Tel: 7676775624 | Mail: info@yellowandred.in

Language: EN KAN

    Follow us :


ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

Posted date: 02 Mar, 2020

Powered by:     Yellow and Red

ಗಾರ್ಮೇಂಟ್ಸ್ ಬಸ್ಸು ಢಿಕ್ಕಿ ; ಇಬ್ಬರು ಯುವಕರ ಸಾವು

ಚನ್ನಪಟ್ಟಣ.ಮಾ: ರಸ್ತೆಬದಿಯಲ್ಲಿ 

ಚಲಿಸುತ್ತಿದ್ದ ದ್ವಿಚಕ್ರವಾಹನಕ್ಕೆ 

ಅತಿವೇಗವಾಗಿ ಬಂದ ಗಾರ್ಮೇಂಟ್ಸ್ ಬಸ್ಸು ಢಿಕ್ಕಿ 

ಹೊಡೆದ ಪರಿಣಾಮ ಇಬ್ಬರು ಯುವಕರು 

ಸ್ಥಳದಲ್ಲೇ ಸಾವನಪ್ಪಿರುವ ದುರ್ಘಟನೆ, 

ಸಂಚಾರಿ ಪೊಲೀಸ್ ಠಾಣೆ ವ್ಯಾಪ್ತಿಯ ನಗರದ 

ಸಿ.ಪಿ.ಟಿ.ಗಾರ್ಡನ್ ಮುಂಭಾಗ ಬೆಂಗಳೂರು 

ಮೈಸೂರು ಹೆದ್ದಾರಿಯಲ್ಲಿ ಸೋಮವಾರ 

ನಸುಕಿನ ಸುಮಾರು ೦೪:೦೦ ರ ಸಮಯದಲ್ಲಿ 

ನಡೆದಿದೆ.


ರಸ್ತೆಯ ಭೀಕರ ಅಪಘಾತದಲ್ಲಿ 

ಸಾವನಪ್ಪಿರುವ ದುರ್ದೈವಿ ಯುವಕರು 

ಸಚಿನ್(೨೪) ಹಾಗೂ ಪ್ರತಾಪ್(೨೨) ಎಂದು 

ಗುರುತಿಸಲಾಗಿದ್ದು, ಗ್ರಾಮಾಂತರ 

ಪೊಲೀಸ್ ಠಾಣೆ ವ್ಯಾಪ್ತಿಯ ತಾಲ್ಲೂಕಿನ 

ಕೂಡ್ಲೂರು ಗ್ರಾಮದ ದಾಸಪ್ಪ 

ಎಂಬುವರ ಮಗ ಸಚಿನ್ ಹಾಗೂ ಅದೇ 

ಗ್ರಾಮದ ನಾಗರಾಜು ಎಂಬುವರ ಮಗ 

ಪ್ರತಾಪ್ ಇಬ್ಬರು ತಮ್ಮ ರಾಯಲ್ ಎನ್ಫೀಲ್ಡ್ (ಬುಲೆಟ್) ದ್ವಿಚಕ್ರವಾಹನದಲ್ಲಿ ಕೆಲಸಕ್ಕೆ 

ಹೋಗುವಾಗ ಈ ಘಟನೆ ನಡೆದಿದೆ.


ರಸ್ತೆಬದಿಯಲ್ಲಿ ಚಲಿಸುತ್ತಿದ್ದ 

ದ್ವಿಚಕ್ರವಾಹನಕ್ಕೆ ಚಾಲಕನ 

ಅಜಾಗರೂಕತೆಯಿಂದ ಅತಿವೇಗವಾಗಿ ಬಂದ 

ಮದರ್‍ಸನ್ ಗಾರ್ಮೇಂಟ್ಸ್‍ನ ಮೇಘಾ ಬಸ್ಸು 

ಹಿಂಬದಿಯಿಂದ ಡಿಕ್ಕಿ ಹೊಡೆದಿದ್ದು, ಈ 

ಸಂದರ್ಭದಲ್ಲಿ ತಲೆಗೆ ಭಾರಿ ಪ್ರಮಾಣದ 

ಪೆಟ್ಟಾಗಿ ತೀವ್ರ ರಕ್ತಸ್ರಾವವಾದ ಇಬ್ಬರೂ 

ಸ್ಥಳದಲ್ಲೇ ಸಾವನಪ್ಪಿದ್ದಾರೆ.

ಅಪಘಾತ ಸಂಭವಿಸಿದ ಸಂದರ್ಭದಲ್ಲಿ ಬಸ್ಸಿನ 

ಮುಂಬದಿಗೆ ಸಿಕ್ಕಿಕೊಂಡ 

ದ್ವಿಚಕ್ರವಾಹನವನ್ನು ಸುಮಾರು 100 

ಮೀಟರ್ ದೂರದವರೆಗೆ ಎಳೆದುಕೊಂಡು 

ಹೋಗಿದ್ದು, ಡಾಂಬಾರು ರಸ್ತೆಯಲ್ಲಿ ವೇಗವಾಗಿ 

ಎಳೆದು ಹೋಗಿದ್ದರಿಂದ ತಕ್ಷಣ 

ಬೆಂಕಿಹೊತ್ತಿಕೊಂಡು 

ಉರಿಯಲಾರಂಭಿಸಿದ್ದು, ತಕ್ಷಣ 

ಸ್ಥಳಿಯರು ಬೆಂಕಿಯನ್ನು ನಂದಿಸಿ 

ಮುಂದಾಗುವ ಅನಾಹುತವನ್ನು 

ತಪ್ಪಿಸಿದ್ದಾರೆನ್ನಲ್ಲಾಗಿದೆ.


ಅಲ್ಲದೆ ಬಸ್ ಲ್ಲಿ ಗಾರ್ಮೇಂಟ್ಸ್ ಗೆ 

ತೆರಳಲು ಕುಳಿತಿದ್ದ ಮಂಗಳವಾರ

ಪೇಟೆಯ ಮುತ್ತುರಾಜು ಎಂಬುವರ 

ಮಗಳಾದ ಜ್ಯೋತಿ ಎಂಬಾಕೆಗೂ 

ಗಂಭೀರಗಾಯಗಳಾಗಿದ್ದು, 

ಆಕೆಯನ್ನು ನಗರದ ಸಾರ್ವಜನಿಕ 

ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗಿದೆ.

ಬಸ್ಸು ಬೆಂಕಿ ಹೊತ್ತಿಕೊಳ್ಳುವ ರೀತಿಯಲ್ಲಿ ಈ 

ಘಟನೆ ನಡೆದಿದ್ದು, ಗಾರ್ಮೇಂಟ್ಸ್ ಬಸ್ಸ್ ಚಾಲಕ 

ನಸುಕಿನಲ್ಲಿಯೂ ಯಾವಮಟ್ಟದ 

ವೇಗದಲ್ಲಿದ್ದನು ಎಂದು ಅಂದಾಜಿಸಲಾಗಿದೆ.

ಮೃತರಾದ ಸಚಿನ್ ಎಂಬ ಯುವಕ ಬೆಂಗಳೂರು 

ನಗರದಲ್ಲಿ ಟ್ಯಾಕ್ಷಿ ಚಾಲಕನಾಗಿದ್ದು 

ಮತ್ತೊಬ್ಬ ಪ್ರತಾಪ್ ಬಿಡದಿಯ ಟಯೋಟಾ 

ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದರೆಂದು ತಿಳಿದುಬಂದಿದೆ.

 

ಇಬ್ಬರೂ ಪ್ರತಿ ದಿವಸ ಜೊತೆಯಲ್ಲಿಯೇ 

ಗ್ರಾಮದಿಂದ ನಗರಕ್ಕೆ 

ಬರುತ್ತಿದ್ದೆನ್ನಲ್ಲಾಗಿದ್ದು, ಎಂದಿನಂತೆ 

ನಸುಕಿನಲ್ಲಿ ಬಂದ ಇವರನ್ನು 

ಜವರಾಯನಾದ ಗಾರ್ಮೇಂಟ್ಸ್ ಬಸ್ಸು ಬಲಿ 

ತೆಗೆದುಕೊಂಡಿದೆ.

ಈ ಪ್ರಕರಣದ ಬಗ್ಗೆ ಸಂಚಾರಿ ಪೊಲೀಸ್ 

ಠಾಣೆಯಲ್ಲಿ ದೂರು ದಾಖಲಾಗಿದ್ದು,

ಮೃತದೇಹವನ್ನು ನಗರದ ಸಾರ್ವಜನಿಕ 

ಆಸ್ಪತ್ರೆಯಲ್ಲಿ ಮರಣೋತ್ತರ ಪರೀಕ್ಷೆ 

ನಡೆಸಿ ವಾರಸುದಾರರಿಗೆ ಒಪ್ಪಿಸಲಾಗಿದ್ದು, 

ಅಪಘಾತ ಮಾಡಿದ ವಾಹನವನ್ನು 

ವಶಪಡಿಸಿಕೊಂಡಿರುವ 

ಪೊಲೀಸರು,ಅಪಘಾತ ಮಾಡಿದ 

ಚಾಲಕನನ್ನು ಬಂಧಿಸಿದ್ದಾರೆ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in obituary »

ಹಸು ಮೈ ತೊಳೆಯಲು ಹೋಗಿ ವ್ಯಕ್ತಿ ಸಾವು

ಚನ್ನಪಟ್ಟಣ: ಸುಗ್ಗಿ ಹಬ್ಬಕ್ಕೆ ಹಸು ಮೈ ತೊಳೆಯಲು ಹೋಗಿ ಕಾಲುಜಾರಿ ಕೆರೆಗೆ ಬಿದ್ದು ವ್ಯಕ್ತಿಯೊಬ್ಬರು ಮೃತಪಟ್ಟಿರುವ ಘಟನೆ ತಾಲೂಕಿನ ಕೋಮನಹಳ್ಳಿ

ಡಾ ರಾಜಕುಮಾರ್ ಗೆ ಪಿತೃವಿಯೋಗ
ಡಾ ರಾಜಕುಮಾರ್ ಗೆ ಪಿತೃವಿಯೋಗ

ಚನ್ನಪಟ್ಟಣ: ನಗರದ ಸಾರ್ವಜನಿಕ ಆಸ್ಪತ್ರೆಯ ಹಿರಿಯ ಹಾಗೂ ಮೂಳೆ ತಜ್ಞರಾದ ಡಾ ರಾಜಕುಮಾರ್ ರವರ ತಂದೆ ರೇಣುಕಪ್ಪ (೭೨) ನಿಧನರಾಗಿದ್ದು, ಸಾರ್ವಜನಿಕ ಆಸ್ಪತ್ರೆ

ಹಾವು ಕಚ್ಚಿ ಅರ್ಚಕಿ ಸಾವು
ಹಾವು ಕಚ್ಚಿ ಅರ್ಚಕಿ ಸಾವು

ಚನ್ನಪಟ್ಟಣ: ತಮ್ಮ ಜಮೀನಿನಲ್ಲಿ ಕೆಲಸ ಮಾಡುತ್ತಿದ್ದ ವೃದ್ಧೆಯೊಬ್ಬರು ಹಾವು ಕಚ್ಚಿ ಮೃತಪಟ್ಟಿರುವ ಘಟನೆ ತಾಲೂಕಿನ ನೇರಳೂರು ಗ್ರಾಮದಲ್ಲಿ ಸೋಮವಾರ ನಡೆದಿದೆ.

ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು
ಕೆಲಗೆರೆ ಗ್ರಾಮದಲ್ಲಿ ಹಾವು ಕಚ್ಚಿ ವಿದ್ಯಾರ್ಥಿನಿ ಸಾವು

ಚನ್ನಪಟ್ಟಣ: ಮೇ 13 22. ತಾಲ್ಲೂಕಿನ ಕೆಲಗೆರೆ ಗ್ರಾಮದ ವಾಟರ್ ಮನ್ ರಮೇಶ್ ರವರ ಪುತ್ರಿಗೆ ಹಾವು ಕಚ್ಚಿ ಸಾವನ್ನಪ್ಪಿರುವ ಘಟನೆ ಶುಕ್ರವಾರ ಸಂಜೆ

ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ
ಶಿಕ್ಷಣ ಸಹಾಯಕ ಎಲಿಯೂರು ಎಸ್ ಈರಯ್ಯ ನಿಧನ

ಚನ್ನಪಟ್ಟಣ: ಎಸ್ ಈರಯ್ಯ ಎಲಿಯೂರು (83) ಮೈಸೂರಿನಲ್ಲಿ ನಿನ್ನೆ ರಾತ್ರಿ‌ ನಿಧನರಾದರು.

ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ
ಮೃತ ರಾಮಚಂದ್ರ ರವರಿಗೆ ಸರ್ಕಾರಿ ಗೌರವಗಳೊಂದಿಗೆ ಅಂತಿಮ ನಮನ

ಚನ್ನಪಟ್ಟಣ: ತಾಲ್ಲೂಕಿನ ಹಿರಿಯ ಸ್ವಾತಂತ್ರ್ಯ ಹೋರಾಟಗಾರರಾದ ಕೆ. ರಾಮಚಂದ್ರ ರವರು ವಯೋಸಹಜ ಖಾಯಿಲೆಯಿಂದ ಮಂಗಳವಾರ ರಾತ್ರಿ ಚನ್ನಪಟ್ಟಣದ ಸ್ವಗೃಹ

ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:
ಮಾಜಿ ಶಾಸಕ ಚೌಡಯ್ಯ ಅವರ ನಿಧನಕ್ಕೆ ಡಿ.ಕೆ. ಶಿವಕುಮಾರ್ ಅವರ ಸಂತಾಪ:

ಬೆಂಗಳೂರು: ಮಂಡ್ಯದ ಮಾಜಿ ಶಾಸಕರು, ಹಿರಿಯ ಮುಖಂಡರಾದ ಚೌಡಯ್ಯ ಅವರ ನಿಧನಕ್ಕೆ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಅವರು ಸಂತಾಪ ಸೂಚಿಸಿದ್ದ

ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ
ಮಚ್ಚಿನ ವಿಚಾರದಲ್ಲಿ ಜಗಳ.ಕೊಲೆಯಲ್ಲಿ ಅಂತ್ಯ

ಹಲಗೂರು: ಸೌದೆ ಕತ್ತರಿಸಲು ತೆಗೆದುಕೊಂಡಿದ್ದ‌ ಮಚ್ಚನ್ನು ವಾಪಸ್ ಕೊಡದ ಕಾರಣ ಇಬ್ಬರ ನಡುವೆ ಜಗಳ ನಡೆದು ಓರ್ವನ ಕೊಲೆಯಲ್ಲಿ ಅಂತ್ಯವಾಗಿರುವ ಘಟನೆ

ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ
ಬೆಳ್ಳಂಬೆಳಗ್ಗೆ ಮಚ್ಚಿನಿಂದ ಕೊಚ್ಚಿ ಮಹಿಳೆ ಕೊಲೆ: 3 ತಾಸಿನಲ್ಲೇ ಸಿಕ್ಕಿಬಿದ್ದ ಹಿಂಬದಿ ಮನೆಯ ಆಗಂತುಕ

ಚನ್ನಪಟ್ಟಣ: ಶುಕ್ರವಾರ ಬೆಳ್ಳಂಬೆಳಗ್ಗೆ ಕೊಲೆಯ ವಿಷಯ ತಿಳಿದು ಇಡೀ ಗ್ರಾಮವೇ ಬೆಚ್ಚಿಬಿದ್ದ ಘಟನೆ ರಾಮನಗರ ಜಿಲ್ಲೆ ಚನ್ನಪಟ್ಟಣ ತಾಲೂಕಿನ ತೂಬಿನಕೆರೆಯಲ್ಲಿ ಸಂಭವಿಸಿದೆ.


ಪುನೀತ್ ಅಭಿಮಾನಿ ನೇಣುಬಿಗಿದು ಸಾವು
ಪುನೀತ್ ಅಭಿಮಾನಿ ನೇಣುಬಿಗಿದು ಸಾವು

ಚನ್ನಪಟ್ಟಣ ನಗರದ ಎಲೇಕೇರಿ ಬಡಾವಣೆಯ ದಿವಂಗತ ಕೃಷ್ಣಪ್ಪ ಎಂಬುವವರ ಪುತ್ರ ವೆಂಕಟೇಶ್ ಎಂಬಾತ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ರವರ ಅಪ್ಪಟ ಅಭಿಮಾನಿಯಾಗಿದ್ದು ಅವರ ಸಾವಿನಿಂದ ನೊಂದು ಆತ್ಮಹತ್ಯೆ ಮಾಡಿ

Top Stories »  


Top ↑