ಹರಿದ ಚಡ್ಡಿಯ ಕತೆ
ಸಾಹಿತ್ಯ ಬಂಧುಗಳೆ ಬಾಲ್ಯದ ನೆನಪುಗಳೇ ಹೀಗೆ ಸದಾ ಕಾಡುತ್ತಿರುತ್ತವೆ. ಕೂನ(ಗೂ)ನಕಲ್ ಬೆಟ್ದದಲ್ಲಿನ ನನ್ನನುಭವಗಳು ಅನನ್ಯವಾದವು. ಆ ಸಂಬಂಧದ ಕೆಲವು ಸಾಲುಗಳು:
ಹರಿದ ಚಡ್ಡಿಯ ಕತೆ
ತುರುಗಳನು ಮೇಯಿಸಲು ಮೆರೆದು ಹೋದಾಗ
ಈಚು ಹುಣಸೇ ಕಾಯಿಯ ಅರೆಮೇಲೆ ಅರೆದು
ಬೆರಳ ಕೊಕ್ಕೆಯ ಮಾಡಿ ನೆಕ್ಕಿ ತಿಂದಾಯಿತ್ತು
ಕಲ್ಲಿಗಂಟಿಕೊಂಡದ್ದ ನೆಕ್ಕಲು ನಾಲಿಗೆಯನಿಕ್ಕೆ
ಉರಿಬಂದ ನಾಲಗೆಗೆ ತುರಿಗಾಯ ತಾನಾಗೆ
ಮರೆಯಲಹುದೇ ಅಂದಿನ ಮರುಳುತನಗಳ
ಅರೆಬಂಡೆಯ ಇಳಿಜಾರಲಿ ಅಂಡೂರಿ ಜಾರುತಿರೆ
ತುರಿಗಲ್ಲು ಕಚಗುಳಿಯಿಟ್ಟು ತುಸು ತುಸುವೆ ಮಸೆದು
ದಾರದೆಳೆಗಳು ಒಂದೊಂದೆ ಶಿಥಿಲಾಗಿ ಇಣುಕಿಣುಕಿ
ಸಾರಿ ನುಡಿಯುತಲಿತ್ತು ಒಳಗೆ ಅವಿತಿಹ ಬರಿಪುಷ್ಠ
ಹೊರಗಾಣಲು ತವಕಿಸುತ ತಾ ಕಲ್ಲ ಬಿಸಿ ತಾಕಿ
ಪುಳಕ ಮೂಡಿಸಿರೆ ಇನ್ನಲ್ಲಿ ಹೇಳು ಗೆಳೆಯ ಸಗ್ಗ
ತಿರೆಯ ಸಿರಿಯೆಲ್ಲ ತನ್ನದೇ ಸೊತ್ತೆಂದು ಸೊಕ್ಕಿ ತಾ
ನಡೆದನದೋ ಗೂನಕಲ್ ಬೆಟ್ಟದ ವಾಯುವ್ಯದ
ಸೀಗೆ ಒಡ್ಡಿನೆಡೆ ಓಡೋಡಿ ತರೆದು ತುಂಬಿಹನು
ಹೆಗಲ ಮೇಲಿನ ವಸ್ತ್ರದ ಮೂಲೆ ತುದಿಯ ಬಿಗಿದು
ಸೀಗೆ ಕುಡಿ ಗಂಟ ತಾ ಮನೆಯೊಳು ಅವ್ವನಿಗೆ ನೀಡಿ
ಅವರೆ ಬೇಳೆ ಜೊತೆ ಬೇಯಿಸಿ ಕುಕ್ಕುಟದ ಮೊಟ್ಟೆಗಳ
ಬೆರೆಸಿ ಒಗ್ಗರಣೆ ನೀಡಿರೆ ವ್ಯಾಪಿಸಿತು ಊರ ಕೇರಿಗೆ
ಗಮಲು ಉಪ್ಪುಸಾರು ಗೊಡ್ಡುಕಾರಗಳು ಮಿಳಿತಮಾಗೆ
ನಾಲಗೆಯು ನಲಿನಲಿದಿತ್ತು ಮೂಗು ಮುಸಿ ನಗುತಿತ್ತು
ಮುಗಿಯಿಲಿಲ್ಲವು ಪ್ರವರ ವಾಚಕ ಮಹಾಶಯ
ಗುಡ್ಡ ಇಳಿವಾ ದಾರಿಯ ಹೆಬ್ಬಂಡೆಗಳಿಂದುರುಳಿಸಲು
ಮುರಿದ ಮರಮುಟ್ಟುಗಳ ಹೊರೆಕಟ್ಟಿ ಕೆಳಗೆಸೆದು
ಪುಟ್ಟ ಕೈಯೊಳು ಚಪ್ಪಾಳೆ ತಟ್ಟಿ ಕುಣಿದ ಆಟದಾ
ಮೋಜು ಮೇಜವಾನಿಗಳ ಮೇನೆಯಲಿ ನಲಿದು
ಮೇರೆ ಮೀರಿ ಕುಣಿದು ಕುಪ್ಪಳಿಸಿದ ಆನಂದವಾ!
ಕಾಲ ನಿಲ್ಲದು ದಿನಕಳೆಯೆ ಬಾಲನ ತುಂಟಾಟಗಳು
ಕರಕರಗಿ ಕಿಶೋರತನದ ಕಿರು ಜವಾಬ್ದಾರಿ ಆವರಿಸಿ
ಪಡಸಾಲೆಯೊಳಪ್ಪ ಪಠಿಸುವ ಭಾರತ ರಾಮಾಯಣ
ಕತೆಗಳ ವಿಷಯಾಸಕ್ತಿ ಓದಿನ ಕಿರುಝರಿ ಜಿನುಗಿಸಿತ್ತು
ಜಾನುವಾರುಗಳ ಜೊತೆಗೆ ಹೊತ್ತು ತರುವನು ನಿತ್ಯ
ಮಸ್ತಕಕೆ ಪುಸ್ತಕದ ಮತ್ತನೇರಿಸಿಕೊಂಡು ಪ್ರೌಢನಾದ!!
- ಡಾ.ಎಂ. ಬೈರೇಗೌಡ
Recent news in literature »
ರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪಠ್ಯಪುಸ್ತಕ ಸಮಿತಿಗೆ ಆಯ್ಕೆ
ರಾಜ್ಯ ಪಠ್ಯಪುಸ್ತಕ ಸಮಿತಿಗೆ ಮಾಗಡಿ ತಾಲೂಕಿನ ತಿಪ್ಪಸಂದ್ರ ಹೋಬಳಿ ದೊಡ್ಡಸೋಮನಹಳ್ಳಿ ಲೇಖಕರಾದ ಡಾ. ಡಿ.ಸಿರಾಮಚಂದ್ರ ಬರೆದಿರುವ ಸಂಪ್ರೀತಿ ರಾಮಾಯಣ ಪುಸ್ತಕ ಆಯ್ಕೆಯಾಗಿದೆ.
ಡಾ ಡಿ ಸಿ ರಾಮಚಂದ್ರ ರವರ ಸಂಪ್ರೀತಿ ರಾಮಾಯಣ ಪುಸ್ತಕವು ಶ್ರೀರಾಮನ್ನು ನೆನಪಿಸುತ್ತದೆ. ಪ್ರದೀಪ್ ಕುಮಾರ್ ಹೆಬ್ರಿ
\'ಸಂಪ್ರೀತಿ ರಾಮಾಯಣ\' ಎಂಬ ಕೃತಿಯನ್ನು ಡಾ/ಡಿ.ಸಿ. ರಾಮಚಂದ್ರ ಅವರು ಬಹಳ ಶ್ರದ್ಧೆಯಿಂದ ರಚಿಸಿದ್ದು, 13 ಅಧ್ಯಾಯಗಳಲ್ಲಿ ಆಕರ್ಷಕ ಚಂದದ ಚಿತ್ರಗಳಿಂದ ಕೂಡಿ ಸುಂದರವಾಗಿ ಮುದ್ರಣಗೊಂಡು ಓದುಗರ ಮನ ಸೆಳೆ
ಗೌಡಗೆರೆ ಕ್ಷೇತ್ರದಲ್ಲಿ ಅದ್ದೂರಿ ಲಕ್ಷ ದೀಪೋತ್ಸವ. \'ಜಗನ್ಮಾತೆಯ ವಿಶ್ವರೂಪ ದರ್ಶನ\' ಕೃತಿ ಲೋಕಾರ್ಪಣೆ
ಚನ್ನಪಟ್ಟಣ: ತಾಲೂಕಿನ ಗೌಡಗೆರೆ ಗ್ರಾಮದ ಶ್ರೀ ಚಾಮುಂಡೇಶ್ವರಿ ಬಸವಪ್ಪ ಪುಣ್ಯಕ್ಷೇತ್ರದಲ್ಲಿ ಶನಿವಾರ ಅದ್ದೂರಿ ಲಕ್ಷ ದೀಪೋತ್ಸವ ಕಾರ್ಯಕ್ರಮ ಜರು
ಸೂಫಿ ಗಾಯಕ ಜನಾಬ್ ಮೊಹಮ್ಮದ್ ಗೆ ಹೆಚ್ ಎಲ್ ನಾಗೇಗೌಡ ರಾಷ್ಟ್ರೀಯ ಪ್ರಶಸ್ತಿ ಪ್ರದಾನ.
ಬೆಂಗಳೂರು.ನ.೨೯: ರಾಜ್ಯದ ರಾಜಧಾನಿ ಬೆಂಗಳೂರಿನಲ್ಲಿ ಕರ್ನಾಟಕ ಜಾನಪದ ಪರಿಷತ್ತು ವತಿಯಿಂದ ಬೆಂಗಳೂರಿನ ರವೀಂದ್ರ ಕಲಾ ಕ್ಷೇತ್ರದಲ್ಲಿ ಪರಿಷತ್ತಿನ ಸಂಸ್ಥಾಪಕ, ಜಾನಪದ ಪರಿಷತ್ತಿನ ರೂವಾರಿ ನಾಡೋಜ ಎಚ್.ಎ
ಪರಿಷತ್ತಿನ ಘನತೆಗೆ ತಕ್ಕುದಾದ ವ್ಯಕ್ತಿ ಪಾರ್ವತೀಶ್ ಬಿಳಿದಾಳೆ
ರಾಮನಗರ.ನ.೧೮: ಈ ಬಾರಿಯ ರಾಮನಗರ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಘನತೆ ಹೆಚ್ಚಾಗಬೇಕಾದರೆ ಕನ್ನಡದ ಕಟ್ಟಾಳು, ಲೇಖಕ ಪಾರ್ವತೀಶ್ ಬಿಳಿದಾಳೆ
ಕಸಾಪ ಜಿಲ್ಲಾಧ್ಯಕ್ಷ ಚುನಾವಣೆ: ಬಿ.ಟಿ.ನಾಗೇಶ್ ಬೆಂಬಲಿಸಲು ಸಾಹಿತ್ಯಾಸಕ್ತರ ಮನವಿ
ಚನ್ನಪಟ್ಟಣ: ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಸಹಸ್ಪರ್ಧಿಗಳ ಪೈಕಿ ಬಿ ಟಿ ನಾಗೇಶ್ ಮೊದಲ ಸ್ಥಾನದಲ್ಲಿ ನಿಲ್ಲುತ್ತಾರೆ. ಅವರಿಗೆ ಜಿಲ್ಲೆಯ ಕಸ
ಎಂ ಎಲ್ ಮಾದಯ್ಯನವರ ಜೀವನ ನಮಗೆಲ್ಲರಿಗೂ ಆದರ್ಶಣೀಯ. ಸಚಿವ ಡಾ ಸಿ ಎನ್ ಅಶ್ವಥ್ ನಾರಾಯಣ
ಚನ್ನಪಟ್ಟಣ.ನ.06/21: ನಗರದ ಶತಮಾನೋತ್ಸವ ಭವನದಲ್ಲಿ ನಿವೃತ್ತ ಮುಖ್ಯ ಇಂಜಿಯರ್ ಎಂ.ಎಲ್ ಮಾದಯ್ಯನವರ ‘ಜೀವನಸೌಧ-ಹಳ್ಳಿಹೈದನ ತಾಂತ್ರಿಕಗಾಥೆ’ ಎಂಬ
ಶನಿವಾರ ಎಂ ಎಲ್ ಮಾದಯ್ಯನವರ ಜೀವನ ಸೌಧ ಕೃತಿ ಲೋಕಾರ್ಪಣೆ
ಚನ್ನಪಟ್ಟಣ.ನ.೦೨: ಇದೇ ತಿಂಗಳು 6 ನೇ ತಾರೀಖಿನ ಶನಿವಾರ ದಂದು ಬೆಳಿಗ್ಗೆ 10.30 ಕ್ಕೆ ನಗರದ ಬಾಲಕರ ಸರ್ಕಾರಿ ಕಿರಿಯ ಕಾಲೇಜಿನಲ್ಲಿ ಹೊರಾಂಗಣದಲ್ಲಿರುವ ಶತಮಾನೋತ್ಸವ ಭವನದಲ್ಲಿ ‘ತಮ್ಮ ಜೀವನ ಸೌಧ’ ಹಳ್
ಬುದ್ದನ ಸಕಾರತ್ಮಕ ಚಿಂತನೆಗಳು ಮನೋಬಲವನ್ನು ಹೆಚ್ಚಿಸುವುದರ ಮೂಲಕ :ಆತ್ಮಹತ್ಯೆ ಆಲೋಚನೆಯಿಂದ ದೂರವಿಡುತ್ತವೆ.
ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಮಾನಸಿಕ ಆರೋಗ್ಯ ವಿಭಾಗ, ತಾಲ್ಲೂಕು ಆರೋಗ್ಯ ಅಧಿಕಾರಿಗಳ ಕಚೇರಿ ಹಾಗೂ ರೋಟರಿ ಸಿಲ್ಕ್ ಸಿಟಿ ಮತ್ತು ರಾಮನಗ
ಅಪ್ಪನಭುಜ ಎಲ್ಲಾ ಸಿಂಹಾಸನಗಳನ್ನು ಮೀರಿಸಿದ್ದು. ಮಾಯಣ್ಣ
ಅಪ್ಪನ ಭುಜವು ಎಲ್ಲಾ ಮಕ್ಕಳಿಗೂ ಅತಿ ಎತ್ತರದ ಸಿಂಹಾಸನ. ಅದನ್ನೇರದ ಮಕ್ಕಳಿಲ್ಲ. ಯಾವುದೇ ಜಾತ್ರೆ, ಸರ್ಕಸ್, ದೇವರನ್ನು ನೋಡಬೇಕೆಂದರೆ ನಮಗೆ ಅಪ್ಪನ ಭುಜವೇ ಸಿಂಹಾಸನವಾಗಿತ್ತು ಎಂದು ಕನ್ನಡ ಸಾಹಿತ್ಯ ಪ
ಪ್ರತಿಕ್ರಿಯೆಗಳು