Tel: 7676775624 | Mail: info@yellowandred.in

Language: EN KAN

    Follow us :


ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ನಿರ್ಗಮನ ಸುದರ್ಶನ್ ಆಗಮನ

Posted date: 15 Jul, 2019

Powered by:     Yellow and Red

ತಾಲ್ಲೂಕಿನ ದಂಡಾಧಿಕಾರಿ ಯೋಗಾನಂದ ನಿರ್ಗಮನ ಸುದರ್ಶನ್ ಆಗಮನ

ಚನ್ನಪಟ್ಟಣ: ಕಳೆದ ವರ್ಷದ ಆರಂಭದಲ್ಲಿ ಕನಕಪುರ ದಿಂದ ತಾಲೂಕಿಗೆ ವರ್ಗಾವಣೆ ಗೊಂಡು ಚನ್ನಪಟ್ಟಣದ ಹೊಣೆ‌ಹೊತ್ತಿದ್ದ ತಹಶಿಲ್ದಾರ್ ಯೋಗಾನಂದ ರವರು ಇಂದು‌ ತುಮಕೂರು ತಹಶಿಲ್ದಾರರಾಗಿ ವರ್ಗಾವಣೆ ಗೊಂಡಿದ್ದಾರೆ, ಚನ್ನಪಟ್ಟಣದ ನೂತನ ತಹಶಿಲ್ದಾರರ ರಾಗಿ ಮೂಡಬಿದಿರೆಯ ಬಿ ಕೆ ಸುದರ್ಶನ್ ರವರು ನಿಯೋಜನೆಗೊಂಡಿದ್ದು ಇನ್ನೂ ಅಧಿಕಾರ ಸ್ವೀಕರಿಸಿಲ್ಲ.


ಕನಕಪುರ ದಲ್ಲಿ ಅನೇಕ ಜನಪರ ಕೆಲಸ ಮಾಡಿ ಜನಪ್ರಿಯತೆ ಗಳಿಸಿದ ಯೋಗಾನಂದ ರವರನ್ನು ಮುಖ್ಯಮಂತ್ರಿ ಗಳ ಸ್ವಕ್ಷೇತ್ರ ಚನ್ನಪಟ್ಟಣಕ್ಕೆ ವರ್ಗಾವಣೆ ಮಾಡಲಾಗಿತ್ತು, ಹೊಸದರಲ್ಲಿಯೇ ಅನೇಕ ಸಮಸ್ಯೆಗಳನ್ನು ಪಟ್ಟಿಮಾಡಿಕೊಂಡು ಕಾರ್ಯಾಚರಣೆಗೆ ಇಳಿದರಾದರೂ ಅನೇಕ ಸ್ಥಳೀಯ ನಾಯಕರ ಅಡ್ಡಗಾಲಿನಿಂದ ಸಾರ್ವಜನಿಕರ ಯಾವ ಸಮಸ್ಯೆಗಳನ್ನು ಪೂರ್ಣ ಪರಿಹರಿಸಲಾಗಿರಲಿಲ್ಲ.


ರಾಜ ಕಾಲುವೆ ಒತ್ತುವರಿ, ಬೀದಿಬದಿ ವ್ಯಾಪಾರಿಗಳ ತೆರವು, ಶೆಟ್ಟಿಹಳ್ಳಿ ಕೆರೆ ಪುನಶ್ಚೇತನ ಹಾಗೂ ಸರ್ಕಾರದ ವಿವಿಧ ರೀತಿಯ ಆಸ್ತಿಗಳ ಒತ್ತುವರಿ ತೆರವು ಸೇರಿದಂತೆ ಅನೇಕ ಯೋಜನೆಗಳನ್ನು ರೂಪಿಸಿಕೊಂಡು ಕಾರ್ಯಾಚರಣೆ ಗೆ ಇಳಿದೆನಾದರೂ ಯಾವುದನ್ನು ಚನ್ನಪಟ್ಟಣ ತಾಲ್ಲೂಕಿನ ನಾಗರೀಕರಿಗೆ ನ್ಯಾಯ ಒದಗಿಸಲಾಗಲಿಲ್ಲ, ಪ್ರತಿಯೊಂದು ಕೆಲಸಕ್ಕೆ ಕೈ ಹಾಕಿದಾಗಲು ಹಲವು ನಾಯಕರು ತಡೆಯಾಗಿ ನಿಂತರು, ಕೆಲವು ಬಾರಿ ಕೈ ಮತ್ತು ಬಾಯಿಯನ್ನು ಕಟ್ಟಿ ಹಾಕಿದ ಅನುಭವ ಆಗಿದೆ, ಕೆಲಸ ಮಾಡಲಾಗದ ಜಾಗದಲ್ಲಿ ಇರುವುದು ತರವಲ್ಲ ಎಂದು ಮಾರ್ಮಿಕವಾಗಿ‌ ನುಡಿದರು.


ಇವೆಲ್ಲದರ ನಡುವೆಯೂ ಹಲವಾರು ನೆನೆಗುದಿಗೆ ಬಿದ್ದಿದ್ದ ಹಲವಾರು ರೈತರ ಕೆಲಸಗಳನ್ನು ಮಾಡಿ ರೈತರಿಂದ ಸನ್ಮಾನವನ್ನು ಸ್ವೀಕರಿಸಿದ್ದರು, ಗಣರಾಜ್ಯೋತ್ಸವ ಮತ್ತು ಮುಖ್ಯಮಂತ್ರಿ ಗಳ ಸಭೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸಿ ಸೈ ಎನಿಸಿಕೊಂಡಿದ್ದರು.

ಒತ್ತಡದ ನಡುವೆ ಸಣ್ಣ ಹೃದಯಾಘಾತವಾಗಿ ತಿಂಗಳು ಕಾಲ ರಜೆಯಲ್ಲಿದ್ದ ಅವರು ಇದೇ ತಿಂಗಳ ಒಂದನೇ ತಾರೀಖು ಬಂದಿದ್ದರಾದರೂ ಮತ್ತೆ ರಜೆ ಪಡೆದು ಹೋಗಿದ್ದರು.


ಹೊಸದಾಗಿ ತಾಲ್ಲೂಕಿಗೆ ಆಗಮಿಸುತ್ತಿರುವ ದಂಡಾಧಿಕಾರಿ ಬಿ ಕೆ ಸುದರ್ಶನ್ ರವರಿಗೆ ತಾಲ್ಲೂಕು ಅದಕ್ಕಿಂತ ಹೆಚ್ಚಾಗಿ ಮುಖ್ಯಮಂತ್ರಿ ಸ್ವಕ್ಷೇತ್ರ ಚನ್ನಪಟ್ಟಣದಲ್ಲಿ ಬೆಟ್ಟದಷ್ಟು ಸಮಸ್ಯೆಗಳಿದ್ದು ಕೆಸರೆರಚಾಟದ ಹಲವಾರು ರಾಜಕೀಯ ನಾಯಕರ ಮಧ್ಯೆ ಕರ್ತವ್ಯ ನಿಭಾಯಿಸುತ್ತಾರೋ ಅಥವಾ ಶೀಘ್ರ ನಿರ್ಗಮಿಸುತ್ತಾರೊ ಕಾದು ನೋಡಬೇಕಾಗಿದೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑