ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು

ರಾಮನಗರ : ಫೆಬ್ರವರಿ 02, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರವರಿ 02ನೇ, ಭಾನುವಾರ 2020 ರಂದು ರಾಮನಗರದಲ್ಲಿ ಶ್ರೀ ಕೆಂಗಲ್ ಹನುಮಂತಯ್ಯ ಸ್ಪೋಟ್ರ್ಸ್ ಕ್ಲಬ್ಸಂಸ್ಥೆಯ ಸಹಕಾರದೊಂದಿಗೆ ಹಾಗೂ ಜಿಲ್ಲಾ ಪೊಲೀಸ್ ಅಧೀಕ್ಷಕರು ಮತ್ತು ಜಿಲ್ಲಾ ಪಂಚಾಯತ್ ರವರ ನಿರ್ದೇಶನದೊಂದಿಗೆ ರಾಮನಗರ ಮ್ಯಾರಥಾನ್ ಓಟವನ್ನು ಆಯೋಜಿಸಲಾಗಿತ್ತು.
ಈ ಜಾಗೃತಿ ಓಟಕ್ಕೆ ಯೆಲ್ಲೋ ಆಂಡ್ ರೆಡ್ ಸರ್ವೀಸ್ ಪ್ರೈ. ಲಿ., ತಾಂತ್ರಿಕ ಸಹಕಾರವನ್ನೂ ಹಾಗೂ ಎಂ ಎನ್ ಜಿ.ಎಲ್, (ಮಹಾರಾಷ್ಟ್ರ ನ್ಯಾಚುರಲ್ ಗ್ಯಾಸ್ ಲಿಮಿಟೆಡ್),
ಗೇಲ್ ಇಂಡಿಯಾ ಲಿಮಿಟೆಡ್, ಶಾಂತಿನಿಕೇತನ ಸಾಮೂಹಿಕ ಶಿಕ್ಷಣ ಸಂಸ್ಥೆ, ಎ.ಎಸ್.ಬಿ ಡೆವಲಪರ್ಸ್, ಎಸ್.ಎಸ್.ಎನ್.ಎಂ.ಸಿ. ಹಾಸ್ಪಿಟಲ್ ಹಾಗೂ ಇನ್ನಿತರ ಸಂಸ್ಥೆಗಳು ಸಹಕಾರ ನೀಡುವ ಮೂಲಕ ಮ್ಯಾರಥಾನ್ ಓಟವು ಸಂಪೂರ್ಣ ಯಶಸ್ವಿಯಾಯಿತು.
2020ರ ಮ್ಯಾರಥಾನ್ ಓಟವನ್ನು “ಅರಣ್ಯ ಕೃಷಿ ಅಗತ್ಯತೆ ಮತ್ತು ಪ್ಲಾಸ್ಟಿಕ್ ಬಳಕೆಯಿಂದ ಆಗುವ ಅಪಾಯಗಳ ಬಗ್ಗೆ ಜಾಗೃತಿ” ಹಾಗೂ ಅರಣ್ಯಕೃಷಿಯಿಂದ ಅಗುವ ಪ್ರಯೋಜನಗಳು ಮತ್ತು ಪ್ಲಾಸ್ಟಿಕ್ ಬಳಕೆಯಿಂದ
ಅಗುತ್ತಿರುವ ದುಷ್ಪರಿಣಾಮಗಳ ಬಗ್ಗೆ ಸಾರ್ವಜನಿಕರಲ್ಲಿ ಅರಿವು ಮೂಡಿಸುವುದು ರಾಮನಗರ ಮ್ಯಾರಥಾನ್ನ ಪ್ರಮುಖ ಉದ್ದೇಶವಾಗಿತ್ತು. ಜೊತೆಗೆ ಸ್ವಚ್ಚ ಭಾರತ ಅಭಿಮಾನದ ಬಗ್ಗೆ ಅರಿವು ಮೂಡಿಸುವ ಉದ್ದೇಶವಾಗಿತ್ತು.
ಮ್ಯಾರಥಾನ್ನಲ್ಲಿ * ರೂರಲ್ 7.ಕಿ.ಮೀ, * ವಿದ್ಯಾರ್ಥಿ 7.ಕಿ.ಮೀ, * ಹಿರಿಯರ 7ಕಿ.ಮೀ., * ರಾಕ್ 11.ಕಿ.ಮೀ
* ರೀಡಿಫೈನ್ 1/2 (21.1ಕಿ.ಮೀ) ಓಟಗಳಿದ್ದವು.
ಈ ಮ್ಯಾರಥಾನ್ ಓಟವು ಬಸವನಪುರದಲ್ಲಿ ಪ್ರಾರಂಭಗೊಂಡು ವಡೇರಹಳ್ಳಿ, ರಾಂಪುರ ದೊಡ್ಡಿ, ಗೋಪಾಲಪುರ, ದಾಸೇಗೌಡನ ದೊಡ್ಡಿ, ಮಾರ್ಗವಾಗಿ
ಹುಣಸನಹಳ್ಳಿ ತಲುಪಿ ಪುನಃ ಬಸವನಪುರದಲ್ಲಿ ಓಟವು ಅಂತ್ಯಗೊಂಡಿತು. ಮ್ಯಾರಥಾನ್ ಕಾರ್ಯಕ್ರದಲ್ಲಿ ಒಟ್ಟಾರೆಯಾಗಿ 2000 ಕ್ಕೂ ಹೆಚ್ಚು ಓಟಗಾರರು ಭಾಗವಹಿಸಿದ್ದರು.
ಮೊದಲಿಗೆ 21.1 ಕಿ.ಮೀ ಓಟಕ್ಕೆ ಚಾಲನೆಯನ್ನು ರಾಮನಗರ ಜಿಲ್ಲಾ ಪೋಲಿಸ್ ಅಧೀಕ್ಷರಾದ ಡಾ|| ಅನೂಪ್ ಶೆಟ್ಟಿ, ಎಂ.ಎಲ್.ಸಿ ಆಶ್ವಥ್ನಾರಾಯಣ್ ಹಾಗೂ ಎ.ಎಸ್.ಬಿ ಡೆವಲಪರ್ಸ್ ಛೇರ್ಮನ್ ಭಗೀರಥ, ಗೇಲ್ ಇಂಡಿಯಾ ಲಿಮಿಟೆಡ್ ನ ಪ್ರಾದೇಶಿಕ ಮುಖ್ಯ ಕಾರ್ಯ ನಿರ್ವಹಕರಾದ ರಾಜೀವ್ಶರ್ಮ ರವರು ಚಾಲನೆ ಮಾಡಿದರು ಜೊತೆಗೆ ಅನೂಪ್ ಶೆಟ್ಟಿರವರು 11 ಕಿ.ಮೀ. ಓಡುವ ಮೂಲಕ ಎಲ್ಲಾ ಓಟಗಾರರಿಗೆ ಉತ್ಸಾಹ ನೀಡಿದರು ಹಾಗೂ ಪ್ಲಾಸ್ಟಿಕ್ ಬಳಕೆ ಯಿಂದ ಆಗುವ ಅಪಾಯ ಹಾಗೂ ಅರಣ್ಯ ಕೃಷಿಯ ಅಳವಡಿಸಿಕೊಂಡರೆ ಆಗುವ ಪ್ರಯೋಜನಗಳ ಬಗ್ಗೆ ಮಾತನಾಡಿದರು.
11 ಕಿ.ಮೀ ಓಟಕ್ಕೆ ಚಾಲನೆಯನ್ನು ರಾಮನಗರ ಜಿಲ್ಲಾ ಪಂಚಾಯ್ತಿಯ ಮುಖ್ಯ ಕಾರ್ಯನಿರ್ವಹಕರಾದ ಶ್ರೀ ಇಕ್ರಮ್, ಎಂ.ಎನ್.ಜಿ.ಎಲ್. ಮ್ಯಾನೇಜಿಂಗ್ ಡೈರೆಕ್ಟರ್ ಆದ ಸುಪ್ರಿಯಾ ಅಲ್ದಾರ್. ರಾಷ್ಟ್ರಪತಿ ಪದಕ ವಿಜೇತರಾದ ಎ.ವಿ. ಲಕ್ಷ್ಮಿನಾರಾಯಣ್ರವರು ಮಾಡಿದರು. ಶ್ರೀ ಇಕ್ರಮ್ ರವರು ಸ್ವಚ್ಚ ಭಾರತ ಅಭಿಯಾನದ ಮಾಹಿತಿ ನೀಡುವ ಮೂಲಕ ಯೋಜನೆ ಸಂಪೂರ್ಣ ಯಶಸ್ವಿಗೆ ಎಲ್ಲರೂ ಸಹಕಾರಿಸುವಂತೆ ಕೋರಿದರು.
ರಾಮನಗರ ಜಿಲ್ಲಾ ಮುಖ್ಯ ನಾಯಾಧೀಶರಾದ ವೆಂಕಟಪ್ಪ ಮತ್ತು ಸಿದ್ದಲಿಂಗಪ್ರಭು ರವರು 7ಕಿ.ಮೀ ಓಟಕ್ಕೆ ಚಾಲನೆ ನೀಡಿದರು.
ಈ ಬಾರಿಯ ಮ್ಯಾರಥಾನ್ನಲ್ಲಿ 6 ವರ್ಷದ 40 ರಿಂದ 50 ಯುರೋ ಕಿಡ್ಸ್ ಮಕ್ಕಳು ಕೂಡ 1 ಕಿ.ಮೀ ರನ್ ಮಾಡುವ ಮೂಲಕ ಎಲ್ಲರ ಗಮನ ಸೆಳೆದರು ಹಾಗೂ ಕಳೆದ 2 ವರ್ಷಗಳಿಂದ ರಿನೋ ಎಂಬ ಶ್ವಾನ ಕೂಡ ಮ್ಯಾರಥಾನ್ನಲ್ಲಿ ಭಾಗವಹಿಸುತ್ತಿದೆ.
ಇದರ ಜೊತೆಗೆ ಮ್ಯಾರಥಾನ್ ಓಟದಲ್ಲಿ ಪ್ರವೃತ್ತಿ ಓಟಗಾರರಾದ ಕಿರಣ್ಬೆಟಗೇರಿ, ಮೋಹನ್ ದೇವೆಗೌಡ,
ಮತ್ತು ಕನ್ನಡದ ನಾಯಕಿ ನಟಿಯಾದ ಚಂದನಗೌಡ
ಕಾರ್ಯಕ್ರಮದಲ್ಲಿ ಭಾಗವಹಿಸಿ ಓಟಗಾರರಲ್ಲಿ ಮತ್ತಷ್ಟು ಪ್ರೋತ್ಸಾಹ ನೀಡಿದರು.
ರಾಮನಗರ ಮ್ಯಾರಥಾನ್ನಲ್ಲಿ ಭಾಗವಹಿಸಲು ಸ್ಥಳೀಯ, ರಾಜ್ಯ ಮತ್ತು ರಾಷ್ಟ್ರೀಯ ಓಟಗಾರರು
ಮ್ಯಾರಥಾನ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಮ್ಯಾರಥಾನ್ ಓಟದಲ್ಲಿ ನಿರ್ದಿಷ್ಟ ಗುರಿ ತಲುಪಿದ ಎಲ್ಲಾ ಓಟಗಾರರಿಗೂ ಪಾರಿತೋಷಕ, ಪ್ರಶಸ್ತಿ ಪತ್ರ ನೀಡಲಾಯಿತು.
ಈ ಕಾರ್ಯಕ್ರಮದ ಯಶಸ್ವಿಗೆ ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಅಧ್ಯಕ್ಷರಾದ ರಾಘವೇಂದ್ರ ಆರ್. ಸದಸ್ಯರಾದ ಅಮಿತ್ರಾಜ್ಶಿವಾ, ಟಿ. ಅನುರಾಧ, ವಿಜಯ್ ಮುನಿರಾಜು, ಸಂದೇಶ್ಹನುಮೇಲಿಂಗು, ಯೆಲ್ಲೊ ಅಂಡ್ ರೆಡ್ ಸಂಸ್ಥೆ ಯ ಮ್ಯಾನೇಜಿಂಗ್ ಡೈರೆಕ್ಟರ್ ಆದ ಆನಂದ ಶಿವಾ ಹಾಗೂ ಫೌಂಡೇಶನ್ಸ್ನ ಎಲ್ಲಾ ಸದಸ್ಯರ ಪರಿಶ್ರಮದಿಂದ ರಾಮನಗರ ಮ್ಯಾರಥಾನ್ ಯಶಸ್ವಿಯಾಗಲು ಕಾರಣವಾಯಿತು.
Recent news in sports »

ನಗದು ಪುರಸ್ಕಾರದ ಅರ್ಜಿ ಸ್ವೀಕರಿಸುವ ಅವಧಿ ವಿಸ್ತರಣೆ
ರಾಮನಗರ:ಮೇ/೨೮/೨೦/ಗುರುವಾರ. ರಾಷ್ಟ್ರೀಯ ಮತ್ತು ಅಂತರಾಷ್ಟ್ರೀಯ ಮಟ್ಟದ ಕ್ರೀಡಾಕೂಟಗಳಲ್ಲಿ ಪದಕ ವಿಜೇತರಾದ ಜಿಲ್ಲೆಯ ಕ್ರೀಡಾಪಟುಗಳಿಗೆ ೨೦೧೮/೧೯

ಜಿಲ್ಲಾ ಲೇಖಕರ ವೇದಿಕೆ ವತಿಯಿಂದ ರೂಬಿಕ್ ಕ್ಯೂಬ್ ಸ್ಪರ್ಧೆಯಲ್ಲಿ ರಾಜ್ಯ ಮಟ್ಟದಲ್ಲಿ ಪ್ರಥಮ ಸ್ಥಾನಗಳಿಸಿರುವ ಎಸ್. ವಿಶ್ವವಿಧಾತ ಅವರಿಗೆ ಸನ್ಮಾನ
ರಾಮನಗರ : ಇತ್ತೀಚಿನ ದಿನಗಳಲ್ಲಿ ಭಾರತವು ವಿಶ್ವಗುರು ಸ್ಥಾನ ಪಡೆಯುವತ್ತ ಹೆಜ್ಜೆ ಇಡುತ್ತಿದೆ ಎಂದು ಅಖಿಲ ಭಾರತೀಯ ಸಾಹಿತ್ಯ ಪರಿಷತ್ತಿನ ಜಿಲ್ಲಾ ಸಮಿತಿಯ ಕಾರ್ಯದರ್ಶಿ ಕೆ.ಆರ್. ವಿನುತ ಹೇಳಿದರು.

ಯೆಲ್ಲೊ ಅಂಡ್ ರೆಡ್ ಫೌಂಡೇಷನ್ಸ್ ಆಯೋಜಿಸಿದ್ದ ರಾಮನಗರ ಮ್ಯಾರಥಾನ್ ಯಶಸ್ಸು
ರಾಮನಗರ : ಫೆಬ್ರವರಿ 02, ಯೆಲ್ಲೋ ಅಂಡ್ ರೆಡ್ ಫೌಂಡೇಷನ್ಸ್ ವತಿಯಿಂದ ಇದೇ ಫೆಬ್ರವರ

ಕೆಲಸದ ಬಗ್ಗೆ ಹೆಚ್ಚು ಒತ್ತು ನೀಡಲು ಕ್ರೀಡೆ ಸಹಕಾರಿ ನ್ಯಾಯಮೂರ್ತಿ ನಟರಾಜ್
ಚನ್ನಪಟ್ಟಣ: ಬೆಳಿಗ್ಗೆ ಯಿಂದ ಸಂಜೆಯವರೆಗೆ ಒಂದೇ ಕಡೆ ಕುಳಿತು ಕೆಲಸ ಮಾಡುವ ಸರ್ಕಾರಿ ನೌಕರರು ಕ್ರಿಯಾಶೀಲರಾಗಲು ಕ್ರೀಡೆ ಸಹಕಾರಿಯಾಗಿದ್ದು ಕನಿಷ

ಇಂಗ್ಲೆಂಡ್ ವಿರುದ್ಧ ಏಕದಿನ ಸರಣಿ ಸೋತ ಟೀಂ ಭಾರತ
ಲೀಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾ ಹಾಗೂ ಇಂಗ್ಲೆಂಡ್ ನಡುವಿನ ಮೂರನೇ ಹಾಗೂ ನಿರ್ಣಾಯಕ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 8 ವಿಕೆಟ್ ಗಳಿಂದ ಜಯ ಗಳಿಸಿದ್ದು ಸರಣಿ ಕೈವಶ ಮಾಡಿಕೊಂಡಿದೆ.
ಟಾಸ್ ಸೋತು

ಕ್ರೊವೇಶಿಯಾ ವಿರುದ್ಧ ಗೆದ್ದ ಫ್ರಾನ್ಸ್ ಫಿಫಾ ವಿಶ್ವಕಪ್ ಚಾಂಪಿಯನ್
ಮಾಸ್ಕೋ(ರಷ್ಯಾ): ತೀವ್ರ ಕುತೂಹಲ ಮೂಡಿಸಿದ್ದ ಫಿಫಾ ವಿಶ್ವಕಪ್ ಪಂದ್ಯಾವಳಿಯ ಫೈನಲ್ ಪಂದ್ಯದಲ್ಲಿ ಕ್ರೊವೇಶಿಯಾ ವಿರುದ್ಧ ಗೆಲುವು ಸಾಧಿಸುವ ಮೂಲಕ ಫ್ರಾನ್ಸ್ ಚಾಂಪಿಯನ್ ಆಗಿ ಹೊರಹೊಮ್ಮಿದೆ.
ಫೈನಲ್

ಭಾರತದ ವಿರುದ್ಧ ಇಂಗ್ಲೆಂಡ್ ಗೆ ಜಯ
ಲಾರ್ಡ್ಸ್(ಇಂಗ್ಲೆಂಡ್): ಟೀಂ ಇಂಡಿಯಾದ ಹಾಗೂ ಇಂಗ್ಲೆಂಡ್ ನಡುವಿನ ದ್ವಿತೀಯ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ 86 ರನ್ ಗಳಿಂದ ಜಯ ಗಳಿಸಿದೆ.
ಕ್ರಿಕೆಟ್ ಕಾಶಿ ಲಾರ್ಡ್ಸ್ ನಲ್ಲಿ ನಡೆದ ಎರಡನ

ಇಂಗ್ಲೆಂಡ್ ವಿರುದ್ಧ ಭಾರತಕ್ಕೆ 8 ವಿಕೆಟ್ ಗಳ ಭರ್ಜರಿ ಜಯ
ನಾಟಿಂಗ್ ಹ್ಯಾಮ್: ಟ್ರೆಂಟ್ ಬ್ರಿಡ್ಜ್ ನಲ್ಲಿ ನಡೆಯುತ್ತಿರುವ ಮೊದಲ ಏಕದಿನ ಪಂದ್ಯದಲ್ಲಿ ಇಂಗ್ಲೆಂಡ್ ತಂಡದ ವಿರುದ್ಧ ಭಾರತ ತಂಡ 8 ವಿಕೆಟ್ ಗಳ ಭರ್ಜರಿ ಜಯ ಸಾಧಿಸಿದೆ.
ಇಂಗ್ಲೆಂಡ್ ನೀಡಿದ್ದ 269 ರನ್ ಗ
ಕಿಂಗ್ಸ್ ಇಲೆವೆನ್ ಪಂಜಾಬ್ ತಂಡಕ್ಕೆ ನಾಲ್ಕು ರನ್ ಜಯ
ನವದೆಹಲಿ: ಐಪಿಎಲ್ ಟಿ20 ಪಂದ್ಯಾವಳಿಯಲ್ಲಿ ಕಿಂಗ್ಸ್ ಇಲೆವೆನ್ ಪಂಜಾಬ್ ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ನಾಲ್ಕು ರನ್ ಗಳ ಗೆಲುವು ದಾಖಲಿಸಿದೆ.
ಇಂದು ಫಿರೋಜ್ ಷಾ ಕೋಟ್ಲಾ ಮೈದಾನದಲ್ಲಿ ನ
ಆರ್ ಸಿ ಬಿ ತಂಡಕ್ಕೆ ಜಯ
ಬೆಂಗಳೂರು: ಎಬಿಡಿ ವಿಲಿಯರ್ಸ್ ಆಕರ್ಷಕ ಅರ್ಧಶತಕದ ನೆರವಿನೊಂದಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು(ಆರ್ ಸಿಬಿ) ತಂಡ ಡೆಲ್ಲಿ ಡೇರ್ ಡೆವಿಲ್ಸ್ ವಿರುದ್ಧ ಆರು ವಿಕೆಟ್ಗಳ ಭರ್ಜರಿ ಜಯ ಸಾಧಿಸಿದೆ.
??????????????