ಅಕ್ರಮವಾಗಿ ಹಸು ಎಮ್ಮೆಗಳ ಸಾಗಾಣೆ; ಪೋಲೀಸರಿಗೆ ಒಪ್ಪಿಸಿದ ಹಿಂಜಾವೆ
ಚನ್ನಪಟ್ಟಣ: ಗಾಳಿ ಬೆಳಕು ಇಲ್ಲದ ಲಾರಿಯೊಂದರಲ್ಲಿ (ಕಂಟೇನರ್) ನಿಲ್ಲಲು ಜಾಗವಿಲ್ಲದಂತೆ ಒತ್ತೊತ್ತಾಗಿ ಇಪ್ಪತ್ತಕ್ಕೂ ಹೆಚ್ಚು ಜಾನುವಾರುಗಳನ್ನು ತುಂಬಿದ ವಾಹನವನ್ನು ಹಿಂದೂ ಜಾಗರಣಾ ವೇದಿಕೆಯ ಕಾರ್ಯಕರ್ತರ ಮಾಹಿತಿ ಮೇರೆಗೆ ನಗರ ಪೋಲೀಸರು ವಾಹನವನ್ನು ಅಡ್ಡಗಟ್ಟಿ ವಶಪಡಿಸಿಕೊಂಡಿರುವ ಪ್ರಕರಣ ಇಂದು ನಡೆದಿದೆ.
ಕೆಎ ೨೦ ಸಿ ೮೩೪೩ ನೋಂದಣಿ ಯಿರುವ ವಾಹನದಲ್ಲಿ ಮೂರು ಹಸುಗಳು ಮತ್ತು ಹದಿನೈದು ಎಮ್ಮೆಗಳನ್ನು ಉಸಿರಾಡಲು ಸಾಧ್ಯವಾಗದಂತೆ ತುಂಬಿದ್ದು, ಮಂಡ್ಯ ಜಿಲ್ಲೆಯ ನಾಗಮಂಗಲದಿಂದ ತಮಿಳುನಾಡಿನ ಡೆಂಕಣಿಕೋಟೆ ಯ ಕಸಾಯಿ ಖಾನೆ ಗೆ ಸಾಗಿಸಲಾಗುತ್ತಿತ್ತು ಎಂದು ತಿಳಿದುಬಂದಿದೆ.
ಈ ಸಂಬಂಧ ಚಾಲಕ ಸಿದ್ದಿಕ್ ಅಹಮದ್ ಬಿನ್ ಮುನಾವರ್ (೩೭) ಸಹಾಯಕ ನಾಗರಾಜು ಬಿನ್ ಬೋರಯ್ಯ (೩೫) ಎಂಬುವವರನ್ನು ಬಂಧಿಸಿದ್ದು, ಎಲ್ಲಾ ಜಾನುವಾರುಗಳನ್ನು ಪಶು ಇಲಾಖೆಯಲ್ಲಿ ತಪಾಸಿಸಿ ಮೈಸೂರಿನ ಗೋ ಶಾಲೆಗೆ ಬಿಡಲಾಗುವುದು ಎಂದು ಹಿಂಜಾವೇ ಯ ಪದಾಧಿಕಾರಿಗಳು ಮತ್ತು ಪೋಲೀಸರು ಹೇಳಿರುವುದಾಗಿ ನಂಬಲರ್ಹ ಮೂಲಗಳು ತಿಳಿಸಿವೆ.
ಹಿಂದೂ ಜಾಗರಣಾ ವೇದಿಕೆಯ ಯ ಪದಾಧಿಕಾರಿಗಳಾದ ಗಜೇಂದ್ರ ಸಿಂಗ್, ವಕೀಲ ಸುರೇಶ್, ಕೆಲಗೆರೆ ಸತೀಶ್, ಎಎಸ್ಐ ರಾಮಕೃಷ್ಣ, ಹೆಡ್ ಕಾನ್ಸಟೇಬಲ್ ಶಿವಲಿಂಗೇಗೌಡ ಮತ್ತು ಸಿಬ್ಬಂದಿಗಳು ಕಾರ್ಯಾಚರಣೆಯಲ್ಲಿ ಭಾಗವಹಿಸಿದ್ದರು.
ಗೋ ರಾ ಶ್ರೀನಿವಾಸ...
ಮೊ:9845856139.
ಪ್ರತಿಕ್ರಿಯೆಗಳು