Tel: 7676775624 | Mail: info@yellowandred.in

Language: EN KAN

    Follow us :


ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳು ಸಿದ್ದರಾಗಿ ವೈದ್ಯಾಧಿಕಾರಿ ಡಾ ರಾಜು

Posted date: 09 Jul, 2019

Powered by:     Yellow and Red

ಸಾಂಕ್ರಾಮಿಕ ರೋಗ ತಡೆಗಟ್ಟಲು ಅಧಿಕಾರಿಗಳು ಸಿದ್ದರಾಗಿ ವೈದ್ಯಾಧಿಕಾರಿ ಡಾ ರಾಜು

ಚನ್ನಪಟ್ಟಣ:  ತಾಲ್ಲೂಕು ಪಂಚಾಯಿತಿ ಸಭಾಂಗಣದಲ್ಲಿ ತಾಲ್ಲೂಕು ಪಂಚಾಯತ್ ಅಧ್ಯಕ್ಷ ಹರೂರು ರಾಜಣ್ಣ ನವರ ಅಧ್ಯಕ್ಷತೆಯಲ್ಲಿ ತಾಲ್ಲೂಕು ಆರೋಗ್ಯಾಧಿಕಾರಿಗಳು, ವಿವಿಧ ಆರೋಗ್ಯ ಕೇಂದ್ರಗಳ ವೈದ್ಯಾಧಿಕಾರಿಗಳು, ಆರೋಗ್ಯ ನಿರೀಕ್ಷಕರು ಹಾಗೂ ಪಿಡಿಓಗಳ ಸಭೆಯನ್ನು ಆಯೋಜಿಸಲಾಗಿತ್ತು.

ಸಭೆಯಲ್ಲಿ ಮುಂದೆ ಘಟಿಸಬಹುದಾದ ಸಾಂಕ್ರಾಮಿಕ ರೋಗಗಳ ಬಗ್ಗೆ ವ್ಯಾಪಕ ವಾಗಿ ಚರ್ಚೆ ನಡೆಸಲಾಯಿತು.


ಸಭೆಯ ಆರಂಭಕ್ಕೂ ಮುನ್ನ ಹಿರಿಯ ಪತ್ರಕರ್ತ ಮೃತ ದಿನೇಶ್ ಸುದರ್ಶನ್ ರವರಿಗೆ ಸಂತಾಪ ಸೂಚಿಸಲಾಯಿತು.


ಆರೋಗ್ಯ ಬಹಳ ಮುಖ್ಯ, ಸಮಯಕ್ಕೆ ಸರಿಯಾಗಿ ಮಳೆ ಬಾರದಿರುವು ದರಿಂದ, ನೊಣ ಮತ್ತು ಸೊಳ್ಳೆಗಳಿಂದ ಸಾಂಕ್ರಾಮಿಕ ರೋಗ ಬರುವ ಸಾಧ್ಯತೆ ಇದೆ. ಆರೋಗ್ಯ ಇಲಾಖೆ ಮತ್ತು ಗ್ರಾಮ ಪಂಚಾಯತಿ, ಆಶಾ ಕಾರ್ಯಕರ್ತೆಯರ ಮೂಲಕ ಜಾಗೃತಿ ಮೂಡಿಸಿ ಸಾಂಕ್ರಾ ಮಿಕ ರೋಗ ಹರಡದಂತೆ ತಡೆಯುವ ಕೆಲಸವನ್ನು ಮಾಡಬೇಕು ಎಂದು ತಾ. ಪಂ. ಅಧ್ಯಕ್ಷ ಹರೂರು ರಾಜಣ್ಣ ಹೇಳಿದರು.


ತಾಲ್ಲೂಕು ವೈದ್ಯಾಧಿಕಾರಿಗಳಾದ ಡಾ. ರಾಜು ಮಾತನಾಡಿ, ಹಳ್ಳಿಗಳಲ್ಲಿ ತಂತಮ್ಮ ಮನೆಗಳ ಮುಂದೆ ಚರಂಡಿ ಸ್ವಚ್ಛ ಗೊಳಿಸುವುದು, ದನ ಕರುಗಳನ್ನು ಕಟ್ಟುವ ಜಾಗ ಶುಚಿಗೊಳಿಸಿಕೊಂಡು, ನೀರು ನಿಲ್ಲದಂತೆ ನೋಡಿ ಕೊಳ್ಳಬೇಕು, ಸಾಧ್ಯವಾದಷ್ಟು ಮನೆಯವರೇ ಸ್ವಚ್ಛತೆಯನ್ನು ಮಾಡಿಕೊಳ್ಳುವುದು ಒಳಿತು ಎಂದರು.

ಗ್ರಾಮಪಂಚಾಯತಿ ಸಿಬ್ಬಂದಿ ಗ್ರಾಮದ ಜನರ ಜೊತೆಗೆ ಸೇರಿಕೊಂಡು ಅರಿವು ಮೂಡಿಸಬೇಕು. ಸೊಳ್ಳೆಗಳು ಮೊಟ್ಟೆ ಇಡುವ ಮುನ್ನವೇ ಅವುಗ ಳನ್ನು ನಾಶಮಾಡಲು ಕ್ರಮ ಕೈಗೊಳ್ಳಿ. ನಂತರ ಫಾಗಿಂಗ್ ಇನ್ನಿತರ ಔಷಧ ಸಿಂಪಡಣೆ ಮಾಡಿ.  ಆರೋಗ್ಯಾಧಿಕಾರಿಗಳು ಸರ್ವೇ ಮಾಡಿ ಶೀಘ್ರವಾಗಿ ಕ್ರಮ ಕೈಗೊಳ್ಳಿ ಎಂದು ಸಲಹೆ ನೀಡಿದರು.


ಮುಂದುವರೆದು ಮಾತನಾಡಿದ ಅವರು ಸೊಳ್ಳೆಪರದೆ ಉಪಯೋಗಿಸುವುದರಿಂದ ಸೊಳ್ಳೆಗಳಿಂದ ದೂರ ಇರಬಹುದು, ಗರ್ಭಿಣಿ ಮತ್ತು ಬಾಣಂತಿಯರಿಗೆ ವಿಶೇಷ ತಿಳುವಳಿಕೆ ನೀಡಿ, ಸೊಳ್ಳೆ ನಿಯಂತ್ರಣಕ್ಕಾಗಿ ಆರೋಗ್ಯ ಇಲಾಖೆ ಯಿಂದ ಔಷಧ ಸರಬರಾಜು ಮಾಡಲಾಗುತ್ತದೆ, ಮತ್ತು ತಿಳುವಳಿಕೆ ನೀಡಲು ಇಲಾಖೆಯ ಸಿಬ್ಬಂದಿಗಳನ್ನು ಕಳುಹಿಸಲಾಗುತ್ತದೆ, ಎಲ್ಲಾ ಪಂಚಾಯತಿ ಗಳಲ್ಲೂ ಫಾಗಿಂಗ್ ಮಿಷನ್ ಕೊಳ್ಳಿರಿ ಎಂದರು.

ಇದು ಮುಖ್ಯಮಂತ್ರಿಗಳ ಕ್ಷೇತ್ರವಾ ಗಿದ್ದು ಇಲ್ಲಿ ಯಾವುದೇ ರೀತಿಯ ಸಾಂಕ್ರಾಮಿಕ ರೋಗ ಪ್ರವೇಶಿಸದ ರೀತಿಯಲ್ಲಿ ಮುಂಜಾಗ್ರತಾ ಕ್ರಮ ಕೈಗೊಳ್ಳಿ. ಕನಿಷ್ಠ ಮೂರು ತಿಂಗಳಿಗೊಮ್ಮೆ ಕುಡಿಯುವ ಮೂಲ ನೀರಿನ ಪರೀಕ್ಷೆ ಮಾಡಿಸಿ, ತೊಂಬೆಗಳ ನೀರನ್ನು ಲ್ಯಾಬ್ ಗೆ ಕಳುಹಿಸಿ, ಕುಡಿಯಲು ಯೋಗ್ಯವಲ್ಲ ಎಂದಾದರೆ ಶೀಘ್ರವಾಗಿ ಕ್ರಮ ಕೈಗೊಂಡು ಇಪ್ಪತ್ನಾಲ್ಕು ಗಂಟೆಗಳೊಳಗಾಗಿ ಬದಲಿ ವ್ಯವಸ್ಥೆ ಮಾಡಿ.


ಗ್ರಾಮವಾರು ಭೇಟಿ ನೀಡಿ, ವಾಂತಿ ಬೇಧಿ ಮತ್ತು ಜ್ವರ ಪೀಡಿತ ರೋಗಿಗಳನ್ನು ಗುರುತಿಸಿ ರಕ್ತ ಪರೀಕ್ಷೆ ಮಾಡಿಸಿ ಆಸ್ಪತ್ರೆಗೆ ದಾಖಲಿಸಲು ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು. ಡೆಂಗ್ಯೂ, ಮಲೇರಿಯಾ ಬರುವ ಮುನ್ನ ಕ್ರಮ ಅಗತ್ಯವಾಗಿದೆ ಎಂದರು.


*ಆಯುಷ್ಮಾನ್*

ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತ  

ಆಯುಷ್ಮಾನ್ ಯೋಜನೆಯಡಿ ಸರ್ಕಾರಿ ಆಸ್ಪತ್ರೆಯಲ್ಲಿ ಉಚಿತವಾಗಿ ಆರೋಗ್ಯ ಕಾರ್ಡ್ ಮಾಡಿಕೊಡಲಾಗುತ್ತದೆ. ಅಲ್ಲದೆ ಹದಿಮೂರು ಸೈಬರ್ ಕೆಫೆಗಳಿಗೂ ಲೈಸೆನ್ಸ್ ನೀಡಲಾಗಿದೆ, ಜರಾಕ್ಸ್ ಪ್ರತಿ ನೀಡಿದರೆ ೧೦ ರೂ.ಸ್ಮಾರ್ಟ್ ಕಾರ್ಡ್ ಕೊಟ್ಟರೆ ೩೦ರೂ ಮಾತ್ರ ಪಡೆಯಬೇಕು.

 ಹಳ್ಳಿಗರು ಬಂದು ಸೈಬರ್ ನಲ್ಲಿ ಕಾರ್ಡ್ ಮಾಡಿಸುವುದು  ದುಸ್ತರವಾಗು ತ್ತಿದೆ, ಹಾಗಾಗಿ ಗ್ರಾಮ ಪಂಚಾಯತಿ ಯಲ್ಲಿ ಅವಕಾಶ ಮಾಡಿಕೊಡಬೇಕು ಎಂದು ಅಧ್ಯಕ್ಷ ಹರೂರು ರಾಜಣ್ಣ ಸೂಚಿಸಿದರು.

 ಸಂಬಂಧಿಸಿದ ಅಧಿಕಾರಿಗಳು ಗ್ರಾಮಗಳಲ್ಲಿ ತಿಪ್ಪೆಗುಂಡಿ, ಎಳನೀರು ಬುಂಡೆಗಳು ಇತ್ಯಾದಿ ಸೊಳ್ಳೆ ವಾಸಿಸುವ ಎಲ್ಲಾ ಗುಡ್ಡೆಗಳನ್ನು ತೆರವುಗೊಳಿಸಲು ಸೂಚಿಸಿ, ನಂತರ ನೊಟೀಸ್ ಜಾರಿ ಮಾಡಿ, ಅದಕ್ಕೂ ಬಗ್ಗಲಿಲ್ಲ ಎಂದರೆ ಪೊಲೀಸ್ ದೂರು ನೀಡಿ ಎಂದು ಇಓ ರಾಮಕೃಷ್ಣಪ್ಪ ಅಧಿಕಾರಿಗಳಿಗೆ ಸೂಚಿಸಿ ದರು.

ಡೆಂಗ್ಯೂ ಜ್ವರ, ಹೆಚ್೧ಎನ್೧, ನೀಫಾ ವೈರಾಣು ಜ್ವರ, ಚಿಕುನ್‌ಗುನ್ಯಾ ಮತ್ತು ಮಲೇರಿಯಾ ಜ್ವರಗಳ ಬಗ್ಗೆ ಹೆಚ್ಚು ಗಮನ ನೀಡಿ ಕ್ರಮ ಕೈಗೊಳ್ಳಿ ಎಂದು ಸೂಚಿಸಿದರು.


ಸಭೆ ನಡೆಯುವ ಸಂದರ್ಭದಲ್ಲಿ ಅನೇಕ ಅಧಿಕಾರಿಗಳು ಮೊಬೈಲ್ ಹಾಗೂ ಪಕ್ಕದ ಸಹೋದ್ಯೋಗಿಗಳ ಜೊತೆಗೆ ಮಾತನಾಡಿಕೊಂಡು ಸಭೆಗೆ ಅಗೌರವ ತೋರುತ್ತಿರುವುದು ಕಂಡುಬಂದಿತ್ತು


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑