ವಿದ್ಯುತ್ ಶಾರ್ಟ್ ಸರ್ಕಿಟ್ ನಿಂದ ಹೊತ್ತಿ ಉರಿದ ಟಿವಿ
ಸುಟ್ಟು ಕರಕಲಾಗಿರುವ ಟಿವಿ ಮತ್ತು ಇನ್ನಿತರ ವಸ್ತುಗಳು
ಚನ್ನಪಟ್ಟಣ: ನಗರದ ಮಂಜುನಾಥ ಬಡಾವಣೆಯಲ್ಲಿ ವಿದ್ಯುತ್ ಶಾಟ್೯ ಸರ್ಕಿಟ್ ನಿಂದ ವೈರ್ ಗೆ ಬೆಂಕಿ ತಗುಲಿದ್ದು ನಂತರ ಟಿವಿ ಹೊತ್ತು ಉರಿಯುವುದರ ಜೊತೆಗೆ ಮನೆಯ ಎಲ್ಲಾ ಎಲೆಕ್ಟ್ರಾನಿಕ್ ಉಪಕರಣಗಳು ಸುಟ್ಟು ಕರಕಲಾಗಿವೆ.
ಮಂಜುನಾಥ ನಗರದ (ಈಗ ಮೈಸೂರು ನಿವಾಸಿ) ಪುಷ್ಪ ಎಂಬುವವರ ಮನೆಯನ್ನು ಬಾಡಿಗೆಗೆ ಕೊಟ್ಟಿದ್ದು ಬಾಡಿಗೆ ದಾರರು ಮದುವೆಗೆ ಹೋಗಿದ್ದ ಸಂದರ್ಭದಲ್ಲಿ ಈ ಘಟನೆ ನಡೆದಿದೆ, ನಂತರ ಆಗಮಿಸಿದ ಬಾಡಿಗೆದಾರರು ಅಗ್ನಿಶಾಮಕ ದಳಕ್ಕೆ ಕರೆ ಮಾಡಿ ಮಾಹಿತಿ ನೀಡಲಾಗಿ ತಕ್ಷಣ ಸ್ಪಂದಿಸಿದ ಸಿಬ್ಬಂದಿ ಬೆಂಕಿ ಆರಿಸಿ ಮುಂದೆ ಆಗಬಹುದಾದ ಅನಾಹುತವನ್ನು ತಪ್ಪಿಸಿದರು.
ಅಗ್ನಿಶಾಮಕ ದಳದವರು ಬೆಂಕಿ ನಂದಿಸಲು ಬಳಸಿದ ನೀರಿನಿಂದಲೂ ಸಹ ಅನೇಕ ಬೆಲೆಬಾಳುವ ವಸ್ತುಗಳು ಹಾಳಾಗಿರುವುದಾಗಿ ಮನೆಯ ಬಾಡಿಗೆದಾರರು ತಿಳಿಸಿದರು.
ಇದೇ ತಿಂಗಳ ೦೩/೦೬/೧೯ ರಂದು ನಗರದ *ಬಡಾವಣೆಯ ನಡುವೆ ಹಾದು ಹೋಗಿರುವ ವಿದ್ಯುತ್ ತಂತಿ ಭಯದಲ್ಲಿ ನಿವಾಸಿಗಳು ಎಂಬ ಸುದ್ದಿಯನ್ನು ಪ್ರಕಟಿಸಿದ್ದೆವು,* ಅಧಿಕಾರಿಗಳು ಶೀಘ್ರವಾಗಿ ಎಚ್ಚೆತ್ತುಕೊಂಡಿದ್ದರೆ ಈ ಅವಘಡವನ್ನು ತಪ್ಪಿಸಬಹುದಾಗಿತ್ತು.
ಬೆಸ್ಕಾಂ ಅಧಿಕಾರಿಗಳು ಈಗಲಾದರೂ ಎಚ್ಚೆತ್ತುಕೊಂಡು ವಿದ್ಯುತ್ ಮಾರ್ಗವನ್ನು ಬದಲಿಸಿ ಅಥವಾ ಭೂಗತ ಕೇಬಲ್ ಅಳವಡಿಸಿದರೆ ಉಪಯೋಗಿ ನಿರ್ಜೀವ ವಸ್ತುಗಳ ಜೊತೆಗೆ ಜೀವ ಕೈಲಿಡಿದು ಬದುಕುತ್ತಿರುವ ನಿವಾಸಿಗಳಿಗೆ ಧೈರ್ಯವಾಗಿ ಬದುಕುವ ಆಶಾ ಭಾವನೆ ಮೂಡಿಸಬೇಕೆಂದು ಬಡಾವಣೆಯ ನಿವಾಸಿಗಳು ಒತ್ತಾಯಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು