮೇಷ್ಟ್ರು

ಮಕ್ಕಳ ಭವಿಷ್ಯಕ್ಕೆ ತಮ್ಮ ಜೀವನದ ಬಹುಪಾಲನ್ನು ಮೀಸಲಾಗಿಡುವ ಶಿಕ್ಷಕರು ಅದೆಷ್ಟೋ ಮಂದಿ ಇದ್ದಾರೆ. ಅಂತವರಲ್ಲಿ ರಾಮನಗರ ತಾಲ್ಲೂಕಿನ ಕೂಟಗಲ್ ಹೋಬಳಿಯ ಸರ್ಕಾರಿ ಪ್ರಾಥಮಿಕ ಶಾಲೆಯ ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ಅವರು ಒಬ್ಬರು.
        ಪರಿಚಯ : ರಾಮನಗರ ತಾಲ್ಲೂಕಿನ  ಕೈಲಾಂಚ ಹೋಬಳಿಯ ಹುಣಸನಹಳ್ಳಿ ಗ್ರಾಮದಲ್ಲಿ 27-11-1961 ರಂದು ಜನಿಸಿದರು. ತಂದೆ ಎಚ್.ಎನ್. ಸಿದ್ದಾಚಾರ್, ತಾಯಿ ಕಮಲಮ್ಮ. ರಾಮನಗರದಲ್ಲಿ ಪ್ರಾಥಮಿಕ  ಮತ್ತು ಪ್ರೌಢಶಿಕ್ಷಣವನ್ನು ಪಡೆದ ಇವರು ವೃತ್ತಿ ಶಿಕ್ಷಣವನ್ನು ಬಿಡದಿಯಲ್ಲಿ ಪಡೆದುಕೊಂಡರು.
        ಸರ್ಕಾರಿ ಶಿಕ್ಷಕ ವೃತ್ತಿಗೆ ಸೇರುವ ಮೊದಲು ಇವರು ತಮ್ಮ ತಂದೆಯ ಕಸುಬಾದ ಮರಗೆಲಸದಲ್ಲಿ  ತೊಡಗಿಸಿಕೊಂಡರು. ದಿನಾಂಕ: 30-08-1993 ರಂದು ಸರ್ಕಾರಿ  ಶಾಲೆಯಲ್ಲಿ ಶಿಕ್ಷಕನಾಗಿ ಸೇರಿದರು. ಚಾಮನಹಳ್ಳಿ  ಸರ್ಕಾರಿ  ಕಿರಿಯ ಪ್ರಾಥಮಿಕ ಶಾಲೆಯಲ್ಲಿ ಶಿಕ್ಷಕನಾಗಿ ಸೇವೆ  ಪ್ರಾರಂಭಿಸಿ ಕಳೆದ 25 ವರ್ಷಗಳಿಂದ ಒಂದೇ ಶಾಲೆಯಲ್ಲಿ ಸೇವೆ ಸಲ್ಲಿಸುತ್ತಾ ಬಂದಿದ್ದಾರೆ.
        ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದಲ್ಲಿ ಮೂರು ಬಾರಿ ಚುನಾಯಿತ  ಪ್ರತಿನಿಧಿಯಾಗಿ, ಒಂದು ಬಾರಿ ಪ್ರಧಾನ  ಕಾರ್ಯದರ್ಶಿಯಾಗಿ ಶಿಕ್ಷಕರ ಸಮಸ್ಯೆಗಳಿಗೆ ಸ್ಪಂದಿಸಿ ಇಲಾಖೆಯಿಂದ ಶಿಕ್ಷಕರಿಗೆ ಆಗಬೇಕಾದ ಕೆಲಸಗಳನ್ನು ಮಾಡಿಸಿದ್ದಾರೆ, ಈಗಲೂ ಮಾಡಿಸುತ್ತಿದ್ದಾರೆ.
        ಎಚ್.ಎಸ್. ಕೃಷ್ಣಮೂರ್ತಿ ಅವರ ಪತ್ನಿ ರುಕ್ಮಿಣಿ.  ಕೆ. ಮೇಘನಾ,  ಕೆ. ಮನುಮಯೂರ್ ಇವರ ಇಬ್ಬರ ಮಕ್ಕಳು. ಇಬ್ಬರೂ ತಾಂತ್ರಿಕ ಶಿಕ್ಷಣದಲ್ಲಿ  ಪದವಿ ಪಡೆದಿದ್ದಾರೆ.
        ಈಗ ಐಜೂರಿನ ಮಲ್ಲೇಶ್ವರ ಬಡಾವಣೆಯಲ್ಲಿ ವಾಸವಾಗಿರುವ ಇವರು ಸರ್ಕಾರಿ ಶಾಲೆಗಳ ಸಬಲೀಕರಣದ ಬಗ್ಗೆ ಶ್ರಮಿಸುತ್ತಿದ್ದಾರೆ.
ಮಕ್ಕಳ ಭವಿಷ್ಯ ರೂಪಿಸುವ, ಸತ್ಪಥದಲ್ಲಿ ಮುನ್ನಡೆಯುವಂತೆ ಮಾರ್ಗ ತೋರುವ ಅಂಥ ಗುರುಗಳ ಸ್ಮರಣೆ ಸದಾ ಕಾಲಕ್ಕೂ ನಡೆಯಬೇಕು. ಒಬ್ಬ ವಿದ್ಯಾರ್ಥಿ ಗುರುವನ್ನೂ, ಶಿಕ್ಷಕ ಒಬ್ಬ ವಿದ್ಯಾರ್ಥಿ ಗುರುವನ್ನೂ, ಶಿಕ್ಷಕ ಒಬ್ಬ ವಿದ್ಯಾರ್ಥಿಯನ್ನೂ ಸ್ಮರಿಸಲು ಶಿಕ್ಷಕ ದಿನಾಚರಣೆ ಒಳ್ಳೆಯ ಸಂದರ್ಭ ಎಂದು ಮುಖ್ಯಶಿಕ್ಷಕ ಎಚ್.ಎಸ್. ಕೃಷ್ಣಮೂರ್ತಿ ತಿಳಿಸಿದರು.
ಶಿಕ್ಷಕರು ಹಾಗೂ ಮಕ್ಕಳ  ಬಾಂಧವ್ಯ ಇಂದು ಔಪಚಾರಿಕ ಶಿಕ್ಷಣಕ್ಕೆ ಸೀಮಿತವಾಗಿದೆ. ಶಿಕ್ಷಕ ಪರಿಣಾಮಕಾರಿಯಾಗಿ ಬೋಧಿಸುವ ಕಲೆ ಕರಗತ ಮಾಡಿಕೊಳ್ಳಬೇಕು. ಇದರಿಂದ ಹೆಚ್ಚು ವಿಚಾರ ತಿಳಿಸಲು ಸಾಧ್ಯವಾಗುತ್ತದೆ. ಅದು  ಮಕ್ಕಳ  ಕೇಳುವಿಕೆಗೂ ಸಹಕಾರಿಯಾಗುತ್ತದೆ. ಇದು ಜೀವನದ ಉದ್ದಕ್ಕೂ ಉಳಿಯಲು ನೆರವಾಗುತ್ತದೆ ಎಂಬುದು ಇವರ ಅಭಿಪ್ರಾಯವಾಗಿದೆ. ಮಗು ಮೊದಲು ಶಾಲೆಗೆ ಹೋದಾಗ ಶಿಕ್ಷಕ ಹೇಳಿದ್ದೇ ಪರಮಸತ್ಯ ಎಂದು ನಂಬುತ್ತದೆ. ಮಗುವಿನ ಜಗತ್ತಿನಲ್ಲಿ ಶಿಕ್ಷಕನೇ ಮಾದರಿ  ವ್ಯಕ್ತಿ. ತನ್ನ ಗುರುಗಳಿಗೆ ಎಲ್ಲವೂ ತಿಳಿದಿದೆ ಎಂದೇ ಮಗು ಭಾವಿಸುತ್ತದೆ ಎಂದು ತಿಳಿಸಿದರು.
        ಇದಕ್ಕಾಗಿಯೇ ಶಿಕ್ಷಕರ ಜವಾಬ್ದಾರಿ, ಸ್ಥಾನವನ್ನು ಶ್ರೇಷ್ಠ ಎಂದು ಕಾಣಲಾಗುತ್ತದೆ. ಎಲ್ಲಾ ವಿಷಯಗಳಲ್ಲೂ ಸಮಾನತೆ  ಕಾಯ್ದುಕೊಂಡು ಆರೋಗ್ಯ ಪೂರ್ಣ ಸಮಾನತೆ  ಕಾಯ್ದುಕೊಂಡು ಆರೋಗ್ಯ ಪೂರ್ಣ ಸಮಾಜಕ್ಕಾಗಿ ಪ್ರಜೆಗಳನ್ನು ರೂಪುಗೊಳಿಸುವ ಜವಾಬ್ದಾರಿ ಗುರುವಿನದು
ಎಂದು ತಿಳಿಸಿದರು.
        ಪ್ರಶಸ್ತಿ ಪ್ರಧಾನ : ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಶಿಕ್ಷಕರ ದಿನಾಚರಣೆಯ ಅಂಗವಾಗಿ ಎಲ್.  ನರಸಿಂಹಯ್ಯ ಶಿಕ್ಷಕ ಸೇವಾ ರತ್ನ ಪ್ರಶಸ್ತಿಗೆ ಎಚ್.ಎಸ್. ಕೃಷ್ಣಮೂರ್ತಿ ಅವರು ಭಾಜನರಾಗಿದ್ದಾರೆ. ಪ್ರಶಸ್ತಿ ಪ್ರಧಾನ ಸಮಾರಂಭವು ರಾಮನಗರ ತಾಲ್ಲೂಕಿನ ಕೃಷ್ಣಾಪುರದೊಡ್ಡಿಯಲ್ಲಿ ತಾನಿನಾ ರಂಗದಂಗಳದಲ್ಲಿ ದಿನಾಂಕ 08-09-2018ರಂದು ಬೆಳಿಗ್ಗೆ ಗಂಟೆಗೆ ನಡೆಯಲಿದೆ.
        ಎಚ್.ಎಸ್. ಕೃಷ್ಣಮೂರ್ತಿ ಅವರು ಮಂಜುನಾಥನಗರದಲ್ಲಿರುವ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಓದುತ್ತಿದ್ದಾಗ ನನಗೂ   ಶಿಕ್ಷಕರಾಗಿದ್ದರು. ಇವರ ಸರಳತೆ, ಪಠ್ಯ ಬೋಧಿಸುವ ಕ್ರಮ ಇತರರಿಗೆ ಮಾದರಿಯಾಗಬೇಕಿದೆ. ಶಿಕ್ಷಕರ ದಿನಾಚರಣೆಯ ಈ ಸುಸಂದರ್ಭದಲ್ಲಿ
ಕೃಷ್ಣಮೂರ್ತಿ ಅವರಿಗೆ ಅಭಿನಂದನೆಗಳು.

ಲೇಖನ : ಎಸ್. ರುದ್ರೇಶ್ವರ,

ಸಂಶೋಧನಾ ವಿದ್ಯಾರ್ಥಿ,

ಬೆಂಗಳೂರು ವಿಶ್ವವಿದ್ಯಾಲಯ.



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑