Tel: 7676775624 | Mail: info@yellowandred.in

Language: EN KAN

    Follow us :


ನನ್ನ ಚಂದದ ಬಾಲ್ಯ

Posted date: 07 Mar, 2018

Powered by:     Yellow and Red

ನನ್ನ ಚಂದದ ಬಾಲ್ಯ

ಎಂತ ಚಂದಿತ್ತು ಆ ನನ್ನ ಬಾಲ್ಯ ಅಂತ ಚಂದಿತ್ತು

ಐದಾರು ಮೈಲೂ ಶಾಲೆಗೆ ನಡೆದು ಹೋಗಿತ್ತಿದ್ದ

ಆ ನನ್ನ ಬಾಲ್ಯ ಅಂತ ಚಂದಿತ್ತು.

 

ಸಹಪಾಟಿಗಳೊಡನೆ ದಾರಿಯುದ್ದಕ್ಕೂ

ಅಂಟೆಗೊದ್ದಾಟ, ಚಿನ್ನಿದಾಂಡಿನಾಟ, ಗೋಲಿಬುಗುರಿಗಳಾಟದ ಆ ಕ್ಷಣ ಎಂತ ಚಂದಿತ್ತು.

 

ಕುಂಟೆಬಿಲ್ಲೆ ಆಡಿಕೊಂಡು ಬರಿಗಾಲಲ್ಲಿ ನಡೆದುಕೊಂಡು

ಹರಿದ ಚಡ್ಡಿಯಲ್ಲಿ ಸಾಗುವಾಗ ಹೆಣ್ಮಕ್ಕಳು

ಹಿಂದೆ ಹಲ್ಕಿಸಿದು ಬರುತ್ತಿದ್ದ ಆ ಕಾಲ ಅಂತ ಚಂದಿತ್ತು.

 

ಮುಜುಗರದ ಪದವೇ ಗೊತ್ತಿಲ್ಲದ ಮುಗ್ಧಮನಸ್ಸುಗಳ ನೋಟ

ವಾರಕ್ಕೊಮ್ಮೆ ಸ್ನಾನದ ಪುಳಕ, ವಾರಕ್ಕೊಮ್ಮೆ ಬದಲಾಗುವ ಬಟ್ಟೆ, ಚೌಳು‌ ಮಣ್ಣಿನಿಂದ ಒಗೆದಿದ್ದರಿಂದ ಜಗಮಗಿಸಿ ಘಮಘಮಿಸುತ್ತಿತ್ತು.

 

ಅವಸರವಾದಾಗ ಶೌಚಮಾಡಿ, ಅವಶ್ಯವಿದ್ದಾಗ ಕ್ಷೌರಮಾಡಿಸಿಕೊಂಡು

ನನ್ನ ಶಾಲಾ ಪುಸ್ತಕದ ಚೀಲವನ್ನು ಸ್ನೇಹಿತರ ಹೆಗಲ ಮೇಲೆ ಮೈಲಿಯುದ್ದಕ್ಕೂ ಹೊರಿಸಿಕೊಂಡು ಬರುತಿದ್ದ ಕಾಲ,

ಅದು-ಸರಸ್ವತಿಯ ಭಕ್ತಿ ಭಾವ ಅಂತ ನಂಬಿದ್ದ ಕಾಲ ಎಂತ ಚಂದಿತ್ತು.

 

ಮಳೆಗಾಲದಲ್ಲಿ ಕದ್ದು ಕೊಯ್ದ ಕಾಚಕ್ಕಿ, ಹೆಸರು, ತೊಗರಿ, ಉದ್ದು,

ಇತರ ಕಾಳ ಬೇಯಿಸಿ ತಿಂದ ರುಚಿ ಎಂತ ಚಂದಿತ್ತು,

ತರತರ ರಸಭರಿತ ಹಣ್ಣುಗಳ ಮರ ಹತ್ತಿ ಕಿತ್ತು

ಬೆರಳು ಉಗುರಿನಿಂದ ಗೀಳಿ ಬಾಚಿ ತಿನ್ನುತ್ತಿದ್ದ ಕಾಲ ಎಂತ ಚಂದಿತ್ತು.

 

ಗೆಳೆಯನ ತಲೆಗೂದಲಿಗೆ ಹಚ್ಚಿದ ಹರಳೆಣ್ಣೆಯನ್ನು

ಕೈಗೆ ಸವರಿಕೊಂಡು ಹಲಸಿನಣ್ಣು ಸುಲಿದು

ತೊಳೆಬಿಡಿಸಿ ಗಬಗಬನೆ ತಿನ್ನುತ್ತಿದ್ದ ಕಾಲ ಅಂತ ಚಂದಿತ್ತು.

 

ಕಾಡಕ್ಕಿಗಳ ಮೊಟ್ಟೆಯನ್ನು ಎಕ್ಕಿ, ತೊಪ್ಪೆಯನ್ನು ಮೆತ್ತಿ,

ಕಸಕಡ್ಡಿಗೆ ಬೆಂಕಿಹಚ್ಚಿ,

ಆ ಬೆಂಕಿಯಲ್ಲಿ ಮೊಟ್ಟೆ ಸುಟ್ಟು ತಿಂದು ತೇಗುತ್ತಿದ್ದ

ಕಾಲ ಅಂತ ಚಂದಿತ್ತು.

 

ಕಾಲ್ದಾರಿಯಲ್ಲಿ ನಡೆವಾಗ ಅಂಬುಗಳ ಅಡ್ಡ ಕಟ್ಟಿ

ಹಿಂದೆ ಬರುವ ಗೆಳೆಯ ಗೆಳತಿಯರು ಕಾಲು ಎಡಗಿ

ಮುಗ್ಗರಿಸಿ ಬಿದ್ದಾಗ , ನಲಿಯುತ್ತಿದ್ದ

ಆ ನಗುವಿನ ಕಾಲ ಅಂತ ಚಂದಿತ್ತು.

 

ಹಬ್ಬ ಹರಿದಿನಗಳಲ್ಲಿ ಮಾತ್ರ ವಡೆ, ಒಬ್ಬಟ್ಟು

ಕೆಲಬಾರಿ ಮಾತ್ರ ಗುಡ್ಡೆ ಮಾಂಸದೂಟ,

ಜಾತ್ರೆಯಲ್ಲೇ ಸಿಗುತ್ತಿದ್ದ ತಿಂಡಿತಿನಿಸುಗಳನ್ನು

ಅಂಗಿಚಡ್ಡಿಯ ಜೇಬು ಶಾಲಾ ಬ್ಯಾಗುಗಳಲ್ಲಿ ತುಂಬಿರಿಸಿ

 

ಸಿಹಿ ಎಣ್ಣೆಯ ಅಂಟು ರಟ್ಟು ಕಟ್ಟಿಕೊಂಡು ಶುಭ್ರಗೊಳಿಸಲು ಅಸಡ್ಡೆ ತೋರುತ್ತಿದ್ದ ಕಾಲ ಅಂತ ಚಂದಿತ್ತು.

 

ಈಗೇನಿದೆ, ನಮ್ಮ ಮಕ್ಕಳಿಗೆ, ಎಲ್ಲವೂ ಯಂತ್ರಮಯ, ತಂತ್ರಮಯ, ವಾಹನಗಳ ದಟ್ಟಣೆ, ಹೊಗೆ, ಶಬ್ದಮಾಲಿನ್ಯವೆ ತುಂಬಿವೆ.

ಸ್ಕೂಲ್ ಗೆ ವ್ಯಾನು , ಕೈಗೆ ಪೋನು  ಬರೆ ಹೋಂ ವಕ್೯ ವಕ್೯ ವಕ್೯...

ಪಿಜ್ಜಾ ಬರ್ಗರ್ ರೇ ಊಟ

ಮೊಬೈಲ್ ಕಂಪ್ಯೂಟರೇ ಆಟ

ಇದರ ಮುಂದೇ ನಮ್ಮ ಬಾಲ್ಯ ರಸದೂಟ

ನಮ್ಮ ಮಕ್ಕಳಿಗೆ ಇಲ್ಲವಾಯ್ತು

ನಮ್ಮಗಳಿಗೇ ಮುಗಿದೋಯ್ತು..

 

 

 

(ಈ  ಕವನದ ಚಿತ್ರಣ ನನ್ನಜ್ಜಿಯ ಊರಾದ ಪಾಂಡವಪುರ ತಾಲ್ಲೂಕಿನ ಕುರಹಟ್ಟಿ ಮತ್ತು ಸುಂಕಾತೊಣ್ಣೂರು ಗ್ರಾಮದಲ್ಲಿ ನ ನೆನಪಿದು)

 

ಗೋ ರಾ ಶ್ರೀನಿವಾಸ

ಗೋವಿಂದೇಗೌಡನದೊಡ್ಡಿ

ಚನ್ನಪಟ್ಟಣ

ಮೊ: ೯೮೪೫೮೫೬೧೩೯.

 

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in literature »

ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ

ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.


<

ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ

\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ

ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ

ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು

ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.

ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ

ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ

ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ

ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ

ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ

ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ

ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ

ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ

ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್

ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.

ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ  ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ

ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ

ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ

Top Stories »  


Top ↑