Tel: 7676775624 | Mail: info@yellowandred.in

Language: EN KAN

    Follow us :


ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ

Posted date: 10 Mar, 2019

Powered by:     Yellow and Red

ಹುಟ್ಟಿನಿಂದ ಸಾವಿನವರೆಗೂ ಅವಳಿಗೆ ಮಹಿಳಾ ದಿನವೇ, ಸುಮಂಗಲ

ಯಾವಾಗ ಹೆಣ್ಣು ಜನ್ಮ ತಳೆಯುತ್ತಾಳೋ ಅಂದಿನಿಂದ ಮತ್ತೊಂದು ಮನೆಯಲ್ಲಿ ಹೋಗಿ ಆ‌ ಮನೆಯ ದೀಪವನ್ನು ಬೆಳಗಿ ಅಸುನೀಗುವ ವರೆಗೂ ಆಕೆಗೆ ಪ್ರತಿದಿನ, ಪ್ರತಿಕ್ಷಣವೂ ಮಹಿಳೆಯ ದಿನವೇ, ಬೆಳಿಗ್ಗೆ ಎದ್ದು ಮನೆ ಮುಂದೆ ನೀರು ಹಾಕಿ, ರಂಗೋಲಿ ಬಿಡಿಸಿ, ಅಡುಗೆ ಮಾಡಿ ಮಕ್ಕಳು ಮನೆಯವರಿಗೆ ಬಡಿಸಿ, ತೊಳೆದು ಬಂದವರನ್ನು ಉಪಚರಿಸಿ, ಸಂತೈಸಿ ರಾತ್ರಿ ಹಾಸಿಗೆ ಹಾಕಿ ಮಲಗುವವರೆಗೂ ಆಕೆ ಹೆಣ್ಣಾಗಿಯೇ ವರ್ತಿಸುತ್ತಾಳೆ, ಪ್ರೀತಿಸುತ್ತಾಳೆ, ಸತ್ಕರಿಸುತ್ತಾಳೆ, ಹೆಣ್ಣಾಗಿಯೇ ಉಳಿಯುತ್ತಾಳೆ, ಇದೊಂದು ದಿನ ಅವಳನ್ನು ಹೆಣ್ಣಾಗಿ ಗುರುತಿಸದರೇ ಸಾಕೆ ಎಂದು ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲಾ ರವರು ಮಾರ್ಮಿಕವಾಗಿ ನುಡಿದರು.


ಅವರು ವಿಶ್ವ ಮಹಿಳಾ ದಿನಾಚರಣೆಯ ಪ್ರಯುಕ್ತ ಭಾರತ ವಿಕಾಸ ಪರಿಷದ್ (ಕಣ್ವ ಶಾಖೆ) ವತಿಯಿಂದ ಶತಮಾನೋತ್ಸವ ಭವನದಲ್ಲಿ ಹಮ್ಮಿಕೊಂಡಿದ್ದ ಕಾರ್ಯಕ್ರಮವನ್ನು ಉದ್ಘಾಟಿಸಿ ಉಪನ್ಯಾಸ ನೀಡಿದರು.


ಪೋಷಕರಾದವರು ಹೆಣ್ಣು ಮಕ್ಕಳಿಗೆ ಹೇರುವಷ್ಟು ಕಟ್ಟುಪಾಡುಗಳನ್ನು ಗಂಡು ಮಕ್ಕಳಿಗೆ ಹೇರುವುದಿಲ್ಲ, ಹೆಣ್ಣು ಏನೇ ಮಾಡಿದರೂ ಅವಳದೇ ತಪ್ಪು ಎಂದು ಕಲ್ಪಿಸಿ ಆಕೆಗೆ ಕಿರುಕುಳ ನೀಡುವುದನ್ನು ಮೊದಲು ನಿಲ್ಲಿಸಬೇಕು, ಆಕೆಗೆ ಸಮಾನವಕಾಶವನ್ನು ನೀಡಬೇಕು ಎಂದು ಒತ್ತಾಯಿಸಿದರು.


ರಾಮನಗರ ಸಂಚಾರಿ ವಿಭಾಗದ ಇನ್ಸ್ಪೆಕ್ಟರ್ ಶೋಭಾ ವಿ ಕುಮಾರ್ ಮಾತನಾಡಿ ಇಂದು ಹೆಣ್ಣು ಯಾವ ವಿಭಾಗದಲ್ಲೂ ಸೋಲನ್ನು ಒಪ್ಪಿಕೊಳ್ಳುವುದಿಲ್ಲ, ಆಕೆಗೆ ಸಂಸಾರ ತೂಗಿಸುವುದಷ್ಟೇ ಅಲ್ಲಾ ದೇಶ ತೂಗಿಸುವುದು ಗೊತ್ತು, ದೇಶ ಕಾಯುವುದು ಗೊತ್ತು. ಭೂಮಿ, ನದಿಯಿಂದ ಹಿಡಿದು ಮುಖ್ಯ ಭೂಮಿಕೆಯೆಲ್ಲವೂ ಹೆಣ್ಣು ಎಂದು ಪ್ರತಿಪಾದಿಸಿದರು.


ಪ್ರಾಸ್ತಾವಿಕ ನುಡಿಗಳನ್ನಾಡಿದ ಶೈಲಜಾ ಶಿವಾನಂದ್ ಜಗತ್ತಿನಲ್ಲಿ ಹೆಣ್ಣು ಗಂಡುಗಳ ಸಮಾನ ಸಂತಾನವಿದೆ, ಆದರೂ ಇಂದಿಗೂ ಸಹ ಪುರುಷ ಪ್ರಧಾನ ಜಗತ್ತು ಎಂದೇ ಕರೆಸಿಕೊಳ್ಳುತ್ತಿದೆ, ಮನೆಗೆಲಸ, ಪೋಲಿಸ್ ಪೇದೆ, ಶಿಕ್ಷಕಿ ಯಿಂದ ಆರಂಭಗೊಂಡು ಗಡಿಕಾಯುವ ರಕ್ಷಕಿಯಾಗಿ ದೇಶದ ಪರಮೋಚ್ಚ ನಾಯಕಿಯರಾಗಿ, ಸಾಧುಸಂತರಾದಿಯಾಗಿ ದೇಶ ಮುನ್ನಡೆಸುವ ತಾಕತ್ತು ಹೆಣ್ಣಿಗಿದೆ.

ದೇಶದಲ್ಲಿಂದು ಅವಿದ್ಯಾವಂತರಿಗಿಂತ ವಿದ್ಯಾವಂತರೇ ಹೆಣ್ಣು ಭ್ರೂಣ ಹತ್ಯೆಯಂತಹ ನೀಚತನದಲ್ಲಿ ತೊಡಗಿರುವುದು ನಾಚಿಕೆಗೇಡಿತನ ಸಂಗತಿ ಎಂದರು.


ಅಧ್ಯಕ್ಷತೆ ವಹಿಸಿ ಮಾತನಾಡಿದ ಭಾವಿಪ ದ ತಾಲ್ಲೂಕು ಅಧ್ಯಕ್ಷ ವಸಂತಕುಮಾರ್ ಸಿ ವಿ ಶ್ರೀನಿವಾಸ ರವರ ನೇತೃತ್ವದಲ್ಲಿ ಸಣ್ಣದಾಗಿ ಬೆಳೆದ ಈ ಸಂಸ್ಥೆ ಇಂದು ಹೆಮ್ಮರವಾಗಿದೆ, ಇದನ್ನು ಬೆಳೆಸಲು ಸಹಕರಿಸಿದ ಎಲ್ಲರಿಗೂ ನಾವು ಋಣಿಯಾಗಿದ್ದೇವೆ ಎಂದು ತಿಳಿಸಿದರು.


ವೇದಿಕೆ ದುರ್ಬಳಕೆ ಮಾಡಿಕೊಂಡ ಶಿಕ್ಷಕರು


ಕರ್ನಾಟಕ ರಾಜ್ಯ ಪ್ರೌಢ ಶಿಕ್ಷಣ ಪರೀಕ್ಷಾ ಮಂಡಳಿಯ ನಿರ್ದೇಶಕಿ ವಿ ಸುಮಂಗಲ ರವರು ಬಂದಿದ್ದರಿಂದ ಅನೇಕ ಖಾಸಗಿ ಶಿಕ್ಷಣ ಸಂಸ್ಥೆಯ ಮುಖ್ಯ ಶಿಕ್ಷಕರಾದಿಯಾಗಿ ಅನೇಕ ಸರ್ಕಾರಿ ಶಾಲಾ ಶಿಕ್ಷಕರು ಅವರಿಗೆ ಸನ್ಮಾನಿಸುವ ಮೂಲಕ ಅರ್ಧ ಗಂಟೆಗೂ ಹೆಚ್ಚು ಕಾಲ ವೇದಿಕೆಯನ್ನು ದುರ್ಬಳಕೆ ಮಾಡಿಕೊಂಡಿದ್ದು ವೀಕ್ಷಕರು ಮತ್ತು ಕಲಾ ಪ್ರದರ್ಶನಕಾರರನ್ನು ಅಸಮಧಾನಗೊಳಿಸಿತು.

ವೇದಿಕೆಯಲ್ಲಿ ಆಸೀನರಾಗಿದ್ದ ಗಣ್ಯರು ಮತ್ತು ವೀಕ್ಷಕರು ಸುಶಿಕ್ಷಿತ ಶಿಕ್ಷಕ ರನ್ನು ನೇರವಾಗಿ ಶಪಿಸುತ್ತಿದ್ದು ಕಂಡುಬಂತು.

ಅವರ ಭಾಷಣವೂ ಸಹ ಕೇವಲ ಶಿಕ್ಷಕರಿಗೆ ಮಾತ್ರ ಎಂಬಂತಿದ್ದು ವೇದಿಕೆಯ ಕಾರ್ಯಕ್ರಮಕ್ಕೂ ಅವರ ಭಾಷಣಕ್ಕೂ ಸಂಬಂಧವೇ ಇರದಿದ್ದದ್ದು ಸಭಿಕರಿಗೆ ಬೇಸರವನ್ನುಂಟು ಮಾಡಿತು.*


ಭಾವಿಪ ದ ಪದಾಧಿಕಾರಿಗಳಾದ ಕೃಷ್ಣಮ್ಮ ಸೋಮರಾಜು ರವರ ನಿರ್ದೇಶನದಲ್ಲಿ ಸೋಬಾನೆ ಮದುವೆ, ಮಾಲತಿ ಮತ್ತು ತಂಡ ಝಾನ್ಸಿ ರಾಣಿ ಲಕ್ಷ್ಮೀಬಾಯಿ, ಲಕ್ಷ್ಮಿ ಗೋ ರಾ ಶ್ರೀನಿವಾಸ ತಂಡದಿಂದ ಅಭಿಜ್ಞಾನ ಶಾಕುಂತಲ, ಮಂಗಳ ಮತ್ತು ತಂಡದವರಿಂದ ಶ್ರೀ ಕೃಷ್ಣ ರಾಸಲೀಲೆ, ರಾಜೇಶ್ವರಿ ಸುಜ್ಞಾನ ಪ್ರಭು ತಂಡದಿಂದ ಯಮನ ನಿರ್ಧಾರ, ಸವಿತಾ ಮತ್ತು ಲಕ್ಷ್ಮಿ ಯವರಿಂದ ನಾಟ್ಯ ರಾಣಿ ಶಾಂತಲೆ, ಮೇಘನ ತಂಡದವರಿಂದ ಯೋಧರ ನಿಲುವು ಮತ್ತು ಇಂಡಿಯನ್ ಆಕ್ಸ್‌ಫರ್ಡ್ ಶಾಲೆಯ ಶಿಕ್ಷಕಿಯರಿಂದ ದೇಶಭಕ್ತಿ ಗೀತೆ ಕಾರ್ಯಕ್ರಮಗಳು ವೀಕ್ಷಕರ ಮನಸೂರೆಗೊಳ್ಳುವಲ್ಲಿ ಯಶಸಿಯಾದವು.


ಇದೇ ವೇಳೆ ಹಂಸವತಿ ಕೃಷ್ಣಯ್ಯ ಶೆಟ್ಟಿ, ಲಲಿತಮ್ಮ ನಾಗರಾಜು, ಹೆಚ್ ಡಿ ಪದ್ಮ ಮಂಜುನಾಥ ರವರನ್ನು ಸನ್ಮಾನಿಸಲಾಯಿತು, ದಸರಾ ಬೊಂಬೆ ಪ್ರದರ್ಶನ ಕಾರರಿಗೆ ಬಹುಮಾನವನ್ನು ವಿತರಿಸಲಾಯಿತು.


ವೇದಿಕೆಯಲ್ಲಿ ಶಾಂತಮ್ಮ ನಾಮದೇವ್, ಮಾಲಿನಿ ರಮೇಶ್, ರಾಧಿಕಾ ರವಿಕುಮಾರ್, ಎಂ ಸಾವಿತ್ರಮ್ಮ ಕೃಷ್ಣಪ್ಪ, ರಾಜೇಶ್ವರಿ ರಾಘವೇಂದ್ರ ಉಪಸ್ಥಿತರಿದ್ದರು.


ಭಾವಿಪದ ರಾಜ್ಯಾಧ್ಯಕ್ಷರಾದ ಸ್ವಾಮಿ, ಕ್ಷೇತ್ರ ಶಿಕ್ಷಣಾಧಿಕಾರಿ ಸೀತಾರಾಮು, ಕೆ ತಿಪ್ರೇಗೌಡ, ಬಿ ಎನ್ ಕಾಡಯ್ಯ, ಹೆಚ್ ಗೋವಿಂದಯ್ಯ, ಪಿ ಗುರುಮಾದಯ್ಯ, ಗೋ ರಾ ಶ್ರೀನಿವಾಸ, ಎಸ್ ಶಿವಲಿಂಗಯ್ಯ, ಕೃಷ್ಣಮ್ಮ ಸೋಮರಾಜು, ಶ್ವೇತಾ ಶಿವಕುಮಾರ್, ಜಯಲಕ್ಷ್ಮಮ್ಮ, ನವೀನ ಉಮೇಶ್, ವರಲಕ್ಷ್ಮಿ ಸಿದ್ದಾರ್ಥ, ರಾಜೇಶ್ವರಿ ಜಯರಾಮೇಗೌಡ ಹಾಗೂ ಪರಿಷದ್ ನ ಸದಸ್ಯರು ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Recent news in ramanagara »

ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ
ಅಣ್ಣನ ನೆನಪು ನಾಟಕ ಅದ್ಭುತ, ವಿಚಾರ ಹಂಚುವಲ್ಲಿ ವಿಫಲ

ರಾಮನಗರ/ಚನ್ನಪಟ್ಟಣ: (ವಿಮರ್ಶಾತ್ಮಕ ಲೇಖನ)

ನಗರದ ಶತಮಾನೋತ್ಸವ ಭವನದಲ್ಲಿ ಬೆಂಗಳೂರಿನ ಪ್ರವರ ಹವ್ಯಾಸಿ ನಾಟಕ ತಂಡವು ನಡೆಸಿಕೊಟ್ಟ ಪೂರ್ಣ ಚ

ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.
ಪೌರಾಣಿಕ ನಾಟಕದಲ್ಲಿ ಜನಮನ ಸೂರೆಗೊಂಡು ಇತಿಹಾಸ ನಿರ್ಮಿಸಿದ ಮಹಿಳಾ ಕಲಾವಿದರು.

ಚನ್ನಪಟ್ಟಣ :  ಚನ್ನಪಟ್ಟಣದಲ್ಲಿ ಮಹಿಳೆಯರೇ ಪೌರಾಣಿಕ ನಾಟಕವನ್ನು ಅಭ್ಯಾಸ ಮಾಡಿ ಬಯಲು ಮಂದಿರದಲ್ಲಿ ಪ್ರಸ್ತುತ ಪಡಿಸುತ್ತಿರುವುದು ವಿಶೇಷವಾಗಿದೆ. ಪೌರಾಣಿಕ

ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು
ಮಹಿಳೆಯರಿಂದಲೇ ಪೌರಾಣಿಕ ನಾಟಕ ಪ್ರದರ್ಶನ, ಇತಿಹಾಸ ಸೃಷ್ಟಿಸುವ ಸಾಧ್ಯತೆ ದಟ್ಟವಾಗಿದೆ. ಭಾವಿಪ ಪದಾಧಿಕಾರಿಗಳು

ಚನ್ನಪಟ್ಟಣ: ನಗರದ ಶ್ರೀ ಕೊಲ್ಲಾಪುರದಮ್ಮನ ದೇವಸ್ಥಾನದ ಆವರಣದಲ್ಲಿ ಇದೇ ಮಾರ್ಚ್ ತಿಂಗಳ ಹತ್ತನೇ ತಾರಿಖಿನ ಭಾನುವಾರ ಮಧ್ಯಾಹ್ನ ತಾಲೂಕಿನಲ್ಲಿ ಇದೇ ಪ್ರಪ್ರಥ

ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್
ವರ್ಣ ನೀತಿ ಮತ್ತು ಜಾತಿಯತೆಯನ್ನು ಮೀರಿದವರು ಮಾತ್ರ ಮನುಷ್ಯ ಜಾತಿಯಾಗಲು ಸಾಧ್ಯ –ಪ್ರೊ. ಕೆ.ಎಸ್.ಭಗವಾನ್

ರಾಮನಗರ: ಶೂದ್ರರನ್ನು ವರ್ಣ ನೀತಿಯಿಂದಲೆ ವೈದಿಕರು ಆಳಿದರು. ಇಂದಿಗೂ ಸಹ ವೈದಿಕರು ರಾಮನನ್ನು ನಮ್ಮ ಮೇಲೆ ಹೇರುವ ಮೂಲಕ ಮತ್ತೆ ಪೂರ್ವಕಾಲಕ್ಕೆ ಕರೆದು

ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ
ಬೆಂಗಳೂರು ಶಿಕ್ಷಕರ ಕ್ಷೇತ್ರದ ಉಪ ಚುನಾವಣೆ: ಜಿಲ್ಲೆಯಲ್ಲಿ ಶೇ.95.77 ಮತದಾನ

ರಾಮನಗರ, ಫೆ. 16  ರಾಜ್ಯ ವಿಧಾನ ಪರಿಷತ್ತಿಗೆ ಬೆಂಗಳೂರು ಶಿಕ್ಷಕರ ಕ್ಷೇತ್ರದಿಂದಫೆ.16ರ ಶುಕ್ರವಾರ ಬೆಳಿಗ್ಗೆ 8 ರಿಂದ ಸಂಜೆ 4 ಗಂಟೆಯ ವರೆಗೆನಡೆದ ಉಪ ಚುನ

ವೈಜ್ಞಾನಿಕ ಮನೋವೃತ್ತಿ:ಸಾಂವಿಧಾನಿಕ ಕರ್ತವ್ಯ ಪ್ರೊ. ಎಂ.ಅಬ್ದುಲ್ ರೆಹಮಾನ್ ಪಾಷ

ರಾಮನಗರ; ಮಾನವ ಹಕ್ಕುಗಳನ್ನು ಯಾರೂ ಕೊಡುವುದಿಲ್ಲ, ವ್ಯಕ್ತಿಗಳಿಗೆ ಅವುಗಳಿಗೆ ಜನ್ಮತಃ ದಕ್ಕಿರುತ್ತವೆ. ಅವುಗಳನ್ನು ಯಾರೂ ಕೊಡುವುದಿಲ್ಲವಾದ್ದರಿ

ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ
ನಾಳೆ ನಡೆಯುವ ಶಿಕ್ಷಕರ ಕ್ಷೇತ್ರದ ಚುನಾವಣೆ ಪ್ರಯುಕ್ತ ಮತಗಟ್ಟೆಗಳತ್ತ ತೆರಳಿದ ಸಿಬ್ಬಂದಿ

ರಾಮನಗರ: ರಾಜ್ಯ ವಿಧಾನ ಸಭೆ ಶಿಕ್ಷಕರ ಕ್ಷೇತ್ರದ ಚುನಾವಣೆ ಕಾವೇರಿದ್ದು,  ಬಹಿರಂಗ ಪ್ರಚಾರ ಕೊನೆಗೊಂಡ ನಂತರ ಇಂದು ಮಸ್ಟರಿಂಗ್ ಕಾರ್ಯ ಮುಗಿದು, ಮತಗಟ್ಟೆ ಸ

ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು
ವೈದ್ಯ ಸಿಬ್ಬಂದಿ ನಿರ್ಲಕ್ಷ್ಯ ಹಸುಗೂಸು ಸಾವು

ರಾಮನಗರ: ಚನ್ನಪಟ್ಟಣ: ವೈದ್ಯ ಸಿಬ್ಬಂದಿಯಾದ ಕಿರಿಯ ಮಹಿಳಾ ಆರೋಗ್ಯ ಸಹಾಯಕಿಯ ನಿರ್ಲಕ್ಷ್ಯದಿಂದ ಒಂದು ತಿಂಗಳು 20 ದಿನಗಳ ಗಂಡು ಶಿಶುವೊಂದು ಪ್ರಾಣ ಕಳೆದುಕೊ

ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್
ಗ್ರೇಟ್ ಬೆಂಗಳೂರು ಜಿಲ್ಲೆ, ಮತ್ತೇ ಮುನ್ನಲೆಗೆ ತಂದ : ಡಿ,ಸಿ.ಎಂ. ಡಿ.ಕೆ.ಶಿವಕುಮಾರ್

ರಾಮನಗರ, ಫೆ. 12:   ನಾವು ರಾಮನಗರ ಜಿಲ್ಲೆಯವರಲ್ಲಾ ನಾವೆಲ್ಲರೂ ಬೆಂಗಳೂರು ಜಿಲ್ಲೆಯವರು. ಗ್ರೇಟ್ ಬೆಂಗಳೂರು ಜಿಲ್ಲೆ ಮಾಡುವ ಬಗ್ಗೆ ಲೋಕಸಭಾ ಚ

ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್
ನಮ್ಮದು ಬಹುತ್ವ ಭಾರತ, ಹಿಂದುತ್ವ ಹೇರಿಕೆ ಸರಿಯಲ್ಲ – ಡಾ. ಚಕ್ಕೆರೆ ಶಿವಶಂಕರ್


ರಾಮನಗರ : ಫೆ 10 ನಮ್ಮದು ಬಹುತ್ವ ಭಾರತ, ಇಲ್ಲಿ ಎಲ್ಲಾ ಧರ್ಮೀಯರು ಇದ್ದಾರೆ. ಕೇವಲ ಹಿಂದುತ್ವವನ್ನು ಬಲವಂತವಾಗಿ ಹೇರುವುದು ಸರಿಯಲ್ಲ. ಭಾರತದ

Top Stories »  


Top ↑