ಅವ್ವ
ಅವ್ವ ನೀನೇ ನನ್ನ ದೈವವು
ಅವ್ವಾ ನೀನೇ ನನ್ನ ಜೀವವು
ಧರೆಗಿಳಿಸಿ ತಂದು ನೀರೆರೆದು ಬೆಳೆಸಿದೆ
ಬಳಲಿ ಬಾಯಾರಿದಾಗ ಅಮೃತ ಉಣಿಸಿದೆ
ಹೊಟ್ಟೆಯ ಹಸಿವಿಗೆ ಕೈತುತ್ತನು ಕೊಟ್ಟೆ
ತಪ್ಪು ಬರೆದಾಗ ತಿದ್ದಿಸಿ ಬರೆಸಿದೆ
ಸೋತಾಗ ಬುಜಕೊಟ್ಟು ಬೆಂಬಲಿಸಿದೆ
ಸರೀಕರಿಗೆ ಸಮನಾಗಿ ಬೆಳೆದಾಗ ಹೆಮ್ಮೆಯಪಟ್ಟೆ
ಹಠದೊಂದಿಗೆ ಆಟವಾಡಿದೆ
ಛಲವನ್ನು ಚೈತನ್ಯವಾಗಿಸಿದೆ
ಕಂಕಣ ಕಟ್ಟಿಸಿ ಜೊತೆಗೂಡಿಸಿದೆ
ಮೊಮ್ಮಕ್ಕಳ ನೋಡಿ ಆನಂದದಿ ತೇಲಿದೆ
ಅಪ್ಪನ ಸಾವಲಿ ಸಂಕಟದಿ ಸೊರಗಿದೆ
ಸೊಸೆಯರ ಅಕ್ಕರೆ ಆರೈಕೆಯಲಿ ಮಿಂದೆದ್ದೆ
ಉಸಿರಾಟದ ತೊಡಕಿಗೆ ಬೆಚ್ಚಿಬಿದ್ದೆ
ತಡವರಿಸಿ ಏಳದೇ ಪ್ರಾಯಾಸಪಟ್ಟೆ
ವಿಧಿಯಾಟದ ಮುಂದೆ
ನಡೆಯಲಿಲ್ಲ ಐಯ್ವರ ಆಟ
ತೆರೆಯದಾದವು ಕಣ್ಣರೆಪ್ಪೆ
ಬಯಕೆಗಳು ಬಸಿದು ಹೋದವು
ನಮ್ಮಯ ಹಂಬಲ ಅಳಿದು ಹೋಯಿತು
ಮುಂಬೆಳಕಿನ ಮಬ್ಬಿನಲಿ ಎಚ್ಚರವಾಯಿತು
ಅವ್ವ ಇನ್ನಿಲ್ಲ ಎಂದಾಗ
ಬಾಳನು ಬೆಳಗುವ
ಸೂರ್ಯ ಮುಳುಗಿದಂತೆ
ಹುಣ್ಣಿಮೆ ಚಂದ್ರ ಕರಗಿದಂತೆ
ಸಪ್ತ ಸಾಗರಗಳು ಬತ್ತಿ ಹೋದಂತೆ
ಗ್ರಹಗಳ ಘರ್ಷಿಸಿ
ಧರೆ ಹೊತ್ತಿ ಉರಿದಂತೆ, ನಶ್ವರ ಎನಿಸಿತು
ಅವ್ವನ ಕಾಣದ ಕಣ್ಣುಗಳೇಕೆ
ಧ್ವನಿಯನು ಕೇಳದ ಕಿವಿಗಳಿದ್ದೇಕೆ
ಕೈಹಿಡಿದು ನಡೆಸದ ಕರಗಳು ಏಕೆ
ಏಳುಬೀಳಲಿ ಜೊತೆಯಾಗಿ ಸಾಗದ ಪಾದಗಳೇಕೆ
ನಕ್ಕು ನಲಿಸದ ದಂತಪಂಕ್ತಿಗಳೇಕೆ
ನೋವಿಗೆ ಮಿಡಿಯದ ಹೃದಯವಿದ್ದೇಕೆ
ಕಂಬನಿ ಹರಿದು ಹೆಪ್ಪುಗಟ್ಟಿದೆ ಮೈಮನ
ದೇವರಿರದ ಗುಡಿಯಲ್ಲಿ ಘಂಟೆಯ ನಾದ ಇನ್ನೆಲ್ಲಿ
ಕಾಲ್ಗೆÉಜ್ಜೆಯ ಸಪ್ಪಳ ಕನಸಾಯ್ತು
ಭವ್ಯ ಗೋಪುರ ಮಂಜಾಯ್ತು
ಉತ್ಸವವೆಲ್ಲ ಉಡುಗೋಯ್ತು
ತಿರುಗುವ ಚಕ್ರವೆ ಮುರಿದೊಯ್ತು
ತೂಗುವ ತಕ್ಕಡಿ ತುಂಡಾಯ್ತು
ಭಕ್ತಿಯ ಭಾವ ಚಿರವಾಯ್ತು
ನನ್ನಯ ನೆತ್ತರ ಹನಿಹನಿಯಲಿ
ಬೆರೆತಿದೆ ನಿನ್ನಯ ಬೆವರು
ಉಸಿರಿನ ಪ್ರತಿ ಕಣಕಣದಲ್ಲಿ
ಅಡಗಿದೆ ನಿನ್ನಾ ಹೆಸರು
ಮಕ್ಕಳ ಮುಖದಲಿ ನಿನ್ನದೇ ಚಿತ್ರ
ನೀನೇ ಅವತರಿಸಿ ಬಂದಂತೆ
ಹೊಲ ಜಲದಲಿ ಗಿಡಮರದಲಿ
ಫಲಪುಷ್ಪದಿ ಬೆಟ್ಟಗುಡ್ಡದಲಿ
ಗಾಳಿ ಬೆಳಕಿನಲ್ಲಿ ನೀನೇ ಬೆರೆತಿರುವೆ
ಅವ್ವನ ನೆರಳಲ್ಲಿ ನಲಿದಾಡಿದ ಈ ಕಂದ
ನರಳಾಡಿದರೇನು ಚಂದ
ನಿನ್ನಯ ವಯಸ್ಸಿನವರೆಲ್ಲರೂ ಅವ್ವರೆ
ನೆರೆಹೊರೆಯ ತಾಯಂದಿರಲ್ಲಿ ನಿನ್ನನು ಕಂಡು
ನೋವನು ನುಂಗುವೆ
ನಿನ್ನಾದರ್ಶಕೆ ಶಿರಬಾಗಿಸಿ ಬಾಳುವೆ
ಅವ್ವ ಹರಸು ನನ್ನನು ಅನವರತ
- ಕೊತ್ತೀಪುರ ಜಿ.ಶಿವಣ್ಣ
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು