ನಾಟಿ ವೈದ್ಯ ಕಾರೆಕೊಪ್ಪ ಬೊಮ್ಮಣ್ಣ ನಿಧನ
ಚನ್ನಪಟ್ಟಣ: ತಾಲ್ಲೂಕಿನ ಕಾರೆಕೊಪ್ಪ ಗ್ರಾಮದ ನಾಟಿ ವೈದ್ಯ ಬೊಮ್ಮಣ್ಣ (೭೫) ಇಂದು ಮಧ್ಯಾಹ್ನ ವಯೋಸಹಜ ಖಾಯಿಲೆಯಿಂದ ನಿಧನ ಹೊಂದಿದರು. ಮೃತರು ಹಾವು ಕಚ್ಚಿದವರಿಗೆ ಉಚಿತ (ಮಂತ್ರದ ಮೂಲಕ) ನಾಟಿ ಚಿಕಿತ್ಸೆ ನೀಡುವ ಮೂಲಕ ಮನೆಮಾತಾಗಿದ್ದರು.ಇವರ ನಾಟಿ ವೈದ್ಯದಿಂದ ಸ್ಥಳೀಯ ಅನೇಕ ಮಂದಿ ಸಾವಿನಿಂದ ಪಾರಾಗಿದ್ದರು. ಹಾವು ಕಚ್ಚಿದ ಗಾಯಾಳುಗಳ ಪಾಲಿಗೆ ದೇವರ ರೂಪದಲ್ಲಿ ಹಣಕ್ಕೆ ಆಸೆ ಪಡದೆ ಕೇವಲ ಮಂತ್ರದಿಂದಲೇ ಸಾವಿರಾರು ಜನರಿಗೆ ಗುಣಪಡಿಸುತ್ತಿದ್ದರು.
ಮೃತರು ಪತ್ನಿ ಮತ್ತು ಮೂವರು ಪುತ್ರರನ್ನು ಅಗಲಿದ್ದಾರೆ. ಮೃತರ ಅಂತ್ಯಕ್ರಿಯೆಯು ನಾಳೆ ೧೨/೧೦/೧೯ ರ ಶನಿವಾರ ೧೦:೦೦ ಗಂಟೆಗೆ ಸ್ವಗ್ರಾಮ ಕಾರೆಕೊಪ್ಪ ದಲ್ಲಿ ಜರುಗಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು