ಸರಳ ಸಜ್ಜನ, ಹೃದಯವಂತ ವೇದಮೂರ್ತಿ ಗೆ ಶುಭಾಶಯಗಳ ಸುರಿಮಳೆ
ಚನ್ನಪಟ್ಟಣ:ಫೆ/೨೨/೨೦/ಶನಿವಾರ.
ನಗರದ ಸಾರ್ವಜನಿಕ ಆಸ್ಪತ್ರೆಯಲ್ಲಿ ಹಿರಿಯ ಫಾರ್ಮಾಸಿಸ್ಟ್ ಆಗಿ ಪ್ರಾಮಾಣಿಕ ಹಾಗೂ ಕಾಳಜಿಯಿಂದ ಕರ್ತವ್ಯ ನಿರ್ವಹಿಸುತ್ತಿರುವ ವೇದಮೂರ್ತಿ ಯವರಿಗೆ ತಾಲ್ಲೂಕಿನ ಅನೇಕ ಸಂಘಸಂಸ್ಥೆಗಳ ಪದಾಧಿಕಾರಿಗಳು ತಮ್ಮದೇ ರೀತಿಯಲ್ಲಿ ಜನುಮದಿನ ಆಚರಿಸುವ ಮೂಲಕ ಶುಭಾಶಯಗಳನ್ನು ಹೇಳಿದ್ದಾರೆ.
ಮುಂಜಾನೆ ಕೂಗುವ ಕೋಳಿ ಸ್ಥಳೀಯರನ್ನು ಮಾತ್ರ ಎಚ್ಚರಿಸಿದರೇ ವೇದಮೂರ್ತಿ ಯವರು ತಮ್ಮ ಮೊಬೈಲ್ ಮೂಲಕ ನಗರದ ಅನೇಕ ಗೆಳೆಯರನ್ನಲ್ಲದೇ, ಗ್ರಾಮೀಣ ಭಾಗದ ತಮ್ಮ ಬಂಧು ಮಿತ್ರರನ್ನು ಬೆಳಗಿನ ಜಾವ ನಾಲ್ಕು ಗಂಟೆಯಿಂದಲೇ ಎಬ್ಬಿಸಿ ನಡೆಯುವಂತೆ (ವಾಕಿಂಗ್) ಎಚ್ಚರಿಸಿ ಪ್ರೇರೇಪಿಸುತ್ತಾರೆ. ಇವರ ಕರೆಗೆ ಓಗೊಟ್ಟ ಅಧಿಕಾರಿಗಳು, ಸಿಬ್ಬಂದಿಗಳು, ಸಮಾಜಸೇವಕರು, ರಾಜಕಾರಣಿಗಳು ಹಾಗೂ ಸನ್ಮಿತ್ರರು ನನ್ನ ಆರೋಗ್ಯದ ಗುಟ್ಟು ವೇದಮೂರ್ತಿ ಯವರಿಂದ ಎಂದು ಹೆಮ್ಮೆಯಿಂದ ಹೇಳಿಕೊಳ್ಳುತ್ತಾರೆ.
ಕೇವಲ ಸನ್ಮಿತ್ರರಿಗೆ ಮಾತ್ರ ನಡಿಗೆಯ ಮಹತ್ವ ತಿಳಿಸದೇ ಆಸ್ಪತ್ರೆಗೆ ಬರುವ ರೋಗಿಗಳಿಗೂ ಸಹ ತಮ್ಮ ಬಿಡುವಿನ ವೇಳೆಯಲ್ಲಿ ನಡಿಗೆಯಿಂದ ಮತ್ತು ನೀರು ಸೇವನೆಯಿಂದ ಆಗುವ ಆಗುವ ಉಪಯೋಗಗಳನ್ನು ತಪ್ಪದೇ ತಿಳಿಸಿಕೊಡುತ್ತಾರೆ. ಅವರಿಗೆ ಸಂಬಂಧಿಸಿದ ಔಷಧ ದಾಸ್ತಾನನ್ನು ಕ್ರಮಬದ್ಧವಾಗಿ ಜೋಡಿಸಿ, ಸ್ವಚ್ಚತೆ ಕಾಪಾಡಿಕೊಂಡಿದ್ದು ಆಸ್ಪತ್ರೆಯ ಸ್ವಚ್ಚತೆಗೂ ಗಮನ ನೀಡಿ ರೋಗಿಗಳ ಹಾಗೂ ಸಿಬ್ಬಂದಿಗಳ ಮೆಚ್ಚುಗೆಗೆ ಕಾರಣವಾಗಿದ್ದಾರೆ.
ನನ್ನ ಜನುಮದಿನವನ್ನು ಹದಿನೈದಕ್ಕೂ ಹೆಚ್ಚು ಸಂಘಸಂಸ್ಥೆಗಳು ಬೇರೆಬೇರೆಯಾಗಿ ಆಚರಿಸಿದ್ದು ಮುಜುಗರದೊಂದಿಗೆ ಸಂತೋಷವೂ ಆಗಿದೆ. ತಾಲ್ಲೂಕಿನ ಇಷ್ಟೊಂದು ಮಂದಿ ನನ್ನ ಮೇಲೆ ವಿಶ್ವಾಸ ಇಟ್ಟಿರುವುದು ನನ್ನ ಪೂರ್ವಜನ್ಮದ ಪುಣ್ಯ. ವಾಕಿಂಗ್ ಟೀಂ ನಿಂದ ರಸ್ತೆ ಬದಿಯಲ್ಲಿ, ಕೆಲವು ಸಂಘಸಂಸ್ಥೆಗಳಿಂದ ಆಸ್ಪತ್ರೆ ಮತ್ತು ನಮ್ಮ ಮನೆಯಲ್ಲಿ, ಇನ್ನೂ ಕೆಲವರು ವೃದ್ದಾಶ್ರಮದಲ್ಲಿ ಆಚರಿಸಿ ಶುಭಕೋರಿರುವುದು ಸಂತಸ ತಂದಿದೆ. ಅದರಲ್ಲೂ ನನ್ನ ಊರಿನ ಯುವಕ ಮಿತ್ರರು ಗ್ರಾಮದಲ್ಲಿ ಹುಟ್ಟುಹಬ್ಬ ಆಚರಿಸಿದ್ದು ಅತೀವ ಸಂತೋಷವಾಗಿದೆ ಎಂದು ಭಾವುಕಕ್ಕೆ ಒಳಗಾದರು.
ಜನ್ಮ ದಿನದ ಶುಭಾಶಯಗಳನ್ನು ಸ್ಥಳೀಯ ರಾಜಕಾರಣಿಗಳು, ತಾಲ್ಲೂಕು ಮಟ್ಟದ ಅಧಿಕಾರಿಗಳು ಮತ್ತು ಸಿಬ್ಬಂದಿಗಳು, ಪತ್ರಕರ್ತರು, ಅನೇಕ ಸಂಘಸಂಸ್ಥೆಗಳ ಪದಾಧಿಕಾರಿಗಳು ಹಾಗೂ ನೀಲಕಂಠನಹಳ್ಳಿ ಗ್ರಾಮದ ಯುವಕರು ಸನ್ಮಾನಿಸುವ ಮೂಲಕ ಶುಭಕೋರಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು