ತಾಳೆಯೋಲೆ ೫೭: ಹಣೆಯ ಮೇಲೆ ತಿಲಕವನ್ನು ಧರಿಸುವುದು ಅಗತ್ಯವೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಹಣೆಯ ಮೇಲೆ ತಿಲಕವನ್ನು ಧರಿಸುವುದು ಅಹತ್ಯವೇ ?
ಆಧ್ಯಾತ್ಮಿಕ ವಿಕಾಸವನ್ನು ಹಣೆಯ ಮೇಲಿರುವ ತಿಲಕ ತಿಳಿಸುತ್ತದೆ. ಎರಡು ಕಣ್ಣಿನ ಉಬ್ಬುಗಳ ನಡುವೆ ಪರಮ ಶಿವನ ಮೂರನೆಯ ಕಣ್ಣು ಇರುವ ಕಡೆ ನಾವು ತಿಲಕವನ್ನು ಇಟ್ಟುಕೊಳ್ಳುತ್ತೇವೆ. *ಕುಂಕುಮ, ಗಂಧ ಲೇಪನ ಮತ್ತು ವಿಭೂತಿಯನ್ನು ತಿಲಕ (ಬೊಟ್ಟು) ಎಂದು ಕರೆಯುತ್ತೇವೆ*. ಈ ತಿಲಕವನ್ನು ಹಣೆಯ ಮೇಲಿಡುವುದು ಹಿಂದೂ ಸಂಪ್ರದಾಯ ಎಂದು ಭಾವಿಸಿದರೂ ಈ ರೀತಿಯಾಗಿ ಬೊಟ್ಟು ಇಟ್ಟುಕೊಂಡಿರುವರ ಮೇಲೆ ಅನುಕೂಲ ಪ್ರಭಾವಗಳು ಇರುತ್ತವೆ.
*ಶರೀರದಲ್ಲಿನ ಐದನೆಯ ಅಥವಾ ಆರನೆಯ ಶಕ್ತಿ ಕೇಂದ್ರೀಕೃತವಾದ ಭೃಕಟಿ ಪ್ರಾಂತ್ಯದಲ್ಲಿ ಬೊಟ್ಟನ್ನು ಇಟ್ಟುಕೊಳ್ಳುತ್ತೇವೆ. ಮೂಗಿನ ದೂಲಕ್ಕೆ ಮೇಲೆ ಎರಡು ಕಣ್ಣು ಉಬ್ಬುಗಳ ನಡುವೆ ಶಕ್ತಿ ಕೇಂದ್ರೀಕೃತವಾಗಿದೆ. ಮಾನಸಿಕ ವೈದ್ಯರು ಚಿಕಿತ್ಸೆ ಮಾಡುವಾಗ ತನ್ನ ದೃಷ್ಟಿಯನ್ನು ಈ ಕೇಂದ್ರದ ಮೇಲೆ ಲಗ್ನವಿಟ್ಟು ಸಮ್ಮೋಹನವನ್ನು ಮಾಡುತ್ತಾರೆ. ಭೃಕುಟಿ ಯಲ್ಲಿ ಕುಂಕುಮವನ್ನು ಇಟ್ಟುಕೊಳ್ಳುವುದರಿಂದ ಅದು ಸೂರ್ಯನ ಕಿರಣಗಳಲ್ಲಿನ ಔಷಧೀಯ ತತ್ವಸಾರವನ್ನು ಗ್ರಹಿಸಿ ಮೆದುಳಿಗೆ ಸರಬರಾಜು ಮಾಡುತ್ತದೆ.*
ಭೃಕಟಿ ಪ್ರಾಂತ್ಯದಲ್ಲಿ ಗಂಧಲೇಪನ, ಕುಂಕುಮ ಮತ್ತು ವಿಭೂತಿಯನ್ನು ಬೆಳಿಗ್ಗೆ ಮತ್ತು ಸಾಯಂಕಾಲಗಳಲ್ಲಿ ಧರಿಸುವುದರಿಂದ ಬಹಳಷ್ಟು *ರೋಗಾಣುಗಳು ನಾಶ ಹೊಂದಿ ನಾಡಿ ವ್ಯವಸ್ಥೆ ಚುರುಕಾಗಿ* ಇರುತ್ತದೆಂದು ಸೂರ್ಯ ಕಿರಣಗಳಿಗೆ ಮತ್ತು ನಮ್ಮ ಶರೀರದ ನಡುವೆ ಇರುವ ಅಧ್ಯಯನವನ್ನು ಮಾಡುವುದರ ಮುಖಾಂತರ ತಿಳಿದಿದೆ.
ಗಂಧವನ್ನು ಮತ್ತು ವಿಭೂತಿಯನ್ನು ಧರಿಸುವುದಕ್ಕೆ ಕೆಲವು ಪದ್ದತಿಗಳಿವೆ. ಬೆಳಗ್ಗಿನ ಸಮಯದಲ್ಲಿ ವಿಭೂತಿಯನ್ನು ನೀರಿನಲ್ಲಿ ಒದ್ದೆ ಮಾಡಿ ಹಚ್ಚಿಕೊಳ್ಳಬೇಕು, ಹಾಗೆಯೇ ಮಧ್ಯಾಹ್ನ ದ ವೇಳೆ ಸ್ವಲ್ಪ ಗಂಧವನ್ನು ಕಲೆಸಿ ವಿಭೂತಿಯನ್ನು ಹಚ್ಚಿಕೊಳ್ಳಬೇಕು. ಮಹಿಳೆಯರು ಪುಡಿ ವಿಭೂತಿಯನ್ನು ಮಾತ್ರ ಹಚ್ಚಿಕೊಳ್ಳಬೇಕೆಂಬ ನಿಯಮವಿದೆ.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು