ಹತ್ತಾರು ಲಕ್ಷ ದೋಖಾ ಎಸಗಿ ಅಮಾನತು ಆಗಿದ್ದ ಶಂಕರ್ ಗೆ ಮನವಿ ಮೇರೆಗೆ ಪುನರ್ ನೇಮಕ ?!!!?
ಚನ್ನಪಟ್ಟಣ: ರಾಮನಗರ ಜಿಲ್ಲಾ ಪಂಚಾಯತಿ ಅನುದಾನವನ್ನು ಚನ್ನಪಟ್ಟಣ ತಾಲ್ಲೂಕಿನ ಹೊಂಗನೂರು, ಕೋಡಂಬಳ್ಳಿ ಮತ್ತು ಮಳೂರು ಜಿಲ್ಲಾ ಪಂಚಾಯತಿ ವ್ಯಾಪ್ತಿಯಲ್ಲಿ ಹಲವಾರು ಕಾಮಗಾರಿಗಳ ಹೆಸರಿನಲ್ಲಿ *೨೦,೦೦೦,೦೦* *(ಇಪ್ಪತ್ತು ಲಕ್ಷ)* ಕ್ಕೂ ಹೆಚ್ಚು ಹಣವನ್ನು ಪ್ರೊಬೆಷನರಿ ಇಂಜಿನಿಯರ್ ಶಂಕರ್, ಪ್ರಭಾರ ಅಭಿಯಂತರ ಕುಮಾರಸ್ವಾಮಿ ಮತ್ತು ಗುತ್ತಿಗೆದಾರರು ದುರುಪಯೋಗ ಪಡಿಸಿಕೊಂಡಿದ್ದು ಎಲ್ಲಾ ದಾಖಲೆಗಳೊಂದಿಗೆ ನಮ್ಮ ಪತ್ರಿಕೆಯಲ್ಲಿ ಸರಣಿ ವರದಿಗಳನ್ನು ಪ್ರಕಟಿಸಲಾಗಿತ್ತು.
ಮಾಹಿತಿ ಹಕ್ಕು ಕಾರ್ಯಕರ್ತ ವಿ ಜಿ ಕೃಷ್ಣೇಗೌಡ ಪತ್ರಿಕೆ ಮತ್ತಿತರ ದಾಖಲೆಗಳೊಂದಿಗೆ ಅಂದಿನ ಜಿಲ್ಲಾ ಪಂಚಾಯತಿ *ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮುಲ್ಲೈಮುಹಿಲನ್* ರವರಿಗೆ ಈ ಮೇಲಿನ ಅಧಿಕಾರಿಗಳ ವಿರುದ್ಧ ದೂರು ಸಲ್ಲಿಸಿದ್ದು *ಇಂಜಿನಿಯರ್ ಶಂಕರ್* ರವರನ್ನು ತಕ್ಷಣ ಜಾರಿಗೆ ಬರುವಂತೆ *ಅಮಾನತು ಆದೇಶ* ಮಾಡಿ ಸಂಬಂಧಿಸಿದ ಅಧಿಕಾರಿಗಳಿಗೆ ಕಾಮಗಾರಿಯನ್ನು ತನಿಖೆಗೊಳಪಡಿಸಿ ಪರೀಕ್ಷಿಸುವಂತೆ ಆದೇಶ ಮಾಡಿದ್ದರು.
*ಲಾಳಾಘಟ್ಟ ಶಾಲೆಯ ಸೈಕಲ್ ಸ್ಟ್ಯಾಂಡ್ ಮತ್ತು ಹರಿಸಂದ್ರ ನೀಲಸಂದ್ರ ನಿಲ್ದಾಣದ ತಂಗುದಾಣಗಳನ್ನು ತನಿಖೆ ಮಾಡಿದ ಅಧಿಕಾರಿಗಳು ಕಳಪೆ ಕಾಮಗಾರಿ ಹಾಗೂ ಹಣ ದುರುಪಯೋಗ ಮೇಲ್ನೋಟಕ್ಕೆ ಸಾಬೀತಾಗಿದೆ ಎಂದು ವರದಿ ನೀಡುವುದಾಗಿ ನಮ್ಮ ಪತ್ರಿಕೆಗೆ ಅಂದೇ ತಿಳಿಸಿದರು.*
ಅಮಾನತು ಆಗಿದ್ದ ಜಿ ಎಸ್ ಶಂಕರ್ ಆದೇಶ ಸಂಖ್ಯೆ: ರಾಜಿಪಂ/ಸಿ೧/ಸಿಆರ್-೨೨/೨೦೧೭-೧೮. ದಿನಾಂಕ ೧೪/೦೫/೧೯ ರಲ್ಲಿ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ಗಳಿಗೆ *ನಾನು ಯಾವುದೇ ತಪ್ಪು ಮಾಡಿಲ್ಲ,* *ಸರ್ಕಾರಿ ಕೆಲಸದಲ್ಲಿ ಅಧಿಕ ಕಾರ್ಯಭಾರದಿಂದಾಗಿ ದಾಖಲೆಗಳನ್ನು ತಮಗೆ ಸಕಾಲದಲ್ಲಿ ಸಲ್ಲಿಸಲಾಗಿಲ್ಲ,* ತಂದೆ ತಾಯಿ, ಹೆಂಡತಿ ಮಕ್ಕಳು, ಮತ್ತು ಸಹೋದರ ಸಹೋದರಿಯರು ಇರುವ ಕುಟುಂಬ ನಮ್ಮದಾಗಿದ್ದು ಎಲ್ಲರ ಜವಾಬ್ದಾರಿ ನನ್ನ ಮೇಲಿರುವುದರಿಂದ ಆದೇಶ ತೆರವುಗೊಳಿಸಬೇಕೆಂದು ಪತ್ರದ ಮೂಲಕ ಮನವಿ ಮಾಡಿದ್ದರು.
೧೧/೦೭/೧೯ ರಂದು ಮುಖ್ಯ ಕಾರ್ಯನಿರ್ವಾಹಣಾಧಿಕಾರಿಗಳು ಉಲ್ಲೇಖ: ರಾಜಿಪಂ/ಸಿ೧/ಸಿಆರ್-೨೨/೨೦೧೭/೧೮ ಸಂಖ್ಯೆ ಯಡಿಯಲ್ಲಿ ೧) ಸ ಪ್ರ ಕಾ, ಗ್ರಾ ಮತ್ತು ಪಂ ರಾ ಇಲಾಖೆ ಬೆಂಗಳೂರು. ೨) ಮು ಅ ಗ್ರಾ ಭವನ ಬೆಂಗಳೂರು, ೩) ಅಧ್ಯಕ್ಷರು ಜಿಪಂ ರಾಮನಗರ, ೪) ಉಪಾಧ್ಯಕ್ಷರು ಜಿಪಂ ರಾಮನಗರ, ೫) ಕಾ ಪಾ ಅ ಪಂ ರಾ ಇಂ ವಿಭಾಗ ರಾಮನಗರ, ೬) ಸ ಕಾ ಅ ಪಂ ರಾ ಇಂ ವಿಭಾಗ ರಾಮನಗರ, ೭) ಸ ಕಾ ಅ ಪಂ ರಾ ಇಂ ಉ ವಿಭಾಗ ರಾಮನಗರ, ಈ ಎಲ್ಲಾ ಇಲಾಖೆಯ ಮುಖ್ಯ ಅಧಿಕಾರಿಗಳಿಗೆ ಪತ್ರ ಬರೆದು ಶ್ರೀ ಜಿ ಎಸ್ ಶಂಕರ್ ಕಿರಿಯ ಅಭಿಯಂತರರು ಪಂಚಾಯತ್ ರಾಜ್ ಉಪ ವಿಭಾಗ, ಚನ್ನಪಟ್ಟಣ ರವರನ್ನು *ಉಲ್ಲೇಖ (೧) ಆದೇಶದಂತೆ ಅಮಾನತುಗೊಳಿಸಲಾಗಿರುತ್ತದೆ. ಸದರಿಯವರು ಉಲ್ಲೇಖ (೨) ರ ಮನವಿಯಲ್ಲಿ ಪುನರ್ ನೇಮಕ ಮಾಡಲು ಕೋರಿದ್ದಾರೆ,* *ಸದರಿಯವರ ಮನವಿಯನ್ನು ಪರಿಶೀಲಿಸಿ ಇಲಾಖಾ ವಿಚಾರಣೆ ಕಾಯ್ದಿರಿಸಿ ಮುಂದಿನ ಆದೇಶದವರೆಗೆ ಸದರಿಯವರನ್ನು ಪುನರ್ ನೇಮಕ ಮಾಡಲು ಆದೇಶಿಸಿರುವುದು* ಹಾಗೂ ಅಮಾನತು ಮಾಡುವಾಗ ಅಧಿಕಾರಿಗಳಿಗೆ ಮಾತ್ರ ಪತ್ರ ಬರೆದಿದ್ದು ಅಮಾನತು ತೆರವುಗೊಳಿಸುವಾಗ ಜಿಲ್ಲಾ ಪಂಚಾಯತಿ ಅಧ್ಯಕ್ಷ ಮತ್ತು ಉಪಾಧ್ಯಕ್ಷರಿಗೂ ಪತ್ರ ಬರೆದಿರುವುದು ಅನುಮಾನಕ್ಕೆಡೆ ಮಾಡಿದೆ, ಇದು ಪ್ರಕರಣ ಮುಚ್ಚಿ ಹಾಕಲು ರಾಜಕೀಯ ಪ್ರೇರಣೆಯೇ ? ಎಂದು ದೂರುದಾರ ವಿ ಜಿ ಕೃಷ್ಣೇಗೌಡ ಹೇಳಿದ್ದಾರೆ.
*ಸಾರ್ವಜನಿಕ ರ ತೆರಿಗೆ ಹಣಕ್ಕೆ ಬೆಲೆಯೇ ಇಲ್ಲವೇ ? ಕಳಪೆ ಕಾಮಗಾರಿ ನಡೆದಿರುವ ಕಡೆ ತಂಗಲಿರುವ ಸಾರ್ವಜನಿಕ ರ ಜೀವಕ್ಕೆ ಬೆಲೆ ಇಲ್ಲವೇ ? ಮುಂದೆ ಇನ್ನಷ್ಟೂ ಕಳಪೆ ಕಾಮಗಾರಿ ಮಾಡಿ ಅಥವಾ ಕಾಮಗಾರಿ ಮಾಡದೇ ಯಾವುದೋ ಎಂದೋ ಆಗಿರುವ ಕೆಲಸಕ್ಕೆ ಮತ್ತೊಂದು ಬಿಲ್ ಬರೆದು ಹಣ ಗುಳುಂ ಮಾಡಲು ಇವರುಗಳು ಸಹ ಕೈಜೋಡಿಸಿದ್ದಾರೆಯೇ ಎಂಬ ಅನುಮಾನ ಸಾರ್ವಜನಿಕರಲ್ಲಿ ದಟ್ಟವಾಗಿ ಹರಿದಾಡುತ್ತಿದೆ.*
ಅಮಾನತು ಆಗಲು ಕಾರಣವಾಗಿರುವ ಕಾಮಗಾರಿಗಳಲ್ಲದೇ ಈಗಾಗಲೇ ಗುಳುಂ ಮಾಡಿರುವ ಇನ್ನೂ ಅನೇಕ ಕಾಮಗಾರಿಗಳ ಮಾಹಿತಿಯನ್ನು ಕಲೆ ಹಾಕಿ ಸಾರ್ವಜನಿಕ ರ ತೆರಿಗೆ ಹಣ ಮತ್ತು ಅವರ ಜೀವದ ಜೊತೆ ಚೆಲ್ಲಾಟವಾಡುತ್ತಿರುವ ದೋಖಾ ಇಂಜಿನಿಯರ್ ಗಳನ್ನು ಶಾಶ್ವತವಾಗಿ ಕೆಲಸದಿಂದ ತೆಗೆದುಹಾಕಬೇಕಾಗುತ್ತದೆ.
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು