ದಿವ್ಯ ಚೇತನ ಇಂಗ್ಲಿಷ್ ಶಾಲಾ ಮಕ್ಕಳಿಂದ ಪರಿಸರ ಜಾಗೃತಿ ಜಾಥಾ
ಚನ್ನಪಟ್ಟಣ: ವಿಶ್ವ ಪರಿಸರ ದಿನಾಚರಣೆಯ ಅಂಗವಾಗಿ ನಗರದ ಮಹದೇಶ್ವರ ಬಡಾವಣೆಯ ದಿವ್ಯ ಚೇತನ ಆಂಗ್ಲ ಶಾಲೆಯ ಮಕ್ಕಳು ಪರಿಸರ ಜಾಗೃತಿ ಅಭಿಯಾನ ಕೈಗೊಂಡರು.
ಪರಿಸರ ಉಳಿಸಿ ಮನುಕುಲ ರಕ್ಷಿಸಿ, ಹಸಿರೇ ಉಸಿರು, ಕಾಡು ಬೆಳೆಸಿ ನಾಡು ಉಳಿಸಿ, ಇನ್ನಿತರೇ ಘೋಷಣಾ ಫಲಕಗಳನ್ನು ಹಿಡಿದ ಮಕ್ಕಳು ಶಿಸ್ತಿನಿಂದ ಘೋಷಣೆ ಕೂಗಿ ಸಾರ್ವಜನಿಕರಿಗೆ ಅರಿವು ಮೂಡಿಸಿದರು.
ಶಾಲೆಯಿಂದ ಹೊರಟ ಮಕ್ಕಳ ಜಾಥಾ ಸಾತನೂರು ರಸ್ತೆಯ ಮಹದೇಶ್ವರ ನಗರ ಬಡಾವಣೆ, ಹಲಸಿನಮರದದೊಡ್ಡಿ, ಕನಕನಗರ ಮತ್ತು ಅಂಬೇಡ್ಕರ್ ನಗರ ದ ನಿವಾಸಿಗಳಿಗೆ ಘೋಷಣೆ ಕೂಗುವುದರ ಮೂಲಕ ಪರಿಸರ ಜಾಗೃತಿ ಮೂಡಿಸಿದರು.
ಮಕ್ಕಳೊಂದಿಗೆ ಶಾಲಾ ಆಡಳಿತ ಮಂಡಳಿ ಮತ್ತು ಶಿಕ್ಷಕರು ಪಾಲ್ಗೊಂಡಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು