Tel: 7676775624 | Mail: info@yellowandred.in

Language: EN KAN

    Follow us :


ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?

Posted date: 14 Aug, 2019

Powered by:     Yellow and Red

ವರ್ಗಾವಣೆಗೊಂಡು ತಿಂಗಳಾದರೂ ಜಾಗ ಬಿಡದ ವಿರುಪಾಕ್ಷಿಪುರ ಹೋಬಳಿ ರಾಜಸ್ವ ನಿರೀಕ್ಷಕ?

ಚನ್ನಪಟ್ಟಣ: ತಾಲ್ಲೂಕಿನ ಸಂಪದ್ಭರಿತ ಮರಳು ಲೂಟಿ ಕೇಂದ್ರ ಎನಿಸಿಕೊಂಡಿರುವ ವಿರುಪಾಕ್ಷಿಪುರ ಹೋಬಳಿಯ ನಾಡ ಕಛೇರಿಯಲ್ಲಿ ಸಮಯಕ್ಕೆ ಸರಿಯಾಗಿ ಬಾರದೆ ಎರಡು ಹುದ್ದೆಗಳನ್ನು ನಿಭಾಯಿಸಿತ್ತಿರುವ ವರ್ಗಾವಣೆಗೊಂಡು ತಿಂಗಳಾದರೂ ಕುರ್ಚಿಗೆ ಅಂಟಿಕೊಂಡಿರುವ ರಾಜಸ್ವ ನಿರೀಕ್ಷಕ ಕಂ ಉಪ ತಹಶಿಲ್ದಾರ *ಕೆ ಓ ನಟರಾಜು (ಮಧು) ಎಂಬುವವರ ಮೇಲೆ ಹೋಬಳಿಯ ನೂರಾರು ಸಾರ್ವಜನಿಕರು ಜಿಲ್ಲಾಧಿಕಾರಿ ಕ್ಯಾಪ್ಟನ್ ಡಾ ರಾಜೇಂದ್ರ ರವರಿಗೆ ೧೩/೦೮/೧೯ ರಂದು ಲಿಖಿತ ದೂರು ಸಲ್ಲಿಸಿ ಸೂಕ್ತ ಕಾನೂನು ಕ್ರಮಕೈಗೊಳ್ಳುವಂತೆ ಮನವಿ ಸಲ್ಲಿಸಿರುವುದು ಬೆಳಕಿಗೆ ಬಂದಿದೆ.


ಕಳೆದ ಹತ್ತು ವರ್ಷಗಳಿಂದ ಚನ್ನಪಟ್ಟಣದಲ್ಲೇ ಠಿಕಾಣಿ ಹೂಡಿರುವ ನಟರಾಜು ವಿರುಪಾಕ್ಷಿಪುರ ಹೋಬಳಿಯ ಹೆಸರಿನಲ್ಲಿ ನಾಮಕವಾಸ್ಥೆಗಷ್ಟೇ ಕೆಲಸ ನಿರ್ವಹಿಸುತ್ತಿದ್ದು ಅವರ ಕೆಲಸದ ಅಡ್ಢೆ ಸಂಪೂರ್ಣ ನಗರದ ಖಾಸಗಿ ಹೋಟೆಲ್‌ಗಳಲ್ಲಿ ಮಧ್ಯವರ್ತಿಗಳ ಮೂಲಕ ನಡೆಯುತ್ತಿದೆ, ಹಾಗೂ ಇಂತಿಂತಹ ಕೆಲಸಕ್ಕೆ ಇಷ್ಟು ದುಡ್ಡು ಎಂದು ನಿಗದಿ ಮಾಡಿ ಮಧ್ಯವರ್ತಿಗಳ ಮೂಲಕ ಪಡೆದುಕೊಳ್ಳುತ್ತಿದ್ದಾರೆ, ರೈತರು ಯಾವ ಕೆಲಸಕ್ಕೆ ಕರೆ ಮಾಡಿದರೂ ಚನ್ನಪಟ್ಟಣಕ್ಕೆ ಬರಲು ಹೇಳುತ್ತಾರೆಂದು ದೂರಿದ್ದಾರೆ.


ವಿರುಪಾಕ್ಷಿಪುರ ಹೋಬಳಿಯು ಎರಡು ಜಿಲ್ಲಾ ಪಂಚಾಯತಿ ಕೇಂದ್ರಗಳನ್ನು ಹೊಂದಿದ್ದು ವಿದ್ಯಾರ್ಥಿಗಳು, ರೈತರು, ವೃದ್ದರು, ವಿಕಲಚೇತನರು ಮತ್ತು ಇನ್ನಿತರ ವರ್ಗದ ಸಾರ್ವಜನಿಕರು ನಾಡಕಛೇರಿಗೆ ಅಲೆದು ಸಾಕಾಗಿ ನಂತರ ಅವರಿರುವ ಸ್ಥಳಕ್ಕೆ ಹೋಗಿ ಲಂಚ ನೀಡಿ ಸಂಬಂಧಿಸಿದ ದಾಖಲೆಗಳಿಗೆ ಸಹಿ ಹಾಕಿಸಿಕೊಳ್ಳಬೇಕಾಗಿದೆ.


೨೦೧೮ ರಲ್ಲಿ ಲೋಕಸಭಾ ಸದಸ್ಯ ಡಿ ಕೆ ಸುರೇಶ್ ರವರು ಕೋಡಂಬಳ್ಳಿಯಲ್ಲಿ ಏರ್ಪಡಿಸಿದ್ದ ಜನಸಂಪರ್ಕ ಸಭೆ ಮತ್ತು ಚನ್ನಪಟ್ಟಣದ ಶಾಸಕ ಹಾಗೂ ಅಂದಿನ ಮುಖ್ಯಮಂತ್ರಿ ಹೆಚ್ ಡಿ ಕುಮಾರಸ್ವಾಮಿ ಯವರು ಇದೇ ಕೋಡಂಬಳ್ಳಿ ಗ್ರಾಮದಲ್ಲಿ ಏರ್ಪಡಿಸಿದ್ದ ಜನಾತ ದರ್ಶನದಲ್ಲಿ ಲಿಖಿತ ದೂರು ನೀಡಲಾಗಿದ್ದು ಗಮನಿಸಿದ ಅವರು ಸ್ಥಳದಲ್ಲಿದ್ದ ಅಧಿಕಾರಿಗಳಿಗೆ ಕ್ರಮ ಕೈಗೊಳ್ಳುವಂತೆ ಸೂಚಿಸಿದರು ಸಹ ಅಧಿಕಾರಿಗಳು ಕ್ರಮ ಕೈಗೊಳ್ಳದಿರುವುದು ಅನುಮಾನಕ್ಕೆಡೆ ಮಾಡಿದೆ ಎಂದು ದೂರು ನೀಡಿದ್ದಾರೆ.


ಈ ದೂರಿನ ಬಗ್ಗೆ ನೂತನ ದಂಡಾಧಿಕಾರಿ ಸುದರ್ಶನ್ ರವರನ್ನು ದೂರವಾಣಿ ಮೂಲಕ ಸಂಪರ್ಕ ಮಾಡಿದಾಗ ಇದು ಜಿಲ್ಲಾಧಿಕಾರಿಗಳ ಸುಪರ್ದಿಗೆ ಬರುತ್ತದೆ, ಅವರಿಗೆ ಇದರ ಮಾಹಿತಿಯೂ ಇದೆ, ಇಲ್ಲಿ ಸಿಬ್ಬಂದಿ ಕೊರತೆ ಇರುವುದರಿಂದ ಎರಡು ಹುದ್ದೆಗಳನ್ನು ನಿಭಾಯಿಸುತ್ತಿದ್ದಾರೆ ಹಾಗೂ ಆ ಜಾಗಕ್ಕೆ ಮತ್ತೊಬ್ಬರು ವರ್ಗಾವಣೆ ಆಗುವವರೆಗೂ ಅವರು ಇಲ್ಲಿಯೇ ಕಾರ್ಯ ನಿರ್ವಹಿಸುತ್ತಾರೆ ಎಂದು ತಿಳಿಸಿದರು.


ಇದರ ಬಗ್ಗೆ ಮಾಹಿತಿ ಕೇಳಲು ಅಧಿಕಾರಿ ನಟರಾಜ್ ಮಧು ರವರ ಮೊಬೈಲ್ ಗೆ ಎರಡುಮೂರು ಬಾರಿ ಕರೆ ಮಾಡಿದರೂ ಸಹ ಕರೆ ಸ್ವೀಕರಿಸಲಿಲ್ಲ.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑