ಮುಖ್ಯ ಶಿಕ್ಷಕರು ಹಾಗೂ ಶಿಕ್ಷಕರಿಗೆ ಸಲಹೆ ಸೂಚನೆಗಳು
ಕ್ಷೇತ್ರ ಶಿಕ್ಷಣಾಧಿಕಾರಿಗಳ ಹಾಗೂ ಕ್ಷೇತ್ರ ಸಮನ್ವಯಾಧಿಕಾರಿಗಳ ಕಛೇರಿ.ರಾಮನಗರ
ಶಾಲಾ ಮಾಹಿತಿ
ಆತ್ಮೀಯ ಮುಖ್ಯಶಿಕ್ಷಕ ಮತ್ತು ಶಿಕ್ಷಕ ಬಂಧುಗಳೇ ಶೈಕ್ಷಣಿಕ ವರ್ಷದ ಅಂತ್ಯಕ್ಕೆ ಕೆಲವೊಂದು ಸಲಹೆ ಸೂಚನೆಗಳು
1.2017-18ನೇ ಸಾಲಿನ ಅನುದಾನ ಹಾಗೂ ನಿರ್ವಹಣಾ ಹಣವನ್ನು ಸಂಪೂರ್ಣ ಖರ್ಚು ಮಾಡಿ 30/3/18ರ ಒಳಗೆ ರಶೀದಿಗಳನ್ನು ಇಡುವುದು
2.ನಿಯಮಾನುಸಾರ ಅನುದಾನ ಖರ್ಚು ಮಾಡಿ ದಾಖಲೆಗಳನ್ನು,ಕ್ಯಾಸ್ ಬುಕ್ ಅನ್ನು ನಿರ್ವಹಿಸುವುದು
3. ಪರೀಕ್ಷೇಗಳನ್ನು ಮುಗಿಸಿ ಮೌಲ್ಯಮಾಪನವನ್ನು ಮಾಡಿ 6 ರ ಒಳಗೆ ಕ್ರೋಢೀಕೃತದಲ್ಲಿ ಕಡ್ಡಾಯವಾಗಿ ದಾಖಲಿಸಿ ಘೋಷ್ವಾರೆ ಹಾಕಿ ದಿನಾಂಕದೊಂದೀಗೆ ಸಹಿ ಹಾಕುವುದು.
4. ಫಲಿತಾಂಶ ಹಾಗೂ ಮಕ್ಕಳ ಪ್ರಗತಿಯನ್ನು SATS ನಲ್ಲಿ ಕಡ್ಡಾಯವಾಗಿ ದಾಖಲಿಸುವುದು.
5.ಮಕ್ಕಳ ದಾಖಲಾತಿ ಪುಸ್ತಕದ ಪ್ರತಿಯೊಂದು ಅಂಶ ಗಮನಿಸಿ ಪರಿಶೀಲಿಸುವುದು.
6.ನಗದು ಪುಸ್ತಕವನ್ನು ಪೂರ್ಣಗೊಳಿಸಿ, ಘೋಷ್ವಾರೆ ಹಾಗೂ ಸಹಿ ಹಾಕಿ. 01/04/18 ರ ನಂತರ ಯಾವುದೇ ನಗದು ವಹಿವಾಟು ಮಾಡಬೇಡಿ.
7. ನಗದು ಪುಸ್ತಕವನ್ನು ಚಟುವಟಿಕಾವಾರು ಪ್ರತ್ಯೇಕ ಪುಸ್ತಕದಲ್ಲಿ ನಿರ್ವಹಿಸುವುದು ಕಡ್ಡಾಯ.
8. ಮಾರ್ಚ್ 31ಕ್ಕೆ ಎಲ್ಲಾ ವಹಿಗಳನ್ನು ನಿರ್ವಹಿಸಿ ಮುಖ್ಯಶಿಕ್ಷಕರು ಸಹಿಮಾಡಿ CRP ಗಳಿಂದ ಪರಿಶೀಲಿಸಿಕೊಳ್ಳುವುದು.
9. ಎಲ್ಲಾ ದಾಸ್ತಾನುಗಳನ್ನು ದಾಸ್ತಾನು ಪುಸ್ತಕದಲ್ಲಿ ದಾಖಲಿಸಿ ಸಹಿ ಮಾಡುವುದು.
10. ರಜಾ ಅವಧಿಯಲ್ಲಿ ಎಲ್ಲಾ ಶಿಕ್ಷಕರ ಪೂರ್ಣ ಮಾಹಿತಿಯನ್ನು ಸಂಗ್ರಹಿಸಿ ಇಲಾಖೆಯ ಅಧಿಕಾರಿಗಳೊಂದಿಗೆ ಸದಾ ಸಂಪರ್ಕದಲ್ಲಿ ಇರುವುದು.
11. ಪ್ರತೀ ತಿಂಗಳು ಶಿಕ್ಷಕರ ಅನಧಿಕೃತ ಗೈರುಹಾಜರಿ, ಧೀರ್ಘಕಾಲಿಕ ರಜೆ ಹಾಗೂ EL ಗಳ ಮಾಹಿತಿಯನ್ನು ನೀಡುವುದು.
12.ಮುಂದಿನ ಶೈಕ್ಷಣಿಕ ವರ್ಷದ ಕ್ರಿಯಾಯೋಜನೆ ತಯಾರಿಸಿಕೊಂಡು ,ಎಲ್ಲಾ ಕಡತಗಳ ಸಿದ್ದತೆ ಮಾಡಿಕೊಳ್ಳುವುದು.
13.ಶಾಲಾವಾರು ಚಾರ್ಜ್ ಲಿಸ್ಟ್ ಅನ್ನು ತಯಾರಿಸಿ ನಿವೃತ್ತಗೊಳ್ಳುವ ಶಿಕ್ಷಕರು ಚಾರ್ಜ್ ನೀಡುಬೇಕು.
14. ಶಾಲೆ ಮುಚ್ಚಿರುವ ಮು ಶಿ ಗಳು ಆ ಶಾಲೆಯ ಎಲ್ಲಾ ಕಡತಗಳು ಹಾಗೂ ಮಾಹಿತಿಯನ್ನು ಪಕ್ಕದ ಶಾಲೆಗೆ ನೀಡಿ ಕಡ್ಡಾಯವಾಗಿ ಸಹಿ ಪಡೆಯುವುದು.
15. ಈ ಸಾಲಿನ ಪುಸ್ತಕಗಳನ್ನು ಹಿಂಪಡೆದು Book bank ತಯಾರಿಸುವುದು.
16. ನಿಯೋಜನೆ ಇರುವ ಶಿಕ್ಷಕರನ್ನು ಮಾರ್ಚ್ 31 ಕ್ಕೆ ಬಿಡುಗಡೆಗೊಳಿಸಿ ಮೂಲಶಾಲೆಗೆ ಕಳುಹಿಸುವುದು.
17.. 2018-19 ನೇ ಸಾಲಿಗೆ ಮಕ್ಕಳ ದಾಖಲಾತಿ ಹೆಚ್ಚಿಸಲು ಶಾಲಾ ಹಂತದಲ್ಲಿ ಪ್ರಚಾರಕಾರ್ಯವನ್ನು ಕಡ್ಡಾಯವಾಗಿ ಕೈಗೊಳ್ಳುವುದು.
18.ಏಪ್ರಿಲ್ 14 ರಂದು ಎಲ್ಲಾ ಶಿಕ್ಷಕರು ಹಾಜರಿದ್ದು ಕಡ್ಡಾಯವಾಗಿ ಡಾ. ಬಿ ಆರ್ ಅಂಬೇಡ್ಕರ್ ಜಯಂತಿಯನ್ನು ಆಚರಿಸುವುದು.
19. 09/04ರಂದು ಪ್ರಾಥಮಿಕ ಶಾಲೆ ಹಾಗೂ 10/04 ರಂದು ಪ್ರೌಢಶಾಲೆಗಳ ಸಮುದಾಯದತ್ತ ಶಾಲಾ ಕಾರ್ಯಕ್ರಮ ನಡಡೆಯುತ್ತದೆ. ಮೇಲ್ವಿಚಾರಕರಾಗಿ ಅಕ್ಟೋಬರ್ ನಲ್ಲಿ ಬಂದಿದ್ದವರೇ ಬರುತ್ತಾರೆ.
20. ಇಲಾಖೆಯ ಎಲ್ಲಾ ಮಾಹಿತಿಗಳು ಇನ್ನು ಮುಂದೆ mail ಅಲ್ಲಿ ಬರುವುದರಿಂದ ಶಾಲೆಯ ಹೆಸರಿನಲ್ಲಿ Email ವಿಳಾಸವನ್ನು ರಚಿಸಿಕೊಳ್ಳುವುದು ಕಡ್ಡಾಯ.
21. ಏಪ್ರಿಲ್ 11 ರಿಂದ ಮೇ 27 ರವರೆಗೆ ಬೇಸಿಗೆ ರಜೆ ಇರುತ್ತದೆ. ಮೇ 28ರಂದು ಶಾಲೆಗಳು ಪುನಾರಂಭಗೊಳ್ಳುತ್ತದೆ.
22.ಕಲಿಕಾ ಫಲಿತಗಳನ್ನು ಎಲ್ಲಾ ತರಗತಿಗಳಲ್ಲೂ ಪ್ರದರ್ಶಿಸಬೇಕು.
23. Eco club ನ 5000/ರೂಗಳ ಉಪಯೋಗಿತಾ ರಶೀದಿಗಳನ್ನು ಸಲ್ಲಿಸುವುದು.
24.. ಆಧಾರ್ ಇಲ್ಲದೇ ಮಕ್ಕಳನ್ನು ಧಾಖಲುಮಾಡಿಕೊಳ್ಳುವಂತಿಲ್ಲ.ಆದಾರ್ ನಂ.ಪಡೆದು ಕ್ರಮವಹಿಸುವುದು
25.. CSAS ಪರೀಕ್ಷೆಯ ಪರಿಹಾರ ಬೋಧನೆಯನ್ನು ಪೂರ್ಣಗೊಳಿಸಿ.
26.. ರಜಾ ಅವಧಿಯಲ್ಲಿ ಎಲ್ಲಾ ಶಿಕ್ಷಕರೂ ಚುನಾವಣಾ ಕೆಲಸಗಳಿಗೆ ಸಹಕರಿಸಿ.
27...ಇಲಾಖಾ ಅಧಿಕಾರಿಗಳ ದೂರವಾಣಿ ಕರೆಗಳನ್ನು ಕಡ್ಡಾಯವಾಗಿ ಸ್ವೀಕರಿಸಿ ಮತ್ತು ಪಾಲಿಸಿ
28. ನಲಿ ಕಲಿ ತರಗತಿ ಕೊಠಡಿಯಲ್ಲಿ ಎಲ್ಲಾ ಬೋಧನಾ ಕಲಿಕಾ ಸಾಮಾಗ್ರಿಗಳನ್ನು ಸುರಕ್ಷಿತವಾಗಿ ಸಂರಕ್ಷಿಸುವುದು.
29. ಶಿಕ್ಷಕರಿಗೆ ತರಗತಿವಾರು, ವಿಷಯವಾರು ಹಂಚಿಕೆ ಮಾಡಿ, ವಾರ್ಷಿಕ ಕಗರಿಯಾ ಯೋಜನೆ ತಯಾರಿಸುವುದು.
30. ಶಾಲಾ ಪಂಚಾಂಗ, ಎಸ್ ಡಿ, ಪಿ. ಎಸ್ ಎ ಪಿ ಗಳ ಸಿದ್ಧತೆ ಮಾಡಿಕೊಳ್ಳುವುದು.
31. CSAS ಪರೀಕ್ಷೆಯ ವಿಶ್ಲೇಷಣೆ ವರದಿ CRP ಗಳಿಗೆ ನೀಡುವುದು.
ಆತ್ಮೀಯ ಶಿಕ್ಷಕ ಮಿತ್ರರೇ ಈ ಮೇಲ್ಕಂಡ ಎಲ್ಲಾ ಮಾಹಿತಿಗಳ ಸಕಾಲಕ್ಕೆ ಕ್ರಮ ಕೈಗೊಳ್ಳಿ.
Recent news in education »
ಅಂದು ಶಾಲೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಅಪ್ಪಗೆರೆ ತಿಮ್ಮರಾಜು
ಚನ್ನಪಟ್ಟಣ: ನಾವು ನಮ್ಮ ಕಾಲದಲ್ಲಿ ಶಾಲೆಗೆ ಹೋಗಿ ವಿದ್ಯೆ ಕಲಿಯಲು ಪಡಿಪಾಟಲು ಪಡಬೇಕಾಗಿತ್ತು. ಹಲವಾರು ಸಮಸ್ಯೆಗಳು ನಮ್ಮ ಎದುರಿಗಿದ್ದವು. ಆದರೆ, ಈಗ ಅಂತಹ
ಪ್ರತಿ ವಿದ್ಯಾರ್ಥಿಗಳು ಕೌಶಲ್ಯ ರೂಢಿಸಿಕೊಳ್ಳಬೇಕು: ಶಿಕ್ಷಣಾಧಿಕಾರಿ ಮರಿಗೌಡ
ಚನ್ನಪಟ್ಟಣ: ಶಾಲಾ ವಿದ್ಯಾರ್ಥಿಗಳು ಕೇವಲ ಪಾಠ ಮತ್ತು ಆಟಕ್ಕೆ ಸೀಮಿತವಾಗದೆ ವಿವಿಧ ಕೌಶಲ್ಯಗಳನ್ನು ರೂಢಿಸಿಕೊಳ್ಳಬೇಕು. ಕೌಶಲ್ಯ ಕಲಿತ ಮಕ್ಕಳ ಪ್ರತಿಭೆಯನ್ನ
ಪ್ರತಿ ಸರ್ಕಾರಗಳು ಪದವೀಧರರ ಜೊತೆ ಚೆಲ್ಲಾಟವಾಡುತ್ತಿವೆ, ಉದಯ್ ಸಿಂಗ್
ಚನ್ನಪಟ್ಟಣ: ಪ್ರತಿ ವರ್ಷವೂ ಲಕ್ಷಾಂತರ ಯುವಕ ಯುವತಿಯರು ಪದವಿಯೊಂದಿಗೆ ಹೊರಬರುತ್ತಾರೆ. ವಿಶ್ವ ವಿದ್ಯಾಲಯಗಳಿಂದ ಪದವಿಯೊಂದಿಗೆ ಬರುವವರಿಗೆ ಸೂಕ್ತ ಉದ್ಯೋಗ
ದಿವ್ಯಚೇತನ ಇಂಗ್ಲಿಷ್ ಶಾಲೆಯಲ್ಲಿ ಮೇಳೈಸಿದ ಮಿನಿ ವಿಜ್ಞಾನ ಮೇಳ
ಚನ್ನಪಟ್ಟಣ: ಅಗಸ್ತ್ಯ ಅಂತರಾಷ್ಟ್ರೀಯ ಪ್ರತಿಷ್ಠಾನ ಬ್ರಾಡ್ಕಾಂ ವಿಜ್ಞಾನ ಕೇಂದ್ರ ಚನ್ನಪಟ್ಟಣ ಇವರ ವತಿಯಿಂದ ನಗರದ ದಿವ್ಯ ಚೇತನ ಇಂಗ್ಲಿಷ್ ಪ್ರೌಢಶಾಲೆಯಲ್ಲ
ಪಾಠದ ಜೊತೆಗೆ ಆಟದಲ್ಲಿಯೂ ಮುಂಚೂಣಿಗೆ ಬರಬೇಕು. ವಿ ಬಾಲಸುಬ್ರಹ್ಮಣ್ಯಂ
ಚನ್ನಪಟ್ಟಣ,: ಪ್ರತಿಯೊಬ್ಬ ವಿದ್ಯಾರ್ಥಿಯು ಶಿಕ್ಷಣದ ಜೊತೆಯಲ್ಲಿ ಕ್ರೀಡಾಮನೋಭಾವನೆ ಬೆಳಸಿಕೊಳ್ಳಬೇಕು. ಮನಸ್ಸು ಉಲ್ಲಸಿತವಾಗಲು ಕ್ರೀಡೆ ಸಹಕಾರಿ ಎಂದು ಬಾಲು
ಉಪನ್ಯಾಸಕರ ಧರಣಿ, ಕಲಿಕೆಗೆ ತೊಂದರೆ, ಎಬಿವಿಪಿ ಯಿಂದ ಪ್ರತಿಭಟನೆ
ಚನ್ನಪಟ್ಟಣ: ಸರ್ಕಾರಿ ಕಾಲೇಜುಗಳ ಉಪನ್ಯಾಸಕರು ಧರಣಿ ನಿರತರಾಗಿರುವುದರಿಂದ ಕಾಲೇಜುಗಳಲ್ಲಿ ಉಪನ್ಯಾಸಕರ ಕೊರತೆಯಿದೆ. ಇದರಿಂದ ಶೈಕ್ಷಣಿಕ ವರ್ಷದ ಕಲಿಕೆಗೆ ತೊ
ಆರೋಗ್ಯ, ಆಯಸ್ಸು ಹೆಚ್ಚಿಸುವ ವೈದ್ಯರು ಆರೋಗ್ಯ ಕಾಪಾಡಿಕೊಳ್ಳಬೇಕು. ಚಾಮುಂಡೇಶ್ವರಿ ಆಸ್ಪತ್ರೆ ಉದ್ಘಾಟನೆಯಲ್ಲಿ ನಿರ್ಮಲಾನಂದನಾಥ ಸ್ವಾಮೀಜಿ
ಚನ್ನಪಟ್ಟಣ:bಆಸ್ಪತ್ರೆಗೆ ಬರುವ ರೋಗಿಗಳ ಅರೋಗ್ಯ ತಪಾಸಿಸಿ, ರೋಗ ವಾಸಿ ಮಾಡಿ, ಅವರ ಆರೋಗ್ಯ ದ ಜೊತೆಗೆ ಆಯಸ್ಸನ್ನು ಹೆಚ್ಚಿಸುವಲ್ಲಿ ನಿಷ್ಣಾತರಾದ ವೈದ್ಯರು
ಪೆಟ್ಟಾ ಸರ್ಕಾರಿ ಶಾಲಾ ಆವರಣದಲ್ಲಿ ನಗರಸಭೆಯ ಕಸದ ರಾಶಿ, ಅಲ್ಲಗಳೆದ ಪೌರಾಯುಕ್ತ
ಆರ್ಥಿಕವಾಗಿ ಬೆಳೆದವರೆಲ್ಲರೂ ವಿದ್ಯಾರ್ಜನೆಗೆ ಮುಂದಡಿಯಿಡಬೇಕು, ಸಚಿವ ಮಧುಬಂಗಾರಪ್ಪ
ಚನ್ನಪಟ್ಟಣ: ಬಡತನದ ಬೇಗೆಯಲ್ಲಿ ಬೆಂದು, ಉನ್ನತ ಶಿಕ್ಷಣ ಪಡೆದು, ಉತ್ತಮ ಸ್ಥಾನಮಾನದ ಜೊತೆಗೆ ಆರ್ಥಿಕವಾಗಿ ಸದೃಢವಾದ ನಂತರ ತನ್ನ ಜನ್ಮದಾತರಿಗೆ, ಹುಟ್ಡಿದೂರ
ಕಾವೇರಿ ಕಿಚ್ಚು, ರಾಮನಗರ ಜಿಲ್ಲೆ ಬಂದ್, ಶಾಲಾ-ಕಾಲೇಜಿಗೆ ರಜೆ, ಸರ್ಕಾರಿ ಕಛೇರಿ ರಜೆಗಾಗಿ ಕಾಯುತ್ತಿರುವ ನೌಕರರು
ರಾಮನಗರ: ನಮ್ಮ ರಾಜ್ಯದ ಕೆಲ ಭಾಗಗಳಿಗೆ ಕುಡಿಯುವ ನೀರಿಗೆ ತತ್ವಾರವಾಗಿದೆ, ಮಂಡ್ಯ, ಮೈಸೂರು ಭಾಗದ ರೈತರಿಗೆ ಬೆಳೆ ಬೆಳೆಯಲು ನೀರಿಲ್ಲಾ, ಇಂತಹ ಸಂಕಷ್ಟದ ಸಮಯ
ಪ್ರತಿಕ್ರಿಯೆಗಳು