ಹೆಚ್ ಡಿ ಕುಮಾರಸ್ವಾಮಿ ಜನ್ಮದಿನ ಪ್ರಯುಕ್ತ ರೋಗಿಗಳಿಗೆ ಹಣ್ಣು ಹಂಪಲು ವಿತರಣೆ
ಚನ್ನಪಟ್ಟಣ: ಮಾಜಿ ಮುಖ್ಯಮಂತ್ರಿ, ಜೆಡಿಎಸ್ ಧುರೀಣ, ಕ್ಷೇತ್ರದ ಶಾಸಕರಾದ ಹೆಚ್ ಡಿ ಕುಮಾರಸ್ವಾಮಿ ಯವರ ಜನ್ಮ ದಿನದ ಪ್ರಯುಕ್ತ ಜೆಡಿಎಸ್ ಪಕ್ಷದ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಸಾರ್ವಜನಿಕ ಆಸ್ಪತ್ರೆಯ ಒಳ ರೋಗಿಗಳಿಗೆ ಹಣ್ಣು ಹಂಪಲು ವಿತರಿಸುವ ಮೂಲಕ ಆಚರಿಸಿದರು.
ಇದಕ್ಕೂ ಮೊದಲು ಪಕ್ಷದ ಕಛೇರಿಯಲ್ಲಿ ಕೇಕ್ ಕತ್ತರಿಸಿ ಘೋಷಣೆ ಕೂಗುವ ಮೂಲಕ ಕುಮಾರಸ್ವಾಮಿ ಯವರ ಜನ್ಮ ದಿನವನ್ನು ಪಕ್ಷದ ಸ್ಥಳೀಯ ಧುರೀಣರು ನೆರವೇರಿಸಿದರು.
ಹಣ್ಣು ಹಂಪಲು ವಿತರಣೆ ವೇಳೆ ಜೆಡಿಎಸ್ ನಗರ ಘಟಕದ ಅಧ್ಯಕ್ಷ ರಾಂಪುರ ರಾಜಣ್ಣ, ಮಾಜಿ ತಾಲ್ಲೂಕು ಅಧ್ಯಕ್ಷ ವಡ್ಡರಹಳ್ಳಿ ರಾಜಣ್ಣ, ಗುತ್ತಿಗೆದಾರ ಗೋವಿಂದಳ್ಳಿ ನಾಗರಾಜು, ಮುಖಂಡ ಬಿಳಿಯಪ್ಪ, ಎಪಿಎಂಸಿ ನಿರ್ದೇಶಕಿ ವಿಮಲಾ, ಉಷಾ, ವಕೀಲ ಹನುಮಂತು, ಕೆಂಚೇಗೌಡ ಸೇರಿದಂತೆ ಅನೇಕ ಸ್ಥಳೀಯ ಮುಖಂಡರು ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು