ಯಾರು ನುಡಿಸಬಲ್ಲರೊ ಅವರದೇ ಆ ಸಂಗೀತ ವಾದ್ಯ
ಯಾರು ನುಡಿಸಬಲ್ಲರೋ ಅವರದೇ ಆ ಸಂಗೀತ ವಾದ್ಯ..
ತುಂಬಾ ಪುರಾತನ ಮನೆತನದ ಒಂದು ಕುಟುಂಬವಿರುತ್ತದೆ. ಅವರು ವಾಸಿಸುವ ಬಂಗಲೆಯಲ್ಲಿ ಸುಮಾರು ವರ್ಷಗಳ ಹಳೆಯದಾದ ಸಂಗೀತ ವಾದ್ಯವೊಂದಿರುತ್ತದೆ. ಆ ಸಂಗೀತ ವಾದ್ಯ ತುಂಬಾ ದೊಡ್ಡದಾಗಿರುತ್ತದೆ ಮತ್ತು ಬಹಳಷ್ಟು ಸ್ಥಳವನ್ನು ಆಕ್ರಮಿಸಿರುತ್ತದೆ. ಆ ಕುಟುಂಬದ ಹಲವಾರು ತಲಮಾರುಗಳು ಆ ವಾದ್ಯವನ್ನು ನೋಡಿರುತ್ತಾರೆ. ಆದರೆ ಯಾರಿಗೂ ಅದನ್ನು ನುಡಿಸಲು ಬರುತ್ತಿರಲಿಲ್ಲ . ಕೆಲವರು ಪ್ರಯತ್ನ ಪಟ್ಟರೂ ಅವರಿಗೂ ನುಡಿಸಲಾಗದೆ ಇದೊಂದು ವ್ಯರ್ಥವಾದದ್ದು, ಕರ್ಕಶವಾದ ವಾದ್ಯವೆಂದು ಹೇಳಿಬಿಡುತ್ತಾರೆ.
ಕೊನೆಗೆ ಆ ವಾದ್ಯವನ್ನು ಇಟ್ಟುಕೊಂಡರೆ ಸುಮ್ಮನೆ ಜಾಗವೂ ವ್ಯರ್ಥವಾಗುತ್ತದೆ ಎಂದು ಬಂಗಲೆಯಿಂದ ಹೊರಗೆ ಹಾಕುವ ತೀರ್ಮಾನ ತೆಗೆದುಕೊಳ್ಳುತ್ತಾರೆ. ಕುಟುಂಬದ ಎಲ್ಲರೂ ಯಾವುದೋ ಮದುವೆಗೆ ಹೋಗುವ ಮುನ್ನ ಆ ದೊಡ್ಡದಾದ ವಾದ್ಯವನ್ನು ಬಂಗಲೆಯಿಂದ ಹೊರತಂದು ರಸ್ತೆಯ ಪಕ್ಕದಲ್ಲಿ ಎಸೆದು ಹೋಗುತ್ತಾರೆ.
ರಸ್ತೆ ಬದಿ ಬಿದ್ದಿದ್ದ ಆ ವಾದ್ಯವನ್ನು ಒಬ್ಬ ಮುದುಕ ನೋಡುತ್ತಾನೆ. ಅಷ್ಟೇ ಅಲ್ಲದೇ ಆ ವಾದ್ಯವನ್ನು ನುಡಿಸುವುದೂ ಆತನಿಗೆ ಗೊತ್ತಿರುತ್ತದೆ. ಕೂಡಲೇ ಆ ಮುದುಕ ಆ ವಾದ್ಯವನ್ನು ನುಡಿಸಲು ಆರಂಭಿಸುತ್ತಾನೆ. ಆಗತಾನೆ ಮದುವೆಯಿಂದ ಹಿಂದಿರುಗಿದ ಆ ಕುಟುಂಬವು ಮುದುಕ ನುಡಿಸುತ್ತಿದ್ದ ನಾದವನ್ನು ಕೇಳಿ ಒಮ್ಮೆ ಹಿಂದಿರುಗಿ ನೋಡುತ್ತಾರೆ. ಅಕ್ಕ ಪಕ್ಕದ ಜನರೆಲ್ಲಾ ಆ ಸಂಗೀತ ವಾದ್ಯದಿಂದ ಹೊರಬರುತ್ತಿದ್ದ ನಾದವನ್ನು ಕೇಳಿ ಸುತ್ತುವರಿಯುತ್ತಾರೆ. ಆ ಮುದುಕ ಎಷ್ಟು ಸುಂದರವಾಗಿ ನುಡಿಸುತ್ತಿದ್ದನೆಂದರೆ ಅಲ್ಲಿ ನೆರೆದಿದ್ದ ಜನರೆಲ್ಲಾ ಮಂತ್ರಮುಗ್ದರಾಗಿ ಯಾವುದೋ ವಶೀಕರಣಕ್ಕೆ ಒಳಗಾದಂತೆ ಕಣ್ಣುಮುಚ್ಚಿ ಸಂತೋಷದಿಂದ ಆಲಿಸುತ್ತಿರುತ್ತಾರೆ. ಆ ವಾದ್ಯವನ್ನು ಎಸೆದಿದ್ದ ಕುಟುಂಬವು ಕೂಡಾ ಆ ನಾದವನ್ನು ಕೇಳಿ ಮೈಮರೆತವರಂತೆ ಆಲಿಸುತ್ತಿರುತ್ತಾರೆ.
ಸ್ವಲ್ಪ ಸಮಯದ ನಂತರ ಆ ಮುದುಕ ವಾದ್ಯವನ್ನು ನುಡಿಸುವುದನ್ನು ನಿಲ್ಲಿಸುತ್ತಾನೆ. ಸುತ್ತಲೂ ನೆರೆದಿದ್ದ ಜನರು ಯಾವುದೋ ಮಾಯೆಯಿಂದ ಹೊರಬಂದವರಂತೆ ಕಣ್ಣುತೆರೆದು ಆ ಮುದುಕನ ಕಲೆಗೆ ಮೆಚ್ಚಿ ಚಪ್ಪಾಳೆಯ ಸುರಿಮಳೆ ಗರೆಯುತ್ತಾರೆ. ಇಂತಹಾ ಅದ್ಬುತವಾದ ಸಂಗೀತ ವಾದ್ಯವನ್ನು ಎಸೆದ ಕುಟುಂಬವು ಇದನ್ನು ಗಮನಿಸುತ್ತಾ ಆ ಮುದುಕನ ಬಳಿಗೆ ಬಂದು " ಹೇ ಮುದುಕ ಈ ಅದ್ಬುತವಾದ ಸಂಗೀತ ವಾದ್ಯ ನಮ್ಮದು. ಈ ವಾದ್ಯದಿಂದ ಇಷ್ಟು ಮೋಹಕವಾದ ನಾದವನ್ನು ನುಡಿಸಬಹುದೆಂದು ನಮಗೆ ಗೊತ್ತಿರಲಿಲ್ಲ. ಹಾಗಾಗಿ ಹೊರಗೆ ಎಸೆದು ಬಿಟ್ಟಿದ್ದೆವು. ಇದು ನಮಗೆ ಸೇರಿದ್ದು ವಾಪಸ್ಸು ಕೊಡು" ಎಂದು ಕೇಳುತ್ತಾರೆ.
ಆಗ ಮುದುಕ " ಕ್ಷಮಿಸಿ. ಇದು ನಿಮಗೆ ಸೇರಿದ್ದಲ್ಲ. ಏಕೆಂದರೆ ಈ ಸಂಗೀತ ವಾದ್ಯವನ್ನು ಯಾರು ನುಡಿಸಬಲ್ಲರೋ ಅವರೇ ಇದರ ನಿಜವಾದ ವಾರಸುದಾರ. ಬಹುಶಃ ಈ ವಾದ್ಯ ಶತಮಾನಗಳಿಂದಲೂ ನಿಮ್ಮ ಬಂಗಲೆಯಲ್ಲೇ ಇದ್ದಿರಬಹುದು. ಆದರೆ ಈ ವಾದ್ಯವನ್ನು ಹೊಂದುವ ಅರ್ಹತೆ ನಿಮಗಿಲ್ಲ. ಇದನ್ನು ಇಷ್ಟು ವರ್ಷಗಳೂ ವ್ಯರ್ಥವೆಂದು ಮೂಲೆಗೆ ಎಸೆದಿದ್ದವರು ನೀವು. ಹಾಗಾಗಿ ನಾನೇ ಇದರ ವಾರಸುದಾರ" ಎಂದು ಹೇಳುತ್ತಾನೆ. ಅಲ್ಲಿ ನೆರೆದಿದ್ದ ಜನರೆಲ್ಲರೂ ಕೂಡಾ ಆ ಮುದುಕನ ಪರವಾಗಿ ನಿಂತು " ಹೌದು. ಈ ಮುದುಕ ಹೇಳಿದ್ದು ಸರಿಯಾಗಿದೆ. ಈ ಮುದುಕನೇ ಈ ವಾದ್ಯದ ವಾರಸುದಾರ " ಎಂದು ಹೇಳುತ್ತಾರೆ. ಏಕೆಂದರೆ ನಿಜವಾದ ವಾರಸುದಾರಿಕೆ ಎಂದರೆ ಒಂದು ಜವಾಬ್ದಾರಿಯಾಗಿರುತ್ತದೆ ಮತ್ತು ನುಡಿಸುವ ಸಾಮರ್ಥ್ಯವನ್ನು ಹೊಂದಿರಬೇಕಾಗುತ್ತದೆ. ಹಾಗಾಗಿ ಯಾರು ನುಡಿಸಬಲ್ಲರೋ ಅವರೇ ಆ ಸಂಗೀತವಾದ್ಯದ ಅಸಲಿ ವಾರಸುದಾರರಾಗಿರುತ್ತಾರೆ.
ಬಂಧುಗಳೇ ಆ ಮೋಹಕವಾದ ಸಂಗೀತವಾದ್ಯ ಮತ್ಯವುದೂ ಅಲ್ಲ ಅದೇ " ಫುಲೆ- ಅಂಬೇಡ್ಕರ್ ವಾದ". ಬಾಬಾಸಾಹೇಬರು ಬದುಕಿರುವವರೆಗೂ ಸಮಾಜ ಪರಿವರ್ತನೆಯ ನಾದವನ್ನು ಸಮರ್ಥವಾಗಿ ನುಡಿಸುತ್ತಾ ಬಹುಜನ ಸಮಾಜವನ್ನು ಆಳುವವರ್ಗವಾಗಿ ಮಾಡುವ ನಿಟ್ಟಿನಲ್ಲಿ ಸಾಗಿದರು. ಆದರೆ ಬಾಬಾಸಾಹೇಬರ ನಂತರ " ಫುಲೆ- ಅಂಬೇಡ್ಕರ್ ವಾದ" ವನ್ನು ಕೊಂಡುಯ್ಯುವ ಸಾಮರ್ಥ್ಯ ಸ್ವತಃ ಅವರ ಜೊತೆಗಿದ್ದ ಅನುಯಾಯಿಗಳ ಕೈಯಲ್ಲಿಯೇ ಆಗಲಿಲ್ಲ. ಕೆಲವರಂತೂ ಬಾಬಾಸಾಹೇಬ ಅಂಬೇಡ್ಕರರ ನಾದವನ್ನು ನುಡಿಸಲಾಗದೆ ಕಮ್ಯುನಿಸಂ, ನಕ್ಸಲಿಸಂ, ಗಾಂಧಿಯಿಸಂ ಹೀಗೆ ಬೇರೆ ಬೇರೆ ವಾದ್ಯಗಳನ್ನು ತಂದರು. ಆದರೆ ಯಾವ ಪರಿಹಾರವೂ ಸಿಗಲಿಲ್ಲ. ಕೊನೆಗೆ ಬಾಬಾಸಾಹೇಬರ ಅನುಯಾಯಿಗಳೆಂದು ಹೇಳಿಕೊಳ್ಳುವವರೇ " ಬಾಬಾಸಾಹೇಬ್ ಅಂಬೇಡ್ಕರ್ ಹೇಳುವುದು ತುಂಬಾ ಚೆನ್ನಾಗಿದೆ. ಆದರೆ ಮಾಡುವುದು ಅಸಾಧ್ಯ. ಬಾಬಾಸಾಹೇಬರ ಹೆಸರು ಹೇಳಿದರೆ ಗ್ರಾಮ ಪಂಚಾಯತಿ ಸದಸ್ಯ ಕೂಡಾ ಆಗುವುದಿಲ್ಲ" ಎಂದು ಸಂಗೀತ ವಾದ್ಯವನ್ನು ರಸ್ತೆಗೆ ಎಸೆದಂತೆ " ಫುಲೆ - ಅಂಬೇಡ್ಕರ್ ವಾದವನ್ನು ಮೂಲೆಗುಂಪು ಮಾಡುತ್ತಾರೆ".
ಇಂತಹಾ ಸಮಯದಲ್ಲೆ " ಫುಲೆ - ಅಂಬೇಡ್ಕರ್ ವಾದವನ್ನು" ನುಡಿಸುವ ಮುನ್ನಡೆಸುವ ಸಾಮರ್ಥ್ಯವನ್ನು ಹೊಂದಿದ್ದ ದಾದಾಸಾಹೇಬ್ ಕಾನ್ಶಿರಾಂರವರು ಕೈಗೆತ್ತಿಕೊಳ್ಳುತ್ತಾರೆ. ಆ ಮುದುಕ ಹೇಗೆ ಮಂತ್ರಮುಗ್ದವಾಗವಂತೆ ಸಂಗೀತ ವಾದ್ಯವನ್ನು ನುಡಿಸಿದನೋ ಹಾಗೇ ದಾದಾಸಾಹೇಬ್ ಕಾನ್ಶಿರಾಮರು " ಫುಲೆ- ಅಂಬೇಡ್ಕರ್ ವಾದವನ್ನು " ಮುನ್ನಡೆಸುತ್ತಾರೆ. ಬಾಬಾಸಾಹೇಬ್ ಅಂಬೇಡ್ಕರ್ ಹೆಸರು ಹೇಳಿದರೆ ಗ್ರಾಮ ಪಂಚಾಯಿತಿಯನ್ನೂ ಗೆಲ್ಲಲು ಸಾಧ್ಯವಿಲ್ಲ ಎಂದು ಫುಲೆ- ಅಂಬೇಡ್ಕರ್ ವಾದವನ್ನು ಎಸೆದ್ದ ಜನರೇ ಮೂಖವಿಸ್ಮಿತರಾಗುವಂತೆ " ಅಕ್ಕ ಮಾಯಾವತಿ ಎಂಬ ಧೀಮಂತ ನಾಯಕಿಯನ್ನು ಉತ್ತರ ಪ್ರದೇಶ ರಾಜ್ಯಕ್ಕೆ ನಾಲ್ಕು ಬಾರಿ ಮುಖ್ಯಮಂತ್ರಿಯನ್ನಾಗಿ ಮಾಡಿದರು". ಈಗ ದೇಶದ ಮೂಲೆಯಲ್ಲೂ " ಫುಲೆ - ಅಂಬೇಡ್ಕರ್ ವಾದದ " ನಾದ ಕೇಳಿಸುವಷ್ಟು ಸಮರ್ಥವಾಗಿ ದಾದಾಸಾಹೇಬರು ನುಡಿಸುತ್ತಿದ್ದಾರೆ.
ಬಾಬಾಸಾಹೇಬರನ್ನು ಅವಮಾನಿಸಿದ ಕಾಂಗ್ರೆಸ್, ಮುಗಿಸಲು ಯತ್ನಿಸಿದ ಬಿಜೆಪಿ, ನಿರ್ಲಕ್ಷಿಸಿದ ಕಮ್ಯುನಿಸ್ಟರು ಇಂದು ಬಾಬಾಸಾಹೇಬರು ನಮಗೆ ಸೇರಿದ್ದು ನಮಗೆ ಸೇರಿದ್ದು ಎಂದು ಪೈಪೋಟಿಗೆ ಬಿದ್ದಿದ್ದಾರೆ. ಆದರೆ ನೆನಪಿಡಿ " ಕೈಕಮಲ ಕಮ್ಯುನಿಸ್ಟರು ಅಂದು ಬೀದಿಗೆ ಹಾಕಿದ ಫುಲೆ- ಅಂಬೇಡ್ಕರ್ ವಾದವನ್ನು ಇಂದು ಬಹುಜನ ಚಳುವಳಿಯು ಜೀವಾಳವಾಗಿ ಅದ್ಬುತವಾಗಿ ನುಡಿಸುತ್ತಿದೆ". ಬಾಬಾಸಾಹೇಬರು ಯಾರೊಬ್ಬರ ಸ್ವತ್ತು ಅಲ್ಲ ಎಂದು ಹೇಳುತ್ತಾರೆ. ಇದನ್ನು ನಾವು ಕೂಡಾ ಒಪ್ಪಿಕೊಳ್ಳುತ್ತೇವೆ. ಆದರೆ ಕೈ ಕಮಲ ಕಮ್ಯುನಿಸ್ಟರ ಬಳಿ ಭೀಮವಾದ ಇರುವುದೆಂದರೆ ಶತಮಾನಗಳು ಬಳಸದೆ ಧೂಳು ತುಂಬಿದ ಸಂಗೀತ ವಾದ್ಯವಿದ್ದಂತೆ. ನುಡಿಸುವ ಸಾಮರ್ಥ್ಯ ಇರುವ ಬಹುಜನ ಚಳುವಳಿ ಮಾತ್ರವೇ ಫುಲೆ- ಬಾಬಾಸಾಹೇಬರ ಚಳುವಳಿಯನ್ನು ಮುನ್ನಡೆಸಿ ಭಾರತವನ್ನು ಬುದ್ದನ ಪ್ರಬುದ್ದಭಾರತವಾಗಿಸಬಲ್ಲದು.
ಜೈ ಭೀಮ್
-ಜನಾ ನಾಗಪ್ಪ.
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು