ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯಿಂದ ಸಂಗೊಳ್ಳಿ ರಾಯಣ್ಣನ 187ನೇ ಹುತಾತ್ಮ ದಿನಾಚರಣೆ
ರಾಮನಗರ ತಾಲ್ಲೂಕಿನ ಕುಂಬಾಪುರದ ಬಳಿಯ ತಾಲ್ಲೂಕು ಕುರುಬರ ಸಂಘದ ಕಚೇರಿಯಲ್ಲಿ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ ಹುತಾತ್ಮ ದಿನಾಚರಣೆಯನ್ನು ಆಚರಿಸಲಾಯಿತು.
ರಾಮನಗರ : ತಾಲ್ಲೂಕಿನ ಕುಂಬಾಪುರದ ಬಳಿ ಇರುವ ತಾಲ್ಲೂಕು ಕುರುಬರ ಸಂಘದ ಕಚೇರಿಯಲ್ಲಿ ಶುಕ್ರವಾರ ಕ್ರಾಂತಿವೀರ ಸಂಗೊಳ್ಳಿ ರಾಯಣ್ಣನ 187ನೇ ಹುತಾತ್ಮ ದಿನಾಚರಣೆಯನ್ನು ಕ್ರಾಂತಿವೀರ ಸಂಗೊಳ್ಳಿ ರಾಯಣ್ಣ ಯುವ ಸೇನೆಯ ಜಿಲ್ಲಾ ಘಟಕದ ವತಿಯಿಂದ ಆಚರಿಸಲಾಯಿತು.
ಸೇನೆಯ ಜಿಲ್ಲಾಧ್ಯಕ್ಷ ಸಂದೀಪ್ರಾಜ್ ಮಾತನಾಡಿ ಸ್ವಾತಂತ್ರ್ಯ ಪಡೆಯುವದಕ್ಕಾಗಿ ಬಡ ಕೂಲಿಕಾರನ ಮಗನಾದ ಸಂಗೊಳ್ಳಿ ರಾಯಣ್ಣ ಬ್ರಿಟೀಷ್ ಅಧಿಕಾರಿಗಳ ವಿರುದ್ಧ ಸಿಡಿದೆದ್ದು, ದೇಶಕ್ಕಾಗಿ ಪ್ರಾಣಾ ರ್ಪಣೆ ಮಾಡಿದ ವೀರ ಸ್ವಾತಂತ್ರ್ಯ ಹೋರಾಟಗಾರ. ನಾವೆಲ್ಲ ಅವರ ಆದರ್ಶ ಮೈಗೂಡಿಸಿಕೊಂಡು ಮುನ್ನಡೆಯಬೇಕು ಎಂದು ತಿಳಿಸಿದರು.
ಸೇನೆಯ ಜಿಲ್ಲಾ ಉಪಾಧ್ಯಕ್ಷ ವಿ.ಬಿ. ಮಹೇಶ್ ಮಾತನಾಡಿ ಬ್ರೀಟಿಷರ ವಿರುದ್ಧ ಹೋರಾಟ ನಡೆಸಿ ದೇಶದ ಕೀರ್ತಿ ಹಿಮ್ಮಡಿಗೊಳಿಸಿದ ಸಂಗೊಳ್ಳಿ ರಾಯಣ್ಣನ ದೇಶ ಭಕ್ತಿಯನ್ನು ಯುವಕರು ಅರಿಯಬೇಕು. ಬ್ರಿಟಿಷರ ವಿರುದ್ಧ ಹೋರಾಡಿ ಬಲಿದಾನ ನೀಡಿದ ಸಂಗೊಳ್ಳಿ ರಾಯಣ್ಣ ಇಂದಿನ ಯುವ ಪೀಳಿಗೆಗೆ ಆದರ್ಶ ಆಗಬೇಕು. ರಾಯಣ್ಣನ ಆದರ್ಶಗಳನ್ನು ಯುವಕರು ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.
ಸೇನೆಯ ತಾಲ್ಲೂಕು ಅಧ್ಯಕ್ಷ ನಾಗರಾಜ್, ಪದಾಧಿಕಾರಿಗಳಾದ ಕೃಷ್ಣ, ನಾರಾಯಣಪ್ಪ, ಕಿರಣ್, ರಾಜು, ರಾಜಣ್ಣ, ಗಗನ್, ಅರುಣ್ ಮುಂತಾದವರು ಇದ್ದರು.
ಪ್ರತಿಕ್ರಿಯೆಗಳು