Tel: 7676775624 | Mail: info@yellowandred.in

Language: EN KAN

    Follow us :


ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

Posted date: 03 Jul, 2019

Powered by:     Yellow and Red

ಮಳೂರು ಜಿಲ್ಲಾ ಪಂಚಾಯತಿಯಲ್ಲೂ ಕೈ ಕೊಳಕು‌ ಮಾಡಿಕೊಂಡ ಇಂಜಿನಿಯರ್ ಶಂಕರ್

ಚನ್ನಪಟ್ಟಣ: ತನ್ನ ವೈಭವೋಪೇತ ಶೋಕಿಗಾಗಿ ಜಿಲ್ಲಾ ಪಂಚಾಯತಿ ತುಂಡು ಗುತ್ತಿಗೆಗಳ ಕಾಮಗಾರಿಗಳನ್ನೇ ನುಂಗಿ ನೀರು ಕುಡಿಯುತ್ತಿರುವ ಚನ್ನಪಟ್ಟಣದ ಅಂದಿನ ಪರೀಕ್ಷಾರ್ಥ (ಪ್ರೊಬೇಷನರಿ) ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ತಾಲ್ಲೂಕಿನಾದ್ಯಂತ ಕಳಪೆ ಕಾಮಗಾರಿ ಹಾಗೂ ಕಾಮಗಾರಿ ಮಾಡದೆ ಕಳ್ಳ ಬಿಲ್ ಮಾಡಿಕೊಂಡು ಸಾರ್ವಜನಿಕ ರ ತೆರಿಗೆ ಹಣವನ್ನು ದೋಚುತ್ತಿದ್ದಾರೆ ಎಂದು ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ದೂರಿದ್ದಾರೆ.


ಈ ಇಬ್ಬರು ಅಧಿಕಾರಿಗಳು ೨೦೧೮/೧೯ ನೇ ಸಾಲಿನಲ್ಲಿ ಕಳಪೆ ಕಾಮಗಾರಿ ಹಾಗೂ ಕಳ್ಳ ಬಿಲ್ ಗಳನ್ನು ಮಾಡಿಕೊಂಡು ಹೊಂಗನೂರು ಜಿಲ್ಲಾ ಪಂಚಾಯತಿಯಲ್ಲಿ ಅತಿ ಹೆಚ್ಚು ಕಳ್ಳ ಬಿಲ್ ಮತ್ತು ಕೋಡಂಬಳ್ಳಿ ಜಿಲ್ಲಾ ಪಂಚಾಯತಿ, ನಂತರ ಮಳೂರು ಜಿಲ್ಲಾ ಪಂಚಾಯತಿ ಯಲ್ಲಿಯೂ ಸಹ ಕೆಲಸ ಮಾಡದೇ ಗುತ್ತಿಗೆದಾರ ಬಿಲ್ ಪಡೆಯಲು ಅನುವು ಮಾಡಿಕೊಟ್ಟಿದ್ದಾರೆ, ಈ ಎಲ್ಲಾ ದಾಖಲೆಗಳ ಸಮೇತ ಜಿಲ್ಲಾ ಪಂಚಾಯತಿ ಮುಖ್ಯ ಕಾರ್ಯನಿರ್ವಹಣಾಧಿಕಾರಿಗಳಿಗೆ ದೂರು ನೀಡಿರುವುದಲ್ಲದೇ ಇನ್ನೂ ಅನೇಕ ಕಳಪೆ ಕಾಮಗಾರಿಗಳನ್ನು ಅನಾವರಣ ಮಾಡಲಾಗುವುದು ಎಂದು ಎಚ್ಚರಿಸುತ್ತಾರೆ.


ಮಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯ ಮಳೂರು ಗ್ರಾಮ ಪಂಚಾಯತಿ ಗೆ ಸೇರಿದ *ತೂಬಿನಕೆರೆ ಗ್ರಾಮದ ಹರಿಜನ ಕಾಲೋನಿಯಲ್ಲಿ*

*ಮೆಷಿನರಿ ಚರಂಡಿ* ಕಾಮಗಾರಿ ಮಾಡಿರುವುದಾಗಿ ಗುತ್ತಿಗೆದಾರ *ಎಸ್ ಪ್ರದೀಪ್ ಕುಮಾರ್* ಹೆಸರಿನಲ್ಲಿ ೨,೯೯,೭೯೦ ರೂ ಗಳ ಬಿಲ್ ನ್ನು ೨೦೧೮ ರ ಮಾಚ್೯ ತಿಂಗಳ ೨೬ ನೇ ತಾರೀಖಿನಂದು ಕಿರಿಯ ಇಂಜಿನಿಯರ್ ಶಂಕರ್ ಮತ್ತು ಪ್ರಭಾರ ಸಹಾಯಕ ಕಾರ್ಯಪಾಲಕ ಅಭಿಯಂತರ ಕುಮಾರಸ್ವಾಮಿ ಬಿಡುಗಡೆ ಮಾಡಿರುವುದು ದಾಖಲಾಗಿದೆ.


ವಾಸ್ತವವಾಗಿ ಈ ಕಾಮಗಾರಿಯ ಕ್ರಿಯಾಯೋಜನೆಯನ್ನು ತಯಾರಿಸುವಾಗ ತೂಬಿನಕೆರೆ ಹರಿಜನ ಕಾಲೋನಿಯ ಕರಿಯಯ್ಯನ ಮನೆಯ ಹತ್ತಿರ ಚರಂಡಿ ನಿರ್ಮಾಣ ಕಾಮಗಾರಿಯೆಂದು ತೆಗೆದುಕೊಂಡಿರುತ್ತಾರೆ, ಆದರೆ ಅಂದಾಜು ಪಟ್ಟಿ, ಕಾರ್ಯಾದೇಶ, ಬಿಲ್ ಕಾಪಿ ಹಾಗೂ ಇನ್ನಿತರ ದಾಖಲೆಗಳಲ್ಲಿ ತೂಬಿನಕೆರೆ ಗ್ರಾಮದ ಹರಿಜನ ಕಾಲೋನಿಯ ವ್ಯಾಪ್ತಿಯಲ್ಲಿ ಚರಂಡಿ ನಿರ್ಮಾಣ ಕಾಮಗಾರಿ ಎಂದು ನಮೂದಿಸಿದ್ದಾರೆ. ಕಾಮಗಾರಿಯನ್ನು ಖುದ್ದಾಗಿ ಪರೀಕ್ಷಿಸಿದಾಗ ಈ ಕಾಮಗಾರಿ ನಡೆದಿರುವುದಿಲ್ಲ.


ಬಿಲ್ ಪಡೆದು ಕೊಳ್ಳಲು ಲಗತ್ತಿಸಿರುವ ಪೋಟೋ ಹರಿಜನ ಕಾಲೋನಿಯ ಕರಿಯಯ್ಯನ ಮನೆಯ ಮುಂದೆ ಸುಮಾರು ವರ್ಷಗಳ ಹಿಂದೆಯೇ ಬೇರೆ ಅನುದಾನದಲ್ಲಿ ಮಾಡಿರುವ ಕಾಮಗಾರಿ ಎಂಬುದು ಎಂತಹವರಿಗೂ ತಿಳಿಯುತ್ತದೆ.


ಪೋಟೋ ದಲ್ಲಿ ತೋರಿಸಿರುವ ಕಾಮಗಾರಿಯ ಅಳತೆ ೭೫ ಮೀಟರ್ ಉದ್ದ ತೋರಿಸಿದ್ದು,  ನಂ ೦೩ ರಲ್ಲಿ ೦.೬೦ ಮೀಟರ್ ನಮೂದಿಸಿದ್ದು, ಪೋಟೋ ಲಗತ್ತಿಸಿರುವ ದಾಖಲೆಯಲ್ಲಿ ೦.೪೦ ಮೀಟರ್ ತೋರಿಸಿರುವುದು ಕಾಮಗಾರಿ ಮಾಡಿಲ್ಲ ಎನ್ನುವುದಕ್ಕೆ ಸಾಕ್ಷಿಯಾಗಿವೆ.


*ಹೊಂಗನೂರು ಜಿಲ್ಲಾ ಪಂಚಾಯತಿ* ವ್ಯಾಪ್ತಿಯ ಕಳ್ಳ ಬಿಲ್ ಗಳಿಗೆ ಸಂಬಂಧಿಸಿದಂತೆ ಕಿರಿಯ ಇಂಜಿನಿಯರ್ ಈಗಾಗಲೇ ಅಮಾನತು ಆಗಿದ್ದು, ಬಿಲ್ ಮಾಡಲು ಸಹಕರಿಸಿದ ಹಿರಿಯ ಅಧಿಕಾರಿಗಳಿಗಳು ಹಾಗೂ ಗುತ್ತಿಗೆದಾರರ ವಿರುದ್ಧ ತನಿಖೆ ಮಾಡಿ ಕಾನೂನು ಕ್ರಮ ಕೈಗೊಂಡು ಗುತ್ತಿಗೆ ಹಣ ವಸೂಲಿ ಮಾಡಬೇಕೆಂದು ಅವರು ಈ ಮೂಲಕ ಆಗ್ರಹಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑