Tel: 7676775624 | Mail: info@yellowandred.in

Language: EN KAN

    Follow us :


ಶಿಕ್ಷಕರ ಹುದ್ದೆ ಸರ್ವಶ್ರೇಷ್ಠ ಹುದ್ದೆ ಕುಮಾರಸ್ವಾಮಿ

Posted date: 11 Sep, 2019

Powered by:     Yellow and Red

ಶಿಕ್ಷಕರ ಹುದ್ದೆ ಸರ್ವಶ್ರೇಷ್ಠ ಹುದ್ದೆ ಕುಮಾರಸ್ವಾಮಿ

ಚನ್ನಪಟ್ಟಣ: ಜಗತ್ತಿನಲ್ಲಿರುವ ಹುದ್ದೆಗಳಲ್ಲಿ ಸರ್ವಶ್ರೇಷ್ಠ ಹುದ್ದೆ ಎಂದರೆ ಅದು ಶಿಕ್ಷಕರ ಹುದ್ದೆ, ಪ್ರತಿ ವಿದ್ಯಾರ್ಥಿಯನ್ಮು ಉತ್ತಮ ಶಿಲ್ಪಿಯಾಗಿ ಕಡೆಯುವ ಕಲೆ ಆ ಹುದ್ದೆಗೆ ಮಾತ್ರ ಇದೆ ಎಂದು ಶಾಸಕ ಹೆಚ್ ಡಿ‌ ಕುಮಾರಸ್ವಾಮಿ ಹೇಳಿದರು.

ಅವರು ಇಂದು ರಾಷ್ಟ್ರೀಯ ಹಬ್ಬಗಳ ಸಮಿತಿ ಹಾಗೂ ತಾಲ್ಲೂಕು ಆಡಳಿತದಿಂದ ಚೌಡೇಶ್ವರಿ ಕಲ್ಯಾಣ ಮಂಟಪದಲ್ಲಿ ಆಯೋಜನೆಗೊಂಡಿದ್ದ ಶಿಕ್ಷಕರ ದಿನಾಚರಣೆ ಯಲ್ಲಿ ಭಾಗವಹಿಸಿ ಮಾತನಾಡಿದರು.


ಆಡಳಿತದ ಹಲವಾರು ಕೆಲಸಗಳಲ್ಲಿ ನಾವು ಅವರನ್ನು ಬಳಸಿಕೊಳ್ಳುತ್ತಿದ್ದೇವೆ. ಚುನಾವಣೆ, ಜನಗಣತಿ ಸೇರಿದಂತೆ ಹಲವಾರು ಸರ್ಕಾರ ಮತ್ತು ಸಾರ್ವಜನಿಕ ಕೆಲಸಗಳಲ್ಲಿ ತೊಡಗಿಕೊಂಡು ಒತ್ತಡಗಳ ನಡುವೆ ಕೆಲಸ ನಿರ್ವಹಿಸಿದರೂ ಸಹ ವಿದ್ಯಾರ್ಥಿಗಳಿಗೆ ತೊಂದರೆ ಆಗದಂತೆ ಕೆಲಸ ನಿರ್ವಹಣೆ ಮಾಡುತ್ತಾರೆ ಎಂದು ಶ್ಲಾಘಿಸಿದರು.


ಪ್ರಪಂಚ ಬದಲಾವಣೆಯತ್ತ ಸಾಗುತ್ತಿದೆ, ನಾವುಗಳು ಬದಲಾಗಬೇಕಿದೆ, ಗ್ರಾಮೀಣ ಭಾಗದ ಮಕ್ಕಳಿಗೆ ಉನ್ನತ ಶಿಕ್ಷಣಕ್ಕೆ ಅನುಕೂಲ ಆಗುವಂತೆ ಸರ್ಕಾರಿ ಶಾಲೆಗಳಲ್ಲಿ ಇಂಗ್ಲಿಷ್ ಕಲಿಕೆ ಆರಂಭ ಮಾಡಿದೆ, ಇದಕ್ಕೆ ಕೆಲವರು ವಿರೋಧ ವ್ಯಕ್ತಪಡಿಸಿದರು, ಆದರೂ ಜಾರಿ ಮಾಡಿದ್ದೇನೆ. ಇಂದಿನ ಪರಿಸ್ಥಿತಿಯಲ್ಲಿ ವಿದ್ಯಾರ್ಥಿಗಳಿಗೆ ಇಂಗ್ಲಿಷ್ ಭಾಷೆಯ ಅವಶ್ಯಕತೆ ಇದೆ ಎಂದರು.


ಸುಮಾರು ಎರಡು ಗಂಟೆಗಳ ಕಾಲ ತಡವಾಗಿ ಆಗಮಿಸಿದ ಕಾರಣ ಸಭೆಯಲ್ಲಿ ಭಾಗವಹಿಸಿದ್ದ ತಾಲ್ಲೂಕು ಪಂಚಾಯತಿ ಅಧ್ಯಕ್ಷ ರಾಜಣ್ಣ ನವರು ಡಾ ಸರ್ವಪಲ್ಲಿ ರಾಧಾಕೃಷ್ಣನ್ ರವರ ಬಗ್ಗೆ ಕಿರು ಭಾಷಣ ಮಾಡಿ ತೆರಳಿದರು.

ರಾಮನಗರ ಜಿಲ್ಲೆಯ ಉಪ ನಿರ್ದೇಶಕ ಗಂಗಮಾರೇಗೌಡ ಮಾತನಾಡಿ ಶಿಕ್ಷಕರು, ಪೋಷಕರು ಮತ್ತು ವಿದ್ಯಾರ್ಥಿಗಳ ಸಂಬಂಧದ ಬಗ್ಗೆ ನೆರೆದಿದ್ದ ಶಿಕ್ಷಕರಿಗೆ ನೀತಿ ಪಾಠ ಬೋಧಿಸಿದರು.


ನಿವೃತ್ತ ಶಿಕ್ಷಕರು, ಉತ್ತಮ ಶಿಕ್ಷಕರು ಮತ್ತು ನಲಿಕಲಿ ಶಿಕ್ಷಕರನ್ನು ಸನ್ಮಾನಿಸಲಾಯಿತು.

ಮಾಧ್ಯಮದವರ ಕೆಲ ಪ್ರಶ್ನೆಗಳಿಗೆ ಉತ್ತರಿಸಿದ ಕುಮಾರಸ್ವಾಮಿ ಯವರು ಋಣ ಮುಕ್ತ ಕಾಯ್ದೆಯನ್ನು ಬಡವರ ಏಳ್ಗೇಗಾಗಿ‌ ಜಾರಿಗೆ ತಂದಿದ್ದು ಉಪಯೋಗ ಪಡೆದುಕೊಳ್ಳಬೇಕು ಎಂದರು.

ಇಂದಿನ ಪ್ರತಿಭಟನೆ ಗೆ ಸಂಬಂಧಿಸಿದ ಪ್ರಶ್ನೆಗೆ ಪ್ರತಿಭಟನೆ ಗೆ ನನಗೆ ಆಹ್ವಾನ ಇರಲಿಲ್ಲ, ಇಂದು ಬೆಳಿಗ್ಗೆ ನನಗೆ ಆಹ್ವಾನ ನೀಡಿದರು, ಚನ್ನಪಟ್ಟಣ ದ ಕಾರ್ಯಕ್ರಮಗಳು ಕೆಲ ದಿನಗಳ ಹಿಂದೆಯೇ‌ ನಿಗದಿಯಾಗಿದ್ದ ಕಾರಣ ಹೋಗಲಾಗಿಲ್ಲ ಎಂದರು.


ಕಾರ್ಯಕ್ರಮದಲ್ಲಿ ಬಿಇಓ ಸೀತಾರಾಮು, ತಾಲ್ಲೂಕು ಪಂಚಾಯತ ಅಧ್ಯಕ್ಷ ರಾಜಣ್ಣ, ತಾಲ್ಲೂಕು ಶಿಕ್ಷಕರ ಸಂಘದ ಅಧ್ಯಕ್ಷ ಮಲ್ಲೇಶ್, ತಾ ಪಂ ಸ್ಥಾಯಿ ಸಮಿತಿ ಅಧ್ಯಕ್ಷ ಸುರೇಶ್, ಜಿಲ್ಲಾ ಶಿಕ್ಷಣ ನಿರ್ದೇಶಕ ಗಂಗಮಾರೇಗೌಡ, ರಾಮನಗರ ಬಿಇಓ ಮರಿಗೌಡ, ಶಿಕ್ಷಕರ ಸಂಘದ ಪದಾಧಿಕಾರಿಗಳಾದ ಹರಿದಾಸ್, ರಾಜಶೇಖರ, ರಂಗನಾಥ ಮತ್ತಿತರರು, ಖಾಸಗಿ ಶಾಲೆಯ ಮುಖ್ಯಸ್ಥರು, ರಾಧಿಕಾ ಸೇರಿದಂತೆ ಅನೇಕರು ವೇದಿಕೆಯಲ್ಲಿ ಭಾಗವಹಿಸಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑