ಕೆಪಿಟಿಸಿಎಲ್ ನೌಕರ ಪಿ ರಾಜೇಶ್ ನಿಧನ
ಚನ್ನಪಟ್ಟಣ: ತಾಲ್ಲೂಕಿನ ಗೋವಿಂದೇಗೌಡನದೊಡ್ಡಿ ಗ್ರಾಮದ ಕೆಪಿಟಿಸಿಎಲ್ ನಿವೃತ್ತ ನೌಕರ ಪುಟ್ಟಸ್ವಾಮಿ ಯವರ ಮಗ ಕೆಪಿಟಿಸಿಎಲ್ ನ ಮಾರ್ಗದಾಳು ಕಾರ್ಯ ಪಾಲನಾ ಘಟಕ ೨ ಉಪವಿಭಾಗದ ನೌಕರ ಶ್ರೀ ಪಿ ರಾಜೇಶ್ (೪೧) ರವರು ಈ ದಿನ ಸಾಯಂಕಾಲ ಮೃತಪಟ್ಟಿದ್ದಾರೆ.
ಮೃತರು ತಂದೆ ಪುಟ್ಟಸ್ವಾಮಿ, ತಾಯಿ ಗೌರಮ್ಮ, ಮೂರು ಮಂದಿ ಸಹೋದರಿಯರು, ಪತ್ನಿ ಶಾಲಿನಿ ಪುತ್ರ ಅನ್ವಿತ್ ನನ್ನು ಅಗಲಿದ್ದಾರೆ.
೨೨ ರ ಮಂಗಳವಾರ ಬೆಳಿಗ್ಗೆ ೧೧:೦೦ ಗಂಟೆಗೆ ಸ್ವಗ್ರಾಮ ಗೋವಿಂದೇಗೌಡನದೊಡ್ಡಿ ಯಲ್ಲಿ ಅಂತ್ಯಸಂಸ್ಕಾರ ನೆರವೇರಲಿದೆ ಎಂದು ಕುಟುಂಬದ ಮೂಲಗಳು ತಿಳಿಸಿವೆ.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು