Tel: 7676775624 | Mail: info@yellowandred.in

Language: EN KAN

    Follow us :


ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ

Posted date: 03 Feb, 2020

Powered by:     Yellow and Red

ಅಂಗನವಾಡಿ ಮತ್ತು ಪ್ರಾಥಮಿಕ ಶಾಲಾ ಮಕ್ಕಳಿಗೆ ಚಾಣು ಗ್ರೂಪ್ ನಿಂದ ಬ್ಯಾಗು ಮತ್ತು ಪುಸ್ತಕ ವಿತರಣೆ

ಚನ್ನಪಟ್ಟಣ: ಬೆಂಗಳೂರಿನ ಹೊಸಕೋಟೆ ರವಿ ರವರ ಚಾಣು ಗ್ರೂಪ್ (ಸಿಕೆಆರ್) ವತಿಯಿಂದ ಚನ್ನಂಕೇಗೌಡನದೊಡ್ಡಿ/ಗೋವಿಂದೇಗೌಡನದೊಡ್ಡಿ, ಹುಚ್ಚಯ್ಯನದೊಡ್ಡಿ ಗ್ರಾಮಗಳ ಅಂಗನವಾಡಿ ಮತ್ತು ಕಿರಿಯ ಪ್ರಾಥಮಿಕ ಶಾಲೆಯ ಒಟ್ಟು ೧೦೫ ಮಕ್ಕಳಿಗೆ ಉಚಿತವಾಗಿ ಶಾಲಾ ಬ್ಯಾಗು, ನೋಟ್ ಪುಸ್ತಕಗಳು, ಸ್ಲೇಟು, ಪೆನ್ನು ಗಳನ್ನು ಹಾಗೂ ಶಿಕ್ಷಕರು ಮತ್ತು ಐದರಿಂದ ಏಳನೇ ತರಗತಿಯ ಮಕ್ಕಳಿಗೆ ಅರ್ಥಸಹಿತ ಭಗವದ್ಗೀತೆಯ ಪುಟ್ಟ ಪುಸ್ತಕವನ್ನು ವಿತರಿಸಲಾಯಿತು.


ಶಾಲಾ ಸಾಮಾಗ್ರಿಗಳನ್ನು ವಿತರಿಸಿ ಮಾತನಾಡಿದ ಜಾನಪದ ಕಲಾವಿದೆ ಲಕ್ಷ್ಮಿ‌ ಗೋ ರಾ ಶ್ರೀನಿವಾಸ ರವರು ಮಕ್ಕಳು ಶ್ರದ್ಧೆಯಿಂದ ಓದಬೇಕು, ಓದಿದ್ದನ್ನು ಮನನ ಮಾಡಿಕೊಂಡು ಸಾಧನೆಯತ್ತ ಮುನ್ನುಗ್ಗಬೇಕು.


ಅರ್ಥವಾಗದ್ದನ್ನು ಪದೇಪದೇ ಶಿಕ್ಷಕರ ಬಳಿ ಪ್ರಶ್ನಿಸಿ‌ ತಿಳಿದುಕೊಳ್ಳಬೇಕು, ಈ ಪ್ರಶ್ನಿಸುವ ಮನೋಭಾವ ನಿಮ್ಮ ಮುಂದಿನ ಜೀವನಗಳಲ್ಲಿ ಬಹಳ ಪ್ರಯೋಜನಕಾರಿಯಾಗಬಲ್ಲದು ಎಂದರು.


ಮಕ್ಕಳಲ್ಲಿ ಅದರಲ್ಲೂ ಹೆಣ್ಣು ಮಕ್ಕಳು ತಮ್ಮ ಮಾನ ಮತ್ತು ಪ್ರಾಣ ಕಾಪಾಡಿಕೊಳ್ಳಲು ಕರಾಟೆ ಶಿಕ್ಷಣ ಅತ್ಯವಶ್ಯಕವಾಗಿದೆ. ನಾನು ಕರಾಟೆ ಶಿಕ್ಷಕಿಯಾಗಿದ್ದು ತಾವು ಮತ್ತು ತಮ್ಮ ಶಿಕ್ಷಕರು ಒಪ್ಪಿದರೆ ಕೆಲಕಾಲ ತಮ್ಮೆಲ್ಲರಿಗೂ‌ ಉಚಿತವಾಗಿ ಕರಾಟೆ ಕಲಿಸಿಕೊಡುವುದಾಗಿ ತಿಳಿಸಿದರು.


ಕರ್ನಾಟಕ ಜಾನಪದ ಪರಿಷತ್ತಿನ ತಾಲ್ಲೂಕು ಅಧ್ಯಕ್ಷರಾದ ಗೋ ರಾ ಶ್ರೀನಿವಾಸ ಮಾತನಾಡಿ ಹಳ್ಳಿಯ ವಾತಾವರಣ ನಗರದಲ್ಲಿ ಸಿಗುವುದಿಲ್ಲ, ನಗರದಲ್ಲಿ ಓದಿದ ಮಕ್ಕಳು ಕೇವಲ ಪುಸ್ತಕದ ಪಾಠಗಳನ್ನು ಮಾತ್ರ ಕಲಿಯುತ್ತಾರೆ, ಆದರೆ ಹಳ್ಳಿಗಳಲ್ಲಿ ಓದುವ ಮಕ್ಕಳು ಪುಸ್ತಕದ ಜೊತೆಗೆ ಜೀವನದ ಪಾಠಗಳನ್ನು ಕಲಿಯಬಹುದು. ನೀವು ಶಾಲೆಯಲ್ಲಿ ಕಲಿತಷ್ಟೇ ಮನೆಯಲ್ಲಿಯೂ ಓದಿಕೊಂಡರೆ ಮುಂದಿನ ವಿದ್ಯಾಭ್ಯಾಸ ಸುಲಲಿತವಾಗುತ್ತದೆ ಎಂದು ತಿಳಿಸಿದರು.


ವಿತರಣಾ ಸಮಯದಲ್ಲಿ ಹೊನ್ನಿಗಾನಹಳ್ಳಿ ಸುಜೇಂದ್ರ, ಹುಚ್ಚಯ್ಯನದೊಡ್ಡಿ ಎಸ್ ಡಿ ಎಂ ಸಿ‌ ಅಧ್ಯಕ್ಷ ಕೃಷ್ಣ, ಶಿಕ್ಷಕಿಯರಾದ ಸುವರ್ಣ, ಜಯಲಕ್ಷ್ಮಮ್ಮ, ಮಜುಳಾ, ಅಂಗನವಾಡಿ ಶಿಕ್ಷಕಿಯರಾದ ಚಿಕ್ಕಚನ್ನಮ್ಮ, ಗೌರಮ್ಮ ಉಪಸ್ಥಿತರಿದ್ದರು.


ಗೋ ರಾ ಶ್ರೀನಿವಾಸ...

ಮೊ:9845856139.

ಪ್ರತಿಕ್ರಿಯೆಗಳು

  • ನಿಮ್ಮ ಅಭಿಪ್ರಾಯ ತಿಳಿಸುವಲ್ಲಿ ನೀವು ಮೊದಲಿಗರಾಗಿ.

ನಿಮ್ಮ ಅಭಿಪ್ರಾಯಗಳನ್ನು ಬರೆಯಿರಿ/ತಿಳಿಸಿ.

Top Stories »  


Top ↑