ವಿದ್ಯುತ್ ಹರಿದು ಮಹಿಳೆ ಸಾವು
ಚನ್ನಪಟ್ಟಣ: ತಾಲ್ಲೂಕಿನ ಹೊಂಗನೂರು ಗ್ರಾಮದ ಲೇಟ್ ತಮ್ಮಣ್ಣ ನವರ ಪತ್ನಿ ಶ್ರೀಮತಿ ಭಾಗ್ಯಮ್ಮ (೪೪) ಇಂದು ಮುಂಜಾನೆ ಮನೆಯಲ್ಲಿ ಆಕಸ್ಮಿಕವಾಗಿ ಪ್ರಸರಿಸಿದ ವಿದ್ಯುತ್ ನಿಂದ ಮೃತರಾದರು.
ಗೋವಿಂದೇಗೌಡನದೊಡ್ಡಿ ಗ್ರಾಮದ ತನ್ನ ತಂದೆಯ ಮನೆಯಲ್ಲಿ ಮನೆ ಸ್ವಚ್ಛಗೊಳಿಸುವ ಸಮಯದಲ್ಲಿ ಫ್ಲೆಕ್ಸಿ ಬಾಕ್ಸ್ ನ ತಂತಿ ನೆಲಕ್ಕೆ ತಾಗಿದ್ದು ಮನೆಯು ತೇವಾಂಶವಿದ್ದ ಕಾರಣ ತಕ್ಷಣ ದೇಹಕ್ಕೆ ವಿದ್ಯುತ್ ಪ್ರಸರಿಸಿದ್ದು ಆಸ್ಪತ್ರೆ ಗೆ ಸಾಗಿಸುವ ಸಮಯದಲ್ಲಿ ಮೃತರಾದರು.
ಮೃತರ ಅಂತ್ಯಕ್ರಿಯೆ ಯು ಹೊಂಗನೂರು ಗ್ರಾಮದಲ್ಲಿ ಇಂದು ಮಧ್ಯಾಹ್ನ ಒಂದು ಗಂಟೆಗೆ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಮೃತರು ಮಕ್ಕಳಾದ ಚೇತನ್, ಪ್ರತಾಪ್, ತಂದೆ ನಿವೃತ್ತ ಶಿಕ್ಷಕ ಭುಜಗಯ್ಯ, ತಾಯಿ ದೇವಮ್ಮ, ಸಹೋದರ ಕಾಂಗ್ರೆಸ್ ಮುಖಂಡ ರಾಮಸ್ವಾಮಿ, ಭಾವನವರಾದ ಎಲ್ ಐ ಸಿ ನಾಗರಾಜು, ಎಪಿಎಂಸಿ ಉಪಾಧ್ಯಕ್ಷ ವೆಂಕಟಸ್ವಾಮಿ, ಶಿವಲಿಂಗೇಗೌಡ, ಸಹೋದರಿಯರಾದ ಶಿಕ್ಷಕಿ ಪ್ರಮೀಳಾ, ದೊರೆ, ಚಂದ್ರಕಲಾ, ಮರಿಗೋವಿಂದ ಸೇರಿದಂತೆ ಅನೇಕ ಬಂಧು ಬಳಗವನ್ನು ಅಗಲಿದ್ದಾರೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು