ಕೋರಂ ಕೊರತೆ : ವಿಶೇಷ ಸಭೆ ಮುಂದೂಡಿಕೆ
ರಾಮನಗರ: ಕಳೆದ ಒಂದು ತಿಂಗಳಿಂದೀಚೆಗೆ ನಗರಸಭೆಯಲ್ಲಿ ಅಕ್ರಮ ಖಾತೆಗಳು ಸೇರಿದಂತೆ ಇತರೆ ವಿಚಾರಗಳಲ್ಲಿ ಆಡಳಿತ ಮತ್ತು ವಿರೋಧ ಪಕ್ಷಗಳ ನಡುವೆ ನಡೆಯುತ್ತಿದ್ದ ವಾಕ್ ಸಮರಕ್ಕೆ ತೆರೆ ಎಳೆಯಲು ನಗರಸಭೆ ಅಧ್ಯಕ್ಷ ಪಿ.ರವಿಕುಮಾರ ಅಧ್ಯಕ್ಷತೆಯಲ್ಲಿ ಶನಿವಾರ ಕರೆಯಲಾಗಿದ್ದ ವಿಶೇಷ ಸಭೆಯನ್ನು ಕೋರಂ ಕೊರತೆಯಿಂದ ಮುಂದೂಡಿದ ಘಟನೆ ನಡೆಯಿತು.
ನಗರಸಭೆಯಲ್ಲಿ ಅಕ್ರಮ ಖಾತೆಗಳಿಗೆ ನಗರಸಭಾಧ್ಯಕ್ಷರೇ ಹೊಣೆ ಎಂದು ಜೆಡಿಎಸ್ ಸದಸ್ಯರು ಆರೋಪಿಸಿದ್ದರು. ಈ ನಡುವೆ ಕಾಂಗ್ರೆಸ್ ಸದಸ್ಯರು ಸಹ ಜೆಡಿಎಸ್ ಅವಧಿಯಲ್ಲಿ ಅಕ್ರಮ ಖಾತೆಗಳು ನಡೆದಿವೆ ಎಂದು ವಾಗ್ದಾಳಿ ನಡೆಸಿದ್ದರು. ಇದಾದ ನಂತರ ನಗರಸಭೆ ಅಧ್ಯಕ್ಷ ಪಿ.ರವಿಕುಮಾರ್ ಅವರು ಈ ವಾಗ್ದಾಳಿಗೆ ತೆರೆ ಎಳೆಯಲು ಜ.27ರ ಶನಿವಾರ ವಿಶೇಷ ಸಭೆ ಕರೆದಿದ್ದರು.
ಬೆಳಿಗ್ಗೆ 11 ಗಂಟೆಗೆ ಸಭೆ ಪ್ರಾರಂಭವಾಯಿತಾದರೂ ಕೋರಂ ಕೊರತೆಯಿಂದ 12 ಗಂಟೆಗೆ ಮುಂದೂಡಲಾಯಿತು. 12 ಗಂಟೆ ಗೂ ಸಹ ಆಡಳಿತ ಮತ್ತು ವಿರೋಧ ಪಕ್ಷದ ಕೆಲವು ಸದಸ್ಯರು ಸಭೆಗೆ ಆಗಮಿಸದ ಕಾರಣ ಕೋರಂ ಕೊರತೆಯಿಂದ ಸಭೆ ಮುಂದೂಡಲಾಗಿದೆ ಎಂದು ನಗರಸಭೆ ಅಧ್ಯಕ್ಷರು ಘೋಷಿಸಿದರು.
ಪ್ರತಿಕ್ರಿಯೆಗಳು