ಸಿ.ಎಸ್.ಆರ್ ಅನುದಾನವನ್ನು ಜಿಲ್ಲೆಯ ಕಾರ್ಯಕ್ರಮಕ್ಕೆ ಉಪಯುಕ್ತವಾಗುವ ರೀತಿ ಯೋಜನೆ ರೂಪಿಸಿ: ಅರ್ಚನಾ ಎಂ.ಎಸ್.
ರಾಮನಗರ ಜಿಲ್ಲೆಗೆ ಅವಶ್ಯಕವಿರುವ ಅಭಿವೃದ್ಧಿ ಕಾರ್ಯಕ್ರಮಗಳನ್ನು ರೂಪಿಸಿ ಕೈಗಾರಿಕೆಗಳಿಂದ ನೀಡಲಾಗುವ ಸಿಎಸ್ಆರ್ ಅನುದಾನವನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದರು.
ಅವರು ಇಂದು ಜಿಲ್ಲಾ ಕೈಗಾರಿಕಾ ಕೇಂದ್ರದ ವತಿಯಿಂದ ಬಿಡದಿ ಕೈಗಾರಿಕಾ ಪ್ರದೇಶದಲ್ಲಿರುವ ಟಯೋಟ ಕಿರ್ಲೋಸ್ಕರ್ ಆಟೋ ಪಾರ್ಟ್ಸ್ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಸಿ.ಎಸ್.ಆರ್ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದರು. ಕೈಗಾರಿಕೆಗಳು ತಮ್ಮ ೫ ರಿಂದ ೧೦ ಕಿ.ಮೀ ವ್ಯಾಪ್ತಿಯಲ್ಲಿ ಬರುವ ಪ್ರದೇಶವನ್ನು ಗಮನದಲ್ಲಿಟ್ಟಿಕೊಂಡು ಸಿಎಸ್ಆರ್ ಅನುದಾನದಡಿ ಯೋಜನೆಗಳನ್ನು ರೂಪಿಸಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಕೈಗೊಳ್ಳುತ್ತಿದೆ. ಇದನ್ನು ಜಿಲ್ಲೆಯಾದ್ಯಂತ ವಿಸ್ತರಿಸಲು ಯೋಜನೆ ರೂಪಿಸಲಾಗುವುದು ಎಂದರು.
ಸರ್ಕಾರದಿAದ ಹಲವಾರು ಜನಪರ ಯೋಜನೆಗಳು ಜಿಲ್ಲೆಯಲ್ಲಿ ಅನುಷ್ಠಾನಗೊಳ್ಳುತ್ತದೆ. ಅದೇ ಯೋಜನೆಗಳು ಪುನಃ ಸಿಎಸ್ಆರ್ ಅನುದಾನದಲ್ಲೂ ಪುನರಾವರ್ತನೆಗೊಂಡರೆ ಅನುದಾನ ಉಪಯುಕ್ತವಾಗುವುದಿಲ್ಲ. ಆದ್ದರಿಂದ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯತ್ ಒಟ್ಟಿಗೆ ಸೇರಿ ಸಿ.ಎಸ್.ಆರ್ ಅನುದಾನದಿಂದ ಕೈಗೊಳ್ಳಬಹುದಾದ ಕೆಲಸಗಳ ಬಗ್ಗೆ ಆರೋಗ್ಯ, ಶಿಕ್ಷಣ, ಪಶುಸಂಗೋಪನೆ, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಸಮಾಜ ಕಲ್ಯಾಣ ಇಲಾಖೆ ಹಾಗೂ ಇನ್ನಿತರ ಇಲಾಖೆಗಳಿಂದ ಬೇಡಿಕೆಗಳನ್ನು ಪಡೆದು ಕ್ರೂಡೀಕರಿಸಿ ಕೈಗಾರಿಕೆಗಳಿಗೆ ಜಿಲ್ಲೆಗೆ ಬೇಕಿರುವ ಅಗತ್ಯತೆಯ ಬಗ್ಗೆ ತಿಳಿಸಲಿದೆ. ಇದರಿಂದ ಕೈಗಾರಿಕೆಗಳು ಸಹ ಕೆಲಸಗಳನ್ನು ಹಂಚಿಕೆ ಮಾಡಿಕೊಂಡು ಪುನರಾವರ್ತನೆಯಾಗದಂತೆ ಕೆಲಸ ಕೈಗೊಳ್ಳಬಹುದು ಎಂದರು.
ಸಿ.ಎಸ್.ಆರ್ ಅನುದಾನದಡಿ ಶಾಲಾ ಕಟ್ಟಡ ಕಾಮಗಾರಿಗಳು, ಕುಡಿಯುವ ನೀರಿನ ಘಟಕಗಳು, ಶೌಚಾಲಯಗಳು, ಆರೋಗ್ಯಕ್ಕೆ ಸಂಬAಧಿಸಿದAತೆ ಕ್ಯಾಂಪ್ಗಳು ಸೇರಿದಂತೆ ಹಲವಾರು ಕೆಲಸಗಳನ್ನು ಮಾಡಲಾಗಿದೆ. ಇವುಗಳ ಉಪಯುಕ್ತತೆಯ ಬಗ್ಗೆ ಸರ್ವೆ ನಡೆಸಿ. ಇದರಿಂದ ಕೈಗಾರಿಕೆಗಳಿಗೂ ಸಹ ಅವರು ನೀಡಿದ ಅನುದಾನದ ಸದ್ಭಳಕೆಯ ಬಗ್ಗೆ ಮಾಹಿತಿ ಸಿಗುತ್ತದೆ ಎಂದರು.
ಸಿಎಸ್ಆರ್ ಅನುದಾನದಡಿ ಶಿಕ್ಷಣ, ಆರೋಗ್ಯ ಹಾಗೂ ಪರಿಸರಕ್ಕೆ ಹೆಚ್ಚಿನ ಆದ್ಯತೆ ನೀಡಲಾಗುತ್ತಿದೆ. ಈ ಬಾರಿ ಇದರ ಜೊತೆಗೆ ಜಿಲ್ಲೆಯ ೪ ತಾಲ್ಲೂಕುಗಳಲ್ಲಿ ಕೌಶಲ್ಯಾಭಿವೃದ್ಧಿ ತರಬೇತಿ, ಸರ್ಕಾರಿ ಶಾಲೆಯ ಶಿಕ್ಷಕರು ಹಾಗೂ ಅಂಗನವಾಡಿ ಕಾರ್ಯಕರ್ತೆಯರಿಗೆ ತರಬೇತಿ ಕಾರ್ಯಕ್ರಮಗಳನ್ನು ಆಯೋಜಿಸಲು ಚಿಂತಿಸಲಾಗುತ್ತಿದೆ ಎಂದರು.
ಬಿಡದಿ ಕೈಗಾರಿಕಾ ಸಂಘದ ಅಧ್ಯಕ್ಷರಾದ ರಾಜೇಂದ್ರ ಹೆಗ್ಡೆ ಅವರು ಮಾತನಾಡಿ ಬಿಡದಿ ಕೈಗಾರಿಕಾ ಸಂಘದಿAದಲೂ ಸಹ ಸಿಎಸ್ಆರ್ ಅನುದಾನದಿಂದ ಯೋಜನೆಗಳು ಪುನರಾವರ್ತನೆಯಾಗದಂತೆ ಕ್ರಮ ಕೈಗೊಳ್ಳಲು ಸಿಂಗಲ್ ವಿಂಡೋ ಸಿಸ್ಟಂನ್ನು ಅಳವಡಿಸಿಕೊಳ್ಳಲಾಗಿದೆ. ಈ ಬಾರಿ ಜಿಲ್ಲಾಡಳಿತ ಕೂಡ ಎಲ್ಲಾ ಇಲಾಖೆಗಳ ಬೇಡಿಕೆ ಪಡೆದು ಯೋಜನೆಯ ಪಟ್ಟಿಯನ್ನು ಸಲ್ಲಿಸುತ್ತಿರುವುದು ಉತ್ತಮವಾದ ಕೆಲಸ. ಪ್ರತಿ ವರ್ಷ ಏಪ್ರಿಲ್ನಲ್ಲಿ ಕೈಗಾರಿಕೆಗಳಿಂದ ಕಾರ್ಯಕ್ರಮಗಳನ್ನು ಪ್ರಾರಂಭಿಸಲಾಗುತ್ತದೆ. ಮಾರ್ಚ್ ಮಾಹೆಯಲ್ಲೇ ವಾರ್ಷಿಕ ಬೇಡಿಕೆಯನ್ನು ನೀಡಿದರೆ ಕಂಪನಿಯ ಬೋರ್ಡ್ಗಳಿಗೆ ಸಲ್ಲಿಸಿ ಅನುಮತಿಯನ್ನು ಪಡೆದುಕೊಳ್ಳಬಹುದು ಎಂದರು.
ಪ್ರತಿ ಮೂರು ತಿಂಗಳಿಗೆ ಒಂದು ಬಾರಿ ಸಿ.ಎಸ್.ಆರ್. ಸಭೆ ನಡೆಸುವುದು ಉತ್ತಮ. ಸರ್ಕಾರದಿಂದ ಕೂಡ ಹಲವಾರು ಯೋಜನೆಗಳಿಗೆ ಅನುದಾನವಿರುತ್ತದೆ. ಇದರ ಬಗ್ಗೆ ಒಂದು ದಿನ ಕಾರ್ಯಕ್ರಮವನ್ನು ಆಯೋಜಿಸಿ ಇಲಾಖೆವಾರು ಮಾಹಿತಿ ನೀಡಿದರೆ ಅನುದಾನ ಇಲ್ಲದ ಕಡೆ ಸಿಎಸ್ಆರ್ ಅನುದಾನವನ್ನು ಬಳಸಿಕೊಳ್ಳಬಹುದು ಎಂದರು.
ಸಭೆಯಲ್ಲಿ ಬಾಷ್ ಇಂಡಿಯಾ ಪೌಂಡೇಶನ್, ಟಯೋಟಾ ಕಿರ್ಲೋಸ್ಕರ್ ಮೋಟರ್, ಟಯೋಟಾ ಕಿರ್ಲೋಸ್ಕರ್ ಅಟೋ ಪಾಟ್ಸ್, ಟಯೋಡಾ ಗೋಸೈ ಸೌತ್ ಇಂಡಿಯಾ, ಹಿಂದೂಸ್ತಾನ ಕೋಕೋ ಕೋಲಾ, ಇಲಿಯೋಟ್, ಇಬರಾ ಟರ್ಬೊಮೆಷಿನರಿ, ಗೇಯಲ್ ಇಂಡಿಯಾ ಲಿಮಿಟೆಡ್ ಸಂಸ್ಥೆಗಳು ಸಿ.ಎಸ್.ಆರ್ ಅನುದಾನದಡಿ ಕೈಗೊಂಡಿರುವ ಅಭಿವೃದ್ಧಿ ಕಾರ್ಯಕ್ರಮಗಳ ಬಗ್ಗೆ ವಿವರಿಸಿದರು.
ಸಭೆಯಲ್ಲಿ ಬಿಡದಿ ಕೈಗಾರಿಕಾ ಸಂಘದ ಕಾರ್ಯದರ್ಶಿ ನರಸಿಂಹ ಭಟ್, ಬಾಷ್ ಇಂಡಿಯಾ ಪೌಂಡೇಶನ್ ಸಂಸ್ಥೆಯ ಕಾಮತ್, ಜಿಲ್ಲಾ ಕೈಗಾರಿಕಾ ಕೇಂದ್ರದ ಜಂಟಿ ನಿರ್ದೇಶಕ ಎಲ್.ನಾಗರಾಜು, ಉಪನಿರ್ದೇಶಕ ಶಿವಲಿಂಗಯ್ಯ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ. ನಿರಂಜನ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕ ಸಿ.ವಿ. ರಾಮನ್, ಸಮಾಜ ಕಲ್ಯಾಣ ಇಲಾಖೆ ಉಪನಿರ್ದೇಶಕ ಶ್ರೀನಿವಾಸ್ ಸೇರಿದಂತೆ ಇನ್ನಿತರ ಅಧಿಕಾರಿಗಳು ಉಪಸ್ಥಿತರಿದ್ದರು
ಪ್ರತಿಕ್ರಿಯೆಗಳು