ನಲವತ್ತು ದಿನಗಳ ನಂತರ ತೆರೆದ ವೈನ್ ಶಾಪ್ ಗಳು. ಸರತಿ ಸಾಲಿನಲ್ಲಿ ನಿಂತು ಖರೀದಿಸಿದ ಮದ್ಯಪ್ರಿಯರು.
ಚನ್ನಪಟ್ಟಣ:ಮೇ/೦೪/ಸೋಮವಾರ. ಕಳೆದ ೪೦ ದಿನಗಳಿಂದ ಎಲ್ಲಾ ವೈನ್ಶಾಪ್ಗಳು ಮುಚ್ಚಿದ್ದು, ಎರಡನೇ ಹಂತದ ಲಾಕ್ಡೌನ್ ಮುಗಿದ ನಂತರ, ಮದ್ಯ ಮಾರಾಟಕ್ಕೆ ಅನುಮತಿ ನೀಡಿದ್ದರಿಂದ, ಇಂದಿನಿಂದ ನಗರವೂ ಸೇರಿದಂತೆ ಗ್ರಾಮೀಣ ಭಾಗದಲ್ಲಿರುವ ಸಿ.ಎಲ್-೦೨ ಮತ್ತು ಸಿ.ಎಲ್-೧೧ ( ಎಂಆರ್ಪಿ ವೈನ್ಶಾಪ್ಗಳು ಮತ್ತು ಎಂಎಸ್ಐಎಲ್ಗಳು) ತೆರೆದಿದ್ದು, ಮದ್ಯ ಪ್ರಿಯರು ಕಿಲೋಮೀಟರ್ಗಟ್ಟಲೆ ಸಾಲುಗಟ್ಟಿ ನಿಂತು, ಮದ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೩೦ ಮಂದಿ ಸೇರಿ ೧,೫೦೩ ಮಂದಿ ನಿಗಾದಲ್ಲಿ
ರಾಮನಗರ:ಮೇ/೦೩/೨೦/ಭಾನುವಾರ. ರಾಮನಗರ ಜಿಲ್ಲೆಯಲ್ಲಿ ಕೊರೊನಾ (ಕೊವಿಡ್-೧೯) ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಭಾನುವಾರದ (ದಿ. ೦೩) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧೫೦೩ (ಹೊಸದಾಗಿ ಇಂದಿನ ೩೦ ಸೇರಿ). ೨೮ ದ
ಜಿಲ್ಲೆಯಲ್ಲಿ ಕಲಂ ೧೪೪(೧) ರಡಿ ನಿಷೇದಾಜ್ಞೆ ಜಾರಿಗೊಳಿಸಿದ ಜಿಲ್ಲಾಧಿಕಾರಿ
ರಾಮನಗರ:ಮೇ/೦೩/೨೦/ಭಾನುವಾರ.ರಾಮನಗರ ಜಿಲ್ಲೆಯಾದ್ಯಂತ ಕೊರೋನಾ ವೈರಸ್ ಸೋಂಕು ಹರಡದಂತೆ ತಡೆಯುವ ಸಲುವಾಗಿ ಸಾರ್ವಜನಿಕರ ಆರೋಗ್ಯದ ಹಿತದೃಷ್ಠಿಯಿಂದ ಸಿ.ಆರ್.ಪಿ.ಸಿ. ೧೯೭೩ರ ಕಲಂ ೧೪೪(೧)ರ ಅಡಿಯಲ್ಲಿ ರಾಮನಗರ ಜಿಲ್ಲೆಯಾದ್ಯಂತ ಮೇ ೧೭ರ ಮಧ್ಯರಾತ್ರಿವರೆಗೆ ಕೇಂದ್ರ ಗೃಹ ಮಂತ್ರಾಲಯ ದಿಂದ ಹಾಗೂ ರಾಜ್ಯ ಸರ್ಕಾರದಿಂದ ಹೊರಡಿಸಿರುವ ಆದೇಶಗಳನ್ವಯ ನಿಷೇದಾಜ್ಞೆಯನ್ನು ಜಾರಿಗೊಳಿಸಿ ಜಿಲ್ಲಾಧಿಕಾರಿ ಎಂ.ಎಸ್. ಅರ
ಸಾರ್ವಜನಿಕ ಪ್ರದೇಶಗಳಲ್ಲಿ ಮಾಸ್ಕ್ ಧರಿಸದಿದ್ದರೆ, ಉಗುಳಿದರೆ ದಂಡ ಜಿಲ್ಲಾಧಿಕಾರಿ
ರಾಮನಗರ:ಮೇ/೦೩/೨೦/ಭಾನುವಾರ. ಜಿಲ್ಲೆಯ ಎಲ್ಲಾ ನಗರ ಸ್ಥಳೀಯ ಸಂಸ್ಥೆಗಳ ವ್ಯಾಪ್ತಿಯಲ್ಲಿ ಕರ್ನಾಟಕ ಸರ್ಕಾರದ ಆದೇಶದಂತೆ ಸಾರ್ವಜನಿಕ ಸ್ಥಳದಲ್ಲಿ ಮುಖ ಕವಚ (ಮಾಸ್ಕ್) ಧರಿಸದಿದ್ದಲ್ಲಿ ಅಥವಾ ಉಗುಳಿದಲ್ಲಿ ಮತ್ತು ಸಾಮಾಜಿಕ ಅಂತರ ಕಾಪಾಡದಿದ್ದಲ್ಲಿ ಮೇ ೦೪ ರಿಂದ ಪೊಲೀಸ್ ಇಲಾಖೆಯ ಸಹಯೋಗದೊಂದಿಗೆ ದಂಡ ವಿಧಿಸಲಾಗುವುದು ಎಂದು ಜಿಲ್ಲಾಧಿಕಾರಿ ಎಂಎಸ್ ಅರ್ಚನಾ ಅವರು ತಿಳಿಸಿದ್ದಾರೆ.
ಹೊರ ಜಿಲ್ಲೆ ಮತ್ತು ಹೊರ ರಾಜ್ಯದವರು ತವರಿಗೆ ಹೋಗಲು ಬಂದು ನೋಂದಾಯಿಸಿಕೊಳ್ಳಲು ತಹಶಿಲ್ದಾರ್ ಕರೆ
ಚನ್ನಪಟ್ಟಣ:ಮೇ/೦೩/೨೦/ಭಾನುವಾರ.ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಪ್ರವಾಸಿಗರು ತಾಲ್ಲೂಕಿಗೆ ಬಂದ ನಂತರ ಲಾಕ್ಡೌನ್ ಗೆ ಒಳಪಟ್ಟು ಹೋಗಲಾಗದಿರುವವರು, ಈಗ ಅವರ ಸ್ವಸ್ಥಳಕ್ಕೆ ಹೋಗಲು ಅನುಮತಿ ದೊರೆತಿದ್ದು, ಹೋಗಲಿಚ್ಚಿಸುವವರು ತಮ್ಮ ಆಧಾರ ಕಾಡ್೯ ನೊಂದಿಗೆ ಬಂದು ನೋಂದಾಯಿಸಿಕೊಳ್ಳುವಂತೆ ತಹಶಿಲ್ದಾರ್ ಸುದರ್ಶನ್ ರವರು ಕರೆ ನೀಡಿದ್ದಾರೆ.ಇಂದು ಗ್ರಾಮ ಪಂಚಾಯತಿ ಅಧಿಕಾರಿಗಳ
ನಾಳೆಯಿಂದ ಆರಂಭವಾಗಲಿರುವ ವೈನ್ ಸ್ಟೋರ್ ಗಳಿಗೆ ಇಂದಿನಿಂದಲೇ ಮಾರ್ಕಿಂಗ್
ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ಹಲವಾರು ನಿಬಂಧನೆಗಳೊಂದಿಗೆ ಕುಡುಕರ ದೇವಾಲಯಗಳೆಂದೇ ಪರಿಗಣಿತವಾದ ವೈನ್ ಸ್ಟೋರ್ ಗಳಿಗೆ ಜಿಲ್ಲಾಡಳಿತ ಅನುಮತಿ ನೀಡಿದ್ದು, ನಾಳೆ (೦೪ ನೇ ಸೋಮವಾರ) ಬೆಳಿಗ್ಗೆ ಒಂಭತ್ತು ಗಂಟೆಗೆ ನಗರವೂ ಸೇರಿದಂತೆ ಗ್ರಾಮೀಣ ಪ್ರದೇಶಗಳಲ್ಲಿರುವ ಸಿಎಲ್-೨ ಮತ್ತು ಸಿಎಲ್ ೧೧ (ಎಂಎಸ್ಐಎಲ್) ಮಳಿಗೆಗಳು ಬೆಳಿಗ್ಗೆ ೦೯:೦೦ ಗಂಟೆಯಿಂದ ರಾತ್ರಿ ೦೭:೦೦ ಗಂಟೆಯ ವರೆಗೆ ತೆರೆಯಲಿವೆ.
ಮಾಸ್ಕ್ ಧರಿಸದಿದ್ದರೆ ಸಾಮಾಜಿಕ ಅಂತರವಿಲ್ಲದಿದ್ದರೆ ದಂಡ, ಏಳರಿಂದ ಏಳು ಗಂಟೆಯವರೆಗೆ ಮಾತ್ರ ಸಂಚಾರ. ಅಧಿಕಾರಿಗಳಿಗೆ ಖಡಕ್ ಎಚ್ಚರಿಕೆ ನೀಡಿದ ತಹಶಿಲ್ದಾರ್
ಚನ್ನಪಟ್ಟಣ:ಮೇ/೦೩/೨೦/ಭಾನುವಾರ. ತಾಲ್ಲೂಕಿನಾದ್ಯಂತ ಓಡಾಡುವ ಎಲ್ಲರೂ ಕಟ್ಟುನಿಟ್ಟಾಗಿ ಮಾಸ್ಕ್ ಧರಿಸಬೇಕು. ಧರಿಸದಿದ್ದರೆ ದಂಡ ವಿಧಿಸಿ, ಅನುಮತಿ ಇರುವ ಅಂಗಡಿಗಳ ಮುಂದೆ ಶಾಶ್ವತ ವೃತ್ತ ನಿರ್ಮಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಲು ಸೂಚಿಸಿ, ಅಂಗಡಿಗಳ ಮಾಲೀಕರು, ಸಿಬ್ಬಂದಿಗಳು ಮಾಸ್ಕ್ ಮತ್ತು ಗ್ಲೌಸ್ ಹಾಕಿರಬೇಕು, ಪ್ರತಿ ಗ್ರಾಹಕರಿಗೂ ಸ್ಯಾನಿಟೈಸರ್ ಕೊಡಬೇಕು. ಇದನ್ನು ಪಾಲಿಸದಿದ್ದರೆ ಟಾಸ್
ಇಂದಿನಿಂದ ಜಿಲ್ಲೆಯಲ್ಲಿ ಆರ್ಥಿಕ ಚಟುವಟಿಕೆ ಪುನರಾರಂಭ ಜಿಲ್ಲಾಧಿಕಾರಿ
ರಾಮನಗರ:ಮೇ/೦೩/೨೦/ಭಾನುವಾರ. ಕಂಟೇನ್ ಮೆಂಟ್ (ನಿರ್ಬಂಧಿತ) ವಲಯ ಹೊರತು ಪಡಿಸಿ ರಾಮನಗರ ಜಿಲ್ಲೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ಮಾರ್ಗ ಸೂಚಿಯಂತೆ ಎಲ್ಲಾ ರೀತಿಯ ಆರ್ಥಿಕ ಚಟುವಟಿಕೆಗಳನ್ನು ಆರಂಭಿಸಲು ಅನುಮತಿ ನೀಡಲಾಗಿದೆ ಎಂದು ಜಿಲ್ಲಾಧಿಕಾರಿ ಎಂ.ಎಸ್. ಅರ್ಚನಾ ಅವರು ತಿಳಿಸಿದ್ದಾರೆ.ಕೊರೋನಾ (ಕೋವಿಡ್-೧೯) ನಿಯಂತ್ರಣ ಹಾಗೂ ಲಾಕ್ಡೌನ್ ಸಡಿಲಿಕೆಗೆ ಸಂಬ
ಕೊರೊನಾ: ರಾಮನಗರ ಜಿಲ್ಲೆಯಲ್ಲಿ ಇಂದಿನ ೮೦ ಸೇರಿ ೧೪೭೪ ಮಂದಿ ನಿಗಾದಲ್ಲಿ ಜಿಲ್ಲಾಧಿಕಾರಿ
ರಾಮನಗರ:ಮೇ/೦೨/೨೦/ಶನಿವಾರ. ರಾಮನಗರ ಜಿಲ್ಲೆಯ ಕೊರೊನಾ (ಕೋವಿಡ್-೧೯) ಪಿಡುಗು ತಡೆ ಕುರಿತ ಪ್ರಕರಣಗಳಿಗೆ ಸಂಬಂಧ ಪಟ್ಟಂತೆ ಶನಿವಾರದ (ದಿ. ೦೨) ಅಂಕಿ ಅಂಶಗಳನ್ನು ಜಿಲ್ಲಾಧಿಕಾರಿ ಎಂ.ಎಸ್.ಅರ್ಚನಾ ಅವರು ಬಿಡುಗಡೆ ಮಾಡಿದ್ದಾರೆ.ಇದುವರೆಗೆ ರಾಮನಗರ ಜಿಲ್ಲೆಯಲ್ಲಿ ನಿಗಾಕ್ಕೆ ಒಳಗಾದವರ ಒಟ್ಟು ಸಂಖ್ಯೆ ೧೪೭೪ (ಹೊಸದಾಗಿ ಇಂದಿನ ೮೦ ಸೇರಿ). ೨೮ ದಿನಗಳ ನ
ವಲಸೆ ಕಾರ್ಮಿಕರನ್ನು ಕರೆತರಲು ಮತ್ತು ಕಳುಹಿಸಲು ನೋಡಲ್ ಅಧಿಕಾರಿ ನೇಮಕ
ರಾಮನಗರ:ಮೇ/೦೨/೨೦/ಶನಿವಾರ. ತುತ್ತು ಅನ್ನಕ್ಕಾಗಿ ಹೊರ ಜಿಲ್ಲೆಯಿಂದ ನಮ್ಮ ಜಿಲ್ಲೆಗೆ, ನಮ್ಮ ಜಿಲ್ಲೆಯಿಂದ ಹೊರ ಜಿಲ್ಲೆಗೆ ದುಡಿಯಲು ಮತ್ತು ಮತ್ತಿತರ ಕಾರ್ಯಕ್ಕೆ ಬಂದು ಲಾಕ್ ಡೌನ್ ಅವಧಿಯಲ್ಲಿ ಸಿಲುಕಿರುವ ವಿವಿಧ ಜಿಲ್ಲೆಯ ವಲಸೆ ಕಾರ್ಮಿಕರು, ವಿದ್ಯಾರ್ಥಿಗಳು, ಯಾತ್ರಿಗಳು ಮತ್ತು ಪ್ರವಾಸಿಗಳನ್ನು ಅವರ ವಾಸಸ್ಥಳಕ್ಕೆ ರಾಮನಗರ ಜಿಲ್ಲೆಯಿಂದ ವಾಪಸ್ ಕಳುಹಿಸಲು ಹಾಗೂ ಹೊರ ರಾಜ್ಯ ಮತ್ತು ಹೊರ ಜಿ