Recent news »
-
ಮುಟ್ಟು ಗುಟ್ಟಿನ ವಿಷಯವಲ್ಲ ಅದೊಂದು ಜೈವಿಕ ಕ್ರಿಯೆ; ಪದ್ಮರೇಖಾ
ರಾಮನಗರ: ಪ್ರತಿ ಹೆಣ್ಣಿನ ಮುಟ್ಟಿಗೂ ಒಂದು ಘನತೆ ಇದೆ. ಪ್ರತಿ ಮನುಷ್ಯನ ಹುಟ್ಟಿಗೂ ಮುಟ್ಟೇ ಕಾರಣವಾಗಿದೆ. ಮೂಡನಂಬಿಕೆ ಮತ್ತು ಕೀಳರಿಮೆಗಳನ್ನು ಬಿಟ್ಟು ಮುಟ್ಟಿನ ಬಗೆಗೆ ಅಗತ್ಯವಿರುವ ಸ್ವಚ್ಛತೆಯ ಕಡೆ ಮತ್ತು ತೆಗೆದುಕೊಳ್ಳಬೇಕಾದ ಕ್ರಮಗಳ ಬಗ್ಗೆ ತಿಳಿಯಬೇಕಿದೆ. ನಿಸರ್ಗದತ್ತವಾಗಿ ಬಂದಿರುವ ಜೈವಿಕ ಕ್ರಿಯೆಗೆ ಅಂಟು ಮುಟ್ಟಿನ ಸೋಂಕಿಲ್ಲ ಎಂದು ಸಾಮಾಜಿಕ ಕಾರ್ಯಕರ್ತ ಪದ್ಮರೇಖಾ ತಿಳಿಸಿದರು.
ಅವರು ಕೃಷ್ಣಾಪುರದೊಡ್ಡಿಯ ಕೆಎಸ್ ಮುದ್ದಪ್ಪ ಸ್ಮಾರಕ ಟ್ರಸ್ಟ್, ಈ ಎಸ್ ಎ ಎಫ್ ಫೌಂಡೇಶನ್, ಕಮ್ಯೂನಿಟಿ ಫಸ್ಟ್ ಫೌಂಡೇಶನ್ ಹಾಗೂ ಸರ್ಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ಮಹಿಳಾ ಸಬಲೀಕರಣ ವಿಭಾಗ ಸಂಯುಕ್ತವಾಗಿ ಹಮ್ಮಿಕೊಂಡಿದ್ದ ಮುಟ್ಟಿನ ಆರೋಗ್ಯ ಕಾರ್ಯಕ್ರಮ ಕುರಿತು ಉಪನ್ಯಾಸ ನೀಡಿದರು.
ದೈಹಿಕವಾಗಿ ನಿರಂತರ ನಡೆಯುವ ಮುಟ್ಟಿನ ನಿರ್ವಹಣೆ ನಮ್ಮೆಲ್ಲರ ಜವಾಬ್ದಾರಿಯಾಗಬೇಕು, ಇದನ್ನು ಕೆಟ್ಟದ್ದು ಎಂದು ನೋಡದೆ, ಅವರಿಗೆ ಬಿಡುವು ಕೊಡುವುದರ ಜೊತೆಗೆ ಸಹಕಾರ ನೀಡಬೇಕು. ಮುಂದಿನ ಪೀಳಿಗೆಗೆ ಮುಟ್ಟಿನ ಬಗ್ಗೆ ಇರುವ ಮೂಢನಂಬಿಕೆ ತೊಲಗಿಸಿ, ವೈಜ್ಞಾನಿಕ ಮಾಹಿತಿ ನೀಡಬೇಕು ಎಂದರು.
ಮಾಜಿ ನಗರಸಭಾ ಅಧ್ಯಕ್ಷೆ ಬಿ ಸಿ ಪಾರ್ವತಮ್ಮ ಮಾತನಾಡಿ ಮುಟ್ಟನ್ನು ಕುರಿತು ಮತ್ತು ನೈರ್ಮಲ್ಯವನ್ನು ಕುರಿತು ಇಡೀ ಮಹಿಳಾ ಲೋಕಕ್ಕೆ ತಿಳಿಸಬೇಕಾದ ಅವಶ್ಯಕತೆ ಇದೆ. ಮುಟ್ಟಿನ ವಿಚಾರದಲ್ಲಿ ನಿರ್ಲಕ್ಷ್ಯ ಮಾಡಿ ಸಾವಿಗೀಡಾದ ಅನೇಕ ದಾಖಲೆಗಳು ನಮ್ಮಲ್ಲಿವೆ. ಆಧುನಿಕ ಯುಗದಲ್ಲಿ ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆ ಇಲ್ಲ ಎಂದರು.
ನಿಸರ್ಗದತ್ತವಾಗಿ ಉಂಟಾಗುವ ಮುಟ್ಟು ದೇಗುಲಗಳಾಚೆ ಇರಿಸಲು ಹೇಳಲ್ಲ. ಸೂಕ್ತವಾಗಿ ಅದರ ನಿರ್ವಹಣೆ ಮಾಡುವುದರಿಂದ ಎಲ್ಲ ಕಿರಿಕಿರಿಗಳಿಂದ ದೂರವಿರಬೇಕು ಎಂದರು.
ಜಾನಪದ ವಿದ್ವಾಂಸ ಡಾ. ಎಂ ಬೈರೇಗೌಡ ಮಾತನಾಡಿ ಮುಟ್ಟು ಸೂತಕವಲ್ಲ ಅದೊಂದು ಸಾಮಾನ್ಯ ಸಂಗತಿ. ಮುಟ್ಟನ್ನು ಗುಟ್ಟು ಮಾಡುವ ಅವಶ್ಯಕತೆಯಿಲ್ಲ ಎಂದರು.
ಕಾರ್ಯಕ್ರಮದಲ್ಲಿ
ಹ್ಯುಮಾನಿಟಿ ಫಸ್ಟ್ ಫೌಂಡೇಶನ್ ಅಧ್ಯಕ್ಷ ಉದಯ್ ಕುಮಾರ್ ಮಹಿಳಾ ಸಬಲೀಕರಣ ವಿಭಾಗದ ಸಂಚಾಲಕಿ ವೇದಾವತಿ ಕಾಲೇಜು ಕನ್ನಡ ವಿಭಾಗದ ರೂಪಾ ಇಎಸ್ಎಎಫ್ ಫೌಂಡೇಶನ್ ಸತೀಶ್ ಕಾಲೇಜು ಪ್ರಾಂಶುಪಾಲ ಮುದ್ದೀರಯ್ಯ ಅಧ್ಯಕ್ಷತೆ ವಹಿಸಿದ್ದರು ಕುಮಾರಿ ಭವ್ಯ ಕಾರ್ಯಕ್ರಮ ನಿರ್ವಹಿಸಿದರು.
ಗೋ ರಾ ಶ್ರೀನಿವಾಸ...
ಮೊ:9845856139.
-
ಕೃಷ್ಣಭೈರೇಗೌಡರನ್ನೇ ಕೃಷಿಮಂತ್ರಿಯಾಗಿ ಮಾಡಿ ಡಿಕೆಶಿಗೆ ಪತ್ರ ಬರೆದ ಸೋಗಾಲ ಗ್ರಾಮದ ಪ್ರಫುಲ್ಲಚಂದ್ರ
ಚನ್ನಪಟ್ಟಣ: ಮೈತ್ರಿ ಸರ್ಕಾರದಲ್ಲಿ ಕೃಷಿ ಮಂತ್ರಿಯಾಗಿ ತನ್ನ ಕರ್ತವ್ಯವನ್ನು ಸರಿಯಾದ ನಿಟ್ಟಿನಲ್ಲಿ ನಿರ್ವಹಿಸಿ ಸೈ ಎನಿಸಿಕೊಂಡಿರುವ ಕೃಷ್ಣ ಬೈರೇಗೌಡರನ್ನು ಈ ಬಾರಿಯೂ ಸಹ ಕೃಷಿ ಮಂತ್ರಿಯನ್ನಾಗಿ ಮಾಡಬೇಕು ಎಂದು ಸೋಗಾಲ ಗ್ರಾಮದ ಕಾಂಗ್ರೆಸ್ ಮುಖಂಡರಾದ ಪ್ರಫುಲ್ಲ ಚಂದ್ರ ರವರು ಉಪ ಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ರವರಿಗೆ ಪತ್ರ ಬರೆದು ಮನವಿ ಮಾಡಿದ್ದಾರೆ.
ಚನ್ನಪಟ್ಟಣ ತಾಲೂಕಿನ ಸೋಗಾಲ ಗ್ರಾಮದದವರಾದ ಪ್ರಪುಲ್ಲ ಚಂದ್ರ ಅವರು ಮೂಲತಃ ಕೃಷಿಕರಾಗಿದ್ದಾರೆ. ರೈತರ ಕಷ್ಟಗಳನ್ನು ಅರ್ಥೈಸಿಕೊಳ್ಳುವ ಹಾಗೂ ಅದಕ್ಕೆ ಪರಿಹಾರ ನೀಡುವ ನಿಪುಣತೆ ಅವರಲ್ಲಿದೆ. ಈ ಹಿಂದೆ, ಕಾಂಗ್ರೆಸ್ ಸರ್ಕಾರದಲ್ಲಿ ಕೃಷ್ಣಬೈರೇಗೌಡ ಅವರು ಕೃಷಿ ಮಂತ್ರಿಯಾಗಿದ್ದ ಅವಧಿಯಲ್ಲಿ ರೈತರಿಗೆ ಅನುಕೂಲವಾಗುವ ಹಲವು ಯೋಜನೆಗಳನ್ನು ಅನುಷ್ಟಾನಕ್ಕೆ ತಂದು ಗಮನ ಸೆಳೆದಿದ್ದರು. ಇದರಿಂದ ಸಂಕಷ್ಟಕ್ಕೆ ಸಿಲುಕಿದ್ದ ರೈತರು ನೆಮ್ಮದಿಯ ನಿಟ್ಟುಸಿರು ಬಿಡುವಂತಾಗಿತ್ತು. ಪ್ರಸ್ತುತ ಕಾಂಗ್ರೆಸ್ ಸರ್ಕಾರದಲ್ಲೂ ಕೃಷ್ಣಭೈರೇಗೌಡರಿಗೆ ಕೃಷಿ ಖಾತೆ ನೀಡಿದ್ದಲ್ಲಿ ಈ ಹಿಂದಿನಂತೆ ರೈತರ ಪರ ಕಾರ್ಯಕ್ರಮ ರೂಪಿಸುವ ನಂಬಿಕೆ ಇದೆ ಎಂದು ಪ್ರಪುಲ್ಲಾ ಚಂದ್ರ ಅವರು ಡಿ ಕೆ ಶಿವಕುಮಾರ್ ರವರಿಗೆ ಪತ್ರದ ಮೂಲಕ ಮನವಿ ಮಾಡಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
-
ಶ್ರೇಯಸ್ ಪಬ್ಲಿಕ್ ಸ್ಕೂಲ್ ನೋಂದಣಿ ರದ್ದತಿಗೆ ಉಚ್ಛ ನ್ಯಾಯಾಲಯದಿಂದ ತಡೆಯಾಜ್ಞೆ
ರಾಮನಗರ,: ಶ್ರೀ ಸಿದ್ದೇಶ್ವರ ಎಜುಕೇಷನಲ್ ಟ್ರಸ್ಟ್ (ರಿ) ನಂ 18 ಶಿವಾನಂದನಗರ, ಜರಗನಹಳ್ಳಿ ಬಡಾವಣೆ ಜೆ.ಪಿ ನಗರ 6ನೇ ಹಂತ ಬೆಂಗಳೂರು 560078, ಆಡಳಿತ ಮಡಳಿಯಿಂದ ನಡೆಯುತ್ತಿರುವ ಶ್ರೇಯಸ್ ಪಬ್ಲಿಕ್ ಸ್ಕೂಲ್ ಹನುಮಂತಪುರ, ದೊಡ್ಡಮರಳವಾಡಿ ಕನಕಪುರ ತಾಲ್ಲೂಕು ರಾಮನಗರ ಜಿಲ್ಲೆ, ಈ ಶಾಲೆಯ ನೋಂದಣಿಯನ್ನು ಕರ್ನಾಟಕ ಶಿಕ್ಷಣ ಕಾಯಿದೆ ಕಲಂ 39 ರನ್ವಯ ಹಿಂಪಡೆದಿರುವ ಆದೇಶಕ್ಕೆ ಕರ್ನಾಟಕ ಉಚ್ಛ ನ್ಯಾಯಾಲಯವು ಮುಂದಿನ ವಿಚಾರಣಾ ದಿನಾಂಕದ ವರೆಗೆ ಶಾಲೆಯನ್ನು ಮುಂದುವರೆಸಲು ರಿಟ್ ಅರ್ಜಿ ಸಂಖ್ಯೆ: 9994/2023 ರ ಪ್ರಕರಣದಲ್ಲಿ 9/5/2023ರಂದು ತಡೆಯಾಜ್ಞೆ ನೀಡಿ ಮಧ್ಯಂತರ ಆದೇಶ ನೀಡಿರುತ್ತದೆ. ಈ ಆದೇಶವು ಘನ ನ್ಯಾಯಾಲಯದ ಅಂತಿಮ ತೀರ್ಪಿಗೆ ಒಳಪಟ್ಟಿರುತ್ತದೆ ಎಂದು ಕನಕಪುರ ತಾಲ್ಲೂಕಿನ ಕ್ಷೇತ್ರ ಶಿಕ್ಷಣಾಧಿಕಾರಿಗಳು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.