Tel: 7676775624 | Mail: info@yellowandred.in

Language: EN KAN

    Follow us :


ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಸಾಹಿತ್ಯಕ–ಸಾಂಸ್ಕೃತಿಕ ಮನೋಭಿವ್ಯಕ್ತಿತ್ವದ ಎಸ್. ರುದ್ರೇಶ್ವರ ನೇಮಕ

Posted date: 26 Nov, 2018

Powered by:     Yellow and Red

ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ಸಾಹಿತ್ಯಕ–ಸಾಂಸ್ಕೃತಿಕ ಮನೋಭಿವ್ಯಕ್ತಿತ್ವದ ಎಸ್. ರುದ್ರೇಶ್ವರ ನೇಮಕ

ಜಾತ್ಯಾತೀತ ಮನೋಧರ್ಮ, ಸಾಮಾಜಿಕ ಕಳಕಳಿ ಮತ್ತು ಸಾಂಸ್ಕೃತಿಕ ಅಭಿರುಚಿಯ ಸಮ್ಮಿಳಿತದ ವ್ಯಕ್ತಿತ್ವ ಹೊಂದಿರುವ ಎಸ್. ರುದ್ರೇಶ್ವರ ಅವರನ್ನು ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಂಘಟನಾ ಕಾರ್ಯದರ್ಶಿಯಾಗಿ ನೇಮಕ ಮಾಡಲಾಗಿದೆ. 

 

ವಿದ್ಯಾರ್ಥಿ ದೆಸೆಯಿಂದಲೆ ಸಾಹಿತ್ಯ ಮತ್ತು ಸಂಸ್ಕೃತಿಯ ಅಭಿರುಚಿಯನ್ನು ಮೈಗೂಡಿಸಿಕೊಂಡು ಬಂದ ರುದ್ರೇಶ್ವರ ಅವರು ಪದವಿ ಓದುತ್ತಿರುವಾಗಲೆ ಸಾಹಿತ್ಯ ಕೃಷಿಗೆ ತಮ್ಮನ್ನು ತೊಡಗಿಸಿಕೊಂಡವರು.

 

ಪ್ರಾರಂಭದಲ್ಲಿ ಕವನಗಳ ಮೂಲಕ ತಮ್ಮ ಅಭಿವ್ಯಕ್ತಿಯನ್ನು ರೂಪಿಸಿಕೊಂಡ ಇವರು ನಂತರದ ದಿನಗಳಲ್ಲಿ ಸಾಹಿತ್ಯದ ಬಗ್ಗೆ ಹೆಚ್ಚು ಆಸಕ್ತಿ ಬೆಳೆಸಿಕೊಂಡು ಪತ್ರಿಕೆಗಳಿಗೆ ಲೇಖನಗಳನ್ನು ಬರೆಯುವ ಮೂಲಕ ಜಿಲ್ಲೆಯ ಯುವ ಸಾಹಿತ್ಯ ಪ್ರತಿಭೆಯಾಗಿ ರೂಪುಗೊಂಡರು. ಇವರ ತಂದೆ ಕೆ.ಎಸ್. ಶಿವಮೂರ್ತಿ, ತಾಯಿ ಸುಮಿತ್ರ.

 

ಯುವ ಸಾಹಿತ್ಯ ಪ್ರತಿಭೆ ಎಸ್.ರುದ್ರೇಶ್ವರ ಅವರು ತಮ್ಮ ಸಾಹಿತ್ಯ, ಸಾಂಸ್ಕೃತಿಕ ಕೃಷಿಯ ಮೂಲಕ ಜಿಲ್ಲೆಯ ಜನಮಾನಸದಲ್ಲಿ ತಮ್ಮ ಚಾಪನ್ನು ಮೂಡಿಸುತ್ತಿದ್ದಾರೆ. ಅಧ್ಯಯನ ಮತ್ತು ಬರಹದಲ್ಲಿಯೇ ತಮ್ಮ ಬದುಕು ಕಟ್ಟಿಕೊಂಡಿದ್ದಾರೆ.

 

‘ಕನ್ನಡ ಸಾಹಿತ್ಯ’ದಲ್ಲಿ ಹಾಗೂ ‘ಸಮೂಹ ಸಂವಹನ ಮತ್ತು ಪತ್ರಿಕೋದ್ಯಮ’ ವಿಷಯಗಳಲ್ಲಿ ಸ್ನಾತಕೋತ್ತರ ಪದವಿಯನ್ನು ಪಡೆದಿರುವ ಜೊತೆಗೆ ‘ರಾಮನಗರ ಜಿಲ್ಲೆಯ ಸ್ಥಳನಾಮಗಳು’ ಎಂಬ ವಿಯಷದ ಮೇಲೆ ಸಂಶೋಧನಾ ಪ್ರಬಂಧ ಮಂಡಿಸಿ ಆಂದ್ರಪ್ರದೇಶದ ಕುಪ್ಪಂನಲ್ಲಿರುವ ದ್ರಾವಿಡ ವಿಶ್ವವಿದ್ಯಾನಿಲಯದಿಂದ ಎಂ.ಫಿಲ್ ಪದವಿಯನ್ನು ಪಡೆದಿದ್ದಾರೆ.

 

ಈಗ ಬೆಂಗಳೂರು ವಿಶ್ವವಿದ್ಯಾಲಯದಲ್ಲಿ ‘ರಾಮನಗರ ಜಿಲ್ಲೆಯ ಬುಡಕಟ್ಟುಗಳ ಸಾಂಸ್ಕೃತಿಕ ಸ್ಥಿತ್ಯಂತರಗಳು’ ಎಂಬ ವಿಷಯವನ್ನು ಕುರಿತು ಸಂಶೋಧನೆ (ಪಿಎಚ್‍.ಡಿ) ಕೈಗೊಂಡಿದ್ದಾರೆ.

 

ಶೈಕ್ಷಣಿಕ ಸಾಧನೆಯ ಜೊತೆಜೊತೆಗೆ ಸಾಹಿತ್ಯ ಕ್ಷೇತ್ರ ಹಾಗು ಪತ್ರಿಕೋದ್ಯಮದಲ್ಲಿ ತಮ್ಮದೇ ಆದ ಛಾಪನ್ನು ಮೂಡಿಸಿರುತ್ತಾರೆ. ‘ಸನ್ಮಿತ್ರ’ ದಿನಪತ್ರಿಕೆಯನ್ನು ಪ್ರಾರಂಭಿಸಿ ಅದರ ಸಂಪಾದಕರಾಗಿ ಕರ್ತವ್ಯ ನಿರ್ವಹಿಸಿದ್ದಾರೆ. ಸಂಜೆಸಮಾಚಾರ, ಬೆಂಗಳೂರು ಖಡ್ಗ, ವಾರ್ತಾಭಾರತಿ ದಿನಪತ್ರಿಕೆಗಳ ವರದಿಗಾರರಾಗಿ ಕಾರ್ಯನಿರ್ವಹಿಸಿದ್ದಾರೆ. ಪ್ರಸ್ತುತ ‘ಪ್ರಜಾವಾಣಿ’ ದಿನಪತ್ರಿಕೆಯಲ್ಲಿ ಜಿಲ್ಲಾ ಸಹಾಯಕ ವರದಿಗಾರನಾಗಿ ಕರ್ತವ್ಯನಿರ್ವಹಿಸುತ್ತಿದ್ದಾರೆ. 

 

ಪತ್ರಿಕೋದ್ಯಮ ವೃತ್ತಿಯೊಂದಿಗೆ ತಮ್ಮ ಸಾಹಿತ್ಯ ಪ್ರತಿಭೆಯ ಮೂಲಕ ಸಮಾಜವನ್ನು ತಿದ್ದುವ ಕವನಗಳನ್ನು, ಸಮಾಜದ ಪ್ರತಿಬಿಂಬವಾದ ಕತೆಗಳನ್ನು, ಅಷ್ಟೆ ಅರಿತವಾದ ಲೇಖನಗಳನ್ನು ಬರೆದು ಯುವಸಾಹಿತಿ ಎಂದು ಗುರುತಿಸಲ್ಪಟ್ಟಿದ್ದಾರೆ.

 

ತಾನೊಬ್ಬನೆ ಬೆಳೆದರೆ ಸಾಲದು ಎಂದು ಉದಯೋನ್ಮುಖ ಬರಹಗಾರರಿಗೆ, ಚಳುವಳಿಗಾರರಿಗೆ, ಹೋರಾಟಗಾರರಿಗೆ, ಸಾಮಾಜಿಕ ಕಳಕಳಿ ಇರುವವರಿಗೆ ಸ್ಪೂರ್ತಿ ತುಂಬುತ್ತಾ, ಜನರಲ್ಲಿ ಸಾಹಿತ್ಯ ಪ್ರಜ್ಞೆಯನ್ನು ಹೆಚ್ಚಿಸುವುದರಲ್ಲಿ ತಮ್ಮದೇ ಆದ ರೀತಿಯಲ್ಲಿ ಶ್ರಮಿಸುತ್ತಿದ್ದಾರೆ. ಇವೆಲ್ಲದರ ಜೊತೆಗೆ ಸಮಾಜದ ಅಸಮಾನತೆ ವಿರುದ್ಧ ಸಮರ ಸಾರುವ ದೀನದುರ್ಬಲರ ನೋವು, ಸಂಕಟಗಳಿಗೆ ಪ್ರಾಮಾಣಿಕ ದನಿಯಾಗಿದ್ದಾರೆ.

 

ಹಲವು ಸೂಪ್ತ ಪ್ರತಿಭೆಗಳನ್ನು ತಮ್ಮ ಬರಹದ ಮೂಲಕ ಸಮಾಜಕ್ಕೆ ಪರಿಚಯಿಸಿರುವ ಇವರು, ಇರುಳಿಗರು, ಬುಡಕಟ್ಟು ಜನರು, ದೀನ ದಲಿತರ ನೋವುಗಳನ್ನು ತಮ್ಮ ಅರಿತವಾದ ಲೇಖನದ ಮೂಲಕ ಸಮಾಜದ ಮುಖ್ಯವಾಹಿನಿಗೆ ತಿಳಿಸಿದ್ದಾರೆ.

 

ಪತ್ರಿಕೋದ್ಯಮದ ಜೊತೆಗೆ ಸಮಾಜಮುಖಿ, ಸಾಹಿತ್ಯಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದಾರೆ. 



 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑