ಬೋನಿಗೆ ಬಿದ್ದ ಚಿರತೆ
ಚನ್ನಪಟ್ಟಣ: ತಾಲ್ಲೂಕಿನ ಇಗ್ಗಲೂರು ಡ್ಯಾಂ ಬಳಿಯ ಕೊಂಬಿನಕಲ್ಲು ಅರಣ್ಯ ವಲಯದ ಚಿಕ್ಕಬೋರೇಗೌಡನದೊಡ್ಡಿ ಗ್ರಾಮದಲ್ಲಿ ಅರಣ್ಯ ಇಲಾಖೆ ಇರಿಸಿದ್ದ ಬೋನಿಗೆ ಇಂದು ಬೆಳಗಿನ ಜಾವ ನಾಲ್ಕು ವರ್ಷದ ಗಂಡು ಚಿರತೆಯೊಂದು ಬಿದ್ದಿದೆ.
ಇಗ್ಗಲೂರು ಸೇರಿದಂತೆ ಅಕ್ಕಪಕ್ಕದ ಗ್ರಾಮಗಳ ಜನತೆ ಜಾನುವಾರುಗಳನ್ನು ತಿಂದು ಹೋಗುತ್ತಿರುವುದಲ್ಲದೆ ನಮಗೂ ಭಯವುಂಟಾಗುತ್ತಿದ್ದು ಶೀಘ್ರವಾಗಿ ಚಿರತೆಯೊಂದನ್ನು ಬಂಧಿಸಿ ದೂರದ ಕಾಡಿಗೆ ಬಿಡಬೇಕೆಂದು ಅರಣ್ಯ ಅಧಿಕಾರಿಗಳಿಗೆ ಮನವಿ ನೀಡಿದ್ದರಿಂದ ಬೋನು ಇರಿಸಲಾಗಿತ್ತು. ಹಿರಿಯ ಅಧಿಕಾರಿಗಳ ಜೊತೆ ಚರ್ಚಿಸಿ ದೂರದ ಕಾಡಿಗೆ ಸುರಕ್ಷಿತವಾಗಿ ಬಿಡಲಾಗುವುದು ಎಂದು ಅರಣ್ಯಾಧಿಕಾರಿ ಮೊಹಮ್ಮದ್ ಮನ್ಸೂರ್ ತಿಳಿಸಿದರು.
ಅರಣ್ಯಾಧಿಕಾರಿ ಮಧುಕುಮಾರ್, ಸಿಬ್ಬಂದಿಗಳಾದ ದಿಲೀಪ್, ರಾಮಕೃಷ್ಣ, ಜಗದೀಶ್ ಮತ್ತು ವೆಂಕಟನಾರಾಯಣ ಹಾಜರಿದ್ದರು.
ಗೋ ರಾ ಶ್ರೀನಿವಾಸ...
ಮೊ:98458560139.
ಪ್ರತಿಕ್ರಿಯೆಗಳು