Tel: 7676775624 | Mail: info@yellowandred.in

Language: EN KAN

    Follow us :


ಇರುಳಿಗ ಸಮುದಾಯದ ಕುಟುಂಬಳಿಗೆ ಸ್ವೆಟರ್ ವಿತರಣೆ

Posted date: 25 Dec, 2018

Powered by:     Yellow and Red

ಇರುಳಿಗ ಸಮುದಾಯದ ಕುಟುಂಬಳಿಗೆ ಸ್ವೆಟರ್ ವಿತರಣೆ

ತಾಲ್ಲೂಕಿನ ಕೂಟಗಲ್ ಬಳಿ ಇರುವ ಇರುಳಿಗ ಸಮುದಾಯದ ಕುಟುಂಬಗಳಿಗೆ ಸಂಶೋಧನಾ
ವಿದ್ಯಾರ್ಥಿ ಎಸ್. ರುದ್ರೇಶ್ವರ ಅವರಿಂದ ಸ್ವೆಟರ್ ವಿತರಣಾ ಕಾರ್ಯಕ್ರಮವನ್ನು ಮಂಗಳವಾರ ಹಮ್ಮಿಕೊಳ್ಳಲಾಗಿತ್ತು.
        ರಾಷ್ಟ್ರೀಯ ಗ್ರಾಮೀಣ ಜೀವನೋಪಾಯ ಅಭಿಯಾನದ ನಿರ್ದೇಶಕಿ ಡಾ.ಬಿ.ಆರ್. ಮಮತಾ ಮಾತನಾಡಿ ಬುಡುಕಟ್ಟು ಸಮುದಾಯದ ಮಹಿಳೆಯರು ‘ಸಂಜೀವಿನಿ ಸಂಘ’ವನ್ನು ಮಾಡಿಕೊಂಡು ಉತ್ತಮವಾದ
ಜೀವನವನ್ನು ರೂಪಿಸಿಕೊಳ್ಳಬೇಕು ಎಂದು ತಿಳಿಸಿದರು.
        ಸರ್ಕಾರದ ಯೋಜನೆಗಳನ್ನು ಸದುಪಯೋಗಪಡಿಸಿಕೊಳ್ಳಬೇಕು. ಮಹಿಳೆಯರು ಆತ್ಮವಿಶ್ವಾಸದಿಂದ ಕೆಲಸ ಮಾಡಬೇಕು. ತಮ್ಮ ಜೀವನವನ್ನು ಬದಲಾಯಿಸಿಕೊಳ್ಳುವ ನಿಟ್ಟಿನಲ್ಲಿ
ಕಾರ್ಯಪ್ರವೃತ್ತರಾಗಬೇಕು ಎಂದು ತಿಳಿಸಿದರು.
        ಪರಿಸರವಾದಿ ಭೂಹಳ್ಳಿಪುಟ್ಟಸ್ವಾಮಿ ಮಾತನಾಡಿ ಸರ್ಕಾರದ ಯೋಜನೆಗಳು ಬಡುಕಟ್ಟು ಸಮುದಾಯಗಳನ್ನು ತಲುಪುತ್ತಿಲ್ಲ. ಇಲ್ಲಿನ ಜನರು ಮಾನವೀಯತೆಯನ್ನು ಹೊಂದಿದ್ದಾರೆ.
ನೀವೆಲ್ಲರೂ ದುರಾಭ್ಯಾಸದಿಂದ ದೂರವಿರಬೇಕು. ನಿಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಮಾಡಿಸಬೇಕು ಎಂದು ತಿಳಿಸಿದರು.
        ಗುಡಿಸಲು ಮುಕ್ತ ಕರ್ನಾಟಕ ಮಾಡುತ್ತೇವೆಂದು ಹಲವು ವರ್ಷಗಳಿಂದ ಸರ್ಕಾರಗಳು ಹೇಳಿಕೊಂಡು ಬರುತ್ತಲೇ ಇವೆ. ಆದರೆ ಇದುವರೆವಿಗೂ ಸಾಧ್ಯವಿಲ್ಲ. ಚುನಾಯಿತ ಪ್ರತಿನಿಧಿಗಳು ಹಾಗೂ ಅಧಿಕಾರಿಗಳಲ್ಲಿನ ಇಚ್ಛಾಶಕ್ತಿಯ ಕೊರತೆ ಇದಕ್ಕೆ ಕಾರಣವಾಗಿದೆ
ಎಂದು ತಿಳಿಸಿದರು.
        ಶ್ರೀರಾಮ ಗೃಹ ನಿರ್ಮಾಣ ಸಂಘದ ಅಧ್ಯಕ್ಷ ತ್ಯಾಗರಾಜ ಮಾತನಾಡಿ ಇರುಳಿಗರು ಕಾಡನ್ನು
ಉಳಿಸಿದವರು. ಕಾಡುಗಳಲ್ಲಿ ದೊರೆಯುವ ಉತ್ಪನ್ನಗಳ ಅನುಕೂಲತೆಯನ್ನು ನಾಗರಿಕ ಜಗತ್ತಿಗೆ ತಿಳಿಸಿಕೊಟ್ಟವರು ಇವರು. ಆದರೆ ಇಂದು ಇರುಳಿಗರನ್ನೇ ಅರಣ್ಯದಿಂದ ದೂರ ಮಾಡುತ್ತಿರುವುದು ಶೋಚನೀಯ ಸಂಗತಿಯಾಗಿದೆ ಎಂದರು.
        ನೀವು ನಿಮಗಾಗಿಯೆ ಇರುವ ಹಕ್ಕುಗಳನ್ನು ಮೊದಲು ತಿಳಿದುಕೊಳ್ಳಬೇಕು. ಇವರ ಹಕ್ಕುಗಳು ಸಿಗಲು ಈ ಭಾಗದ ವಿದ್ಯಾವಂತರು, ನಾಗರಿಕರು ಇವರಿಗೆ ಮಾರ್ಗದರ್ಶನ ಮಾಡಬೇಕು. ಆದರೆ ಇಂದು ಅಕ್ಷರಸ್ತರು ಹೆಚ್ಚಾದಂತೆ ಸಮಾಜದಲ್ಲಿ ಅನಾಕರಿಕತೆ ಹೆಚ್ಚಾಗುತ್ತಿದೆ. ಇಂತಹ ಸಂದರ್ಭದಲ್ಲಿ ಎಸ್. ರುದ್ರೇಶ್ವರ ಇಂತಹ ಸಮಾಜಮುಖಿ ಕೆಲಸಗಳನ್ನು ಮಾಡುವ ಮೂಲಕ ಇತರರಿಗೆ ಮಾದರಿಯಾಗಿದ್ದಾರೆ ಎಂದರು.
        ಸಾಂಸ್ಕøತಿಕ ಸಂಘಟಕಿ ಕವಿತಾರಾವ್ ಮಾತನಾಡಿ ಮೊದಲು ನೀವು ಶುಚಿತ್ವವನ್ನು ಕಾಪಾಡಿಕೊಳ್ಳಿ. ಎಲ್ಲವನ್ನೂ ಸರ್ಕಾರವೇ ಮಾಡಿಕೊಡಲಿ ಎಂಬ ಭಾವನೆಯನ್ನು ಬಿಡಬೇಕು.
ಮುಂದಿನ ದಿನಗಳಲ್ಲಿ ಇಲ್ಲಿ ತಿಂಗಳಿಗೊಮ್ಮೆ ಕಾರ್ಯಕ್ರಮ ಮಾಡುವ ಮೂಲಕ ನಿಮ್ಮಲ್ಲಿರುವ ಅಸಹಾಯತೆಯನ್ನು, ನಿರುತ್ಸಾಹವನ್ನು ಹೋಗಲಾಡಿಸಿ ನಿಮಗಿರುವ ಹಕ್ಕುಗಳ ಬಗ್ಗೆ ತಿಳಿಸಿಕೊಡಲಾಗುವುದು ಎಂದರು.
        ನಮ್ಮ ಸಂಸ್ಥೆ ವತಿಯಿಂದ ಇಲ್ಲಿನ ಜನರಿಗೆ ಬೇಕಾಗುವ ಔಷಧಿ ಇನ್ನಿತರ ವಸ್ತುಗಳನ್ನು ನೀಡಲಾಗುವುದು ಎಂದು ಅವರು ಹೇಳಿದರು.
        ಇರುಳಿಗ ಸಮುದಾಯದ ಹೋರಾಟಗಾರ ಕೃಷ್ಣಮೂರ್ತಿ ಮಾತನಾಡಿ ಇರುಳಿಗ ಸಮುದಾಯದ ಜನರು ಈಗಲೂ ಅವಕಾಶ ವಂಚಿತರಾಗಿ ಜೀವನ ನಡೆಸುತ್ತಿದ್ದಾರೆ. ಅರಣ್ಯಗಳಲ್ಲಿ ಕಿರು ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಬಿಡುತ್ತಿಲ್ಲ. ಅರಣ್ಯ ಅಧಿಕಾರಿಗಳ ಕಿರುಕುಳ ಹೆಚ್ಚಾಗಿದೆ. ಈ ಭಾಗದ ಜನರನ್ನು ಚುನಾಯಿತ ಪ್ರತಿನಿಧಿಗಳು ಮತಕ್ಕಾಗಿ ಬಳಸಿಕೊಳ್ಳುತ್ತಿದ್ದಾರೆಯೆ ವಿನಃ ಮೂಲಭೂತ ಸೌಕರ್ಯಗಳನ್ನು ಕಲ್ಪಿಸುತ್ತಿಲ್ಲ ಎಂದರು.
        ಜಿಲ್ಲಾಡಳಿತ ಈಗಲಾದರೂ ಇಲ್ಲಿ ವಾಸಿಸುತ್ತಿರುವ ಕುಟುಂಬಗಳಿಗೆ ಹಕ್ಕುಪತ್ರಗಳನ್ನು ವಿತರಿಸಬೇಕು. ಮೂಲಭೂತ ಸೌಕರ್ಯಗಳನ್ನು ಒದಗಿಸಬೇಕು. ವಸತಿ ಹಾಗೂ ಶೌಚಾಲಯಗಳನ್ನು
ನಿರ್ಮಿಸಿಕೊಡಲು ಮುಂದಾಗಬೇಕು ಎಂದು ಒತ್ತಾಯಿಸಿದರು.
        ಸಂಶೋಧಾನ ವಿದ್ಯಾರ್ಥಿ ಎಸ್. ರುದ್ರೇಶ್ವರ ಮಾತನಾಡಿ ಸಮಾಜಮುಖಿ ಕೆಲಸಗಳನ್ನು ಎಲ್ಲರೂ
ಮಾಡಬಹದು, ಆದರೆ ಮಾಡುವ ಮನಸ್ಸು ಇರಬೇಕು. ವಿದ್ಯಾರ್ಥಿ ಜೀವನದಿಂದಲೂ ಸಾಮಾಜಿಕ, ಸಾಂಸ್ಕøತಿಕ ಕೆಲಸಗಳನ್ನು ಮಾಡಿಕೊಂಡು ಬರುತ್ತಿದ್ದೇನೆ ಎಂದು ತಿಳಿಸಿದರು.
        ಲಂಚಮುಕ್ತ ಕರ್ನಾಟಕ ನಿರ್ಮಾಣ ವೇದಿಕೆಯ ರಾಜ್ಯ ಸಂಚಾಲಕ ಸಿ.ಆರ್. ಅರುಣ್‍ಕುಮಾರ್
ಮಾತನಾಡಿ ಈ ಭಾಗದ ಚುನಾಯಿತ ಪ್ರತಿನಿಧಿಗಳು ಜನಮುಖಿ ಕೆಲಸಗಳನ್ನು ಮಾಡಲು ಮುಂದಾಗಬೇಕು. ಚುನಾವಣಾ ಸಂದರ್ಭದಲ್ಲಿ ಮತಕ್ಕಾಗಿ ಬಳಸಿಕೊಂಡು ಕಡೆಗಣಿಸಬಾರದು ಎಂದು ತಿಳಿಸಿದರು.
        ಇದೇ ಸಂದರ್ಭದಲ್ಲಿ ಶಾಂತಲಾ ಚಾರಿಟಬಲ್ ಟ್ರಸ್ಟ್ ವತಿಯಿಂದ ಉಡುಪುಗಳನ್ನು ವಿತರಿಸಲಾಯಿತು.
        ಉಪನ್ಯಾಸಕಿ ಎಂ. ಪವಿತ್ರ, ಶಿಕ್ಷಕರಾದ ಎಚ್.ಎಸ್. ಕೃಷ್ಣಮೂರ್ತಿ, ಶಿವಸ್ವಾಮಿ, ಮಂಜುನಾಥ್, ಎಂ.ಎಸ್. ಚನ್ನವೀರಪ್ಪ, ಶ್ರೀಧರ್, ಡಿ.ಆರ್. ನೀಲಾಂಬಿಕಾ, ಶ್ರೀಕಂಠು,
ವಕೀಲ ವಿನೋದ್‍ಭಗತ್, ನೃತ್ಯ ಕಲಾವಿದೆ ಚಿತ್ರಾರಾವ್, ಮುಖಂಡರಾದ ರಾಜು, ಎನ್.ವಿ. ಲೋಕೇಶ್, ನಾಗೇಂದ್ರರಾವ್, ಜಗದೀಶ್,ಯಲ್ಲೊ ಅಂಡ್ ರೆಡ್ ಸಂಸ್ಥೆಯ ವ್ಯವಸ್ಥಾಪಕ ನಿರ್ದೇಶಕ ಆನಂದ್‍ಶಿವ, ಪ್ರಕಾಶ ಜಯಪುರ, ಲೋಕೇಶ್ ದೊಡ್ಡಗಂಗವಾಡಿ, ಕೆ. ಲೋಕೇಶ್, ಜಿ. ಉಮಾಮಹೇಶ್ವರಿ, ಹೊನ್ನಮ್ಮ, ಉಪನ್ಯಾಸಕರಾದ ಡಾ.ಯು.ಎಂ. ರವಿ, ಪ್ರಕಾಶ್ ರಾಮನಹಳ್ಳಿ, ಸಮತಾ ಸೈನಿಕ ದಳದ ಜಿಲ್ಲಾಧ್ಯಕ್ಷ ಡಾ.ಜಿ. ಗೋವಿಂದಯ್ಯ, ಸಿಪಿಐಎಂ ಮುಖಂಡ ರಾಘವೇಂದ್ರ ಮುಂತಾದವರು ಉಪಸ್ಥಿತರಿದ್ದರು.

ಪ್ರತಿಕ್ರಿಯೆಗಳು1 comments

  • Dinesh wrote:
    25 Dec, 2018 04:19 pm

    Good job

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑