Tel: 7676775624 | Mail: info@yellowandred.in

Language: EN KAN

    Follow us :


ಲಕ್ಷ್ಮಿ ಗೋ ರಾ ಶ್ರೀನಿವಾಸ್


ಲಕ್ಷ್ಮಿ ಗೋ ರಾ ಶ್ರೀನಿವಾಸ ರವರು ಮೂಲ ಕರಾಟೆ ಪಟು ಮತ್ತು ನೃತ್ಯ ಸಂಯೋಜಕಿಯಾಗಿದ್ದಾರೆ. ಹಾಲಿ ರಾಮನಗರದ ಬಿಜಿಎಸ್ ವರ್ಲ್ಡ್ ಸ್ಕೂಲ್ ನಲ್ಲಿ ಕರಾಟೆ ಮತ್ತು ಯೋಗ ಶಿಕ್ಷಕಿಯಾಗಿ ಕೆಲಸ ನಿರ್ವಹಿಸುತ್ತಿದ್ದಾರೆ. ಹಿರಿಯ ಜಾನಪದ ತಜ್ಞ ಹಿ ಶಿ ರಾಮಚಂದ್ರೇಗೌಡ ರ ನಿರ್ದೇಶನದಲ್ಲಿ ಕರಿಭಂಟನ ಕಾಳಗ ಎಂಬ ಬಯಲು ಯಕ್ಷಗಾನದಲ್ಲಿ ಹಾಗೂ ಕಾಡು ಸಿದ್ದಮ್ಮನ ಕಥೆ ಎಂಬ ನಾಟಕದಲ್ಲಿ ಅಭಿನಯಿಸಿದ್ದಾರೆ. ಇದು ಐದು ಜಿಲ್ಲೆಗಳಲ್ಲಿ ಪ್ರದರ್ಶನ ಗೊಂಡಿದೆ. ಡಾ ಎಂ ಭೈರೇಗೌಡ ರ ಕಿಲಾಡಿ ದಾಸಯ್ಯ ಹಾಸ್ಯ ನಾಟಕದಲ್ಲಿ ದಾಸಯ್ಯನಾಗಿ ಹಾಗೂ ಮಹದೇಶ್ವರ ಸ್ವಾಮಿ ವಿಡಿಯೋ ದ ಎರಡು ಸುರುಳಿಗಳಿಗೆ ಅಭಿನಯ ನೀಡಿದ್ದಾರೆ. ಇನ್ನೂ ಬಿಡುಗಡೆಯಾಗದ ಅರುಣ್ ಕುಮಾರ್ ನಿರ್ದೇಶನದ ಧರಣಿ ಎಂಬ ಸಾಕ್ಷ್ಯಚಿತ್ರದಲ್ಲಿ ಪ್ರಧಾನ ಪಾತ್ರದಲ್ಲಿ ಅಭಿನಯಿಸಿದ್ದಾರೆ. ಡೊಳ್ಳು ಕುಣಿತ, ತಮಟೆ ಮತ್ತು ನಗಾರಿ ಬಾರಿಸುವ ಮೂಲಕ ಹಲವಾರು ಕಾರ್ಯಕ್ರಮಗಳನ್ನು ನಡೆಸಿಕೊಟ್ಟಿದ್ದಾರೆ. ರಾಮನಗರ ಜಿಲ್ಲೆಯಲ್ಲಿ ಏಕೈಕ ಹಾಗೂ ಪ್ರಥಮ ಮಹಿಳಾ ಗಂಡುಕಲೆ ಪ್ರದರ್ಶಕಿ ಹಾಗೂ ಮಹಿಳಾ ಕರಾಟೆ ಶಿಕ್ಷಕಿಯಾಗಿ ಗುರುತಿಸಿಕೊಂಡಿದ್ದಾರೆ.


Top ↑