Tel: 7676775624 | Mail: info@yellowandred.in

Language: EN KAN

    Follow us :


ರಾಮನಗರದಲ್ಲಿ ರಾರಾಜಿಸಿದ ಭಗವಾನ ಬಿರಸಾ ಮುಂಡಾ

Posted date: 22 Nov, 2019

Powered by:     Yellow and Red

ರಾಮನಗರದಲ್ಲಿ ರಾರಾಜಿಸಿದ ಭಗವಾನ  ಬಿರಸಾ ಮುಂಡಾ

ಸಾರ್ಥಕಾಯಿತು ಗಿರಿಜನ ಸ್ವಾಭಿಮಾನ ದಿನ : ವನವಾಸಿ ಕಲ್ಯಾಣ, ಕರ್ನಾಟಕದ ವತಿಯಿಂದ ರಾಮನಗರ ಜಿಲ್ಲೆಯಲ್ಲೊಂದು ವಿಶೆಷ ರೀತಿಯಲ್ಲಿ ಗಿರಿಜನ ಸ್ವಾಭಿಮಾನ ದಿನ (ಭಗವಾನ್ ಬಿರಸಾ ಮುಂಡಾ ಜಯಂತಿ)  ವನ್ನು  ‌ ‌    ದಿನಾಂಕ 21/11/2019 ರಂದು ಆಚರಿಸಲಾಯಿತು.

ರಾಮನಗರ , ಕನಕಪುರ, ಮಾಗಡಿ ತಾಲೂಕುಗಳಲ್ಲಿ ಬುಡಕಟ್ಟು ಜನಾಂಗದ ಈರುಳಿಗರನ್ನು ಒಳಗೊಂಡ ರಾಮನಗರ ಜಿಲ್ಲೆಯು ಅದ್ಭುತವಾದ ವನವಾಸಿಗರ ಶೊಭಾಯಾತ್ರೆಗೆ ಸಾಕ್ಷಿಯಾಯಿತು.

ಸಾವಿರಾರು ಸಂಖ್ಯೆಯಲ್ಲಿ ತಮ್ಮ ಸಾಂಪ್ರದಾಯಿಕ ವೇಷಭೂಷಣವನ್ನು ಧರಿಸಿ ಸಾಂಪ್ರದಾಯಿಕ ಹಾಡು , ನೃತ್ಯ, ವಾದ್ಯ , ಕುಣಿತದ ಮೂಲಕ   ವನವಾಸಿ ಬಂಧುಗಳು,  ಪುಟಾಣಿ ಮಕ್ಕಳು, ಯುವಕರು, ಮಾತೆಯರು ಸಮುದಾಯದ ಹಿರಿಯರು ಮತ್ತು ವನವಾಸಿ ಕಲ್ಯಾಣದ ಹಿರಿಯರನ್ನು ಒಳಗೊಂಡ ಶೋಭಾಯಾತ್ರೆಯು ...
ಭಗವಾನ್ ಬಿರಸಾ ಮುಂಡಾ ಕೀ ಜೈ.. ಭಾರತ್ ಮಾತಾ ಕೀ ಜೈ.. ವನವಾಸಿ ನಗರವಾಸಿ ಗ್ರಾಮವಾಸಿ ನಾವೆಲ್ಲರೂ ಭಾರತವಾಸಿ.. ಮುಂತಾದ ಘೊಷಣೆಗಳನ್ನು ಮೊಳಗಿಸುತ್ತಾ 1ಕಿಮಿ ದೂರದವರೆಗೂ ಸುಭದ್ರವಾದ ಆರಕ್ಷಕ (ಪೊಲಿಸ್) ಪಡೆಯೊಂದಿಗೆ ಹೊರಟ ಶೊಭಾಯಾತ್ರೆಯು.. ರಾಮನಗರದ ಗಲ್ಲಿ ಗಲ್ಲಿಗಳಲ್ಲಿ ಬುಡಕಟ್ಟು ಜನರ ಒಗ್ಗಟ್ಟು, ಸಾಂಪ್ರದಾಯಿಕ ಕಲೆ , ಮತ್ತು ಶಿಸ್ತಿನಮೂಲಕ ಭಗವಾನ್ ಬಿರಸಾ ಮುಂಡಾ ರವರನ್ನು ಪರಿಚಯಿಸುವ ಮೂಲಕ ಸಾವಿರಾರು ಸಂಖ್ಯೆಯಲ್ಲಿ ಭಾಗವಹಿಸಿದ ಪ್ರೆಕ್ಷಕರಿಗೆ ಮನರಂಜನೆ ನೀಡುವಲ್ಲಿ ಸಾಕ್ಷಿಯಾಯಿತು.

ವೇದಿಕೆ ಕಾರ್ಯಕ್ರಮ :
ಶೊಭಾಯಾತ್ರೆಯ ನಂತರ ನಡೆದ ವೇದಿಕೆ ಕಾರ್ಯಕ್ರಮದಲ್ಲೂ ಕೂಡ ಸಾವಿರಾರು ಸಂಖ್ಯೆಯಲ್ಲಿ ವನವಾಸಿ ಬಂಧುಗಳು ಮತ್ತು ನಗರದ ಜನರು ಭಾಗವಹಿಸಿ ಸಭಾಂಗಣ ಪೂರ್ತಿ ತುಂಬಿ ತುಳುಕಿತು.

ವೇದಿಕೆಯನ್ನು ಅಲಂಕರಿಸಿದ
ವನವಾಸಿ ಕಲ್ಯಾಣದ ಹಿರಿಯರಾದ ಶ್ರೀ ಶ್ರೀಪಾದ್ ( ಕ್ಷೆತ್ರಿಯ ಸಂಘಟನಾ ಕಾರ್ಯದರ್ಶಿ) ಬಿರಸಾ ಮುಂಡಾರವರ ಕುರಿತು ಮುಖ್ಯ ವಕ್ತಾರರಾಗಿ ಮಾತನಾಡಿದರು.
ಶ್ರೀ ವೆಂಕಟೇಶ್ ಸಾಗರ್ ( ರಾಜ್ಯಧ್ಯಕ್ಷರು) ಪ್ರಸ್ತಾವಣಾ ಭಾಷಣವನ್ನು ಮಾಡಿದರು.
ಶ್ರೀ ಸತ್ಯಕಿರ್ತೀ ( ಪ್ರಾಂತದ ಸಹ ಕಾರ್ಯದರ್ಶಿಗಳು) ಕಾರ್ಯಕ್ರಮ ಪೂರ್ತಿ ಉಪಸ್ತಿತರಿದ್ದರು.
ಹಾಗು ಅಧಿಕಾರಿಗಳಾದ
ಶ್ರೀಮತಿ ಎಂ ಎಸ್ ಅರ್ಚನಾ ( ರಾಮನಗರ ಜಿಲ್ಲಾಧಿಕಾರಿಗಳು)
ಪ್ರೋ ಟಿ ಬಿ  ಬಸವನಗೋಡ ( ನಿರ್ದೇಶಕರು, ಬುಡಕಟ್ಟು ಸಂಶೋಧನಾ ಸಂಸ್ಥೆ ಮೈಸೂರು)
ಶ್ರೀ ಕೃಷ್ಣಮೂರ್ತಿ ( ರಾಮನಗರ  ಜಿಲ್ಲಾಧ್ಯಕ್ಷರು , ವನವಾಸಿ ಕಲ್ಯಾಣ)
ಇವರೆಲ್ಲರೂ..
ಮಾತನಾಡಿ ಸಮೂದಾಯದ ಸಮಸ್ಯೆಗಳನ್ನು   ಮತ್ತು ಮುಂದಿನ ದಿನಗಳಲ್ಲಿ ವನವಾಸಿ ಕಲ್ಯಾಣದ ಜೊತೆಯಲ್ಲಿ ಮಾಡಬಹುದಾದ ಕೆಲವು ಕಾರ್ಯಗಳನ್ನು ಪ್ರಸ್ತುತಪಡಿಸಲಾಯಿತು.
ಶ್ರೀ ರಾಜು (ಕಾರ್ಯಕ್ರಮದ ನಿರ್ವಹಣೆ ಮಾಡಿದರು)
ಶ್ರೀ ಸತೀಶ್ ( ಸ್ವಾಗತ ಪರಿಚಯ ನಡೆಸಿಕೊಟ್ಟರು.)
ಶ್ರೀ ಮಂಜುನಾಥ ( ರಾಮನಗರ ಜಿಲ್ಲಾ ಸಂಘಟನಾ ಕಾರ್ಯದರ್ಶಿ.) ವಂದನಾರ್ಪನೆ ನಡೆಸಿಕೊಟ್ಟರು.
ಶ್ರೀ ದೊಂಡು ಪಾಟೀಲ ( ರಾಜ್ಯ ಹಿತರಕ್ಷಾ ಪ್ರಮುಖರು, ವನವಾಸಿ ಕಲ್ಯಾಣ) ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.


ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑