ತಾಳೆಯೋಲೆ ೬೦: ಶರೀರ ಪೂರ್ತಿ ವಿಭೂತಿಯನ್ನು ಹಚ್ಚಿಕೊಳ್ಳಬಹುದೇ ?
ಭಾರತೀಯ ಆಚಾರ ವ್ಯವಹಾರಗಳಲ್ಲಿ ಅಡಗಿರುವ ಶಾಸ್ತ್ರೀಯತೆ ಶಾಸ್ತ್ರೀಯ ದೃಷ್ಟಿಯಿಂದ ವಿಶ್ಲೇಷಿಸಿರುವ ಗ್ರಂಥ
*ಇಂಗ್ಲಿಷ್ ಮೂಲ ಲೇಖಕ: ಡಾ ವೆಂಗನೂರು ಬಾಲಕೃಷ್ಣನ್.
ಕನಡಕ್ಕೆ: ಊರುಕುಂಟೆ ನರಸಿಂಹ ಮೂರ್ತಿ*
ಶರೀರ ಪೂರ್ತಿ ವಿಭೂತಿಯನ್ನು ಹಚ್ಚಿಕೊಳ್ಳಬಹುದೇ ?
ಮತ ಪರವಾದ ಕಾರಣಗಳನ್ನು ಪಕ್ಕಕ್ಕಿಟ್ಟು ಪರಿಶೀಲಿಸಿದ್ದೇ ಆದರೆ ವಿಭೂತಿಯನ್ನು ಶರೀರ ಪೂರ್ತಿ ಹಚ್ಚಿಕೊಳ್ಳುವುದರಿಂದ ಶಾಸ್ತ್ರೀಯವಾಗಿ ಪ್ರಯೋಜನಗಳಿವೆ.
*ಹಣೆಯ ಮೇಲೆ ವಿಭೂತಿ ಹಚ್ಚುವುದರಿಂದ ಅಲ್ಲಿನ ತೇವಾಂಶವನ್ನು ಹೀರಿಕೊಳ್ಳುತ್ತದೆ. ಕತ್ತಿನ ಹಿಂಭಾಗ ಹಚ್ಚಿದರೆ ತೇವಾಂಶ ಹೀರಿಕೊಳ್ಳುವುದರ ಜೊತೆಗೆ ರೋಗಾಣುಗಳನ್ನು ನಿರೋಧಿಸುತ್ತದೆ. ಕಿವಿಗಳ ಬಳಿ ಎಪ್ಪತ್ತೆರಡು ಸಾವಿರ (೭೨,೦೦೦) ನಾಡಿಗಳು ಸೇರುತ್ತವೆ, ಊದಿಕೊಂಡಿರುವ ಇಲ್ಲವೇ ಕೊಬ್ಬು ಪ್ರತಿ ನಾಡಿಯಲ್ಲಿಯೂ ಇದ್ದು ಕೀಲುಗಳು ಊದಿಕೊಳ್ಳುವುದಕ್ಕೆ ದಾರಿಯಾಗುತ್ತದೆ. ಇಲ್ಲಿ ವಿಭೂತಿಯನ್ನು ಹಚ್ಚುವುದರಿಂದ ಈ ಸಮಸ್ಯೆಯನ್ನು ತಡೆಯಬಹುದು.*
ಆದ್ದರಿಂದ ಶರೀರದಲ್ಲಿನ ವಿವಿಧ ಭಾಗಗಳಲ್ಲಿ ಶರೀರ ಪೂರ್ತಿಯಾಗಿ ಪವಿತ್ರವಾದ ವಿಭೂತಿಯನ್ನು ಹಚ್ಚುವುದರಿಂದ ಶರೀರಕ್ಕೆ ವ್ಯಾಧಿ ನಿರೋಧಕ ಔಷಧವನ್ನು ಉಪಯೋಗಿಸಿದ ಹಾಗಾಗಿ ಅನೇಕ ರೋಗಗಳು ಬಾರದಂತೆ ತಡೆಯಬಹುದು.
*ಸಂಗ್ರಹ ಮತ್ತು ಪ್ರಚಾರ;*
*ಗೋ ರಾ ಶ್ರೀನಿವಾಸ...*
*ಮೊ:9845856139.*
ಪ್ರತಿಕ್ರಿಯೆಗಳು