Tel: 7676775624 | Mail: info@yellowandred.in

Language: EN KAN

    Follow us :


ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

Posted date: 03 Feb, 2018

Powered by:     Yellow and Red

ಕನ್ನಡ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭ

ರಾಮನಗರ : ಕೃಷಿ ವಿಜ್ಞಾನದಲ್ಲಿರುವ ಪದಗಳಿಗೆ ಕನ್ನಡದಲ್ಲಿ ಪರ್ಯಾಯ ಪರಿಭಾಷೆಗಳನ್ನು ರೂಪಿಸುವುದು ಕಷ್ಟ ಎಂಬ ವಾದದಲ್ಲಿ ಹುರುಳಿಲ್ಲ. ಆಂಗ್ಲಭಾಷೆಯೇ ಶ್ರೇಷ್ಠ ಎಂಬ ಭ್ರಮೆಯಲ್ಲಿರುವವರು ಹುಟ್ಟುಹಾಕಿರುವ ನೆಪ ಮಾತ್ರ ಎಂದು ಕವಿ ಬಿ.ಆರ್.ಲಕ್ಷ್ಮಣರಾವ್ ಹೇಳಿದರು. 
    ಶ್ಯಾನುಭೋಗನಹಳ್ಳಿಯಲ್ಲಿ ಜರುಗಿದ ರಾಮನಗರ ತಾಲ್ಲೂಕು ಆರನೇ ಕನ್ನಡ ಸಾಹಿತ್ಯ ಸಮ್ಮೇಳನದಲ್ಲಿ ಸಮಾರೋಪ ಭಾಷಣಕಾರರಾಗಿ ಅವರು ಮಾತನಾಡಿದರು.
ಇವತ್ತಿನ ರೈತ-ವಿಜ್ಞಾನಿ ಸಂವಾದಗೋಷ್ಠಿಯಲ್ಲಿ ನಡೆದ ಚರ್ಚೆಯಲ್ಲಿ ಬಳಕೆಯಾದ ಎಷ್ಟೋ ಪದಗಳು ಅಚ್ಚರಿ ಹುಟ್ಟಿಸುವಷ್ಟು ವಿಶೇಷವಾಗಿವೆ. ಇದರಿಂದ ವಿಜ್ಞಾನ ವಿಷಯಗಳನ್ನೂ ಕನ್ನಡ ಮಾಧ್ಯಮದಲ್ಲಿ ಕಲಿಯಲು ಸಾಧ್ಯವಿದೆ ಎಂದು ತಿಳಿಯುತ್ತದೆ. ಕನ್ನಡ ಎಲ್ಲ ಸಾಧ್ಯತೆಗಳನ್ನೂ ಒಳಗೊಂಡಿರುವ ಭಾಷೆ. ಇದಕ್ಕೆ ಯಾವುದೇ ಮಿತಿಗಳಿಲ್ಲ. ಕನ್ನಡದ ಶಕ್ತಿಯನ್ನು ಅರ್ಥ ಮಾಡಿಕೊಂಡು ಅದನ್ನು ಬಳಸಿದಾಗ ಕನ್ನಡ ಭಾಷೆ ಇನ್ನಷ್ಟು ಬೆಳವಣಿಗೆ ಹೊಂದಲು ಸಾಧ್ಯವಾಗುತ್ತದೆ ಎಂದು ಅವರು ಅಭಿಪ್ರಾಯಪಟ್ಟರು.
ಕೃಷಿಯಲ್ಲಿ ಬೀಜರಹಿತ ಉತ್ಪಾದನೆ ಇರುವಂತೆಯೇ ಸಾಹಿತ್ಯದಲ್ಲಿಯೂ ಬೀಜರಹಿತ ಸಾಹಿತ್ಯ ಸೃಷ್ಟಿಯಾಗುತ್ತಿದೆ. ನೆಲಮೂಲ ಸಂಸ್ಸøತಿಯ ಅರಿವಿಲ್ಲದೆ ರಚಿತವಾಗುವ ಸಾಹಿತ್ಯದಲ್ಲಿ ಸತ್ವ ಇರುವುದಿಲ್ಲ. ಇಂಥ ಬೀಜರಹಿತ ಸಾಹಿತ್ಯದಿಂದ ಯಾವುದೇ ಪ್ರಯೋಜನವಿಲ್ಲ ಎಂದು ಅವರು ತಿಳಿಸಿದರು.
ಇದೇ ಸಂದರ್ಭದಲ್ಲಿ ಸಮ್ಮೇಳನಾಧ್ಯಕ್ಷರೊಂದಿಗೆ ಸಂವಾದ ಕಾರ್ಯಕ್ರಮದಲ್ಲಿ ಎಚ್.ಎಂ.ಶ್ವೇತಾಮಣಿ, ರಾಣಿ ಕಿರಣ್, ಬಿ.ಜಯದೇವ್, ಪೂರ್ಣಚಂದ್ರ ಹಾಗೂ ಕೃಷ್ಣಮೂರ್ತಿ ಭಾಗವಹಿಸಿ ಚರ್ಚಿಸಿದರು.
ವೆಂಕಟಾಚಲಯ್ಯ, ಅಪ್ಪಾಜಿ ಚನ್ನಮಾನಹಳ್ಳಿ, ಶಫೀಕ್ ಅಹಮದ್, ರಮಣಿ, ಶಶಿ ಕುಮಾರ್, ಡಾ. ಎಸ್.ಎನ್. ಮಧುಸೂದನ್, ಜಿ.ಹೆಚ್. ರಾಮಯ್ಯ,  ಮಾಯಮ್ಮ, ಗಿರೀಶ್ ಕೊತ್ತೀಪುರ, ಸುರೇಂದ್ರ ಅವರಿಗೆ ರೇಷ್ಮೆ ನಾಡು ಪ್ರಶಸ್ತಿ ನೀಡಿ ಗೌರವಿಸಲಾಯಿತು. 
ಜಿಲ್ಲಾ ಪಂಚಾಯಿತಿ ಸದಸ್ಯ ಎಚ್.ಎನ್. ಅಶೋಕ್, ತಾಲ್ಲೂಕು ಪಂಚಾಯಿತಿ ಸದಸ್ಯ ಎಸ್.ಪಿ. ಜಗದೀಶ್, ಸಮ್ಮೇಳನಾಧ್ಯಕ್ಷ ಎಲ್.ಸಿ. ರಾಜು, ಸಾಹಿತಿ ಎಂ. ಬೈರೇಗೌಡ, ರಂಗ ನಿರ್ದೇಶಕ ಬೈರ್ನಳ್ಳಿ ಶಿವರಾಂ, ಕನ್ನಡ ಸಾಹಿತ್ಯ ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷ ಸಿಂ.ಲಿಂ. ನಾಗರಾಜ್, ತಾಲ್ಲೂಕು ಘಟಕದ ಅಧ್ಯಕ್ಷ ಬಿ.ಟಿ. ದಿನೇಶ್, ಗೌರವ ಕಾರ್ಯದರ್ಶಿಗಳಾದ ಎಚ್.ಕೆ. ಶೈಲಾಶ್ರೀನಿವಾಸ್, ಜಿ.ಟಿ. ಕೃಷ್ಣ, ಹೋಬಳಿ ಘಟಕದ ಅಧ್ಯಕ್ಷ ಚಿನ್ನಗಿರಿಗೌಡ, ಪದಾಧಿಕಾರಿಗಳಾದ ರಾಜೇಶ್ ಕವಣಾಪುರ, ಕಿರಣ್ ಬಿಳಗುಂಬ, ಸಮದ್, ರಾಜೇಶ್, ಉಪನ್ಯಾಸಕರಾದ ಇಂದಿರಮ್ಮ, ಅಕ್ಕೂರುಬಸವರಾಜು ಮತ್ತಿತರರು ಉಪಸ್ಥಿತರಿದ್ದರು. 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑