Tel: 7676775624 | Mail: info@yellowandred.in

Language: EN KAN

    Follow us :


ಮಾಜಿ ಮುಖ್ಯಮಂತ್ರಿಯಾದ ನಂತರ ರಾಮನಗರ ಚನ್ನಪಟ್ಟಣ ಅವಳಿನಗರದ ಕನಸು ಕಂಡ ಕುಮಾರಸ್ವಾಮಿ

Posted date: 28 Jan, 2020

Powered by:     Yellow and Red

ಮಾಜಿ ಮುಖ್ಯಮಂತ್ರಿಯಾದ ನಂತರ ರಾಮನಗರ ಚನ್ನಪಟ್ಟಣ ಅವಳಿನಗರದ ಕನಸು ಕಂಡ ಕುಮಾರಸ್ವಾಮಿ

ಚನ್ನಪಟ್ಟಣ:  *ಅವಳಿ ನಗರ*

ರಾಮನಗರ ಮತ್ತು ಚನ್ನಪಟ್ಟಣ ನಗರವನ್ನು ಒಗ್ಗೂಡಿಸಿ ಹುಬ್ಬಳ್ಳಿ ಧಾರವಾಡ ರೀತಿಯಲ್ಲಿ ಅವಳಿ ನಗರಗಳನ್ನು ಮಾಡಿ ಅಭಿವೃದ್ಧಿಯತ್ತ ಕೊಂಡೊಯ್ಯುತ್ತೇನೆ ಎಂದು ಮಾಜಿ ಮುಖ್ಯಮಂತ್ರಿ, ಕ್ಷೇತ್ರದ ಶಾಸಕ ಹೆಚ್ ಡಿ ಕುಮಾರಸ್ವಾಮಿ ಹೇಳಿದರು.

ಅವರು ಇಂದು ಕ್ಷೇತ್ರದ ಹಳ್ಳಿಗಳಲ್ಲಿ ಜನ ಸಂಪರ್ಕ ಸಭೆ ಗೆ ಹೊರಡುವ ಮುನ್ನಾ ಇತಿಹಾಸ ಪ್ರಸಿದ್ಧ ಕೆಂಗಲ್ ಆಂಜನೇಯ ಸ್ವಾಮಿಗೆ ಪೂಜೆ ಸಲ್ಲಿಸಿ ಮಾಧ್ಯಮದವರ ಜೊತೆ ಮಾತನಾಡಿದರು.


ಕೆಂಗಲ್ ಅಭಿವೃದ್ಧಿಗೆ ನೀಡಿದ ೨೧ ಕೋಟಿ ಏನಾಯ್ತು ? ಅರ್ಚಕರ ಪ್ರಶ್ನೆ

ತಾವೂ ಮುಖ್ಯಮಂತ್ರಿಯಾಗಿದ್ದಾಗ ಕೆಂಗಲ್ ಕ್ಷೇತ್ರದ ಅಭಿವೃದ್ಧಿಗೆ ೨೧ ಕೋಟಿ ರೂಪಾಯಿಗಳ ಅನುದಾನ ನೀಡಿದ್ದೇನೆಂದು ಹೇಳಿಕೆ ನೀಡಿದ್ದು ಹೇಳಿಕೆಯಾಗಿಯೇ ಉಳಿದಿದೆ ಎಂದು ಅರ್ಚಕ ಶರತ್ ಮತ್ತು ಸಿಬ್ಬಂದಿಗಳ ಪ್ರಶ್ನೆಗೆ ನಾನು ಮಂಜೂರು ಮಾಡಿದ್ದು ನಿಜ, ಬಿಡಗಡೆಗೆ ಮುನ್ನವೇ ಸರ್ಕಾರ ಪತನಗೊಂಡಿದ್ದು ಈಗಲೂ ಪ್ರಯತ್ನಿಸುತ್ತೇನೆ ಎಂದು ಅಭಯ ನೀಡಿದರು.


*ಮಿಣಿಮಿಣಿ ಪೌಡರ್*

ಬಾಂಬ್ ನಲ್ಲಿದ್ದದ್ದು ಮಿಣಿಮಿಣಿ ಪೌಡರ್ ಎಂದು ರಾಜ್ಯ ಮಟ್ಟದ ಪತ್ರಿಕೆಯೊಂದರ ಮಂಗಳೂರು ಆವೃತ್ತಿಯಲ್ಲಿ ಪ್ರಕಟವಾಗಿದ್ದನ್ನು ಉಲ್ಲೇಖಿಸಿ ಈ ಮಾತನ್ನು ಹೇಳಿದ್ದೇನೆ. ಆದರೆ ಬಿಜೆಪಿ ನಾಯಕರು ಮತ್ತು ಕಾರ್ಯಕರ್ತರು ಸರ್ಕಾರದ ಗಂಭೀರತೆಯನ್ನು ಅರಿಯದೆ ಅವರಿಗೆ ಇಷ್ಟ ಬಂದ ರೀತಿಯಲ್ಲಿ ಹೇಳಿಕೆ ನೀಡಿ ವೈರಲ್ ಮಾಡುತ್ತಿದ್ದಾರೆ. ಬಾಂಬ್ ಮತ್ತು ಭದ್ರತಾ ವ್ಯವಸ್ಥೆಯಲ್ಲಿ ಸರ್ಕಾರ ಎಡವಿದೆ. ಅವರ ರೀತಿಯಲ್ಲಿ ನಾನು ಪೋಟೋಗಾಗಿ ಫೋಸ್ ಕೊಟ್ಟು ಹೋಗುವವನಲ್ಲ, ನಾನು ಕೆಲಸ ಮಾಡುವ ವ್ಯಕ್ತಿ ಎಂದು ಸಮರ್ಥಿಸಿಕೊಂಡರು.


*ರಾಜೀವಗಾಂಧಿ ವಿವಿ*

ರಾಮನಗರದಲ್ಲಿ ರಾಜೀವಗಾಂಧಿ ವಿವಿ ನಿರ್ಮಿಸಿ ಮೆಡಿಕಲ್ ಕಾಲೇಜು, ನರ್ಸಿಂಗ್ ಕಾಲೇಜು ಮತ್ತು ೧,೦೦೦ ಹಾಸಿಗೆಯ ಆಸ್ಪತ್ರೆ ನಿರ್ಮಿಸಲು ಯೋಜನೆ ರೂಪಿಸಲಾಗಿದೆ, ಈಗಿನ ಸರ್ಕಾರ ನಿರ್ಮಾಣ ಮಾಡಲು ಮೀನಮೇಷ ಎಣಿಸುತ್ತಿದೆ. ನನಗೆ ಹೆಸರು ಬರುವುದು ಏನೂ ಬೇಡ, ಯಾರೂ ಮಾಡಿದರೂ ಒಳ್ಳೆಯದೇ ಎಂದುತ್ತರಿಸಿದರು.


*ಹದಿನೈದು ದಿನ ಕ್ಷೇತ್ರ ಪ್ರವಾಸ*

ಇಂದಿನಿಂದ ಹದಿನೈದು ದಿನಗಳ ಕಾಲ ಪ್ರತಿ ಹಳ್ಳಿಗಳು ಮತ್ತು ನಗರದ ಬೀದಿಬೀದಿಗಳನ್ನು ಸುತ್ತಿ‌ ಜನರ ಸಮಸ್ಯೆಗಳನ್ನು ಪರಿಹರಿಸಲು ಪ್ರಾಮಾಣಿಕವಾಗಿ ಪ್ರಯತ್ನಿಸುತ್ತೇನೆ. ಕ್ಷೇತ್ರದ ಅಭಿವೃದ್ಧಿಯೇ ನನ್ನ ಮೊದಲ ಆದ್ಯತೆ ಎಂದರು.


*ಕಾದು ಸುಸ್ತಾದ ಅಧಿಕಾರಿಗಳು, ಕಾರ್ಯಕರ್ತರು ಮತ್ತು ಮಾಧ್ಯಮದವರು*

ಹತ್ತು ಗಂಟೆಗೆ ನಿಗದಿಯಾಗಿದ್ದ ಪ್ರವಾಸಕ್ಕೆ ಸತತ ಮೂರು ಗಂಟೆಗಳ ಕಾಲ ತಡವಾಗಿ ಬಂದ ಕುಮಾರಸ್ವಾಮಿ ಯವರು ತಹಶಿಲ್ದಾರ್, ಪೌರಾಯುಕ್ತ, ವೈದ್ಯಾಧಿಕಾರಿ ಸೇರಿದಂತೆ ಬಹುತೇಕ ಇಲಾಖೆಯ ಅಧಿಕಾರಿಗಳು, ಜಯಮುತ್ತು, ಲಿಂಗೇಶಕುಮಾರ್, ರಾಂಪುರ ರಾಜಣ್ಣ ಸೇರಿದಂತೆ ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಹಾಗೂ ದೃಶ್ಯ ಮತ್ತು ಪತ್ರಿಕಾ ಮಾಧ್ಯಮದವರು ಎಂದಿನಂತೆ ಕಾದು ಸುಸ್ತಾದರು.


*ದೂರುಗಳ ಸುರಿಮಳೆಗೈದ ಮಾಹಿತಿ ಕಾರ್ಯಕರ್ತ*

ನಂತರ ಕರಿಕಲ್ ದೊಡ್ಡಿ ಸಂಪರ್ಕ ಸಭೆ ಮುಗಿಸಿ ವಂದಾರಗುಪ್ಪೆ ಗ್ರಾಮಕ್ಕೆ ಬಂದಾಗ ಮಾಹಿತಿ ಹಕ್ಕು ಕಾರ್ಯಕರ್ತ ಕೃಷ್ಣೇಗೌಡ ಹಲವು ದಾಖಲೆಗಳ ಸಮೇತ ದೂರುಗಳನ್ನು ನೀಡಿದರು. ತಾಳ್ಮೆಯಿಂದ ಕೇಳಿಸಿಕೊಂಡ ಶಾಸಕರು ಅಧಿಕಾರಿಗಳನ್ನು ಕರೆದು ಕ್ರಮಕೈಗೊಳ್ಳುವಂತೆ ತಿಳಿಸಿದ ಅವರು ಹೆಚ್ಚು ದೂರುಗಳಿದ್ದರೆ ನೇರವಾಗಿ ಬೆಂಗಳೂರಿನ ಮನೆಗೆ ಬಂದು ಕಾಣುವಂತೆ ತಿಳಿಸಿದರು.


*ದೂರುದಾರರಿಗಿಂತ ನಾಯಕರೇ ಹೆಚ್ಚು*

ದೂರುದಾರರಿಗಿಂತ ಸ್ಥಳೀಯ ನಾಯಕರೇ ಕುಮಾರಸ್ವಾಮಿ ಯವರ ಸುತ್ತಾ ಗಿರಕಿ ಹೊಡೆಯುತ್ತಿದ್ದು ದೂರು ದಾರರಿಗೆ ಅವಕಾಶ ಕಡಿಮೆಯಾಗಿದ್ದು ನಾಯಕರೇ ಅವರಿಗೆ ಅಡ್ಡಗಲಾಗಿದ್ದಲ್ಲದೆ ಕಡಿಮೆ ಅವಧಿ ಮತ್ತು ಸಮಯ ಮೀರಿದ್ದರಿಂದ ಶಾಸಕರ ಜನ ಸಂಪರ್ಕ ಸಭೆ ಮಹತ್ವ ಕಳೆದುಕೊಂಡಿತ್ತು.


ಗೋ ರಾ ಶ್ರೀನಿವಾಸ...

ಮೊ:9845856139.



ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑