ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಅಪ್ಪಗೆರೆ ವೆಂಕಟಯ್ಯ
ಚನ್ನಪಟ್ಟಣ: ತಾಲ್ಲೂಕಿನ ಅಪ್ಪಗೆರೆ ಗ್ರಾಮದ ವೆಂಕಟಯ್ಯ ಅವರನ್ನು ಮುಂದೆ ನಡೆಯಲಿರುವ ರಾಮನಗರ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿ ಇತ್ತೀಚಿಗೆ ರಾಮನಗರದಲ್ಲಿ ನಡೆದ ರಾಜ್ಯ ದಲಿತ ಸಾಹಿತ್ಯ ಪರಿಷತ್ತಿನ ಪದಾಧಿಕಾರಿಗಳು ನಿಯೋಜನೆಗೊಳಿಸಿದ್ದರು.
ರಾಜ್ಯ ದಲಿತ ಸಾಹಿತ್ಯ ಪರಿಷತ್ ಈಗಾಗಲೇ ರಾಜ್ಯ ಸಮ್ಮೇಳನಗಳನ್ನು ಮಾಡಿದ್ದು, ಈಗ ಜಿಲ್ಲಾ ದಲಿತ ಸಾಹಿತ್ಯ ಸಮ್ಮೇಳನಗಳನ್ನು ಮಾಡುವ ಕಡೆಗೆ ಮುಖಮಾಡಿದೆ. ರಾಮನಗರ ಜಿಲ್ಲಾ ದಲಿತ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ನಾರಾಯಣಸ್ವಾಮಿಯವರು ಹಾಗೂ ಅವರ ತಂಡ ಅಪ್ಪಗೆರೆ ವೆಂಕಟಯ್ಯನವರಿಗೆ ಸಮ್ಮೇಳನಾಧ್ಯಕ್ಷತೆ ವಹಿಸುವಂತೆ ಇಂದು ವಿದ್ಯುಕ್ತ ಆಹ್ವಾನ ನೀಡಿದರು.
ಸಂದರ್ಭದಲ್ಲಿ ವೆಂಕಟಯ್ಯ ಹಾಗೂ ಅವರ ದಂಪತಿಗಳಿಗೆ ಅಧಿಕೃತ ಆಹ್ವಾನ ನೀಡಿ, ಸ್ವಾಗತಿಸಿ ಮುಂದಿನ ದಿನಾಂಕದಲ್ಲಿ ತಮಗೆ ಅಧಿಕೃತ ಕಾರ್ಯಕ್ರಮದ ಆಹ್ವಾನವನ್ನು ನೀಡುವುದಾಗಿ ಹೇಳಿದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು